AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ಇಂದಿನಿಂದ 4 ದಿನಗಳ ಕಾಲ ಈ ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜಾ ದಿನ

ಭಾರತದ ಬಹುತೇಕ ರಾಜ್ಯಗಳಲ್ಲಿ ಇಂದಿನಿಂದ 4 ದಿನ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವುದಿಲ್ಲ. ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ.

Bank Holidays: ಇಂದಿನಿಂದ 4 ದಿನಗಳ ಕಾಲ ಈ ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜಾ ದಿನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 20, 2021 | 12:22 AM

Share

ಬ್ಯಾಂಕ್​ ಶಾಖೆಗೆ ಹೋಗಿ ಮಾಡುವಂಥ ಅಥವಾ ಪೂರ್ತಿಗೊಳಿಸಬೇಕಾದ ಜವಾಬ್ದಾರಿಗಳು ಏನಾದರೂ ಇದ್ದವಾ? ಹಾಗಿದ್ದರೆ ಅದಕ್ಕಾಗಿ ಸೋಮವಾರದ ತನಕ ಕಾಯಲೇಬೇಕು ಬಿಡಿ. ಖಾಸಗಿ ವಲಯವೇ ಇರಲಿ ಅಥವಾ ಸರ್ಕಾರಿ ಬ್ಯಾಂಕ್​ಗಳೇ ಆಗಿರಲಿ, ಕೆಲವು ನಗರಗಳಲ್ಲಿ 4 ದಿನಗಳ ಕಾಲ ರಜಾ ಇದೆ. ಆದರೆ ಆನ್​ಲೈನ್​ ಬ್ಯಾಂಕಿಂಗ್ ವಹಿವಾಟುಗಳಿಗೇನೂ ಸಮಸ್ಯೆ ಆಗಲ್ಲ ಮತ್ತು ಎಟಿಎಂ ಮಶೀನ್​ಗಳಿಂದ ಹಣ ತೆಗೆದುಕೊಳ್ಳುವುದಕ್ಕೆ ಏನೂ ತೊಂದರೆ ಇಲ್ಲ. ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಆಯಾ ರಾಜ್ಯಗಳಿಗೆ ಅನ್ವಯ ಆಗುವಂತೆ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತದ ಬಹುತೇಕ ರಾಜ್ಯಗಳಿಗೆ ಅನ್ವಯ ಆಗುವ ಸಾಮಾನ್ಯ ರಜಾ ದಿನಗಳು ಅಂದರೆ ಅದು ಮೊಹರಂ ಹಾಗೂ ಕೃಷ್ಣಾಷ್ಟಮಿ.

ಆಗಸ್ಟ್ 19- ಗುರುವಾರ ಆಗಸ್ಟ್ 19ನೇ ತಾರೀಕಿನಂದು ಮೊಹರಂ ಪ್ರಯುಕ್ತ ಬಹುತೇಕ ರಾಜ್ಯಗಳಲ್ಲಿ ರಜಾ ಇದೆ. 17 ನಗರಗಳಲ್ಲಿ ಬ್ಯಾಂಕ್​ಗಳು ಕೆಲಸ ನಿರ್ವಹಿಸುವುದಿಲ್ಲ. ಅಗರ್ತಲ, ಅಹ್ಮದಾಬಾದ್, ಬೆಲಾಪುರ್, ಭೋಪಾಲ್, ಹೈದರಾಬಾದ್, ಜೈಪುರ್, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ್, ನವದೆಹಲಿ, ಪಾಟ್ನಾ, ರಾಯ್​ಪುರ್​, ರಾಂಚಿ ಮತ್ತು ಶ್ರೀನಗರ್ ಒಳಗೊಂಡಿವೆ.

ಆಗಸ್ಟ್ 20- ಶುಕ್ರವಾರ ಆಗಸ್ಟ್ 20ನೇ ತಾರೀಕಿನ ಶುಕ್ರವಾರದಂದು ಕರ್ನಾಟಕ, ಕೇರಳ, ತಮಿಳುನಾಡು ಈ ರಾಜ್ಯಗಳಲ್ಲಿ ಓಣಂ ಪ್ರಯುಕ್ತ ಬ್ಯಾಂಕ್​ಗಳಿಗೆ ರಜಾ ಇರುತ್ತದೆ.

ಆಗಸ್ಟ್ 21- ಶನಿವಾರ ತಿರುಓಣಂ ಪ್ರಯುಕ್ತ ಶನಿವಾರದಂದು ಕೇರಳದಲ್ಲಿ ಬ್ಯಾಂಕ್​ಗಳ ವಹಿವಾಟು ಇರುವುದಿಲ್ಲ.

ಆಗಸ್ಟ್ 22- ಭಾನುವಾರ ಆಗಸ್ಟ್ 22ರ ಭಾನುವಾರ ರಕ್ಷಾಬಂಧನ ಇದೆ. ಅಂದಹಾಗೆ ಎಲ್ಲ ಭಾನುವಾರಗಳಂದು, ಎರಡು ಹಾಗೂ ನಾಲ್ಕನೇ ಶನಿವಾರ ಸಾಮಾನ್ಯ ರಜಾ ದಿನಗಳು.

ಇದನ್ನೂ ಓದಿ: Bank Holidays in August 2021; ಆಗಸ್ಟ್​ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ; ಈ ದಿನಗಳು ವಹಿವಾಟು ಇರಲ್ಲ

RBI Rules: ಆಗಸ್ಟ್ 1ರಿಂದ ಭಾನುವಾರ, ಬ್ಯಾಂಕ್​ ರಜಾ ದಿನಗಳಲ್ಲೂ ಖಾತೆಗೆ ಜಮೆ ಆಗುತ್ತದೆ ವೇತನ, ಪೆನ್ಷನ್

(Bank Holidays Banks To Remain Shut In 4 Days From Today In These States)

Published On - 11:08 am, Thu, 19 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ