AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 31 ಪೈಸೆ ಸಾಲ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರಿಸಿದ ಪತ್ರ ನೀಡಲು ನಿರಾಕರಿಸಿದ SBI, ಛೀಮಾರಿ ಹಾಕಿದ ಹೈಕೋರ್ಟ್​

State Bank of India: ಒಂದು ಕಡೆ ನಮ್ಮದೇ ಬೆಂಗಳೂರಿನ ಕೆನರಾ ಬ್ಯಾಂಕ್ 1,29,000 ಕೋಟಿ ಸಾಲ ವಸೂಲು ಮಾಡಲಾಗದೆ, ಸುಸ್ತಿದಾರರ ಹೆಸರೂ ಬಹಿರಂಗಪಡಿಸಲು ನಿರಾಕರಿಸಿರುವಾಗ ದೂರದ ಗುಜರಾತಿನಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿರುವ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಎಸ್‌ಬಿಐ ಬ್ಯಾಂಕ್ ನಿರಾಕರಿಸಿದೆ.

ಕೇವಲ 31 ಪೈಸೆ ಸಾಲ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರಿಸಿದ ಪತ್ರ ನೀಡಲು ನಿರಾಕರಿಸಿದ SBI, ಛೀಮಾರಿ ಹಾಕಿದ ಹೈಕೋರ್ಟ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 12, 2022 | 4:51 PM

ಒಂದು ಕಡೆ ನಮ್ಮದೇ ಬೆಂಗಳೂರಿನ ಕೆನರಾ ಬ್ಯಾಂಕ್ 1,29,000 ಕೋಟಿ ಸಾಲ ವಸೂಲು ಮಾಡಲಾಗದೆ, ಸುಸ್ತಿದಾರರ ಹೆಸರೂ ಬಹಿರಂಗಪಡಿಸಲು ನಿರಾಕರಿಸಿರುವಾಗ ದೂರದ ಗುಜರಾತಿನಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿರುವ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಎಸ್‌ಬಿಐ ಬ್ಯಾಂಕ್ ನಿರಾಕರಿಸಿದೆ. ಪ್ರಕರಣವನ್ನು ಆಲಿಸಿದ ಹೈಕೋರ್ಟ್ ಬ್ಯಾಂಕಿಗೆ ಛೀಮಾರಿ ಹಾಕಿದೆ. ಇದೊಂದು ರೀತಿಯ ಕಿರುಕುಳವೇ ಸರಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಭೂಮಿ ಮಾರಾಟದ ವಿಷಯದಲ್ಲಿ ಕೇವಲ 31 ಪೈಸೆ ಬಾಕಿ ಉಳಿಸಿಕೊಂಡಿದ್ದ ಗುಜರಾತ್ ರೈತನಿಗೆ ಸಾಲ ತೀರುವಳಿ ಪ್ರಮಾಣಪತ್ರ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ SBI ) ನಿರಾಕರಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ (Gujarat High Court), ಬ್ಯಾಂಕಿಗೆ ಛೀಮಾರಿ ಹಾಕಿದೆ. ಇದೊಂದು ರೀತಿಯ ಕಿರುಕುಳವೇ ಸರಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪ್ರಕರಣ ತುಸು ಹಳೆಯದ್ದಾಗಿದ್ದು, ನ್ಯಾಯಮೂರ್ತಿ ಭಾರ್ಗವ್ ಕರಿಯಾ (Justice Bhargav Karia) ಅವರಿದ್ದ ಹೈಕೋರ್ಟ್​ ನ್ಯಾಯಪೀಠ ಏಪ್ರಿಲ್​ ನಲ್ಲಿ ಅರ್ಜಿಯ ವಿಚಾರಣೆ ನಡೆಸಿತ್ತು. ಭೂ ವ್ಯವಹಾರವನ್ನು ತೆರವುಗೊಳಿಸಲು ರೈತರಿಗೆ ಸಂಬಂಧಪಟ್ಟ ಬ್ಯಾಂಕಿನಿಂದ ‘ಯಾವುದೆ ರೀತಿಯ ಬಾಕಿ ಇಲ್ಲ’ ಎಂಬ (no-dues certificate) ಪ್ರಮಾಣಪತ್ರದ ಅಗತ್ಯವಿರುತ್ತದೆ. ಆದರೆ ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ಎಸ್‌ಬಿಐ, ಸದರಿ ರೈತನಿಗೆ ಅಂತಹ ಪ್ರಮಾಣಪತ್ರ ನೀಡದೆ ತಡೆಹಿಡಿದಿತ್ತು. ಮತ್ತು ನೀಡುವುದಿಲ್ವೆಂದು ಸತಾಯಿಸುತ್ತಿತ್ತು. ಇದನ್ನು ಆಲಿಸಿದ ಹೈಕೋರ್ಟ್​, ಬ್ಯಾಂಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದು ತುಂಬಾ ಅತಿಯಾಯ್ತು. ರಾಷ್ಟ್ರೀಕೃತ ಬ್ಯಾಂಕ್ ಕೇವಲ 31 ಪೈಸೆಗೆ ನೋ ಡ್ಯೂ ಪ್ರಮಾಣಪತ್ರವನ್ನು ನೀಡುವುದಿಲ್ಲ ಎಂದು ಹೇಳುತ್ತಿರುವುದು ದುರದೃಷ್ಟಕರ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣದ ವಿವರಗಳ ಪ್ರಕಾರ, ರಾಕೇಶ್ ವರ್ಮಾ ಮತ್ತು ಮನೋಜ್ ವರ್ಮಾ ಎಂಬಿಬ್ಬರು ರೈತಾಪಿ ಅರ್ಜಿದಾರರು 2020 ರಲ್ಲಿ ಅಹಮದಾಬಾದ್ ನಗರದ ಸಮೀಪ ಖೋರಾಜ್ ಗ್ರಾಮದಲ್ಲಿ ರೈತ ಶಾಮ್​ಜಿ ಭಾಯಿ ಮತ್ತು ಅವರ ಕುಟುಂಬದಿಂದ ತುಂಡು ಭೂಮಿಯನ್ನು ಖರೀದಿಸಿದ್ದರು.

ಶ್ಯಾಮ್‌ಜಿ ಭಾಯಿ ಅವರು ಎಸ್‌ಬಿಐನಿಂದ ಪಡೆದಿದ್ದ 3 ಲಕ್ಷ ರೂ.ಗಳ ಬೆಳೆ ಸಾಲವನ್ನು ಮರುಪಾವತಿಸುವ ಮೊದಲು ಅರ್ಜಿದಾರರಿಗೆ ಭೂಮಿಯನ್ನು ಮಾರಾಟ ಮಾಡಿದ್ದರಿಂದ, ಅರ್ಜಿದಾರರು (ಹೊಸ ಜಮೀನಿನ ಮಾಲೀಕರು) ತಮ್ಮ ಹೆಸರನ್ನು ಕಂದಾಯದಲ್ಲಿ ನಮೂದಿಸಲು ಸಾಧ್ಯವಾಗಲಿಲ್ಲ – ಇದು ಪ್ರಕರಣದ ತಿರುಳು.

ರೈತ ಶ್ಯಾಮ್‌ಜಿ ಭಾಯಿ ಅವರು ಸಂಪೂರ್ಣ ಸಾಲ ಮರುಪಾವತಿ ಹಣವನ್ನು ಬ್ಯಾಂಕ್‌ಗೆ ತಲುಪಿಸಿದ್ದರೂ, ಕೆಲವು ಕಾರಣಗಳಿಂದ ಎಸ್‌ಬಿಐ ಸಾಲ ತೀರುವಳಿ ಪ್ರಮಾಣಪತ್ರವನ್ನು ನೀಡಿರಲಿಲ್ಲ. ಇದನ್ನು ಮನಗಂಡು ಹೊಸ ಮಾಲೀಕರು ಎರಡು ವರ್ಷಗಳ ಹಿಂದೆ ಹೈಕೋರ್ಟ್‌ನ ಮೊರೆ ಹೋಗಿದ್ದರು.

ಪ್ಕರಣದ ವಿಚಾರಣೆಯ ವೇಳೆ, ನ್ಯಾಯಮೂರ್ತಿ ಕರಿಯಾ ಅವರು ನ್ಯಾಯಾಲಯದಲ್ಲಿ ನೋ ಡ್ಯೂ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಬ್ಯಾಂಕ್‌ಗೆ ಕೇಳಿದಾಗ, ಎಸ್‌ಬಿಐ ಪರ ವಕೀಲ ಆನಂದ್ ಗೋಗಿಯಾ, “31 ಪೈಸೆ ಬಾಕಿ ಇರುವ ಕಾರಣ ಅದು ಸಾಧ್ಯವಿಲ್ಲ. ಇದು ಕಂಪ್ಯೂಟರ್​​ ವ್ಯವಸ್ಥೆಯಿಂದ (system generated) ರಚಿತವಾಗಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಎಸ್‌ಬಿಐ ಮ್ಯಾನೇಜರ್ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಗೋಗಿಯಾ ಹೇಳಿದಾಗ, ನ್ಯಾಯಾಧೀಶರು ಕೋಪಗೊಂಡರು. ಮತ್ತು ನ್ಯಾಯಾಲಯಕ್ಕೆ ಹಾಜರಾಗುವಂತೆ ವ್ಯವಸ್ಥಾಪಕರಿಗೆ ಸೂಚಿಸುವಂತೆ ವಕೀಲರಿಗೆ ಹೇಳಿದರು.

ಇದಕ್ಕೆ ನ್ಯಾಯಮೂರ್ತಿ ಕರಿಯಾ ಅವರು 50 ಪೈಸೆಗಿಂತ ಕಡಿಮೆ ಇರುವ ಯಾವುದನ್ನಾದರೂ ನಿರ್ಲಕ್ಷಿಸಬೇಕು ಮತ್ತು ಪ್ರಮಾಣಪತ್ರವನ್ನು ನೀಡಬೇಕು. ಏಕೆಂದರೆ ಮೂಲ ಸಾಲಗಾರ ಈಗಾಗಲೇ ಬೆಳೆ ಸಾಲದ ಸಂಪೂರ್ಣ ಬಾಕಿಯನ್ನು ಪಾವತಿಸಿದ್ದಾರೆ.

“ನೀವು ಜನರಿಗೆ ಏಕೆ ಕಿರುಕುಳ ಕೊಡುತ್ತಿದ್ದೀರಿ? ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯು 50 ಪೈಸೆಗಿಂತ ಕಡಿಮೆ ಹಣವನ್ನು ಎಣಿಕೆ ಮಾಡಬಾರದು ಎಂದು ಹೇಳುತ್ತದೆ. ಇದು ನಿಮ್ಮ ಮ್ಯಾನೇಜರ್‌ನಿಂದ ಕಿರುಕುಳವಲ್ಲದೆ ಬೇರೇನೂ ಅಲ್ಲ” ಎಂದು ನ್ಯಾಯಮೂರ್ತಿ ಕರಿಯಾ ಹೇಳಿದರು ಎಂದು tribuneindia ವರದಿ ಮಾಡಿದೆ.

Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ