Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬಿಸಿ ದೋಸೆಯಂತೆ ಮಾರಾಟವಾದ ಬಿರ್ಲಾ ಎಸ್ಟೇಟ್ ಮನೆಗಳು; ಕೇವಲ 36 ಗಂಟೆಯಲ್ಲಿ ಬುಕ್ ಆದವು 500 ಕೋಟಿ ರೂ ಮೌಲ್ಯದ ವಸತಿಗಳು

Birla Trimaya Project In Devanahalli: ಬಿರ್ಲಾ ತ್ರಿಮಾಯ ಪ್ರಾಜೆಕ್ಟ್ ಅನ್ನು ದೇವನಹಳ್ಳಿಯಲ್ಲಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬುಕ್ ಆಗಿರುವ 556 ಮನೆಗಳು 52 ಎಕರೆ ಪ್ರದೇಶದಲ್ಲಿವೆ. ಎಂಟು ಅಪಾರ್ಟ್ಮೆಂಟ್​ಗಳನ್ನು ಒಳಗೊಂಡಿರುವ ಲಕ್ಷುರಿ ವಸತಿ ಸಮುಚ್ಚಯ ಇದು. 1 ಬಿಎಚ್​ಕೆ, 2 ಬಿಎಚ್​ಕೆ ಮತ್ತು 3 ಬಿಎಚ್​ಕೆಯ ಹಲವು ಮನೆಗಳು ಇಲ್ಲಿವೆ. ಬುಕಿಂಗ್ ಓಪನ್ ಆಗಿ 36 ಗಂಟೆಯಲ್ಲಿ ಎಲ್ಲಾ 556 ಮನೆಗಳೂ ಸೇಲ್ ಆಗಿವೆ. ಒಟ್ಟು ಬುಕಿಂಗ್ ಮೌಲ್ಯ 500 ಕೋಟಿ ರೂ ಎಂದು ಹೇಳಲಾಗಿದೆ. ಈ ಲಕ್ಷುರಿ ಲೇಔಟ್​ನಲ್ಲಿ ಬರೋಬ್ಬರಿ 35 ಎಕರೆಗಳಷ್ಟು ಬಹಿರಂಗ ಸ್ಥಳವೇ ಇದೆ. ಒಂದು ಕೆರೆಯೂ ಇದೆ. ಸಾಕಷ್ಟು ಹಸಿರಿನ ಪ್ರದೇಶವಿದೆ.

ಬೆಂಗಳೂರಿನಲ್ಲಿ ಬಿಸಿ ದೋಸೆಯಂತೆ ಮಾರಾಟವಾದ ಬಿರ್ಲಾ ಎಸ್ಟೇಟ್ ಮನೆಗಳು; ಕೇವಲ 36 ಗಂಟೆಯಲ್ಲಿ ಬುಕ್ ಆದವು 500 ಕೋಟಿ ರೂ ಮೌಲ್ಯದ ವಸತಿಗಳು
ಬಿರ್ಲಾ ತ್ರಿಮಾಯ ಪ್ರಾಜೆಕ್ಟ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2023 | 1:20 PM

ಬೆಂಗಳೂರು, ಸೆಪ್ಟೆಂಬರ್ 27: ಬಿರ್ಲಾ ಎಸ್ಟೇಟ್ಸ್ ಸಂಸ್ಥೆಯ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗೆ ಬೆಂಗಳೂರಿನಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ದೇವನಹಳ್ಳಿ ಬಳಿ ನಡೆಯುತ್ತಿರುವ ಬಿರ್ಲಾ ತ್ರಿಮಾಯದ (Birla Trimaya) ಮೊದಲ ಹಂತದ ಯೋಜನೆಯಲ್ಲಿ ನಿರ್ಮಿಸಲಾಗಿರುವ 556 ಮನೆಗಳು ಬಹಳ ತ್ವರಿತವಾಗಿ ಮಾರಾಟವಾಗಿವೆ. ಬಿರ್ಲಾ ಎಸ್ಟೇಟ್ಸ್ ನೀಡಿದ ಮಾಹಿತಿ ಪ್ರಕಾರ, ಬುಕಿಂಗ್ ಓಪನ್ ಆಗಿ 36 ಗಂಟೆಯಲ್ಲಿ ಎಲ್ಲಾ 556 ಮನೆಗಳೂ ಸೇಲ್ ಆಗಿವೆ. ಒಟ್ಟು ಬುಕಿಂಗ್ ಮೌಲ್ಯ 500 ಕೋಟಿ ರೂ ಎಂದು ಹೇಳಲಾಗಿದೆ.

ಆದಿತ್ಯ ಬಿರ್ಲಾ ಗ್ರೂಪ್​ನ ರಿಯಲ್ ಎಸ್ಟೇಟ್ ಅಂಗವಾದ ಸೆಂಚುರಿ ಟೆಕ್ಸ್​ಟೈಲ್ಸ್ ಅಂಡ್ ಇಂಡಸ್ಟ್ರೀಸ್ (Century Textiles and Industries) ಸಂಸ್ಥೆಯ ಮಾಲಕತ್ವದ ಕಂಪನಿ ಬಿರ್ಲಾ ಎಸ್ಟೇಟ್ಸ್. ದೇವನಹಳ್ಳಿಯಲ್ಲಿ ಬಿರ್ಲಾ ತ್ರಿಮಾಯ ಪ್ರಾಜೆಕ್ಟ್ ಅನ್ನು ಬಿರ್ಲಾ ಎಸ್ಟೇಟ್ ಮತ್ತು ಎಂಎಸ್ ರಾಮಯ್ಯ ರಿಯಾಲ್ಟಿ (MS Ramaiah Realty) ಸಂಸ್ಥೆ ಜಂಟಿಯಾಗಿ ನಡೆಸುತ್ತಿವೆ.

ಇದನ್ನೂ ಓದಿ: ಅಕ್ಟೋಬರ್ 14ರ ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್; ದುಬಾರಿ ಆಯ್ತು ಅಹ್ಮದಾಬಾದ್ ಫ್ಲೈಟ್ ಟಿಕೆಟ್

ಬಿರ್ಲಾ ತ್ರಿಮಾಯ ಪ್ರಾಜೆಕ್ಟ್ ಅನ್ನು ದೇವನಹಳ್ಳಿಯಲ್ಲಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬುಕ್ ಆಗಿರುವ 556 ಮನೆಗಳು 52 ಎಕರೆ ಪ್ರದೇಶದಲ್ಲಿವೆ. ಎಂಟು ಅಪಾರ್ಟ್ಮೆಂಟ್​ಗಳನ್ನು ಒಳಗೊಂಡಿರುವ ಲಕ್ಷುರಿ ವಸತಿ ಸಮುಚ್ಚಯ ಇದು. 1 ಬಿಎಚ್​ಕೆ, 2 ಬಿಎಚ್​ಕೆ ಮತ್ತು 3 ಬಿಎಚ್​ಕೆಯ ಹಲವು ಮನೆಗಳು ಇಲ್ಲಿವೆ. ಈ ಲಕ್ಷುರಿ ಲೇಔಟ್​ನಲ್ಲಿ ಬರೋಬ್ಬರಿ 35 ಎಕರೆಗಳಷ್ಟು ಬಹಿರಂಗ ಸ್ಥಳವೇ ಇದೆ. ಒಂದು ಕೆರೆಯೂ ಇದೆ. ಸಾಕಷ್ಟು ಹಸಿರಿನ ಪ್ರದೇಶವಿದೆ.

ಇದು ಬಿರ್ಲಾ ತ್ರಿಮಾಯ ಪ್ರಾಜೆಕ್ಟ್​ನ ಮೊದಲ ಭಾಗ ಮಾತ್ರ. ಇದರಿಂದ ಒಟ್ಟು 500 ಕೋಟಿ ರೂ ಆದಾಯ ಬಂದಿದೆ. ಈ ಪ್ರಾಜೆಕ್ಟ್ ಪೂರ್ಣವಾದ ಬಳಿಕ 3,000 ಕೋಟಿ ರೂ ಆದಾಯದ ನಿರೀಕ್ಷೆಯಲ್ಲಿ ಬಿರ್ಲಾ ಎಸ್ಟೇಟ್ ಇದೆ.

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿದ ಡ್ರೋನ್ ಹಾರಾಟ: ತನಿಖೆ ಶುರು

ಸೆಂಚುರಿ ಟೆಕ್ಸ್​ಟೈಲ್ಸ್ ಷೇರಿಗೆ ಬೇಡಿಕೆ

ಬಿರ್ಲಾ ಎಸ್ಟೇಟ್ಸ್​ನ ಮಾಲಕ ಸಂಸ್ಥೆ ಸೆಂಚುರಿ ಟೆಕ್ಸ್​ಟೈಲ್ಸ್ ಅಂಡ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳಿಗೆ ಈಗ ಬೇಡಿಕೆ ಶುರುವಾಗಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಅದರ ಷೇರುಮೌಲ್ಯ ನಿನ್ನೆ (ಸೆ. 26ಕ್ಕೆ) 1,064 ರೂನಲ್ಲಿ ಅಂತ್ಯಗೊಂಡಿತ್ತು. ಇವತ್ತು ಬೆಳಗಿನ ವಹಿವಾಟಿನಲ್ಲಿ ಅದರ ಷೇರುಬೆಲೆ 1,113 ರೂವರೆಗೂ ಹೋಗಿತ್ತು. ಮಧ್ಯಾಹ್ನದ ವೇಳೆ ಅದರ ಬೆಲೆ 1,088ಕ್ಕೆ ಬಂದು ನಿಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ