AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮಾಡಿ ಬಡಿಸುವುದೆಂದರೆ ಒಲವು, ಖುಷಿಯನ್ನು ದಾಟಿಸುವ ಕ್ರಿಯೆ

ಎಲ್ಲರೂ ಜತೆಯಾಗಿ ಕುಳಿತು ಮಾಡುವ ಊಟ,  ಅಮ್ಮ ಬಡಿಸಿಕೊಟ್ಟಾಗ ತಿನ್ನುವ ಖುಷಿ, ಬಡಿಸುವಾಗ ಅಮ್ಮನ ಕಣ್ಣಲ್ಲಿ ಕಾಣುವ ಸಂತೃಪ್ತಿ ಉಂಟಲ್ಲಾ ಅದು ಪದಗಳಿಗೆ ನಿಲುಕದ್ದು. ಅಮ್ಮ ಬಡಿಸುವಾಗ ಆಕೆಯ ಮುಖವನ್ನೊಮ್ಮೆ ನೋಡಿ, ಆಕೆಯ ಕಣ್ಣಲ್ಲಿಯೂ ಇಂಥಾ ಹೊಳಪು ಕಾಣಬಹುದು.

ಅಡುಗೆ ಮಾಡಿ ಬಡಿಸುವುದೆಂದರೆ ಒಲವು, ಖುಷಿಯನ್ನು ದಾಟಿಸುವ ಕ್ರಿಯೆ
ಬಡಿಸುವ ಖುಷಿ
ರಶ್ಮಿ ಕಲ್ಲಕಟ್ಟ
|

Updated on:Jan 26, 2022 | 10:52 AM

Share

ನನಗನಿಸಿದಂತೆ ಅಡುಗೆ ಮಾಡುವುದರಲ್ಲಿ ಎರಡು ವಿಧ. ಏನಾದರೊಂದು ತಿನ್ನಬೇಕಲ್ಲಾ ಹೇಗಾದರೊಂದು ಮಾಡಿ ಹಾಕಿದರಾಯ್ತು ಎನ್ನುವವರು. ಇನ್ನೊಂದು ವಿಧ ಎಂದರೆ ಚೆನ್ನಾಗಿ ಅಡುಗೆ ಮಾಡಬೇಕು, ಅಡುಗೆ ಮಾಡುವಾಗಲೂ ಮಾಡಿದ್ದನ್ನೂ ಬಡಿಸುವಾಗಲೂ ತೃಪ್ತಿ, ಖುಷಿ ಕಂಡುಕೊಳ್ಳುವವರು. ಇಂಥಾ ಖುಷಿಯನ್ನು ನಾನು ಕಂಡಿದ್ದು ಅಮ್ಮನಲ್ಲಿ. ಅಮ್ಮ ಪ್ರತಿಯೊಂದು ವಿಷಯದಲ್ಲೂ ಅಚ್ಚುಕಟ್ಟು. ಪಾತ್ರೆ ತೊಳೆಯುವುದರಿಂದ ಹಿಡಿದು ಅಡುಗೆ ಮಾಡಿ ಬಡಿಸಿ ಉಂಡ ಪಾತ್ರೆ ತೊಳೆಯುವವರೆಗೂ ಭಯಂಕರ ಶಿಸ್ತು. ಅದು ಹೀಗೇ ಇರಬೇಕು ಎಂದು ಪಟ್ಟು ಹಿಡಿದವರಲ್ಲ. ಆದರೆ ಹೀಗೆ ಮಾಡಿದರೆ ರುಚಿ ಬರುತ್ತದೆ. ಯಾವುದನ್ನು ಹೇಗೆ ಬೇಯಿಸಬೇಕು,ಎಷ್ಟು ಬೇಯಿಸಬೇಕು, ಇಷ್ಟಾದರೆ ಎಷ್ಟು ಜನರಿಗೆ ಉಣ್ಣಬಹುದು ಎಂಬುದು ಪಕ್ಕಾ ಲೆಕ್ಕಾಚಾರ. ನಮ್ಮ ಮನೆಯೆಂದರೆ ತುಂಬು ಕುಟುಂಬ, ನಾಯಿ,ಬೆಕ್ಕು,ಹಸು, ಕೋಳಿ ಹೀಗೆ .ಇವುಗಳೆಲ್ಲಕ್ಕೂ ಆಹಾರ ಕೊಡಬೇಕು .ಅದೆಲ್ಲವೂ ಪರ್​​ಫೆಕ್ಟ್. ಮೂಕ ಪ್ರಾಣಿಗಳವು, ಅವುಗಳಿಗೆ ಹೊತ್ತು ಹೊತ್ತಿಗೆ ಆಹಾರ ಕೊಡದಿದ್ದರೆ ಹೇಗೆ ಅಂತ ಮನೆ ಬಿಟ್ಟು ಅಮ್ಮ ಎಲ್ಲಿಯೂ ಹೋಗುವುದಿಲ್ಲ. ಹೋಗುವುದು ಅನಿವಾರ್ಯ ಆದರೆ ಅದಕ್ಕೊಂದು ವ್ಯವಸ್ಥೆ ಮಾಡಿಯೇ ಹೊರಡುವುದು. ಕುಟುಂಬದ ಸದಸ್ಯರಿಗೆ ಅಮ್ಮ ಅಡುಗೆ ಮಾಡಿಬಡಿಸುವುದು ಬಿಡಿ, ಹಸುಗಳಿಗೆ ಅಕ್ಕಚ್ಚು ಕಲಸುವುದು ಕೂಡಾ ಅಷ್ಟೇ ಪರ್​​ಫೆಕ್ಟ್.  ನಾಯಿಯ ಮುಖ ನೋಡಿ, ಅದಕ್ಕೆ ಹಸಿದಿದೆ ಇವತ್ತು ಬೆಳಗ್ಗೆ ಸರಿ ತಿಂದಿಲ್ಲ , ಬೆಕ್ಕಿಗೆ ಮೀನಿಲ್ಲದೆ ಊಟ ಸೇರ್ತಿಲ್ಲ ಹೀಗೆ ಅಮ್ಮ ಪ್ರತಿಯೊಂದು ಜೀವಿಯ ಮೇಲೂ ಕಾಳಜಿ, ಪ್ರೀತಿ  ತೋರಿಸುತ್ತಾ ಇರುತ್ತಾರೆ.

ಅಮ್ಮನ ಅಡುಗೆ ತುಂಬಾ ಮಿಸ್ ಮಾಡಿಕೊಂಡದ್ದು ಊರು ಬಿಟ್ಟು ಕೆಲಸಕ್ಕೆ ಸೇರಿದಾಗ. ಬೆಂಗಳೂರಿನ ಪಿಜಿ ಊಟವು ಅಮ್ಮನ ಕೈರುಚಿಗೆ ಯಾವುದೂ ಸಮ ಇಲ್ಲ ಎಂಬುದನ್ನು ಹೇಳಿಕೊಟ್ಟಿತ್ತು. ಹತ್ತು ವರ್ಷ ಪಿಜಿ ಜೀವನ, ಆಮೇಲೆ ಸ್ವಂತ ಮನೆ ಮಾಡಿಕೊಂಡಾಗ ಅಡುಗೆ ಪ್ರಯೋಗಗಳು ಶುರು. ಮನೆಯಲ್ಲಿ ಅಮ್ಮ ಕಲಿಸಿದ ಅಡುಗೆ ಜತೆ ತರಹೇವಾರಿ ರೆಸಿಪಿ ವಿಡಿಯೊಗಳನ್ನು ನೋಡಿ ಅಡುಗೆ ಮಾಡಿದ್ದೇ ಮಾಡಿದ್ದು. ಅಡುಗೆ ಮಾಡಿದ ಮೇಲೆ Not bad ಎಂದು ನಾನೇ ಹೇಳಿಕೊಳ್ಳುತ್ತಿದ್ದೆ. ರುಚಿ ನೋಡಲು ಗೆಳತಿಯೂ ಇದ್ದಳು. ಆಕೆ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಆಗಾಗ ಸಲಹೆ ಸೂಚನೆ ಅವಳ ಕೈಯಿಂದ ಸಿಗುತ್ತಿತ್ತು. ನಮಗಿಬ್ಬರಿಗೆ ಇಷ್ಟವಾದದು ಎಂದರೆ ಅಡುಗೆ ಮಾಡಿಬಡಿಸುವುದು. ರುಚಿ ರುಚಿಯಾದ ಅಡುಗೆ ಮಾಡಿ ಇನ್ನೊಬ್ಬರಿಗೆ ಬಡಿಸುವುದು ಖುಷಿ ಕೊಡುತ್ತದೆ, ಹಾಗಾಗಿ ವಾರಾಂತ್ಯದಲ್ಲಿ ಇಬ್ಬರೂ ಜತೆ ಸೇರಿ ಅಡುಗೆ ಮಾಡಿ ಬಡಿಸಿ ಉಣ್ಣುವ ಖುಷಿ ಕಂಡುಕೊಳ್ಳುತ್ತಿದ್ದೆವು.

ಮದುವೆ ಆದ ಮೇಲೆ ಎಲ್ಲ ಅಡುಗೆ ಪ್ರಯೋಗಗಳು ಗಂಡನ ಮೇಲೆ. ಬಡಪಾಯಿ ನಾನು ಏನು ಮಾಡಿದರೂ ತಿನ್ನುತ್ತಿದ್ದ. ಮಜಾ ಎಂದರೆ ಅವನಿಗೂ ಚೆನ್ನಾಗಿ ಅಡುಗೆ ಮಾಡಲು ಬರುತ್ತಿತ್ತು. ಆದರೆ ಸಮಸ್ಯೆ ಏನಪ್ಪಾ ಅಂದರೆ  ಒಂದು ಅಡುಗೆಗೆ ರಾಶಿ ಪಾತ್ರೆಗಳನ್ನು ಬಳಸುವುದು. ಅವ ಅಡುಗೆ ಮನೆಗೆ ಹೊಕ್ಕರೆ  ಅಡುಗೆ ಮನೆ ಅಸ್ತವ್ಯಸ್ತವಾಗಿ ಇದು ನನ್ನ ಮನೆಯೇ ಅಲ್ಲ ಎಂದು ಅನಿಸಿಬಿಡ್ತಿತ್ತು. ಹಾಗಾಗಿ ಅವ ಅಡುಗೆ ಮಾಡುವುದಾದರೆ ಅವನೇ ಪಾತ್ರೆ ತೊಳೆದು ಕ್ಲೀನ್ ಮಾಡಿಡಬೇಕು ಎಂದು ನಿಯಮ ಮಾಡಿದೆ. ಅದೇನೋ ಅಲ್ಪ ಸ್ವಲ್ಪ ವರ್ಕೌಟ್ ಆಗಿಬಡ್ತು ಅನ್ನಿ.

ಹಾಂ, ಇನ್ನೊಂದು ವಿಷ್ಯ , ಅಡುಗೆ ಮಾಡುವುದೂ ಒಂದು ಕಲೆ ಹಾಗೇ ಬಡಿಸುವುದು ಕೂಡಾ. ಯಾರಿಗೆ ಹೇಗೆ ಬಡಿಸಬೇಕು ಎಂಬುದು ಗೊತ್ತಿರಬೇಕು. ಬಡಿಸಿದ ಅನ್ನ ತಟ್ಟೆಯಿಂದ ಕೆಳಗೆ ಬೀಳದಂತೆ ಸೌಟು ಹಿಡಿಯುವುದೂ ಗೊತ್ತಿರಬೇಕು. ಯಾರಿಗೆ ಎಷ್ಟು ಬಡಿಸಬೇಕು ಎಂಬುದು ಕ್ರಮೇಣ ಗೊತ್ತಾಗುತ್ತದೆ, ಹಾಗೆ ಬಡಿಸಿ ಉಂಡರೆ ರುಚಿ ಜಾಸ್ತಿ ಎಂದು ಅಮ್ಮ ಹೇಳ್ತಾರೆ. ಗಂಡನ ಮನೆಗೆ ಬಂದಾಗ ಈ ಬಡಿಸುವ ಖುಷಿ ಕಾಣಲಿಲ್ಲ. ಟೇಬಲ್ ಮೇಲೆ ಎಲ್ಲವನ್ನೂ ಇಟ್ಟರೆ ಅಲ್ಲಿಗೆ ಮುಗೀತು. ಬೇಕಾದವರು ಹೇಗೆ ಬೇಕಾದರೂ ಬಡಿಸಿ ತಿಂದು  ಎದ್ದು ಹೋಗಬಹುದು.  ಈ ಹೊತ್ತಲ್ಲೆಲ್ಲಾ ತವರು ಮನೆ ನೆನಪು ಕಾಡುತ್ತದೆ. ಎಲ್ಲರೂ ಜತೆಯಾಗಿ ಕುಳಿತು ಮಾಡುವ ಊಟ,  ಅಮ್ಮ ಬಡಿಸಿಕೊಟ್ಟಾಗ ತಿನ್ನುವ ಖುಷಿ, ಬಡಿಸುವಾಗ ಅಮ್ಮನ ಕಣ್ಣಲ್ಲಿ ಕಾಣುವ ಸಂತೃಪ್ತಿ ಉಂಟಲ್ಲಾ ಅದು ಪದಗಳಿಗೆ ನಿಲುಕದ್ದು. ಅಮ್ಮ ಬಡಿಸುವಾಗ ಆಕೆಯ ಮುಖವನ್ನೊಮ್ಮೆ ನೋಡಿ, ಆಕೆಯ ಕಣ್ಣಲ್ಲಿಯೂ ಇಂಥಾ ಹೊಳಪು ಕಾಣಬಹುದು.

ಇದನ್ನೂ ಓದಿ:ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಕಳಿಸಬೇಕಿತ್ತು, ವಿಳಾಸ ಹುಡುಕುತ್ತಿದ್ದೇನೆ

Published On - 10:24 am, Wed, 26 January 22

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು