AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI MPC Meet: ಆರ್​​ಬಿಐ ರಿಪೋದರ ಶೇ. 6ರಿಂದ ಶೇ. 5.50ಕ್ಕೆ ಇಳಿಕೆ ಸಾಧ್ಯತೆ: ಎಸ್​​ಬಿಐ ರಿಸರ್ಚ್ ವರದಿ ಅಂದಾಜು

RBI MPC Meet in June 2025: ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾರಿಯ ಎಂಪಿಸಿ ಸಭೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಿಪೋದರ ಕಡಿತ ಮಾಡುವ ನಿರೀಕ್ಷೆ ಇದೆ. ಎಸ್​​ಬಿಐ ರಿಸರ್ಚ್ ರಿಪೋರ್ಟ್​​ವೊಂದರ ಪ್ರಕಾರ ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಸಬಹುದು. ಅನಿಶ್ಚಿತ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಇದು ಅವಶ್ಯಕ ಎನ್ನುವುದು ಈ ವರದಿಯ ಅಭಿಪ್ರಾಯ.

RBI MPC Meet: ಆರ್​​ಬಿಐ ರಿಪೋದರ ಶೇ. 6ರಿಂದ ಶೇ. 5.50ಕ್ಕೆ ಇಳಿಕೆ ಸಾಧ್ಯತೆ: ಎಸ್​​ಬಿಐ ರಿಸರ್ಚ್ ವರದಿ ಅಂದಾಜು
ಆರ್​​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 03, 2025 | 12:46 PM

Share

ನವದೆಹಲಿ, ಜೂನ್ 2: ಸತತ ಎರಡು ಬಾರಿ ರಿಪೋ ದರ (repo rate) ಕಡಿತ ಮಾಡಿದ್ದ ಆರ್​​ಬಿಐ (RBI) ಈಗ ಹ್ಯಾಟ್ರಿಕ್ ಭಾರಿಸುವುದು ಖಚಿತವಾಗಿದೆ. ಹಿಂದಿನ ಎರಡು ಬಾರಿ ತಲಾ 25 ಮೂಲಾಂಕಗಳಷ್ಟು ಬಡ್ಡಿದರ ಕಡಿತ ಮಾಡಿದ್ದ ರಿಸರ್ವ್ ಬ್ಯಾಂಕ್ ಈ ಸಲ ಬರೋಬ್ಬರಿ 50 ಮೂಲಾಂಕಗಳಷ್ಟು ಇಳಿಕೆ ಮಾಡಬಹುದು. ಹೀಗೆಂದು ಎಸ್​​ಬಿಐ ರಿಸರ್ಚ್​​ನ ವರದಿಯೊಂದು ಊಹೆ ಮಾಡಿದೆ. ಇದೇನಾದರೂ ನಿಜವಾದಲ್ಲಿ ಆರ್​​ಬಿಐನ ರಿಪೋ ದರ ಅಥವಾ ಬಡ್ಡಿದರವು ಶೇ. 6ರಿಂದ ಶೇ. 5.50ಕ್ಕೆ ಇಳಿಕೆ ಆಗಬಹುದು.

ಬಡ್ಡಿದರ ಇಳಿಸಬೇಕೋ ಬೇಡವೋ ಎಂಬುದನ್ನು ರಿಸರ್ವ್ ಬ್ಯಾಂಕ್​​ನ ಹಣಕಾಸು ನೀತಿ ಸಮಿತಿ ನಿರ್ಧರಿಸುತ್ತದೆ. ಎರಡು ತಿಂಗಳಿಗೊಮ್ಮೆ ಈ ಸಮಿತಿಯ ಸಭೆ ನಡೆಯುತ್ತದೆ. ಅಲ್ಲಿ ರಿಪೋ ದರ ಇತ್ಯಾದಿ ವಿವಿಧ ಕ್ರಮಗಳ ಪರಿಷ್ಕರಣೆ ನಡೆಯುತ್ತದೆ. ಈ ಬಾರಿಯ ಆರ್​ಬಿಐ ಎಂಪಿಸಿ ಸಭೆ ಜೂನ್ 4ರಂದು ಆರಂಭವಾಗುತ್ತದೆ. ಎರಡು ದಿನ ನಿಷ್ಕರ್ಷೆ ಬಳಿಕ ಜೂನ್ 6, ಶುಕ್ರವಾರ ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ತಯಾರಿಸಲು ಹಲವು ದೇಶಗಳಿಂದ ಆಸಕ್ತಿ; ಆದರೆ, ಟೆಸ್ಲಾ ನಿರಾಸಕ್ತಿ: ಸಚಿವ ಕುಮಾರಸ್ವಾಮಿ

50 ಮೂಲಾಂಕಗಳಷ್ಟು ಬಡ್ಡಿಕಡಿತದಿಂದ ಪ್ರಯೋಜನವೇನು?

ಜಾಗತಿಕವಾಗಿ ಅನಿಶ್ಚಿತ ಆರ್ಥಿಕ ಮತ್ತು ಹಣಕಾಸು ವಾತಾರಣ ಇದ್ದು, ಅದನ್ನು ಸರಿದೂಗಿಸಲು ಹೆಚ್ಚಿನ ಬಡ್ಡಿದರ ಕಡಿತ ಅವಶ್ಯಕ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಜೂನ್ ತಿಂಗಳ ಸಭೆಯಲ್ಲಿ 50 ಮೂಲಾಂಕಗಳಷ್ಟು ದರ ಇಳಿಕೆಯನ್ನು ನಿರೀಕ್ಷಿಸುತ್ತೇವೆ ಎಂದು ಎಸ್​​ಬಿಐನ ಎಕನಾಮಿಕ್ ರಿಸರ್ಚ್ ವಿಭಾಗವು ಅಭಿಪ್ರಾಯಪಟ್ಟಿದೆ.

ಬೇರೆ ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳ ಅಂದಾಜಿನಲ್ಲಿ ತುಸು ಭಿನ್ನತೆ ಇದೆ. ಹೆಚ್ಚಿನ ಜನರು 25 ಮೂಲಾಂಕಗಳಷ್ಟು ದರ ಕಡಿತ ಆಗಬಹುದು ಎನ್ನುವ ಅನಿಸಿಕೆ ನೀಡಿದ್ದಾರೆ.

ಎರಡು ವರ್ಷಗಳಿಂದ ಶೇ. 6.50ರಷ್ಟಿದ್ದ ಬಡ್ಡಿದರವನ್ನು ಆರ್​​ಬಿಐ ಫೆಬ್ರುವರಿಯಲ್ಲಿ 25 ಮೂಲಾಂಕಗಳು, ಹಾಗೂ ಏಪ್ರಿಲ್​​ನಲ್ಲಿ 25 ಮೂಲಾಂಕಗಳಷ್ಟು ಕಡಿತಗೊಳಿಸಿ ಬಡ್ಡಿದರವನ್ನು 6.00ಗೆ ತಂದು ನಿಲ್ಲಿಸಿದೆ. ಈಗ ಅದನ್ನು ಶೇ. 5.75ಕ್ಕೆ ಇಳಿಸುತ್ತದಾ ಅಥವಾ ಶೇ. 5.50ಕ್ಕೆ ಇಳಿಸುತ್ತದಾ ಕಾದು ನೋಡಬೇಕು.

ಇದನ್ನೂ ಓದಿ: ವ್ಯಾಪಾರ ಕುದುರಿಸಲು ಭಾರತದ ಇಂಡಿಗೋ, ಏರ್ ಇಂಡಿಯಾ ಜೊತೆ ಬ್ರೆಜಿಲ್​ನ ಎಂಬ್ರೇರ್ ಮಾತುಕತೆ

ಬ್ಯಾಂಕ್ ಬಡ್ಡಿದರಗಳೂ ಇಳಿಕೆಯಾಗುವ ಸಾಧ್ಯತೆ

ಒಂದು ವೇಳೆ ಆರ್​​ಬಿಐ 50 ಮೂಲಾಂಕಗಳಷ್ಟು ಬಡ್ಡಿದರ ಇಳಿಸಿದರೆ ಬ್ಯಾಂಕುಗಳ ಸಾಲದ ದರಗಳೂ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಬ್ಯಾಂಕುಗಳ ಶೇ. 60ರಷ್ಟು ಸಾಲಗಳು ಇಬಿಎಲ್​​ಆರ್​​ನೊಂದಿಗೆ ಜೋಡಿತಗೊಂಡಿವೆ. ಶೇ. 36ರಷ್ಟು ಸಾಲಗಳು ಎಂಸಿಎಲ್​​ಆರ್ ಜೊತೆ ಲಿಂಕ್ ಆಗಿವೆ.

ಆರ್​​ಬಿಐ ರಿಪೋ ದರ ಇಳಿಸಿದಾಗ ಇಬಿಎಲ್​​​ಆರ್​ಗೆ ಜೋಡಿತವಾದ ಸಾಲಗಳ ದರವನ್ನು ಶೀಘ್ರದಲ್ಲೇ ಇಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾಲ ಪಡೆಯುವ ಗ್ರಾಹಕರಿಗೆ ಬಡ್ಡಿದರ ಇಳಿಸುವುದು ಬಿಡುವುದು ಬ್ಯಾಂಕುಗಳ ವಿವೇಚನೆಗೆ ಬಿಟ್ಟಿದ್ದು. ಆದರೆ, ಆರ್​​ಬಿಐನ ರಿಪೋದರವು ಒಂದು ರೀತಿಯಲ್ಲಿ ಬ್ಯಾಂಕುಗಳ ನಿರ್ಧಾರಕ್ಕೆ ಮಾನದಂಡವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Mon, 2 June 25

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ