AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake message: ಪ್ಯಾನ್ ಅಪ್​ಡೇಟ್ ಮಾಡಲು ಎಸ್​ಬಿಐ ಹೆಸರಲ್ಲಿ ನಕಲಿ ಮೆಸೇಜ್; ಕ್ಲಿಕ್ ಮಾಡಿ ಮೋಸ ಹೋಗದಿರಿ ಹುಷಾರ್…

PAN upgrade scam alert: ಕ್ಯೂಆರ್ ಕೋಡ್ ಇರುವ ಹೊಸ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ವಿತರಿಸಲಿದೆ. ಹಳೆಯ ಪ್ಯಾನ್ ಕಾರ್ಡ್ ಬದಲು ಹೊಸ ಕಾರ್ಡ್ ಪಡೆಯಬೇಕು ಎನ್ನುವ ಸುದ್ದಿ ಇದೆ. ಇದರ ಬೆನ್ನಲ್ಲೇ ವಂಚಕರು ನಕಲಿ ಮೆಸೇಜ್​ಗಳ ಮೂಲಕ ಅಮಾಯಕರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಹೊಸ ಪ್ಯಾನ್ ಕಾರ್ಡ್ ಅಪ್​ಡೇಟ್ ಮಾಡಬೇಕೆಂದು ಎಪಿಕೆ ಫೈಲ್ ಡೌನ್​ಲೋಡ್ ಮಾಡುವ ಲಿಂಕ್ ಅನ್ನು ಕಳುಹಿಸಲಾಗುತ್ತಿದೆ. ಗ್ರಾಹಕರು ಎಚ್ಚರದಿಂದರಬೇಕು.

Fake message: ಪ್ಯಾನ್ ಅಪ್​ಡೇಟ್ ಮಾಡಲು ಎಸ್​ಬಿಐ ಹೆಸರಲ್ಲಿ ನಕಲಿ ಮೆಸೇಜ್; ಕ್ಲಿಕ್ ಮಾಡಿ ಮೋಸ ಹೋಗದಿರಿ ಹುಷಾರ್...
ಎಸ್​ಬಿಐ ಯೋನೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 27, 2024 | 3:10 PM

Share

ಬೆಂಗಳೂರು, ನವೆಂಬರ್ 27: ಈಗ ಅಪ್​ಗ್ರೇಡೆಡ್ ಪಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ನೀಡಲಿದೆ. ಹಳೆಯ ಪ್ಯಾನ್ ಕಾರ್ಡ್ ಹೊಂದಿರುವವರು ಹೊಸ ಕಾರ್ಡ್ ಪಡೆಯಬೇಕಾಗುತ್ತದೆ. ಈ ಸುದ್ದಿಯನ್ನು ವಂಚಕರು ದುರಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ. ನಿಮ್ಮ ಹಳೆಯ ಪ್ಯಾನ್ ಕಾರ್ಡ್​ನಿಂದಾಗಿ ಅಕೌಂಟ್ ನಿಷ್ಕ್ರಿಯವಾಗುತ್ತಿದೆ. ಅದನ್ನು ಆ್ಯಕ್ಟಿವೇಟ್ ಮಾಡಲು ಪ್ಯಾನ್ ಕಾರ್ಡ್ ಅನ್ನು ಅಪ್​​ಡೇಟ್ ಮಾಡಬೇಕು ಎಂದು ಹೇಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಮೆಸೇಜ್​ಗಳು ಬರುತ್ತಿವೆ. ಈ ರೀತಿಯ ಮೆಸೇಜ್​ಗಳು ತಮಗೆ ಬಂದಿರುವುದಾಗಿ ಹಲವು ಜನರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ಯಾನ್ ಕಾರ್ಡ್ ಅಪ್​ಗ್ರೇಡ್ ಮಾಡಲು ಒಂದು ಎಪಿಕೆ ಫೈಲ್ ಅನ್ನು ಡೌನ್​ಲೋಡ್ ಮಾಡಬೇಕೆಂದು ಒಂದು ಲಿಂಕ್ ಅನ್ನೂ ಆ ಮೆಸೇಜ್​ನಲ್ಲಿ ನೀಡಲಾಗಿದೆ. ಅಕಸ್ಮಾತ್ ಯಾರಾದರೂ ಅಮಾಯಕ ಗ್ರಾಹಕರು ಆ ಎಪಿಕೆ ಫೈಲ್ ಅನ್ನು ಡೌನ್​ಲೋಡ್ ಮಾಡಿ ತಮ್ಮ ಮೊಬೈಲ್​ಗೆ ಇನ್ಸ್​ಟಾಲ್ ಮಾಡಿದಲ್ಲಿ ಅವರ ಡಾಟಾವೆಲ್ಲವೂ ವಂಚಕರ ಪಾಲಾಗಬಹುದು. ಎಸ್​ಬಿಐ ಆಗಲೀ ಯಾವುದೇ ಬ್ಯಾಂಕ್ ಆಗಲೀ ಎಪಿಕೆ ಫೈಲ್ ಅನ್ನು ಡೌನ್​ಲೋಡ್ ಮಾಡಲು ಕೇಳುವುದಿಲ್ಲ.

ಇದನ್ನೂ ಓದಿ: ಅಮೆರಿಕದ ಚಾರ್ಜ್​ಶೀಟ್​ನಲ್ಲಿ ಗೌತಮ್ ಅದಾನಿ ವಿರುದ್ಧ ಲಂಚದ ಆರೋಪವಿಲ್ಲ: ಅದಾನಿ ಗ್ರೀನ್ ಸ್ಪಷ್ಟನೆ

ಎಸ್​​ಬಿಐ ಹೆಸರಿನಲ್ಲಿ ಬಂದ ಮೆಸೇಜ್ ಹೀಗಿದೆ…

‘ಪ್ರಿಯ ಗ್ರಾಹಕರೆ, ಹಳೆಯ ಪ್ಯಾನ್ ಕಾರ್ಡ್ ಇರುವುದರಿಂದ ನಿಮ್ಮ ಎಸ್​ಬಿಐ ಯೋನೋ ಅಕೌಂಟ್ ಅನ್ನು ಇವತ್ತು ತಡೆಹಿಡಿಯಲಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ದಾಖಲೆಗಳನ್ನು ಎಸ್​ಬಿಐ ಯೋನೋ ಆ್ಯಪ್​ನಲ್ಲಿ ಅಪ್​ಲೋಡ್ ಮಾಡಿರಲಾಗುತ್ತದೆ. ಈಗ ಡಬ್ಲ್ಯುಬಿಐ ಎಪಿಕೆ ಅನ್ನು ಇನ್ಸ್​ಟಾಲ್ ಮಾಡಿ, ನಿಮ್ಮ ಆ ಪ್ಯಾನ್ ದಾಖಲೆಗಳು ಸರಿಯಾಗಿವೆಯಾ ಎಂದು ಪರಿಶೀಲಿಸಿ’ ಎಂದು ಈ ಮೆಸೇಜ್​ನಲ್ಲಿ ಬರೆಯಲಾಗಿದೆ.

ಹಾಗೆಯೇ, ‘ಯೋನೋ ಎಸ್​ಬಿಐ ಸೆಲ್ಫ್ ಪ್ಯಾನ್ ಅಪ್​ಡೇಟ್’ ಎನ್ನುವ ಹೆಸರಿನಲ್ಲಿ ಎಪಿಕೆ ಫೈಲ್​ನ ಅಟ್ಯಾಚ್ಮೆಂಟ್ ಅನ್ನೂ ಮತ್ತೊಂದು ಮೆಸೇಜ್​ನಲ್ಲಿ ಲಗತ್ತಿಸಲಾಗಿದೆ. ಇದು ವಂಚಕರ ಜಾಲ.

ಇದನ್ನೂ ಓದಿ: ಪ್ಯಾನ್ 2.0 ಘೋಷಿಸಿದ ಸರ್ಕಾರ; ಹಳೆಯ ಪ್ಯಾನ್ ಕಾರ್ಡ್ ಅಸಿಂಧುಗೊಳ್ಳುತ್ತಾ? ಕ್ಯೂಆರ್ ಕೋಡ್ ಇರುವ ಪ್ಯಾನ್ ಪಡೆಯುವುದು ಹೇಗೆ?

ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ನಿಮ್ಮನ್ನು ವಂಚಿಸಲು ಸಾಕಷ್ಟು ದಾರಿಗಳನ್ನು ದುರುಳರು ಹುಡುಕುವುದುಂಟು. ಈಗ ಬಹಳ ಸಾಮಾನ್ಯವಾಗಿ ಬಳಸಲಾಗುವ ಮಾರ್ಗ ಎಂದರೆ ಅದು ವಂಚಕ ಲಿಂಕ್​ಗಳದ್ದು. ಮೊಬೈಲ್​ಗೆ ಮೆಸೆಂಜರ್​ನಲ್ಲಿ ಟೆಕ್ಸ್ಟ್ ಮೆಸೇಜ್ ಮೂಲಕವೋ ಅಥವಾ ವಾಟ್ಸಾಪ್, ಟೆಲಿಗ್ರಾಮ್​ಗಳಲ್ಲಿ ಟೆಕ್ಸ್ಟ್ ಮೆಸೇಜ್ ಮೂಲಕವೋ ಲಿಂಕ್ ಕಳುಹಿಸಲಾಗುತ್ತದೆ. ಮೂಲ ಯುಆರ್​ಎಲ್ ಅನ್ನು ಮರೆಮಾಚಿದ ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ವೈರಸ್ ಇರುವ ಫೈಲ್ ನಿಮ್ಮ ಮೊಬೈಲ್ ಅಥವಾ ಸಿಸ್ಟಂಗೆ ಇನ್ಸ್​ಟಾಲ್ ಆಗುತ್ತದೆ.

ಇನ್ನು ಎಪಿಕೆ ಫೈಲ್​ಗಳೂ ಕೂಡ ವಂಚಕರಿಗೆ ಪ್ರಬಲ ಅಸ್ತ್ರಗಳಾಗಿರುತ್ತವೆ. ಇವುಗಳು ಮೊಬೈಲ್​ನ ಸಂಪೂರ್ಣ ನಿಯಂತ್ರಣವನ್ನು ವಂಚಕರಿಗೆ ಕೊಡುತ್ತವೆ. ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಬಗ್ಗೆ ಮಾಹಿತಿ ತಿಳಿಯಬೇಕಿದ್ದರೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಹೋಗಬಹುದು. ಅಥವಾ ಇಲಾಖೆಯ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್​ಗಳಿಗೆ ಹೋಗಿ ಅಪ್​​ಡೇಟ್ಸ್ ತಿಳಿಯಬಹುದು. ಇದು ಐಟಿ ಸಂಬಂಧಿಸಿದಂತೆ ಮಾತ್ರವಲ್ಲ, ಯಾವುದೇ ಮಾಹಿತಿಯಾದರೂ ಅಧಿಕೃತ ಮೂಲಗಳಿಂದ ಪಡೆಯುವುದು ಸರಿಯಾದ ವಿಧಾನ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು