AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 31 ಪೈಸೆ ಸಾಲ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರಿಸಿದ ಪತ್ರ ನೀಡಲು ನಿರಾಕರಿಸಿದ SBI, ಛೀಮಾರಿ ಹಾಕಿದ ಹೈಕೋರ್ಟ್​

State Bank of India: ಒಂದು ಕಡೆ ನಮ್ಮದೇ ಬೆಂಗಳೂರಿನ ಕೆನರಾ ಬ್ಯಾಂಕ್ 1,29,000 ಕೋಟಿ ಸಾಲ ವಸೂಲು ಮಾಡಲಾಗದೆ, ಸುಸ್ತಿದಾರರ ಹೆಸರೂ ಬಹಿರಂಗಪಡಿಸಲು ನಿರಾಕರಿಸಿರುವಾಗ ದೂರದ ಗುಜರಾತಿನಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿರುವ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಎಸ್‌ಬಿಐ ಬ್ಯಾಂಕ್ ನಿರಾಕರಿಸಿದೆ.

ಕೇವಲ 31 ಪೈಸೆ ಸಾಲ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರಿಸಿದ ಪತ್ರ ನೀಡಲು ನಿರಾಕರಿಸಿದ SBI, ಛೀಮಾರಿ ಹಾಕಿದ ಹೈಕೋರ್ಟ್​
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 12, 2022 | 4:51 PM

Share

ಒಂದು ಕಡೆ ನಮ್ಮದೇ ಬೆಂಗಳೂರಿನ ಕೆನರಾ ಬ್ಯಾಂಕ್ 1,29,000 ಕೋಟಿ ಸಾಲ ವಸೂಲು ಮಾಡಲಾಗದೆ, ಸುಸ್ತಿದಾರರ ಹೆಸರೂ ಬಹಿರಂಗಪಡಿಸಲು ನಿರಾಕರಿಸಿರುವಾಗ ದೂರದ ಗುಜರಾತಿನಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿರುವ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಎಸ್‌ಬಿಐ ಬ್ಯಾಂಕ್ ನಿರಾಕರಿಸಿದೆ. ಪ್ರಕರಣವನ್ನು ಆಲಿಸಿದ ಹೈಕೋರ್ಟ್ ಬ್ಯಾಂಕಿಗೆ ಛೀಮಾರಿ ಹಾಕಿದೆ. ಇದೊಂದು ರೀತಿಯ ಕಿರುಕುಳವೇ ಸರಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಭೂಮಿ ಮಾರಾಟದ ವಿಷಯದಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ SBI ) ನಿರಾಕರಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ (Gujarat High Court), ಬ್ಯಾಂಕಿಗೆ ಛೀಮಾರಿ ಹಾಕಿದೆ. ಇದೊಂದು ರೀತಿಯ ಕಿರುಕುಳವೇ ಸರಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪ್ರಕರಣ ತುಸು ಹಳೆಯದ್ದಾಗಿದ್ದು, ನ್ಯಾಯಮೂರ್ತಿ ಭಾರ್ಗವ್ ಕರಿಯಾ (Justice Bhargav Karia) ಅವರಿದ್ದ ಹೈಕೋರ್ಟ್​ ನ್ಯಾಯಪೀಠ ಏಪ್ರಿಲ್​ ನಲ್ಲಿ ಅರ್ಜಿಯ ವಿಚಾರಣೆ ನಡೆಸಿತ್ತು. ಭೂ ವ್ಯವಹಾರವನ್ನು ತೆರವುಗೊಳಿಸಲು ರೈತರಿಗೆ ಸಂಬಂಧಪಟ್ಟ ಬ್ಯಾಂಕಿನಿಂದ ‘ಯಾವುದೆ ರೀತಿಯ ಬಾಕಿ ಇಲ್ಲ’ ಎಂಬ (no-dues certificate) ಪ್ರಮಾಣಪತ್ರದ ಅಗತ್ಯವಿರುತ್ತದೆ. ಆದರೆ ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ಎಸ್‌ಬಿಐ, ಸದರಿ ರೈತನಿಗೆ ಅಂತಹ ಪ್ರಮಾಣಪತ್ರ ನೀಡದೆ ತಡೆಹಿಡಿದಿತ್ತು. ಮತ್ತು ನೀಡುವುದಿಲ್ವೆಂದು ಸತಾಯಿಸುತ್ತಿತ್ತು. ಇದನ್ನು ಆಲಿಸಿದ ಹೈಕೋರ್ಟ್​, ಬ್ಯಾಂಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದು ತುಂಬಾ ಅತಿಯಾಯ್ತು. ರಾಷ್ಟ್ರೀಕೃತ ಬ್ಯಾಂಕ್ ಕೇವಲ 31 ಪೈಸೆಗೆ ನೋ ಡ್ಯೂ ಪ್ರಮಾಣಪತ್ರವನ್ನು ನೀಡುವುದಿಲ್ಲ ಎಂದು ಹೇಳುತ್ತಿರುವುದು ದುರದೃಷ್ಟಕರ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣದ ವಿವರಗಳ ಪ್ರಕಾರ, ರಾಕೇಶ್ ವರ್ಮಾ ಮತ್ತು ಮನೋಜ್ ವರ್ಮಾ ಎಂಬಿಬ್ಬರು ರೈತಾಪಿ ಅರ್ಜಿದಾರರು 2020 ರಲ್ಲಿ ಅಹಮದಾಬಾದ್ ನಗರದ ಸಮೀಪ ಖೋರಾಜ್ ಗ್ರಾಮದಲ್ಲಿ ರೈತ ಶಾಮ್​ಜಿ ಭಾಯಿ ಮತ್ತು ಅವರ ಕುಟುಂಬದಿಂದ ತುಂಡು ಭೂಮಿಯನ್ನು ಖರೀದಿಸಿದ್ದರು.

ಶ್ಯಾಮ್‌ಜಿ ಭಾಯಿ ಅವರು ಎಸ್‌ಬಿಐನಿಂದ ಪಡೆದಿದ್ದ 3 ಲಕ್ಷ ರೂ.ಗಳ ಬೆಳೆ ಸಾಲವನ್ನು ಮರುಪಾವತಿಸುವ ಮೊದಲು ಅರ್ಜಿದಾರರಿಗೆ ಭೂಮಿಯನ್ನು ಮಾರಾಟ ಮಾಡಿದ್ದರಿಂದ, ಅರ್ಜಿದಾರರು (ಹೊಸ ಜಮೀನಿನ ಮಾಲೀಕರು) ತಮ್ಮ ಹೆಸರನ್ನು ಕಂದಾಯದಲ್ಲಿ ನಮೂದಿಸಲು ಸಾಧ್ಯವಾಗಲಿಲ್ಲ – ಇದು ಪ್ರಕರಣದ ತಿರುಳು.

ರೈತ ಶ್ಯಾಮ್‌ಜಿ ಭಾಯಿ ಅವರು ಸಂಪೂರ್ಣ ಸಾಲ ಮರುಪಾವತಿ ಹಣವನ್ನು ಬ್ಯಾಂಕ್‌ಗೆ ತಲುಪಿಸಿದ್ದರೂ, ಕೆಲವು ಕಾರಣಗಳಿಂದ ಎಸ್‌ಬಿಐ ಸಾಲ ತೀರುವಳಿ ಪ್ರಮಾಣಪತ್ರವನ್ನು ನೀಡಿರಲಿಲ್ಲ. ಇದನ್ನು ಮನಗಂಡು ಹೊಸ ಮಾಲೀಕರು ಎರಡು ವರ್ಷಗಳ ಹಿಂದೆ ಹೈಕೋರ್ಟ್‌ನ ಮೊರೆ ಹೋಗಿದ್ದರು.

ಪ್ಕರಣದ ವಿಚಾರಣೆಯ ವೇಳೆ, ನ್ಯಾಯಮೂರ್ತಿ ಕರಿಯಾ ಅವರು ನ್ಯಾಯಾಲಯದಲ್ಲಿ ನೋ ಡ್ಯೂ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಬ್ಯಾಂಕ್‌ಗೆ ಕೇಳಿದಾಗ, ಎಸ್‌ಬಿಐ ಪರ ವಕೀಲ ಆನಂದ್ ಗೋಗಿಯಾ, “31 ಪೈಸೆ ಬಾಕಿ ಇರುವ ಕಾರಣ ಅದು ಸಾಧ್ಯವಿಲ್ಲ. ಇದು ಕಂಪ್ಯೂಟರ್​​ ವ್ಯವಸ್ಥೆಯಿಂದ (system generated) ರಚಿತವಾಗಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಎಸ್‌ಬಿಐ ಮ್ಯಾನೇಜರ್ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಗೋಗಿಯಾ ಹೇಳಿದಾಗ, ನ್ಯಾಯಾಧೀಶರು ಕೋಪಗೊಂಡರು. ಮತ್ತು ನ್ಯಾಯಾಲಯಕ್ಕೆ ಹಾಜರಾಗುವಂತೆ ವ್ಯವಸ್ಥಾಪಕರಿಗೆ ಸೂಚಿಸುವಂತೆ ವಕೀಲರಿಗೆ ಹೇಳಿದರು.

ಇದಕ್ಕೆ ನ್ಯಾಯಮೂರ್ತಿ ಕರಿಯಾ ಅವರು 50 ಪೈಸೆಗಿಂತ ಕಡಿಮೆ ಇರುವ ಯಾವುದನ್ನಾದರೂ ನಿರ್ಲಕ್ಷಿಸಬೇಕು ಮತ್ತು ಪ್ರಮಾಣಪತ್ರವನ್ನು ನೀಡಬೇಕು. ಏಕೆಂದರೆ ಮೂಲ ಸಾಲಗಾರ ಈಗಾಗಲೇ ಬೆಳೆ ಸಾಲದ ಸಂಪೂರ್ಣ ಬಾಕಿಯನ್ನು ಪಾವತಿಸಿದ್ದಾರೆ.

“ನೀವು ಜನರಿಗೆ ಏಕೆ ಕಿರುಕುಳ ಕೊಡುತ್ತಿದ್ದೀರಿ? ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯು 50 ಪೈಸೆಗಿಂತ ಕಡಿಮೆ ಹಣವನ್ನು ಎಣಿಕೆ ಮಾಡಬಾರದು ಎಂದು ಹೇಳುತ್ತದೆ. ಇದು ನಿಮ್ಮ ಮ್ಯಾನೇಜರ್‌ನಿಂದ ಕಿರುಕುಳವಲ್ಲದೆ ಬೇರೇನೂ ಅಲ್ಲ” ಎಂದು ನ್ಯಾಯಮೂರ್ತಿ ಕರಿಯಾ ಹೇಳಿದರು ಎಂದು tribuneindia ವರದಿ ಮಾಡಿದೆ.

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ