ಬಜೆಟ್ 2026 ಹೈಲೈಟ್ಸ್
ಮೋದಿ 3.0 ಸರ್ಕಾರದ ಮೂರನೇ ಪೂರ್ಣ ಪ್ರಮಾಣದ ಬಜೆಟ್ಟನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2026 ರಂದು ಮಂಡಿಸುತ್ತಾರೆ. ದೇಶದ ಆರ್ಥಿಕತೆ ಮತ್ತು ಹಣದುಬ್ಬರದ ಪರಿಸ್ಥಿತಿ ಸಕಾರಾತ್ಮಕವಾಗಿದ್ದು, ಇದೇ ಲಯವನ್ನು ಮುಂದುವರಿಸುವ ಮತ್ತು ಇನ್ನಷ್ಟು ಪುಷ್ಟಿಕೊಡುವ ದೃಷ್ಟಿಯಿಂದ ಈ ಬಜೆಟ್ ಮಹತ್ವದ್ದಾಗಿದೆ. ಈ ಬಜೆಟ್ನಲ್ಲಿ ಹಲವು ಪ್ರಮುಖ ಘೋಷಣೆಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ. ರೈತರಿಂದ ಹಿಡಿದು ವೃತ್ತಿಪರರವರೆಗೆ ಎಲ್ಲರಿಗೂ ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ. ದೇಶದ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತು ಉತ್ಪಾದನೆಯನ್ನು ಹೆಚ್ಚಿಸಬಲ್ಲಂತಹ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಷ್ಟು ಹಲವು ಸುಧಾರಣಾ ಕ್ರಮಗಳನ್ನು ತರುವ ಬಗ್ಗೆ ಸುಳಿವು ನೀಡಿದ್ದಾರೆ. ಸರ್ಕಾರವು ಈ ಬಜೆಟ್ನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಘೋಷಿಸಬಹುದು. 64 ವರ್ಷಗಳ ಹಳೆಯ ಆದಾಯ ತೆರಿಗೆ ಕಾನೂನನ್ನು ತಿದ್ದುಪಡಿ ಮಾಡಲು ಸರ್ಕಾರ ಯೋಜಿಸಿದೆ. ಇದಲ್ಲದೆ, ರೈತರಿಗೆ ಮತ್ತಷ್ಟು ನೆರವಾಗಲು, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಒದಗಿಸಲಾಗುವ ಮೊತ್ತವನ್ನು ದ್ವಿಗುಣಗೊಳಿಸಬಹುದು. ಜೀವ ಉಳಿಸುವ ಔಷಧಗಳು ಮತ್ತು ಔಷಧೀಯ ವಲಯದ ಬಗ್ಗೆಯೂ ಘೋಷಣೆಗಳನ್ನು ಮಾಡಬಹುದು. ದೇಶದ ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚವನ್ನು ₹11 ಲಕ್ಷ ಕೋಟಿಯಿಂದ ₹15 ಲಕ್ಷ ಕೋಟಿಗೆ ಹೆಚ್ಚಿಸಬಹುದು. ಕಳೆದ ಬಾರಿಯ ಬಜೆಟ್ನ ಗಾತ್ರ ₹50.65 ಲಕ್ಷ ಕೋಟಿ ಆಗಿತ್ತು. ಈ ಬಾರಿ, ಅದರ ಗಾತ್ರ ₹60 ಲಕ್ಷ ಕೋಟಿ ಮೀರಬಹುದು ಎನ್ನಲಾಗಿದೆ.
ಭಾರತದ ಬಜೆಟ್ನ ಇತಿಹಾಸ 165 ವರ್ಷಗಳ ಹಿಂದಿನದು. ಸ್ವಾತಂತ್ರ್ಯದ ನಂತರ, ಫೆಬ್ರವರಿ ಕೊನೆಯ ದಿನದಂದು ಸಂಜೆ 5 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಅನ್ನು ಓದಲಾಗುತ್ತಿತ್ತು. 1999ರಿಂದ, ಬಜೆಟ್ ಓದುವ ಸಮಯವನ್ನು ಬೆಳಿಗ್ಗೆ 11 ಗಂಟೆಗೆ ಬದಲಾಯಿಸಲಾಯಿತು. 2014 ರಲ್ಲಿ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಬಜೆಟ್ ದಿನಾಂಕವನ್ನು ಫೆಬ್ರವರಿ 1 ಕ್ಕೆ ಬದಲಾಯಿಸಲಾಯಿತು. ಹಿಂದೆ, ಬಜೆಟ್ ಪುಸ್ತಕವನ್ನು ಬ್ರೀಫ್ಕೇಸ್ನಲ್ಲಿ ಇಟ್ಟುಕೊಂಡು ಬರಲಾಗುತ್ತಿತ್ತು. ನಂತರ, ಬ್ರೀಫ್ಕೇಸ್ ಬದಲು ಲೆದರ್ಬ್ಯಾಗ್ ಬಳಕೆ ಆರಂಭವಾಯಿತು. ಈಗ, ಬ್ರೀಫ್ ಕೇಸ್ ಆಗಲೀ ಲೆದರ್ ಬ್ಯಾಗ್ ಆಗಲೀ ಬಳಸಲಾಗುವುದಿಲ್ಲ. ಡಿಜಿಟಲ್ ಟ್ಯಾಬ್ನಲ್ಲೇ ಬಜೆಟ್ ಓದಲಾಗುತ್ತಿದೆ.
ನಾಳೆಗೆ ಕಲಾಪ ಮುಂದೂಡಿಕೆ
ನಾಳೆ ಬೆಳಗ್ಗೆ 11 ಗಂಟೆಗೆ ಕಲಾಪ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ
ಆದಾಯ ತೆರಿಗೆ ಪಾವತಿಯಲ್ಲಿಲ್ಲ ಬದಲಾವಣೆ
ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಕಳೆದ ವರ್ಷ ಘೋಷಿಸಿದ್ದ ಆದಾಯ ತೆರಿಗೆ ಪಾವತಿ ಮುಂದುವರಿಕೆ
1 ಗಂಟೆ 26 ನಿಮಿಷ ಬಜೆಟ್
1 ಗಂಟೆ 26 ನಿಮಿಷ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ಕ್ಯಾನ್ಸರ್ ಔಷಧ ದರ ಇಳಿಕೆ
ಕ್ಯಾನ್ಸರ್ ಸೇರಿ 7 ಅಪರೂಪದ ಕಾಯಿಲೆಗಳ ಔಷಧ ದರ ಇಳಿಕೆ
ಪಾರಂಪರಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಒತ್ತು
2026-27ರ ಪಾರಂಪರಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಒತ್ತು, ಸಾಂಸ್ಕೃತಿಕ, ಪಾರಂಪರಿಕ ಸ್ಥಳಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ‘ನ್ಯಾಷನಲ್ ಡೆಸ್ಟಿನೇಶನ್ ಡಿಜಿಟಲ್ ನಾಲೆಡ್ಜ್ ಗ್ರಿಡ್' ಸ್ಥಾಪನೆಗೆ ನಿರ್ಧಾರ
4000 ಇ-ಬಸ್ಗಳ ಪೂರೈಕೆ
ಈಶಾನ್ಯಕ್ಕೆ 4,000 ಇ-ಬಸ್ಗಳ ಪೂರೈಕೆ, ಯಾತ್ರಿಕರಿಗೆ ವಿಶೇಷ ಸೌಲಭ್ಯ
ಮದ್ಯದ ದರ ಮತ್ತಷ್ಟು ದುಬಾರಿ
ಮದ್ಯದ ದರ ಮತ್ತಷ್ಟು ದುಬಾರಿ, ಬೀಡಿ ದರ, ವಿದೇಶಿ ಯಾತ್ರೆ, ಪಾದರಕ್ಷೆ, ಬ್ಯಾಟರಿ ದರ ಇಳಿಕೆ
ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡ
ತೆರಿಗೆ ವಂಚಿಸುವವರಿಗೆ ಶಿಕ್ಷೆ ಬಗ್ಗೆ ಕೋರ್ಟ್ನಲ್ಲಿ ತೀರ್ಮಾನ; ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡ ಮಾತ್ರ ವಿಧಿಸಲು ನಿರ್ಧಾರ
ಮಹಿಳೆಯರಿಗಾಗಿ ಶೀ ಮಾರ್ಟ್ ಘೋಷಿಸಿದೆ
ಮಹಿಳೆಯರ ಪ್ರಗತಿಗಾಗಿ ದೇಶದಲ್ಲಿ ಶೀ (SHE) ಮಾರ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಪೂರ್ವೋದಯ ಯೋಜನೆ ಘೋಷಣೆ
ಪೂರ್ವ ಕರಾವಳಿಯ ಅಭಿವೃದ್ಧಿಗೆ ವಿಶೇಷ ಯೋಜನೆ, ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಒತ್ತು
ಬೈಕ್ ಅಪಘಾತ ಪರಿಹಾರ ವಿಮೆಗೆ ತೆರಿ ವಿನಾಯಿತಿ
ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆಗೆ ತೆರಿಗೆ ಇಲ್ಲ ಎಂದು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಐಟಿ ರಿಟರ್ನ್ಗೆ ಸಮಯ ವಿಸ್ತರಣೆ
ಐಟಿ ರಿಟರ್ನ್ಗೆ ಇದ್ದ ಸಮಯ ವಿಸ್ತರಣೆ ಬಗ್ಗೆ ಘೋಷಿಸಿದ ವಿತ್ತ ಸಚಿವೆ, ಜುಲೈ 31ರವರೆಗೂ ಅವಕಾಶ
ನೂತನ ಐಟಿ ಕಾಯ್ದೆ
ಏಪ್ರಿಲ್ನಿಂದ ನೂತನ ಐಟಿ ಕಾಯ್ದೆ ಜಾರಿ ಬಗ್ಗೆ ಬಜೆಟ್ನಲ್ಲಿ ಘೋಷಣೆ, ಬೈಕ್ ಅಪಘಾತ ಪರಿಹಾರ ವಿಮೆಗೆ ತೆರಿಗೆ ಇಲ್ಲ, ವಿದೇಶಿ ಪ್ರವಾಸ ಕೈಗೊಳ್ಳುವವರೆಗೆ ಟ್ಯಾಕ್ಸ್ ಇಲ್ಲ
ಕೃಷಿಗೆ ಉತ್ತೇಜನ
ತೆಂಗು ಬೆಳೆಯುವ ರಾಜ್ಯಗಳಿಗೆ ಉತ್ತೇಜನ ನೀಡಲು ಕ್ರಮ, ಶ್ರೀಗಂಧ, ತೆಂಗು ಹಾಗೂ ವಾಲ್ನಟ್ ಬೆಳೆಗೆ ಪ್ರೋತ್ಸಾಹ
ಬೌದ್ಧ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ
ಈಶಾನ್ಯ ರಾಜ್ಯಗಳಲ್ಲಿ ಬೌದ್ಧ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 1.4 ಲಕ್ಷ ಕೋಟಿ, 5 ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆ
ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್
ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್ಗಳ ನಿರ್ಮಾಣ, ಮೂರು ಹೊಸ ಏಮ್ಸ್ ಸ್ಥಾಪನೆ ಸಹ ಘೋಷಿಸಲಾಗಿದೆ.
ರಾಸಾಯನಿಕ ಪಾರ್ಕ್ ಸ್ಥಾಪನೆ
ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು, ಆಮದು ಅವಲಂಬನೆಯನ್ನು ಕಡಿಮೆ ಮಾಡಲು 3 ರಾಸಾಯನಿಕ ಪಾರ್ಕ್
ಖನಿಜ ಕಾರಿಡಾರ್ ಸ್ಥಾಪನೆ
ಒಡಿಶಾ, ಕೇರಳ, ಆಂಧ್ರ ಮತ್ತು ತಮಿಳುನಾಡುಗಳಲ್ಲಿ ಅಪರೂಪದ ಭೂಮಿಯ ಖನಿಜ ಕಾರಿಡಾರ್
ಔಷಧಿಗಳ ದರ ಇಳಿಕೆ
ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಲಿವೆ, ಹಾಗೆಯೇ ಆಟೋಇಮ್ಯೂನ್ ಔಷಧಿಗಳು ಅಗ್ಗವಾಗಲಿವೆ.
ದಿವ್ಯಾಂಗ ಸಹಾರಾ ಯೋಜನೆ ಘೋಷಣೆ
ಕೇಂದ್ರ ಬಜೆಟ್ನಲ್ಲಿ ದಿವ್ಯಾಂಗರಿಗಾಗಿ ದಿವ್ಯಾಂಗ ಸಹಾರಾ ಯೋಜನೆ ಘೋಷಣೆ
ಶ್ರೀಗಂಧ ಬೆಳೆಗೆ ಉತ್ತೇಜನ
ರಾಜ್ಯ ಮತ್ತು ಕೇಂದ್ರದ ಸಹಭಾಗಿತ್ವದಲ್ಲಿ ಶ್ರೀಗಂಧ ಬೆಳೆಗೆ ಉತ್ತೇಜನ, ಬೆಳೆ ಮತ್ತು ಸಂಸ್ಕರಣೆಗಾಗಿ ಪ್ರೋತ್ಸಾಹ
ಪುರಾತತ್ವ ಸ್ಥಳಗಳ ಅಭಿವೃದ್ಧಿಗೆ ಹೊಸ ಯೋಜನೆ
45 ಪುರಾತತ್ವ ಸ್ಥಳಗಳ ಅಭಿವೃದ್ಧಿಗೆ ಹೊಸ ಯೋಜನೆ ಘೋಷಣೆ. ದೋಲಾವೀರ, ರಾಖೀಗಡಿ, ಸಾರಾನಾಥ, ಹಸ್ತಿನಾಪುರ ಸೇರಿ ಉತ್ಖನನವಾದ ಸ್ಥಳಗಳ ಅಭಿವೃದ್ಧಿ
ಕಣಿವೆ ರಾಜ್ಯಗಳಿಗಾಗಿ ಮೌಂಟೇನ್ ರೈಲು
ಕಣಿವೆ ರಾಜ್ಯಗಳಾದ ಹಿಮಾಚಲ, ಉತ್ತರಾಖಂಡ್, ಜಮ್ಮು& ಕಾಶ್ಮೀರಕ್ಕೆ ಮೌಂಟೇನ್ ರೈಲು ಯೋಜನೆ
ಪಶ್ಚಿಮ ಬಂಗಾಳಕ್ಕೆ ಮೋದಿ ಬಿಗ್ ಗಿಫ್ಟ್
ಚುನಾವಣಾ ರಾಜ್ಯ ಪಶ್ಚಿಮ ಬಂಗಾಳಕ್ಕೆ ಮೋದಿ ಬಿಗ್ ಗಿಫ್ಟ್, ಡಾಂಕುಣಿಯಿಂದ ಸೂರತ್ವರೆಗೂ ಸರಕು ಸಾಗಾಣೆ ಕಾರಿಡಾರ್
ಹೊಸದಾಗಿ 3 ಏಮ್ಸ್ ಆಸ್ಪತ್ರೆ ನಿರ್ಮಾಣ
ರಾಂಚಿ, ತೇಜ್ಪುರ್ನಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ, 3 ಹೊಸ ಏಮ್ಸ್, 3 ಆಯುರ್ವೇದ ಸಂಸ್ಥೆಗಳ ಘೋಷಣೆ
MSMEಗಳಿಗೆ ಕ್ರೆಡಿಟ್ ಗ್ಯಾರಂಟಿ ಬೆಂಬಲ
MSMEಗಳಿಗೆ ಕ್ರೆಡಿಟ್ ಗ್ಯಾರಂಟಿ ಬೆಂಬಲ ಘೋಷಣೆ, ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗಾಗಿ ಸಾಲದ ನೆರವು
4 ರಾಜ್ಯಗಳಿಗೆ ಅರ್ಥ್ ಮಿನರಲ್ ಕಾರಿಡಾರ್
ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಕೇರಳಕ್ಕೆ ಬಂಪರ್; ನಾಲ್ಕು ರಾಜ್ಯಗಳಿಗೆ ಅರ್ಥ್ ಮಿನರಲ್ ಕಾರಿಡಾರ್ ಘೋಷಣೆ
ಖಾದಿ & ಕರಕುಶಲ ವಸ್ತುಗಳಿಗಾಗಿ ಹೊಸ ಯೋಜನೆ
ಖಾದಿ & ಕರಕುಶಲ ವಸ್ತುಗಳಿಗಾಗಿ ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ ಯೋಜನೆ ಘೋಷಣೆ. ತರಬೇತಿ, ಕೌಶಲ್ಯ & ಉತ್ಪಾದನೆಯ ಗುಣಮಟ್ಟ ಸುಧಾರಣೆ ಜೊತೆಗೆ ಜಾಗತಿಕ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್ಗೆ ಕೇಂದ್ರ ನೆರವು
ಹೊಸದಾಗಿ 20 ರಾಷ್ಟ್ರೀಯ ಜಲಮಾರ್ಗ
ಮುಂದಿನ 5 ವರ್ಷದಲ್ಲಿ ಹೊಸದಾಗಿ 20 ರಾಷ್ಟ್ರೀಯ ಜಲಮಾರ್ಗ ನಿರ್ಮಾಣ
ಕಾರ್ಮಿಕ ಜವಳಿ ವಲಯಕ್ಕೆ ಉತ್ತೇಜನ
ಐದು ಪ್ರಮುಖ ಘಟಕಗಳೊಂದಿಗೆ ಕಾರ್ಮಿಕ ಜವಳಿ ವಲಯ ಉತ್ತೇಜಿಸಲು ಹೊಸ ಯೋಜನೆ ಘೋಷಣೆ
ಆತ್ಮನಿರ್ಭರ ಭಾರತಕ್ಕೆ 2 ಸಾವಿರ ಕೋಟಿ
ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಣೆ
ಡಯಾಬಿಟಿಕ್ ಔಷಧ ಬೆಲೆ ಕಡಿಮೆಗೆ ಕ್ರಮ
ಜೈವಿಕ ಔಷಧೀಯ ವಲಯಕ್ಕೆ 10,000 ಕೋಟಿ ರೂ. ಘೋಷಿಷಣೆ, ಮಧುಮೇಹದಂತಹ ಔಷಧಿಗಳ ಬೆಲೆ ಕಡಿಮೆಗೆ ನೆರವು
ಸೆಮಿಕಂಡಕ್ಟರ್ ಮಿಷನ್ 2.0 ಘೋಷಣೆ
ಸೆಮಿಕಂಡಕ್ಟರ್ ಮಿಷನ್ 2.0 ಘೋಷಣೆ: 40 ಸಾವಿರ ಕೋಟಿ ರೂ. ಹೂಡಿಕೆ
Tax Calculator
Cheaper & Expensive
- ಕ್ರೀಡಾ ಉಪಕರಣಗಳು
- ಮೈಕ್ರೋವೇವ್ ಓವನ್ಗಳು
- ಸೌರ ಫಲಕಗಳು
- ಇವಿ ಬ್ಯಾಟರಿಗಳು
- ಸ್ಮಾರ್ಟ್ಫೋನ್ಗಳು
- ಮದ್ಯ, ಬೀಡಿ, ಸಿಗರೇಟ್, ಔಷಧಿಗಳು ಅಗ್ಗ
- 17 ಅಪರೂಪದ ಕಾಯಿಲೆಗಳ ಔಷಧ
- ಚರ್ಮ ಉತ್ಪನ್ನಗಳು
- ಮೈಕ್ರೋವೇವ್
- ವಿಮಾನ ಬಿಡಿಭಾಗಗಳು
- ಬಯೋ ಗ್ಯಾಸ್
- ಸಿಎನ್ಜಿ,
- ಸೆಣಬು
- ಸೋಲಾರ್ ಬಿಡಿಭಾಗ
- ಬ್ಯಾಟರಿ
- ಪಾದರಕ್ಷೆ
- ವಿದೇಶಿ ಯಾತ್ರೆ
- ಬೀಡಿ
- ವಿದೇಶ ಪ್ರಯಾಣ ಅಗ್ಗ
- ಆಟೋಇಮ್ಯೂನ್ ಔಷಧಿಗಳು ಅಗ್ಗವಾಗುತ್ತವೆ.
- ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗ
- ಟೆಲಿಕಾಂ ಉಪಕರಣಗಳು
- ಆಮದು ಮಾಡಿದ ಎಲ್ಲಾ ಎಲೆಕ್ಟ್ರಾನಿಕ್ಸ್
- ಸಿಗರೇಟ್ ಮತ್ತು ಬೀಡಿಗಳು
- ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳು
- ಮದ್ಯ
ರಾಜ್ಯ ಬಜೆಟ್ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಇದೇ ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ 2026ನೇ ಸಾಲಿನ ರಾಜ್ಯ ಬಜೆಟ್ ಗೆ ಆಡಳಿತರೂಢ ಪಕ್ಷದ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೌದು...ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಮಾತನಾಡಿ ರಾಜ್ಯ ಬಜೆಟ್ ನನಗೆ ಸಮಾಧಾನ ತಂದಿಲ್ಲ. ಮುಖ್ಯಮಮಂತ್ರಿಯವರ ಮೇಲಿನ ಭರವಸೆ ಹುಸಿಯಾಗಿದೆ ಎಂದು ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕಿದ್ದು, ಈ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಬಜೆಟ್ ಬಗ್ಗೆ ಅಸಮಾಧಾನಗೊಂಡಿರುವುದ್ಯಾಕೆ ಎನ್ನುವುದಕ್ಕೆ ಇಕ್ಬಾಲ್ ಹುಸೇನ್ ಕಾರಣ ನೀಡಿದ್ದು, ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡದಿದ್ದರಿಂದ ಅಸಮಾಧಾನಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
- Prashantha B
- Updated on: Mar 14, 2026
- 5:01 pm
ಎಕರೆಗಟ್ಟಲೆ ಜಾಗದಲ್ಲಿ ಕನ್ವೆನ್ಷನ್ ಸೆಂಟರ್, ಫೈವ್ ಸ್ಟಾರ್ ಹೋಟೆಲ್ ; ಪರಿಸರವಾದಿರಳು ಗರಂ!
ಮಲ್ಲೇಶ್ವರಂನ ಮೈಸೂರು ಲ್ಯಾಂಪ್ ವರ್ಕರ್ಸ್ ಲಿಮಿಟೆಡ್ನ 22 ಎಕರೆ ಭೂಮಿಯಲ್ಲಿ ಕನ್ವೆನ್ಷನ್ ಸೆಂಟರ್ ನಿರ್ಮಾಣ ಯೋಜನೆ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಯು ನಗರದ ಅಭಿವೃದ್ಧಿಗೆ ಅಗತ್ಯ ಎಂದು ಸರ್ಕಾರ ಹೇಳಿದ್ದರೆ, ಪರಿಸರವಾದಿಗಳು ಸಾವಿರಾರು ಮರಗಳ ಕಡಿತದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಸಿರು ಪ್ರದೇಶವನ್ನು ಉಳಿಸಿ ಸಾರ್ವಜನಿಕ ಉದ್ಯಾನವನವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಅವರ ಆಗ್ರಹವಾಗಿದೆ.
- Bhavana Hegde
- Updated on: Mar 10, 2026
- 10:10 am
ಲೆಕ್ಕರಾಮಯ್ಯ ಅಲ್ಲ ಸಾಲರಾಮಯ್ಯ: ಸಿದ್ದರಾಮಯ್ಯ ಬಜೆಟ್ಗೆ ಪ್ರಹ್ಲಾದ ಜೋಶಿ ವ್ಯಂಗ್ಯ
ಸಿಎಂ ಸಿದ್ದರಾಮಮಯ್ಯ 2026ನೇ ಸಾಲಿನ ಬಜೆಟ್ ಮಂಡಿಸಿದ್ದು, ಈ ಸಲ ಕೂಡ 1 ಕೋಟಿ 32 ಸಾವಿರ ರೂ. ಸಾಲ ಮಾಡಲಾಗಿದೆ. ಇದರೊಂದಿಗೆ ರಾಜ್ಯದ ಸಾಲ 8 ಕೋಟಿ 24 ಸಾವಿರಕ್ಕೆ ತಲುಪಿದೆ. ಹೀಗಾಗಿ ಇದಕ್ಕೆ ವಿಪಕ್ಷ ಬಿಜೆಪಿ ನಾಯಕರು ಸಿದ್ದರಾಮಯ್ಯರದ್ದು ಸಾಲದ ಬಜೆಟ್ ಎಂದು ಕಿಡಿಕಾರಿದ್ದಾರೆ. ಇನ್ನು ಕರ್ನಾಟಕ ಬಜೆಟ್ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.
- Ramesh B Jawalagera
- Updated on: Mar 6, 2026
- 9:17 pm
GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ಕೇಂದ್ರಕ್ಕಿಂತ ರಾಜ್ಯದ ಬೆಳವಣಿಗೆ ಉತ್ತಮ ಎಂದ ಸಿದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದರ ಗಾತ್ರ 4 ಲಕ್ಷದ 48 ಸಾವಿರದ 4 ಕೋಟಿ ರೂಪಾಯಿ. ಬಜೆಟ್ 9.4% ಬೆಳವಣಿಗೆ ಕಂಡಿದೆ. ಕೇಂದ್ರ ಸರ್ಕಾರದ ಜಿಎಸ್ಟಿ ತರ್ಕಬದ್ಧಗೊಳಿಸುವಿಕೆಯಿಂದ ರಾಜ್ಯದ ತೆರಿಗೆ ಬೆಳವಣಿಗೆ ದರವು 10-12% ರಿಂದ 4% ಕ್ಕೆ ಕುಸಿದಿದೆ. ಆದರೂ, ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ರಾಷ್ಟ್ರದಲ್ಲಿ ಎರಡನೇ ಸ್ಥಾನದಲ್ಲಿದೆ.
- Gangadhar Saboji
- Updated on: Mar 6, 2026
- 8:19 pm
ದಾಖಲೆ ಬಜೆಟ್, ಮಿತಿಮೀರದ ಸಾಲ, ವಿತ್ತೀಯ ಶಿಸ್ತು: ಸರ್ಕಾರದ ಸಾಧನೆ ಹೇಳಿದ ಸಿದ್ದರಾಮಯ್ಯ
Karnataka Budget and Debt: ಬಜೆಟ್ ಮಂಡನೆ ಬಳಿಕ ತಮ್ಮ ಗೃಹ ಕಚೇರಿಯಾದ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಸಾಲ, ಜಿಎಸ್ಟಿ ಇತ್ಯಾದಿ ವಿಚಾರ ಪ್ರಸ್ತಾಪಿಸಿದರು. ಕೇಂದ್ರದ ಸಾಲ ಮಿತಿಮೀರಿ ಹೋದರೆ, ರಾಜ್ಯದ ಸಾಲ ಇತಿಮಿತಿಯಲ್ಲೇ ಇದೆ. ಜಿಡಿಪಿ ವೃದ್ದಿಯಲ್ಲಿ ಕೇಂದ್ರಕ್ಕಿಂತ ರಾಜ್ಯದ್ದೇ ಹೆಚ್ಚು ಎಂದೂ ಅವರು ತುಲನೆ ಮಾಡಿಕೊಂಡರು.
- Vijaya Sarathy SN
- Updated on: Mar 6, 2026
- 6:27 pm