Sign In

By signing in or creating an account, you agree with Associated Broadcasting Company's Terms & Conditions and Privacy Policy.

Google 25th Birthday:: ಗೂಗಲ್ ಜನ್ಮದಿನ ಇಂದು; ಗೂಗಲ್ ಹೆಸರಿನ ಅರ್ಥ ಏನು? ಗ್ಯಾರೇಜ್​ನಿಂದ ಶುರುವಾಗಿ ಇವತ್ತದು ಎಷ್ಟು ಅಗಾಧವಾಗಿ ಬೆಳೆದಿದೆ ನೋಡಿ..!

Google Doodle Celebrates Google's 25th Anniversary: 1998 ಸೆಪ್ಟೆಂಬರ್ 27ರಂದು ಗೂಗಲ್ ಕಂಪನಿ ಸ್ಥಾಪನೆ ಆಯಿತು. ಸೆರ್ಗೆ ಬ್ರಿನ್, ಲ್ಯಾರಿ ಪೇಜ್ ಎಂಬಿಬ್ಬರು ವ್ಯಕ್ತಿಗಳು ಸ್ಥಾಪಿಸಿದ ಈ ಕಂಪನಿ ಇವತ್ತು ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದೆನಿಸಿದೆ. ಸರ್ಚ್ ಎಂಜಿನ್ ಆಗಿ ಆರಂಭವಾಗಿ ಇವತ್ತು ಬಹಳಷ್ಟು ಅಪ್ಲಿಕೇಶನ್​ಗಳನ್ನು ಆವಿಷ್ಕರಿಸಿದೆ. ನಮ್ಮ ನಿತ್ಯ ಜೀವನದಲ್ಲಿ ಗೂಗಲ್ ಹಾಸುಹೊಕ್ಕಾಗಿದೆ. ಈ ಗೂಗಲ್​ನ ಹೆಸರು ಬಂದಿದ್ದು ಹೇಗೆ ಎಂಬಿತ್ಯಾದಿ ವಿವರಗಳು ಈ ಪುಟ್ಟ ಲೇಖನದಲ್ಲಿವೆ.

Google 25th Birthday:: ಗೂಗಲ್ ಜನ್ಮದಿನ ಇಂದು; ಗೂಗಲ್ ಹೆಸರಿನ ಅರ್ಥ ಏನು? ಗ್ಯಾರೇಜ್​ನಿಂದ ಶುರುವಾಗಿ ಇವತ್ತದು ಎಷ್ಟು ಅಗಾಧವಾಗಿ ಬೆಳೆದಿದೆ ನೋಡಿ..!
ಗೂಗಲ್ ಡೂಡಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Sep 27, 2023 | 11:35 AM

ಇಂದು ಸೆಪ್ಟೆಂಬರ್ 27– ಸರಿಯಾಗಿ 25 ವರ್ಷದ ಹಿಂದೆ ಗೂಗಲ್ (Google Inc.) ಎಂಬ ಕಂಪನಿಯ ಹುಟ್ಟು ಆಗಿತ್ತು. ಅಮೆರಿಕದ ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೋಗ್ರಾಮ್​ನಲ್ಲಿ ಸೆರ್ಗೆ ಬ್ರಿನ್ (sergy Brin) ಮತ್ತು ಲ್ಯಾರಿ ಪೇಜ್ (Larry Page) ಎಂಬಿಬ್ಬರು ವಿದ್ಯಾರ್ಥಿಗಳ ಭೇಟಿಯಾಗಿತ್ತು. ಇಡೀ ವಿಶ್ವ ವ್ಯಾಪಿ ಅಂತರ್ಜಾಲ ಎಲ್ಲರಿಗೂ ತಲುಪಲು ಏನಾದರೊಂದು ಮಾರ್ಗ ಹುಡುಕಬೇಕು ಎಂದು ಅವರಿಬ್ಬರ ಮನಸಿನಲ್ಲಿ ಏಕರೀತಿಯ ಗುರಿ ಮತ್ತು ಆಲೋಚನೆಗಳು ಬಂದಿದ್ದವು. ಅದು 1996ರ ವರ್ಷ. ಬ್ಯಾಕ್​ರಬ್ ಎಂಬ ರಿಸರ್ಚ್ ಪ್ರಾಜೆಕ್ಟ್ ಶುರುವಾಯಿತು. ಇವರ ಆಲೋಚನೆಗೆ ರೂಪುಗೊಡಲು ಸಹಾಯವಾಗಿ ಸ್ಕಾಟ್ ಹಸನ್ (Scot Hassan) ಎಂಬುವವರು ಇದ್ದರು. ಈ ಮೂವರು ಸೇರಿ ಮಾಡಿದ ಸಾಹಸ ಒಂದು ಉತ್ತಮ ಸರ್ಚ್ ಎಂಜಿನ್ ಸೃಷ್ಟಿಗೆ ಕಾರಣವಾಯಿತು. ಸ್ಕಾಟ್ ಹಸನ್ ಸರ್ಚ್ ಎಂಜಿನ್​ನ ಬಹುತೇಕ ಕೋಡ್​ಗಳನ್ನು ರಚಿಸಿದರು.

ಈ ಸರ್ಚ್ ಎಂಜಿನ್ ಆಲೋಚನೆ ಸಾಕಾರಗೊಳ್ಳುತ್ತಿರುವಂತೆಯೇ ಸ್ಕಾಟ್ ಹಸನ್ ಬೇರೆ ಬೇರೆ ದಾರಿ ಹುಡುಕಿಕೊಂಡು ಹೋದರು. ಸೆರ್ಗಿ ಬ್ರಿನ್ ಮತ್ತು ಲ್ಯಾರಿ ಪೇಜ್ ಇಬ್ಬರೂ ಕೂಡ ಒಂದು ಗ್ಯಾರೇಜ್ ಅನ್ನು ಬಾಡಿಗೆಗೆ ಪಡೆದು ಗೂಗಲ್ ಎಂಬ ಕಂಪನಿ ಆರಂಭಿಸಿದರು. ಅದು 1998, ಸೆಪ್ಟೆಂಬರ್ 27. ಇಪ್ಪತ್ತೈದು ವರ್ಷದ ಬಳಿಕ ತಮ್ಮ ಗೂಗಲ್ ಮೇಲೆ ಕೋಟ್ಯಂತರ ಜನರು ಒಂದಿಲ್ಲೊಂದು ರೀತಿಯಲ್ಲಿ ಅವಲಂಬಿತರಾಗುತ್ತಾರೆ ಎಂದು ಸೆರ್ಗೇ ಬ್ರಿನ್ ಮತ್ತು ಲ್ಯಾರಿ ಪೇಜ್ ಅಂದಾಜು ಮಾಡಿರಲಿಲ್ಲ. ಅಷ್ಟರಮಟ್ಟಿಗೆ ಹೊಸ ಹೊಸ ಆವಿಷ್ಕಾರಗಳೊಂದಿಗೆ ಗೂಗಲ್ ಅಗಾಧವಾಗಿ ಬೆಳೆದಿದೆ.

ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್​ನಲ್ಲಿದೆ ಹೊಸ ಫೀಚರ್

ಗೂಗಲ್ ಹೆಸರಿನ ಅರ್ಥ ಏನು?

ಗೂಗಲ್ ಎಂಬುದು ಗೂಗೊಲ್ (googol) ಎಂಬ ಗಣಿತ ಸಂಖ್ಯಾ ಪದದ ಅಪಭ್ರಂಶ. ಗೂಗೊಲ್ ಎಂದರೆ ಗಣಿತದಲ್ಲಿ ಹತ್ತರ ನೂರು ಘಾತಗಳ ಒಂದು ಸಂಖ್ಯೆ. ಇಂಗ್ಲೀಷ್​ನಲ್ಲಿ ಟೆನ್ ಟು ದಿ ಪವರ್ ಆಫ್ 100 ಎನ್ನುತ್ತಾರೆ (10100). 1 ಅಂಕಿ ಮುಂದೆ ನೂರು ಸೊನ್ನೆಗಳನ್ನು ಸೇರಿಸಿದಾಗ ಬರುವ ಸಂಖ್ಯೆ.

ಇಷ್ಟು ದೊಡ್ಡ ಮೊತ್ತದ ಮಾಹಿತಿಯನ್ನು ತಮ್ಮ ಸರ್ಚ್ ಎಂಜಿನ್ ಹೆಕ್ಕಿ ತೆಗೆಯುತ್ತದೆ ಎಂದು ಸೂಚಿಸಲು ಗೂಗಲ್ ಪದವನ್ನು ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ತಮ್ಮ ಹೊಸ ಕಂಪನಿಗೆ ಇಡುತ್ತಾರೆ. ಗೂಗೋಲ್ ಎಂಬ ಉಚ್ಚಾರಣೆ ಬರದೇ ಗೂಗಲ್ ಎಂದು ಹೆಸರಿಡುತ್ತಾರೆ.

ಗೂಗಲ್ ಇಲ್ಲದೇ ಜಗವಿಲ್ಲ ಎನ್ನುವಂತಾಗಿದೆ…

ಗೂಗಲ್ ಬಹುತೇಕ ಸರ್ವವ್ಯಾಪಿ ಆಗಿಹೋಗಿದೆ. ನಮ್ಮ ನಿತ್ಯಜೀವನದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಗೂಗಲ್ ತಂತ್ರಜ್ಞಾನಗಳನ್ನು ನಾವು ಬಳಸುತ್ತೇವೆ. ಪರಿಪೂರ್ಣ ಸರ್ಚ್ ಎಂಜಿನ್ ಆಗಿ ರೂಪುಗೊಂಡ ಗೂಗಲ್ ಎಂಬ ಗಿಡ, ಬೆಳೆದು ಹಲವು ರೆಂಬೆ, ಕೊಂಬೆಗಳನ್ನು ಬೆಳೆಸಿಕೊಂಡು ಇಂದು ಬೃಹತ್ ವಟವೃಕ್ಷವಾಗಿ ಬಹಳ ಮಂದಿಗೆ ಸಹಾಯವಾಗಿದೆ. ಅದರ ಇಮೇಲ್, ಮ್ಯಾಪ್ಸ್, ಬ್ರೌಸರ್, ಕ್ಲೌಡ್, ಯೂಟ್ಯೂಬ್, ಟ್ರಾನ್ಸ್​ಲೇಟ್, ಪ್ಲೇಸ್ಟೋರ್ ಹೀಗೆ ಹಲವು ಗೂಗಲ್ ಅಪ್ಲಿಕೇಶನ್​ಗಳು ಮತ್ತು ಸರ್ವಿಸ್​ಗಳು ಬಹಳ ಜನರಿಗೆ ಸಹಾಯವಾಗಿವೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಕ್ಕೆ ಡೂಡಲ್ ರಚಿಸುವ ಮೂಲಕ ಭಾರತೀಯರ ಸಂಭ್ರಮವನ್ನು ಇಮ್ಮಡಿಗೊಳಿಸಿದ ಗೂಗಲ್

ಆರ್ಟಿಫಿಶಿಯಲ್ ಎಂಟಿಲೆನ್ಸ್, ಮೆಷಿನ್ ಲರ್ನಿಂಗ್, ಸ್ಮಾರ್ಟ್​ಫೋನ್, ಸ್ಮಾರ್ಟ್ ಹೋಮ್ ಹೀಗೆ ಗೂಗಲ್​ನ ವ್ಯಾಪ್ತಿ ನಮ್ಮ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳವಾಗಿ ವ್ಯಾಪಿಸಿದೆ.

ಇಪ್ಪತ್ತೈದರ ಹರೆಯದ ಗೂಗಲ್​ನಿಂದ ಮುಂದಿನ ವರ್ಷಗಳಲ್ಲಿ ಇನ್ನೆಷ್ಟು ಆವಿಷ್ಕಾರಗಳು ಆಗುತ್ತವೋ ಕಾದುನೋಡಬೇಕು. ಗೂಗಲ್ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಭಾರತ ಮೂಲದ ಸುಂದರ್ ಪಿಚೈ ಅವರು ಸಿಇಒ ಆಗಿರುವುದು ನಮ್ಮೆಲ್ಲಿರಿಗೂ ಅಚ್ಚರಿಯ ವಿಚಾರ

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:10 am, Wed, 27 September 23

ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು