AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಬಳಿ ಇದೆ ಭಾರತದ 20 ಲಕ್ಷ ಕೋಟಿ ರೂ ಹಣ; ಸಾಲ ತೀರಿಸದೇ ಇದ್ದರೆ ಏನಾಗುತ್ತೆ?

US vows huge debt with India: ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ಅಮೆರಿಕವು ಅತಿಹೆಚ್​ಚು ಸಾಲ ಹೊಂದಿರುವ ದೇಶವೂ ಹೌದು. ಜಪಾನ್ ಮತ್ತು ಚೀನಾ ದೇಶಗಳು ಅಮೆರಿಕದ ಟ್ರೆಷರಿ ಬಾಂಡ್​​ಗಳ ಮೇಲೆ ಅತಿಹೆಚ್ಚು ಹೂಡಿಕೆ ಮಾಡಿವೆ. ಈ ಸಾಲಿನಲ್ಲಿ ಭಾರತ 12ನೇ ಸ್ಥಾನದಲ್ಲಿದೆ. ಭಾರತಕ್ಕೆ ಅಮೆರಿಕ ಬರೋಬ್ಬರಿ 241 ಬಿಲಿಯನ್ ಡಾಲರ್​​ನಷ್ಟು ಋಣದ ಭಾರ ಹೊಂದಿದೆ.

ಅಮೆರಿಕದ ಬಳಿ ಇದೆ ಭಾರತದ 20 ಲಕ್ಷ ಕೋಟಿ ರೂ ಹಣ; ಸಾಲ ತೀರಿಸದೇ ಇದ್ದರೆ ಏನಾಗುತ್ತೆ?
ಅಮೆರಿಕದ ಟ್ರೆಷರಿ ಬಾಂಡ್​​ಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2025 | 5:37 PM

Share

ನವದೆಹಲಿ, ಜೂನ್ 2: ವಿಶ್ವದಲ್ಲಿ ಅತಿಹೆಚ್ಚು ಸಾಲ ಹೊಂದಿರುವ ದೇಶವೆಂದರೆ ಅದು ಅಮೆರಿಕ. ಈ ವಿಶ್ವದ ದೊಡ್ಡಣ್ಣನಿಗೆ ಅತಿಹೆಚ್ಚು ಸಾಲ ಕೊಟ್ಟಿರುವ ದೇಶಗಳಲ್ಲಿ ಭಾರತವೂ ಸೇರಿದೆ. ಅಂದರೆ, ಇದು ನೇರವಾಗಿ ನೀಡಿರುವ ಸಾಲಗಳಲ್ಲ. ಅಮೆರಿಕದ ಟ್ರೆಷರಿ ಬಾಂಡ್​​ಗಳ ಮೇಲೆ ಭಾರತ ಕಾಲಾನುಕ್ರಮದಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಈ ರೀತಿ ಬಾಂಡ್​​ಗಳ ಮೇಲೆ ಮಾಡಿರುವ ಹೂಡಿಕೆ ಈಗ 241 ಬಿಲಿಯನ್ ಡಾಲರ್​​ಷ್ಟಾಗಿದೆ. ಅಂದರೆ 20 ಲಕ್ಷ ಕೋಟಿ ರೂಗಿಂತಲೂ ತುಸು ಹೆಚ್ಚು. ಪಾಕಿಸ್ತಾನದ ಮುಕ್ತಾಲು ಭಾಗದ ಜಿಡಿಪಿಯಷ್ಟು ಹಣವಾಗುತ್ತದೆ ಅದು.

ಅಮೆರಿಕದ ಒಟ್ಟು ಸಾಲು ಬರೋಬ್ಬರಿ 36 ಟ್ರಿಲಿಯನ್ ಡಾಲರ್ ಇದೆ. ಅದರ ಜಿಡಿಪಿಗಿಂತಲೂ ಹೆಚ್ಚು ಪ್ರಮಾಣದ ಸಾಲ. ಸಾರ್ವಜನಿಕ ಸಾಲವೇ 29 ಟ್ರಿಲಿಯನ್ ಡಾಲರ್​​ನಷ್ಟಿದೆ. ಈ ಟ್ರೆಷರಿ ಬಾಂಡ್​​ಗಳು ಇತ್ಯಾದಿಗಳು ಸೇರುತ್ತವೆ.

ಇದನ್ನೂ ಓದಿ: ವ್ಯಾಪಾರ ಕುದುರಿಸಲು ಭಾರತದ ಇಂಡಿಗೋ, ಏರ್ ಇಂಡಿಯಾ ಜೊತೆ ಬ್ರೆಜಿಲ್​ನ ಎಂಬ್ರೇರ್ ಮಾತುಕತೆ

ಜಗತ್ತಿನ ಹಲವು ದೇಶಗಳು ಅಮೆರಿಕದ ಟ್ರೆಷರಿ ಬಾಂಡ್​, ಟ್ರೆಷರಿ ಬಿಲ್, ಸೆಕ್ಯೂರಿಟೀಸ್​​ಗಳನ್ನು ಖರೀದಿಸುತ್ತವೆ. ಇವುಗಳು ಸಾಲ ಪಡೆಯಲು ಇರುವ ಪ್ರಮುಖ ಹಣಕಾಸು ಯಂತ್ರಗಳಾಗಿವೆ. ವಿಶ್ವದ ಆರ್ಥಿಕ ಚಟುವಟಿಕೆಯ ತಳಹದಿಯು ಡಾಲರ್ ಮೇಲೆ ನಿಂತಿದೆ. ಅಮೆರಿಕದ ಆರ್ಥಿಕತೆಯೇ ವಿಶ್ವದ ಆರ್ಥಿಕತೆಗೆ ಆಧಾರವಾಗಿದೆ. ಹೀಗಾಗಿ, ಅಮೆರಿಕದ ಟ್ರೆಷರಿ ಬಾಂಡ್​​ಗಳು ಸುರಕ್ಷಿತ ಎನಿಸಿವೆ. ಈ ಕಾರಣಕ್ಕೆ ವಿವಿಧ ದೇಶಗಳು ಅಮೆರಿಕದ ಸರ್ಕಾರಿ ಬಾಂಡ್​​​ಗಳ ಮೇಲೆ ಹೂಡಿಕೆ ಮಾಡಲು ಯಾವ ಮೀನ ಮೇಷ ಎಣಿಸುವುದಿಲ್ಲ. ಅಮೆರಿಕಕ್ಕೆ ಸಾಲ ಬೇಕು, ಜಗತ್ತಿಗೆ ಅಮೆರಿಕದ ಆರ್ಥಿಕತೆ ಬೇಕು. ಈ ಒಂದು ಕೊಡುಕೊಳ್ಳುವಿಕೆಯಲ್ಲಿ ವ್ಯವಹಾರ ಸಮತೋಲನ ಸಾಧಿಸಿಕೊಂಡು ಹೋಗುತ್ತಿದೆ.

ಅಮೆರಿಕಕ್ಕೆ ಅತಿಹೆಚ್ಚು ಸಾಲ ಕೊಟ್ಟವರಲ್ಲಿ ಜಪಾನ್ ಮೊದಲು

ಅಮೆರಿಕದ ಟ್ರೆಷರಿ ಸೆಕ್ಯೂರಿಟಿಗಳಲ್ಲಿ ಅತಿಹೆಚ್ಚು ಹೂಡಿಕೆ ಮಾಡಿರುವ ವಿದೇಶಗಳಲ್ಲಿ ಜಪಾನ್ ಮೊದಲು ಬರುತ್ತದೆ. ಇದು 1.11 ಟ್ರಿಲಿಯನ್ ಡಾಲರ್​​ನಷ್ಟು ಹೂಡಿಕೆ ಮಾಡಿದೆ. ಚೀನಾ, ಬ್ರಿಟನ್, ಲಕ್ಸುಂಬರ್ಗ್ ಮತ್ತು ಕೆನಡಾ ದೇಶಗಳು ಟಾಪ್-5 ಪಟ್ಟಿಗೆ ಬರುತ್ತವೆ. ಭಾರತವು ಈ ಸಾಲಿನಲ್ಲಿ 12ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಡಬ್ಲ್ಯುಟಿಒದಲ್ಲಿ ಭಾರತ ನೀಡಿದ ನೋಟೀಸ್​ಗೆ ಅಮೆರಿಕದ ನಿರ್ಲಕ್ಷ್ಯ; ಭಾರತದಿಂದ ಪ್ರತಿಸುಂಕ ವಿಧಿಸುವ ಸಾಧ್ಯತೆ

ಅಮೆರಿಕ ಸಾಲ ಮರುಪಾವತಿಸಲಿಲ್ಲವೆಂದರೆ…?

ಒಂದು ಸರ್ಕಾರವು ತಾನು ನೀಡಿದ ಸಾಲಪತ್ರಕ್ಕೆ ಹೂಡಿಕೆದಾರರಿಗೆ ಹಣ ಮರಳಿಸಲಿಲ್ಲವೆಂದರೆ ಅದು ಗಂಭೀರ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ. ಒಂದು ದೇಶದ ವಿಶ್ವಾಸಾರ್ಹತೆ ಕುಂದುತ್ತದೆ. ರೇಟಿಂಗ್ ಏಜೆನ್ಸಿಗಳು ದೇಶದ ಗ್ರೇಡಿಂಗ್ ಕಡಿಮೆ ಮಾಡುತ್ತವೆ. ವಿದೇಶೀ ಹೂಡಿಕೆಗಳು ಕಡಿಮೆ ಆಗಬಹುದು. ಅಮೆರಿಕದ ವಿಚಾರದಲ್ಲಿ ಇನ್ನೂ ಹೆಚ್ಚು ಸ್ವರೂಪದ ಪರಿಣಾಮಗಳಾಗುತ್ತವೆ. ಜಗತ್ತಿನ ಆರ್ಥಿಕತೆಯ ಮೇಲೆ ಅಮೆರಿಕದ ಪ್ರಭಾವ ಇರುವುದರಿಂದ ಜಾಗತಿಕ ಅರ್ಥ ವ್ಯವಸ್ಥೆಯೇ ಅಲುಗಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ