Fact Check: ಕೊರೊನಾ ಚಿಕಿತ್ಸೆಗೆ ಸರ್ಕಾರದಿಂದ ಯುವಜನರಿಗೆ ರೂ. 4000 ಕೊಡ್ತಾರಂತೆ! ಇದರಲ್ಲಿ ನಿಜ ಇದೆಯಾ?

ಕೊರೊನಾ ವೈರಸ್​ಗೆ ಕೇಂದ್ರ ಸರ್ಕಾರದಿಂದ 4000 ರೂಪಾಯಿ ನೀಡುತ್ತಿರುವುದು ನಿಜವೆ? ಪ್ರೆಸ್​ ಇನ್​ಫರ್ಮೇಷನ್ ಬ್ಯುರೋದ ಫ್ಯಾಕ್ಟ್ ಚೆಕ್ ಇಲ್ಲಿದೆ.

Fact Check: ಕೊರೊನಾ ಚಿಕಿತ್ಸೆಗೆ ಸರ್ಕಾರದಿಂದ ಯುವಜನರಿಗೆ ರೂ. 4000 ಕೊಡ್ತಾರಂತೆ! ಇದರಲ್ಲಿ ನಿಜ ಇದೆಯಾ?
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on: Aug 19, 2021 | 4:43 PM

ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಬರುತ್ತಲೇ ಇರುತ್ತವೆ. ಆ ಪೈಕಿ ಎಷ್ಟು ಸತ್ಯವೋ ಸುಳ್ಳೋ ತಿಳಿದುಕೊಳ್ಳುವುದೇ ಹರಸಾಹಸ ಆಗಿಬಿಡುತ್ತದೆ. ಈಗ ತಾಜಾ ಉದಾಹರಣೆ ಅಂತ ಇದನ್ನೇ ತೆಗೆದುಕೊಳ್ಳಿ: ಕೊರೊನಾ ಚಿಕಿತ್ಸೆಗಾಗಿ ಯುವಜನರಿಗಾಗಿ ಪ್ರಧಾನಮಂತ್ರಿ ರಾಮಬಾಣ ಸುರಕ್ಷಾ ಯೋಜನಾ (Pradhanmantri Ramban Suraksha Yojana) ಅಡಿಯಲ್ಲಿ 4000 ರೂಪಾಯಿ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂಬ ಸುದ್ದಿಯನ್ನು ಹರಿಬಿಡಲಾಗಿದೆ. ಈಗ ಈ ಸುದ್ದಿ ನಿಜವೋ ಸುಳ್ಳೋ ಎಂಬುದನ್ನು ಸರ್ಕಾರವೇ ಜನರಿಗೆ ಮಾಹಿತಿ ನೀಡುವಂತಾಗಿದೆ. ಪ್ರೆಸ್ ಇನ್​ಫರ್ಮೇಷನ್ ಬ್ಯುರೋದ ಫ್ಯಾಕ್ಟ್​ ಚೆಕ್​ (PIB Fact Check) ಈ ಸುದ್ದಿ ಸುಳ್ಳು ಎಂಬುದನ್ನು ಖಾತ್ರಿ ಪಡಿಸಿದೆ. ಕೇಂದ್ರ ಸರ್ಕಾರದಿಂದ ಇಂಥ ಯಾವ ಯೋಜನೆಯೂ ಚಾಲನೆಯಲ್ಲಿ ಇಲ್ಲ ಎಂದು ತಿಳಿಸಲಾಗಿದೆ.

ಈಗ ವೈರಲ್ ಸುದ್ದಿಯಲ್ಲಿ ಹಬ್ಬಿಸಿರುವಂತೆ ಪ್ರಧಾನಮಂತ್ರಿ ರಾಮಬಾಣ ಸುರಕ್ಷಾ ಯೋಜನಾ ಎಂಬುದರ ಅಡಿಯಲ್ಲಿ ಎಲ್ಲ ಯುವ ಜನರಿಗಾಗಿ ಕೊರೊನಾ ವೈರಸ್ ಚಿಕಿತ್ಸೆಗೆ 4000 ರೂಪಾಯಿಯ ಸಹಾಯ ದೊರೆಯುತ್ತದೆ. ನೋಂದಣಿಗಾಗಿ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅರ್ಜಿಯನ್ನು ಭರ್ತಿ ಮಾಡಿ. ಗಮನದಲ್ಲಿರಲಿ, ಅರ್ಜಿ ಸಲ್ಲಿಕೆಗೆ ಇಂಥದ್ದು ಕೊನೆ ದಿನ. ಬೇಗ ಬೇಗ ಅರ್ಜಿ ಹಾಕಿಕೊಳ್ಳಿ. ನನಗೆ ಈಗಾಗಲೇ ನಾಲ್ಕು ಸಾವಿರ ರೂಪಾಯಿ ಸಿಕ್ಕಿದೆ. ಈಗ ಇಲ್ಲಿ ನೀಡಿರುವ ಲಿಂಕ್​ ಮೂಲಕ ಅರ್ಜಿ ಪಡೆಯಿರಿ ಎಂಬ ಒಕ್ಕಣೆ ಹರಿದಾಡುತ್ತಿದೆ.

PIB Fact Check ಏನು ಹೇಳುತ್ತದೆ? ಸರ್ಕಾರಿ ಸಂಸ್ಥೆಯಾದ ಪ್ರೆಸ್ ಇನ್​ಫರ್ಮೇಷನ್ ಬ್ಯುರೋ ಈ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದೆ. ಆ ನಂತರ ತಿಳಿಸಿರುವಂತೆ, ಕೇಂದ್ರ ಸರ್ಕಾರದಿಂದ ಇಂಥ ಯಾವ ಯೋಜನೆ (ಪ್ರಧಾನಮಂತ್ರಿ ರಾಮಬಾಣ ಸುರಕ್ಷಾ ಯೋಜನಾ) ನಡೆಯುತ್ತಾ ಇಲ್ಲ. ಇಂಥ ಸುಳ್ಳು ವೆಬ್​ಸೈಟ್​ಗಳಿಗೆ ನಿಮ್ಮ ನಿಜವಾದ ಮಾಹಿತಿಯನ್ನು ನೀಡಬೇಡಿ ಎಂದು ಹೇಳಲಾಗಿದೆ.

ಆಧಾರ್ ಮೇಲೆ ಸಾಲ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಅದರಲ್ಲಿ ಸಾಲ ನೀಡುವ ಬಗ್ಗೆ ಪ್ರಸ್ತಾವ ಇದೆ. ಆಧಾರ್​ ಸಂಖ್ಯೆಯ ಮೇಲೆ ಸಾಲ ಸಿಗುತ್ತದೆ ಎಂಬ ಭರವಸೆಯನ್ನು ನೀಡಲಾಗುತ್ತಿದೆ. ಈ ಯೋಜನೆಗೆ ಪ್ರಧಾನಮಂತ್ರಿ ಯೋಜನೆ ಎಂದು ಹೆಸರಿಡಲಾಗಿದೆ. ಈ ವಾಟ್ಸಾಪ್ ಸಂದೇಶದಲ್ಲಿ ಬರೆದಿರುವಂತೆ, ಪ್ರಧಾಮಂತ್ರಿ ಯೋಜನಾ ಆಧಾರ್ ಕಾರ್ಡ್ ಸಾಲ, ಶೇ 1ರ ಬಡ್ಡಿ, ಶೇ 50ರ ರಿಯಾಯಿತಿ. 8126974825 ಸಂಖ್ಯೆಗೆ ಕರೆ ಮಾಡಿ ಮಾತನಾಡಿ.

ಪಿಐಬಿಯಿಂದ ಈ ಸಂದೇಶದಿಂದ ಸತ್ಯಾಂಶ ಏನು ಎಂಬುದನ್ನು ಪರಿಶೀಲಿಸಲಾಗಿದೆ. ಅದು ಹೇಳಿರುವಂತೆ, ವಾಟ್ಸಾಪ್​ನಲ್ಲಿ ಹರಿದಾಡುತ್ತಿರುವ ಶೇ 1ರ ಬಡ್ಡಿ ದರರಲ್ಲಿ ಆಧಾರ್​ ಕಾರ್ಡ್​ ಮೇಲೆ ಸಾಲ ನೀಡಲಾಗುವುದು ಎಂಬ ಮಾಹಿತಿ ಸುಳ್ಳು. ಪ್ರಧಾನಮಂತ್ರಿ ಹೆಸರಲ್ಲಿ ಅಂಥ ಯಾವ ಯೋಜನೆಯೂ ಇಲ್ಲ ಎನ್ನಲಾಗಿದೆ.

ಈ ರೀತಿಯ ಸುದ್ದಿಯ ಸತ್ಯವನ್ನು ಹೇಗೆ ತಿಳಿಯುವುದು? ಯಾವುದೇ ಸುದ್ದಿ ಅಥವಾ ಮಾಹಿತಿಯಲ್ಲಿ ನೀಡಲಾದ ಸತ್ಯಾಂಶಗಳ ಬಗ್ಗೆ ಸಂದೇಹವಿದ್ದರೆ ಅದನ್ನು PIB FactCheckಗೆ ಕಳುಹಿಸಬಹುದು. ಸಂಪೂರ್ಣ ತನಿಖೆಯ ನಂತರ, ನಿಮಗೆ ಸರಿಯಾದ ಮಾಹಿತಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಆ ವಿವರವನ್ನು PIB FactCheckಗೆ ವಿವಿಧ ಮೂಲಗಳ ಮೂಲಕ ಕಳುಹಿಸಬಹುದು.

ನೀವು ಬಯಸಿದಲ್ಲಿ +91 8799711259ಗೆ WhatsApp ಮಾಡಬಹುದು ಅಥವಾ socialmedia@pib.gov.inಗೆ ಇಮೇಲ್ ಮಾಡಬಹುದು. ಇದನ್ನು ಹೊರತುಪಡಿಸಿ, Twitter @PIBFactCheck ಅಥವಾ /PIBFactCheck ಅನ್ನು Instagramನಲ್ಲಿ ಅಥವಾ /PIBFactCheck ಅನ್ನು Facebookನಲ್ಲಿ ಸಂಪರ್ಕಿಸಬಹುದು.

ಇದನ್ನೂ ಓದಿ: Fact check: ವಾಟ್ಸಾಪ್ ಚಾಟ್, ಕರೆಗಳ ಮೇಲೆ ಸರ್ಕಾರದ ಕಣ್ಣಿರುವುದು ನಿಜವೇ? ಇಲ್ಲಿದೆ ಸತ್ಯ ಸಂಗತಿ

Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ

(PIB Fact Check Whether Central Government Not Providing Money To Youths For Coronavirus Treatment)

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್