AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ಸೀಸನ್ ಅಕ್ಟೋಬರ್ 2023ರಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ವಿವರ

Bank Holidays In 2023 October, November, December: ಆರ್​ಬಿಐ ವೇಳಾಪಟ್ಟಿ ಪ್ರಕಾರ ಭಾರತದ ವಿವಿಧೆಡೆ ಗಾಂಧಿ ಜಯಂತಿ ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ 15 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಆದರೆ ಎಲ್ಲಾ ಬ್ಯಾಂಕುಗಳಿಗೂ 15 ದಿನ ಇರೊಲ್ಲ. ಒಂದೊಂದು ಪ್ರದೇಶದಲ್ಲಿ ರಜಾ ದಿನಗಳು ವ್ಯತ್ಯಾಸವಾಗುತ್ತದೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರ ಸೇರಿ 10 ದಿನಗಳ ಕಾಲ ರಜೆ ಇದೆ. ನವೆಂಬರ್​ನಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 12 ದಿನಗಳ ಕಾಲ ರಜೆ ಇದೆ.

ಹಬ್ಬದ ಸೀಸನ್ ಅಕ್ಟೋಬರ್ 2023ರಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ವಿವರ
ಬ್ಯಾಂಕ್ ರಜೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2023 | 12:00 PM

Share

ನವದೆಹಲಿ, ಸೆಪ್ಟೆಂಬರ್ 27: ಸೆಪ್ಟೆಂಬರ್​ನಿಂದ ನವೆಂಬರ್​ವರೆಗೆ ಮೂರು ತಿಂಗಳು ಭಾರತದಲ್ಲಿ ಹಬ್ಬದ ಸೀಸನ್. ಈಗ ಸೆಪ್ಟೆಂಬರ್ ಮುಗಿಯುತ್ತಿದ್ದು ಅಕ್ಟೋಬರ್ ಶುರುವಾಗುತ್ತಿದೆ. ಈ ತಿಂಗಳು ದಸರಾ ಹಬ್ಬದ (dasara festival) ಸಡಗರ. ಶಾಲಾ ಕಾಲೇಜುಗಳಲ್ಲಿ ದಸರಾ ರಜೆ. ಬ್ಯಾಂಕುಗಳಿಗೂ ಸ್ವಲ್ಪ ಹೆಚ್ಚೇ ರಜೆಗಳು ಅಕ್ಟೋಬರ್ ಮತ್ತು ನವೆಂಬರ್​ನಲ್ಲಿ ಇವೆ. ಆರ್​ಬಿಐ ವೇಳಾಪಟ್ಟಿ (RBI holiday schedule) ಪ್ರಕಾರ ಗಾಂಧಿ ಜಯಂತಿ ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ 15 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಆದರೆ ಎಲ್ಲಾ ಬ್ಯಾಂಕುಗಳಿಗೂ 15 ದಿನ ಇರೊಲ್ಲ. ಒಂದೊಂದು ಪ್ರದೇಶದಲ್ಲಿ ರಜಾ ದಿನಗಳು ವ್ಯತ್ಯಾಸವಾಗುತ್ತದೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರ ಸೇರಿ 10 ದಿನಗಳ ಕಾಲ ರಜೆ ಇದೆ. ನವೆಂಬರ್​ನಲ್ಲಿ ರಾಜ್ಯದಲ್ಲಿ ರಜಾ ದಿನಗಳ ಸಂಖ್ಯೆ ಇನ್ನೂ ಎರಡು ಹೆಚ್ಚು.

ಅಕ್ಟೋಬರ್ 2023ರಲ್ಲಿ ಬ್ಯಾಂಕ್ ರಜಾ ದಿನಗಳು

  • ಅಕ್ಟೋಬರ್ 1: ಭಾನುವಾರ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 8: ಭಾನುವಾರ
  • ಅಕ್ಟೋಬರ್ 12: ನರಕ ಚತುರ್ದಶಿ
  • ಅಕ್ಟೋಬರ್ 14: ಎರಡನೇ ಶನಿವಾರ ಮತ್ತು ಮಹಾಲಯ ಅಮಾವಾಸ್ಯ (ಕರ್ನಾಟಕ, ಒಡಿಶಾ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಜೆ)
  • ಅಕ್ಟೋಬರ್ 15: ಭಾನುವಾರ (ಘಟಸ್ಥಾಪನಾ)
  • ಅಕ್ಟೋಬರ್ 18: ಕಾಟಿ ಭಿಯು (ಅಸ್ಸಾಮ್)
  • ಅಕ್ಟೋಬರ್ 19: ಸಂವತ್ಸರಿ ಉತ್ಸವ (ಗುಜರಾತ್)
  • ಅಕ್ಟೋಬರ್ 21: ದುರ್ಗಾ ಪೂಜಾ, ಮಹಾಸಪ್ತಮಿ
  • ಅಕ್ಟೋಬರ್ 22: ಭಾನುವಾರ
  • ಅಕ್ಟೋಬರ್ 23: ಮಹಾನವಮಿ (ಆಯುಧ ಪೂಜೆ)
  • ಅಕ್ಟೋಬರ್ 24: ವಿಜಯದಶಮಿ
  • ಅಕ್ಟೋಬರ್ 28: ನಾಲ್ಕನೇ ಶನಿವಾರ
  • ಅಕ್ಟೋಬರ್ 29: ಭಾನುವಾರ
  • ಅಕ್ಟೋಬರ್ 31: ಸರ್ದಾರ್ ವಲ್ಲಭಭಾಯ್ ಪಟೇಲ್ (ಗುಜರಾತ್​ನಲ್ಲಿ ರಜೆ)

ಇದನ್ನೂ ಓದಿ: Google 25th Birthday:: ಗೂಗಲ್ ಜನ್ಮದಿನ ಇಂದು; ಗೂಗಲ್ ಹೆಸರಿನ ಅರ್ಥ ಏನು? ಗ್ಯಾರೇಜ್​ನಿಂದ ಶುರುವಾಗಿ ಇವತ್ತದು ಎಷ್ಟು ಅಗಾಧವಾಗಿ ಬೆಳೆದಿದೆ ನೋಡಿ..!

ಕರ್ನಾಟಕದಲ್ಲಿ ಅಕ್ಟೋಬರ್ 2023ರಲ್ಲಿ ಬ್ಯಾಂಕ್ ರಜೆ ಇರುವ ದಿನಗಳು

  • ಅಕ್ಟೋಬರ್ 1: ಭಾನುವಾರ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 8: ಭಾನುವಾರ
  • ಅಕ್ಟೋಬರ್ 14: ಎರಡನೇ ಶನಿವಾರ ಮತ್ತು ಮಹಾಲಯ ಅಮಾವಾಸ್ಯ
  • ಅಕ್ಟೋಬರ್ 15: ಭಾನುವಾರ
  • ಅಕ್ಟೋಬರ್ 22: ಭಾನುವಾರ
  • ಅಕ್ಟೋಬರ್ 23: ಮಹಾನವಮಿ
  • ಅಕ್ಟೋಬರ್ 24: ವಿಜಯದಶಮಿ
  • ಅಕ್ಟೋಬರ್ 28: ನಾಲ್ಕನೇ ಶನಿವಾರ, ವಾಲ್ಮೀಕಿ ಜಯಂತಿ
  • ಅಕ್ಟೋಬರ್ 29: ಭಾನುವಾರ

ಇದನ್ನೂ ಓದಿ: ಸೆಪ್ಟೆಂಬರ್ 30ರವರೆಗೂ ಡೆಡ್​ಲೈನ್ ಇರುವ ಹಣಕಾಸು ಕಾರ್ಯಗಳಿವು; ತಪ್ಪದೇ ಮಾಡಿ

2023ರ ನವೆಂಬರ್ ಮತ್ತು ಡಿಸೆಂಬರ್​ನಲ್ಲಿರುವ ಸಾರ್ವತ್ರಿಕ ರಜೆಗಳು

ಕರ್ನಾಟಕದಲ್ಲಿ ಭಾನುವಾರ ಹೊರತುಪಡಿಸಿ ಬ್ಯಾಂಕುಗಳಿಗೆ ಇರುವ ಇತರ ಸಾರ್ವತ್ರಿಕ ರಜೆಗಳ ವಿವರ ಇಂತಿದೆ…

  • ನವೆಂಬರ್ 1: ಕನ್ನಡ ರಾಜ್ಯೋತ್ಸವ
  • ನವೆಂಬರ್ 11: ಎರಡನೇ ಶನಿವಾರ
  • ನವೆಂಬರ್ 12: ದೀಪಾವಳಿ
  • ನವೆಂಬರ್ 25: ನಾಲ್ಕನೇ ಶನಿವಾರ
  • ನವೆಂಬರ್ 30: ಕನಕದಾಸ ಜಯಂತಿ
  • ಡಿಸೆಂಬರ್ 9: ಎರಡನೇ ಶನಿವಾರ
  • ಡಿಸೆಂಬರ್ 23: ನಾಲ್ಕನೇ ಶನಿವಾರ
  • ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಇದೇ ವೇಳೆ, ಸೆಪ್ಟೆಂಬರ್ 27 ಮತ್ತು 28ರಂದು ದೇಶಾದ್ಯಂತ ಈದ್ ಮಿಲಾದ್ ಹಬ್ಬ ಆಚರಿಸಲಾಗುತ್ತಿದೆ. ಇದರಲ್ಲಿ ಸೆಪ್ಟೆಂಬರ್ 28ರಂದು ಭಾರತದ ಬಹುತೇಕ ಕಡೆ ಸಾರ್ವತ್ರಿಕ ರಜೆ ಇರುತ್ತದೆ. ಕರ್ನಾಟಕದಲ್ಲೂ ಸೆಪ್ಟೆಂಬರ್ 28ರಂದು ಈದ್ ಮಿಲಾದ್ ಪ್ರಯುಕ್ತ ರಜೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು