AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Finance Commission: 16ನೇ ಫೈನಾನ್ಸ್ ಕಮಿಷನ್ ಸದಸ್ಯರ ನೇಮಕ; ಏನಿರುತ್ತದೆ ಈ ಆಯೋಗದ ಪಾತ್ರ? ಯಾರಿದ್ದಾರೆ ಈ ಆಯೋಗದಲ್ಲಿ?

Government Appoints 4 Members For 16th Finance Commission: ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗಕ್ಕೆ ನಾಲ್ವರು ಸದಸ್ಯರನ್ನು ನೇಮಕ ಮಾಡಿದೆ. ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಈ ಆಯೋಗದ ಛೇರ್ಮನ್ ಆಗಿದ್ದಾರೆ. ಸೌಮ್ಯಾ ಕಾಂತಿ ಘೋಷ್, ಅಜಯ್ ನಾರಾಯಣ್ ಝಾ, ಆನೀ ಜಾರ್ಜ್ ಮ್ಯಾಥ್ಯೂ ಮತ್ತು ನಿರಂಜನ್ ರಾಜಾಧ್ಯಕ್ಷ ಅವರು ನೇಮಕಗೊಂಡ ನಾಲ್ವರು ಸದಸ್ಯರು.

Finance Commission: 16ನೇ ಫೈನಾನ್ಸ್ ಕಮಿಷನ್ ಸದಸ್ಯರ ನೇಮಕ; ಏನಿರುತ್ತದೆ ಈ ಆಯೋಗದ ಪಾತ್ರ? ಯಾರಿದ್ದಾರೆ ಈ ಆಯೋಗದಲ್ಲಿ?
ಅರವಿಂದ್ ಪನಗರಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2024 | 11:57 AM

Share

ನವದೆಹಲಿ, ಜನವರಿ 31: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ತೆರಿಗೆ ಹಂಚಿಕೆ ವಿಚಾರವನ್ನು ನಿರ್ಧರಿಸುವ ಮತ್ತು ಶಿಫಾರಸು ಮಾಡುವ ಜವಾಬ್ದಾರಿ ಹೊಂದಿರುವ 16ನೇ ಹಣಕಾಸು ಆಯೋಗಕ್ಕೆ ನಾಲ್ವರು ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ. ನೀತಿ ಆಯೋಗ್​ನ ಮಾಜಿ ಉಪಾಧ್ಯಕ್ಷ (ವೈಸ್ ಛೇರ್ಮನ್) ಅರವಿಂದ್ ಪನಗರಿಯಾ (Arvind Panagariya) ಅವರು ಆ ಆಯೋಗದ ಮುಖ್ಯಸ್ಥರಾಗಿದ್ದಾರೆ. ಎಸ್​ಬಿಐ ಗ್ರೂಪ್​ನ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್ (Soumya Kanti Ghosh) ಸೇರಿದಂತೆ ನಾಲ್ವರು ಸದಸ್ಯರನ್ನು ಈ ಆಯೋಗಕ್ಕೆ ಒಳಗೊಳ್ಳಲಾಗಿದೆ.

16ನೇ ಹಣಕಾಸು ಆಯೋಗದ ನೇತೃತ್ವ ಹೊಂದಿರುವ ಅರವಿಂದ್ ಪನಗರಿಯಾ ಅವರ ತಂಡಕ್ಕೆ ಒಬ್ಬರು ಕಾರ್ಯದರ್ಶಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಹಾಗೂ ಒಬ್ಬರು ಆರ್ಥಿಕ ಸಲಹೆಗಾರರು ಸಹಾಯವಾಗಿ ಇರಲಿದ್ದಾರೆ.

ಎಸ್​ಬಿಐ ಗ್ರೂಪ್​ನ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯಾ ಕಾಂತಿ ಘೋಷ್, ಮಾಜಿ ವೆಚ್ಚ ಕಾರ್ಯದರ್ಶಿ ಅಜಯ್ ನಾರಾಯಣ್ ಝಾ, ನಿವೃತ್ತ ಐಎಎಸ್ ಅಧಿಕಾರಿ ಆನೀ ಜಾರ್ಜ್ ಮ್ಯಾಥ್ಯೂ ಮತ್ತು ಅರ್ಥ ಗ್ಲೋಬಲ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಿರಂಜನ್ ರಾಜಾಧ್ಯಕ್ಷ ಅವರು 16ನೇ ಹಣಕಾಸು ಆಯೋಗದ ಸದಸ್ಯರಾಗಿರುತ್ತಾರೆ.

ಇದನ್ನೂ ಓದಿ: IMF: ಈ ಎರಡು ವರ್ಷ ಚೀನಾ, ಅಮೆರಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಹೇಗೆ? ಐಎಂಎಫ್ ಹೊಸ ವರದಿಯಲ್ಲೇನಿದೆ?

ಈ ಪೈಕಿ ಸೌಮ್ಯಾ ಕಾಂತಿ ಘೋಷ್ ಅರೆಕಾಲಿಕ ಸದಸ್ಯರಾಗಿರುತ್ತಾರೆ. ಈ ಮೇಲಿನ ನಾಲ್ವರು ಸದಸ್ಯರಿರುವ ಹಣಕಾಸು ಆಯೋಗಕ್ಕೆ ಋತ್ವಿಕ್ ರಂಜನಮ್ ಪಾಂಡೆ ಸೇರಿದಂತೆ ಇತರ ಕೆಲವರು ಸಹಾಯವಾಗಿರುತ್ತಾರೆ.

‘ಛೇರ್ಮನ್ ಹಾಗೂ ಇತರ ಸದಸ್ಯರು ತಮ್ಮ ವರದಿ ಸಲ್ಲಿಸುವವರೆಗೆ ಅಥವಾ 2025ರ ಅಕ್ಟೋಬರ್ 31ರವರೆಗೆ ಅಧಿಕಾರ ಹೊಂದಿರುತ್ತಾರೆ’ ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

16ನೇ ಹಣಕಾಸು ಆಯೋಗದ ಸದಸ್ಯರಿವರು

ಛೇರ್ಮನ್: ಅರವಿಂದ್ ಪನಗರಿಯಾ

ಸದಸ್ಯರು: ಸೌಮ್ಯಾ ಕಾಂತಿ ಘೋಷ್, ಅಜಯ್ ನಾರಾಯಣ್ ಝಾ, ಆನೀ ಜಾರ್ಜ್ ಮ್ಯಾಥ್ಯೂ ಮತ್ತು ನಿರಂಜನ್ ರಾಜಾಧ್ಯಕ್ಷ.

ಹಣಕಾಸು ಆಯೋಗದ ಜವಾಬ್ದಾರಿಗಳೇನು?

ಹಣಕಾಸು ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹಣಕಾಸು ಸಂಬಂಧದ ಬಗ್ಗೆ ಸಲಹೆಗಳನ್ನು ನೀಡಲೆಂದು ಸ್ಥಾಪನೆಯಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ಸೂತ್ರವನ್ನು ಇದು ಶಿಫಾರಸು ಮಾಡುತ್ತದೆ. ಐದು ವರ್ಷದ ಅವಧಿಗೆ ಇದರ ಶಿಫಾರಸುಗಳು ಚಾಲನೆಯಲ್ಲಿರುತ್ತವೆ.

ಇದನ್ನೂ ಓದಿ: IBM: ಆಫೀಸ್ ಸಮೀಪ ಮನೆ ಮಾಡಿ, ಇಲ್ಲ ಕೆಲಸ ಬಿಟ್ಟುಹೋಗಿ: ಮ್ಯಾನೇಜರ್​ಗಳಿಗೆ ನಿರ್ದೇಶನ ನೀಡಿದ ಐಬಿಎಂ

14ನೇ ಹಣಕಾಸು ಆಯೋಗವು ವೈ ವಿ ರೆಡ್ಡಿ ಅವರ ನೇತೃತ್ವದಲ್ಲಿತ್ತು. ಈಗ ಚಾಲನೆಯಲ್ಲಿರುವ 15ನೇ ಹಣಕಾಸು ಆಯೋಗವನ್ನು ಎನ್ ಕೆ ಸಿಂಗ್ ಅವರು ಮುನ್ನಡೆಸಿದ್ದಾರೆ. ಇವೆರಡೂ ಆಯೋಗಗಳು ಒಟ್ಟಾರೆ ತೆರಿಗೆ ಲಭ್ಯತೆಯಲ್ಲಿ ರಾಜ್ಯ ಸರ್ಕಾರಗಳಿಗೆ ಶೇ. 41ರಷ್ಟು ಪಾಲು ಕೊಡಬೇಕೆಂದು ಶಿಫಾರಸು ನೀಡಿವೆ.

ಈಗ ಅರವಿಂದ್ ಪನಗರಿಯಾ ನೇತೃತ್ವದ 16ನೇ ಹಣಕಾಸು ಆಯೋಗ ತನ್ನ ತೆರಿಗೆ ಹಂಚಿಕೆ ಸೂತ್ರ ಶಿಫಾರಸು ಮಾಡಲು 2025ರ ಅಕ್ಟೋಬರ್ 31ರವರೆಗೆ ಕಾಲಾವಕಾಶ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು