AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ

ತಜ್ಞರ ಪ್ರಕಾರ, ದೇಹದಲ್ಲಿ ಕಬ್ಬಿಣ ಅಂಟುವುದು ದೇಹದ ಮೇಲೆ ಹಚ್ಚಿಕೊಂಡಿರುವ ಯಾವುದೇ ದ್ರವದಿಂದ ಇರಬಹುದು. ಕಣ್​ಕಟ್ಟು ಕೂಡ ಆಗಿರಬಹುದು ಎಂದು ಹೇಳಿದ್ದಾರೆ.

Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Jun 11, 2021 | 8:49 PM

ಕೊವಿಡ್-19 ಲಸಿಕೆಯು ಮನುಷ್ಯರ ದೇಹದಲ್ಲಿ ಅಯಸ್ಕಾಂತೀಯ ಗುಣವನ್ನು ಉಂಟುಮಾಡುತ್ತದೆ. ಕೊರೊನಾ ವೈರಾಣು ವಿರುದ್ಧದ ಲಸಿಕೆಯಲ್ಲಿ ಮೈಕ್ರೋಚಿಪ್​ಗಳಿವೆ ಎಂಬ ಗಾಳಿಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಲಸಿಕೆ ಪಡೆದಿರುವ ಒಬ್ಬ ವ್ಯಕ್ತಿಯ ಕೈಯಲ್ಲಿ ಕಬ್ಬಿಣದ ತುಂಡುಗಳು ಅಂಟಿಕೊಂಡಿರುವುದು ಕಂಡುಬಂದಿತ್ತು.

ಲಸಿಕೆ ಪಡೆದ ವ್ಯಕ್ತಿಯಲ್ಲಿ ಅಯಸ್ಕಾಂತೀಯ ಗುಣ ಕಂಡುಬಂದಿದೆ. ಆತನ ಭುಜಗಳಲ್ಲಿ ವಿವಿಧ ಕಬ್ಬಿಣದ ವಸ್ತುಗಳು ಅಂಟಿಕೊಂಡಿರುವ ಫೋಟೊ ಕೂಡ ಹಂಚಿಕೆಯಾಗಿತ್ತು. ಇತರ ಕೆಲವು ವಿಡಿಯೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡಿತ್ತು. ಅದರಲ್ಲೂ ಅವರ ಮೈಗೆ ಕಬ್ಬಿಣ ಅಂಟಿಕೊಂಡಿತ್ತು. ಲಸಿಕೆ ಪಡೆದ ಬಳಿಕ ತಮ್ಮಲ್ಲಿ ಅಯಸ್ಕಾಂತೀಯ ಗುಣ ಬಂದಿದೆ ಎಂದು ಅವರೂ ಹೇಳಿಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವರು ಲಸಿಕೆಯಲ್ಲಿ ಮ್ಯಾಗ್ನೆಟಿಕ್ ಅಂಶವಿದೆ ಎಂದಿದ್ದರೆ, ಇನ್ನೂ ಕೆಲವರು ಮುಂದುವರಿದು ಲಸಿಕೆಯಲ್ಲಿ ಮೈಕ್ರೋಚಿಪ್ ಇದೆ ಎಂದು ಹೇಳಿದ್ದರು. ಕೇವಲ ಭಾರತೀಯರಷ್ಟೇ ಅಲ್ಲ. ವಿದೇಶಿಗರು ಕೂಡ ಹೀಗೆ ಫೋಟೊಗಳನ್ನು, ವಿಡಿಯೋಗಳನ್ನು ಹಂಚಿಕೊಂಡಿದ್ದರು.

ಈ ವಿಚಾರಕ್ಕೆ ಸಂಬಂಧಿಸಿ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕಿಂಗ್ ಅಂಗ ‘ಪಿಐಬಿ ಫ್ಯಾಕ್ಟ್ ಚೆಕ್’ ಪ್ರತಿಕ್ರಿಯಿಸಿದೆ. ಅದರಂತೆ, ಕೊರೊನಾ ವಿರುದ್ಧದ ಲಸಿಕೆಯಲ್ಲಿ ಯಾವುದೇ ಅಯಸ್ಕಾಂತೀಯ ಗುಣ ಇಲ್ಲ. ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಬರುತ್ತದೆ ಎಂಬ ವಾದ ಅರ್ಥಹೀನ ಎಂದು ಹೇಳಿದೆ.

ಕೊವಿಡ್-19 ಲಸಿಕೆ ಸಂಪೂರ್ಣ ಸುರಕ್ಷವಾಗಿದೆ. ಅದರಲ್ಲಿ ಯಾವುದೇ ಉಕ್ಕಿನ ಅಂಶಗಳಿಲ್ಲ. ಮೈಕ್ರೋಚಿಪ್​ಗಳಿಲ್ಲ. ಲಸಿಕೆಯಿಂದ ಮ್ಯಾಗ್ನೆಟಿಕ್ ರಿಯಾಕ್ಷನ್ ಕೂಡ ಉಂಟಾಗುವುದಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದೆ. ಕೊರೊನಾ ಲಸಿಕೆ ಪಡೆದವರು ಇಂಥ ಗಾಳಿಸುದ್ದಿಗಳಿಂದ ದೂರ ಇರಬೇಕು. ಇವುಗಳನ್ನು ನಂಬಬಾರದು ಎಂದೂ ಹೇಳಿದೆ.

ತಜ್ಞರ ಪ್ರಕಾರ, ದೇಹದಲ್ಲಿ ಕಬ್ಬಿಣ ಅಂಟುವುದು ದೇಹದ ಮೇಲೆ ಹಚ್ಚಿಕೊಂಡಿರುವ ಯಾವುದೇ ದ್ರವದಿಂದ ಇರಬಹುದು. ಕಣ್​ಕಟ್ಟು ಕೂಡ ಆಗಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Cowin: ಕೊವಿನ್ ಪೋರ್ಟಲ್ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ

Explainer: ಲಸಿಕೆ ಸರ್ಟಿಫಿಕೇಟ್​ನಲ್ಲಿ ಯೂನಿಕ್ ಹೆಲ್ತ್ ಐಡಿ: ಏನಿದರ ವೈಶಿಷ್ಟ್ಯ? ಏನೆಲ್ಲಾ ಅನುಕೂಲ? ಏಕಿಷ್ಟು ಗೊಂದಲ?

Published On - 8:33 pm, Fri, 11 June 21

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ