SpiceJet: ಸ್ಪೈಸ್​ಜೆಟ್ ಬಿಕ್ಕಟ್ಟು; ನ್ಯಾಯಮಂಡಳಿ ಬಳಿ ಇನ್ಸಾಲ್ವೆನ್ಸಿ ಕ್ರಮಕ್ಕೆ ಮನವಿ ಮಾಡಿದ ವಿಮಾನ ಗುತ್ತಿಗೆ ಸಂಸ್ಥೆ; ನನಗೇನೂ ಸಮಸ್ಯೆ ಇಲ್ಲ ಎನ್ನುವ ಸ್ಪೈಸ್​ಜೆಟ್

Insolvency Plea Against Spicejet by Lessor: ಸ್ಪೈಸ್​ಜೆಟ್​ನಿಂದ ತನ್ನ ಸಾಲ ವಸೂಲಾತಿ ಮಾಡಿಸಿಕೊಡುವಂತೆ ವಿಲ್ಮಿಂಗ್ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್ ಸಂಸ್ಥೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) ಮೆಟ್ಟಿಲೇರಿದೆ.

SpiceJet: ಸ್ಪೈಸ್​ಜೆಟ್ ಬಿಕ್ಕಟ್ಟು; ನ್ಯಾಯಮಂಡಳಿ ಬಳಿ ಇನ್ಸಾಲ್ವೆನ್ಸಿ ಕ್ರಮಕ್ಕೆ ಮನವಿ ಮಾಡಿದ ವಿಮಾನ ಗುತ್ತಿಗೆ ಸಂಸ್ಥೆ; ನನಗೇನೂ ಸಮಸ್ಯೆ ಇಲ್ಲ ಎನ್ನುವ ಸ್ಪೈಸ್​ಜೆಟ್
ಸ್ಪೈಸ್​ಜೆಟ್
Follow us
|

Updated on: Jun 11, 2023 | 4:36 PM

ನವದೆಹಲಿ: ಭಾರತದಲ್ಲಿ ಕಡಿಮೆ ಬೆಲೆಗೆ ವಿಮಾನ ಪ್ರಯಾಣ ಸೌಲಭ್ಯ ಒದಿಸುವ ಸಂಸ್ಥೆಗಳ ಗ್ರಹಚಾರ ವಕ್ರವಾದಂತಿದೆ. ಸಾಲ ಮತ್ತು ನಷ್ಟದ ಹೊಡೆತಕ್ಕೆ ಸಾಲು ಸಾಲಾಗಿ ಪತನಗೊಳ್ಳುತ್ತಿವೆ. ಇತ್ತೀಚೆಗಷ್ಟೇ ಗೋ ಫಸ್ಟ್ ಏರ್ಲೈನ್ ಸಂಸ್ಥೆ ತಾನೇ ಖುದ್ದಾಗಿ ಇನ್ಸಾಲ್ವೆನ್ಸಿಗೆ ಮನವಿ ಅರ್ಜಿ ಹಾಕಿದೆ. ಇದೀಗ ಸ್ಪೈಸ್​ಜೆಟ್ ಸಂಸ್ಥೆ ವಿರುದ್ಧ ಮೂರನೇ ಇನ್ಸಾಲ್ವೆನ್ಸಿ ಅರ್ಜಿ (Insolvency Plea) ಸಲ್ಲಿಕೆಯಾಗಿದೆ. ಸ್ಪೈಸ್​ಜೆಟ್​ನಿಂದ ತನ್ನ ಸಾಲ ವಸೂಲಾತಿ ಮಾಡಿಸಿಕೊಡುವಂತೆ ವಿಲ್ಮಿಂಗ್ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್ ಸಂಸ್ಥೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National Company Law Tribunal) ಮೆಟ್ಟಿಲೇರಿದೆ. ವಿಲ್ಮಿಂಗ್ಟನ್ ಟ್ರಸ್ಟ್ ಸಂಸ್ಥೆಯು ವಿಮಾನಗಳನ್ನು ಗುತ್ತಿಗೆಗೆ ನೀಡುವ ಸಂಸ್ಥೆ. ಇದೇ ರೀತಿ ವಿಮಾನ ಗುತ್ತಿಗೆ ನೀಡುವ ಇನ್ನೆರಡು ಕಂಪನಿಗಳೂ ಈ ಮುಂಚೆ ಸ್ಪೈಸ್​ಜೆಟ್ ವಿರುದ್ಧ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ಎನ್​ಸಿಎಲ್​ಟಿಯಲ್ಲಿ ನಡೆಯುತ್ತಿದೆ. ವಿಲ್ಮಿಂಗ್ಟನ್ ಟ್ರಸ್ಟ್ ಸಂಸ್ಥೆಯ ಅರ್ಜಿಯ ವಿಚಾರಣೆ ಜೂನ್ 12ರಂದು ನಡೆಯುವ ನಿರೀಕ್ಷೆ ಇದೆ.

ಸ್ಪೈಸ್​ಜೆಟ್​ನ ಮೂರು ವಿಮಾನಗಳ ನೊಂದಣಿಯನ್ನು ಡಿಜಿಸಿಎ ಕಳೆದ ತಿಂಗಳು (2023 ಮೇ) ರದ್ದು ಮಾಡಿತ್ತು. ಇದರಲ್ಲಿ ವಿಲ್ಮಿಂಗ್ಟನ್​ಗೆ ಸೇರಿದ ಒಂದು ವಿಮಾನವೂ ಇದೆ. ವಿಲ್ಮಿಂಗ್ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್, ಸಬರಮತಿ ಏವಿಯೇಶನ್ ಲೀಸಿಂಗ್ ಹಾಗೂ ಫಾಲ್ಗು ಏವಿಯೇಶನ್ ಲೀಸಿಂಗ್ ಸಂಸ್ಥೆಗಳು ಸ್ಪೈಸ್​ಜೆಟ್​ನಿಂದ ಹಣಬಾಕಿ ಪಾವತಿಯಾಗಿಲ್ಲ ಎಂದು ಆರೋಪಿಸಿ, ತಮ್ಮ ವಿಮಾನಗಳನ್ನು ಡೀರಿಜಿಸ್ಟರ್ ಮಾಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬಳಿ ಮನವಿ ಮಾಡಿದ್ದವು. ಅದರಂತೆ ಸ್ಪೈಸ್​ಜೆಟ್​ನ ವಿಟಿಎಂಎಕ್ಸ್​ಜೆ, ಎಂಎಕ್ಸ್​ಎಫ್ ಮತ್ತು ಎಸ್​ಝಡ್​ಜೆ ವಿಮಾನಗಳ ನೊಂದಣಿಯನ್ನು ಡಿಜಿಸಿಎ ರದ್ದು ಮಾಡಿತ್ತು.

ಇದನ್ನೂ ಓದಿSam Altman vs Indian CEOs: ನನ್ನ ನೀನು ಗೆಲ್ಲಲಾರೆ… ಚಾಲೆಂಜ್… ವಿಶ್ವದ ಎಐ ದೊರೆ ಮತ್ತು ಭಾರತೀಯ ಸಿಇಒಗಳ ಮಧ್ಯೆ ಇಂಟ್ರೆಸ್ಟಿಂಗ್ ಪ್ರಸಂಗ

ಮೂರು ಸಂಸ್ಥೆಗಳಿಂದ ಇನ್ಸಾಲ್ವೆನ್ಸಿ ಅರ್ಜಿ:

ವಿಲ್ಮಿಂಗ್ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್​ಗಿಂತ ಮುಂಚೆ ಏರ್​ಕ್ಯಾಸಲ್ ಮತ್ತು ವಿಲ್ಲಿಸ್ ಲೀಸ್ ಫೈನಾನ್ಸ್ ಸಂಸ್ಥೆಗಳು ಎನ್​ಸಿಎಲ್​ಟಿ ಬಳಿ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿದ್ದವು. ಇದರಲ್ಲಿ ಏರ್​ಕ್ಯಾಸಲ್ ಸಂಸ್ಥೆ ವಿಮಾನಗಳ ಗುತ್ತಿಗೆ ನೀಡುವ ಸಂಸ್ಥೆಯಾದರೆ, ವಿಲ್ಲಿಸ್ ಎಂಜಿನ್ನುಗಳ ಗುತ್ತಿಗೆ ನೀಡುವಂತಹ ಕಂಪನಿ.

ವಿಲ್ಲಿಸ್ ಲೀಸಿಂಗ್ ಕಂಪನಿಯ ಅರ್ಜಿ ಜುಲೈ 4ಕ್ಕೆ ನಿಗದಿಯಾಗಿದ್ದರೆ, ಏರ್​ಕ್ಯಾಸಲ್​ನ ಅರ್ಜಿಯ ವಿಚಾರಣೆ ಜುಲೈ 17ರಂದು ನಡೆಯಲಿದೆ. ಈಗ ಇನ್ಸಾಲ್ವೆನ್ಸಿ ಕ್ರಮಕ್ಕೆ ಅರ್ಜಿ ಹಾಕಿರುವ ವಿಲ್ಮಿಂಗ್ಟನ್ ಟ್ರಸ್ಟ್​ನ ಅರ್ಜಿವಿಚಾರಣೆ ಜೂನ್ 12, ಅಂದರೆ ನಾಳೆಯೇ ನಡೆಯಲಿದೆ. ಈ ಮೂರಷ್ಟೇ ಅಲ್ಲದೇ ಈ ಹಿಂದೆ ಎಕ್ರೆಸ್ ಬ್ಯುಲ್ಡ್​ವೆಲ್ ಪ್ರೈ ಲಿ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯೂ ಸ್ಪೈಸ್​ಜೆಟ್ ವಿರುದ್ಧ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತ್ತು. ಆದರೆ, ಎರಡೂ ಕಡೆಯಿಂದ ರಾಜಿಸಂಧಾನವಾದ್ದರಿಂದ ತನ್ನ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದೆ ರಿಯಲ್ ಎಸ್ಟೇಟ್ ಕಂಪನಿ.

ಇದನ್ನೂ ಓದಿRBI: ನೀವು ಬ್ಯಾಂಕ್​ನಲ್ಲಿ ಅಡಮಾನ ಇಟ್ಟಿದ್ದ ಮೂಲ ಆಸ್ತಿ ದಾಖಲೆ ಕಳೆದುಹೋದರೆ ಏನಾಗುತ್ತೆ? ಆರ್​ಬಿಐ ತರುತ್ತಿದೆ ಹೊಸ ಕಾನೂನು

ಚೆನ್ನಾಗಿದ್ದೀನಿ, ಬ್ಯುಸಿನೆಸ್ ಮುಂದುವರಿಸ್ತೀನಿ ಎನ್ನುತ್ತಿದೆ ಸ್ಪೈಸ್​ಜೆಟ್

ಇನ್ನೊಂದೆಡೆ, 2022ರ ವರದಿ ಪ್ರಕಾರ ಸ್ಪೈಸ್​ಜೆಟ್ ಸಂಸ್ಥೆ ಸುಮಾರು 1020ಕೋಟಿ ರೂ ಸಾಲ ಹೊಂದಿದೆ. ತಾನು ಇನ್ಸಾಲ್ವೆನ್ಸಿಗೆ ಅರ್ಜಿ ಹಾಕುವ ಪ್ರಮೇಯಕ್ಕೇನೂ ಸಿಲುಕಿಲ್ಲ. ಸರ್ಕಾರದ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್​ನಿಂದ (ಇಸಿಎಲ್​ಜಿಎಸ್) 50 ಮಿಲಿಯನ್ ಡಾಲರ್ (ಸುಮಾರು 820 ಕೋಟಿ ರೂ) ಸಾಲ ಸಿಕ್ಕಿದ್ದು ಅದನ್ನು ವಿಮಾನಗಳ ಮರುಚಾಲನೆಗೆ ಬಳಸಿಕೊಳ್ಳಲಾಗುತ್ತಿದೆ. ಇನ್ಸಾಲ್ವೆನ್ಸಿಗೆ ಅರ್ಜಿ ಹಾಕುವ ಉದ್ದೇಶ ಇಲ್ಲ ಎಂದು ಸ್ಪೈಸ್​ಜೆಟ್ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ