AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ವೇದಾಂತ ಸಂಸ್ಥೆಗೆ ಸೌದಿಯಲ್ಲಿ ಕಾಪರ್ ಫ್ಯಾಕ್ಟರಿ ಸ್ಥಾಪಿಸುವ ಯೋಜನೆ; 16,000 ಕೋಟಿ ರೂ ಹೂಡಿಕೆ ಸಾಧ್ಯತೆ

Vedanta gets copper project in Saudi: ಭಾರತದ ಮೈನಿಂಗ್ ಮತ್ತು ಲೋಹ ತಯಾರಿಕೆಯ ಕಂಪನಿಯಾದ ವೇದಾಂತಕ್ಕೆ ಸೌದಿಯಲ್ಲಿ ಒಳ್ಳೆಯ ಒಪ್ಪಂದ ಸಿಕ್ಕಿದೆ. ಸೌದಿಯ ರಾಸ್ ಅಲ್ ಖೇರ್ ಎಂಬಲ್ಲಿ 16,000 ಕೋಟಿ ರೂ ಬಂಡವಾಳದಲ್ಲಿ ತಾಮ್ರ ಉತ್ಪಾದನಾ ಘಟಕಗಳು ವೇದಾಂತದಿಂದ ನಿರ್ಮಾಣವಾಗಲಿವೆ. ರಿಯಾಧ್​ನಲ್ಲಿ ನಡೆದ ವರ್ಲ್ಡ್ ಇನ್ವೆಸ್ಟ್​ಮೆಂಟ್ ಕಾನ್ಫರೆನ್ಸ್​ನಲ್ಲಿ ವೇದಾಂತ ಅಲ್ಲದೆ, ಬೇರೆ ಬೇರೆ ದೇಶಗಳ ವಿವಿಧ ಕಂಪನಿಗಳೊಂದಿಗೆ ಅಲ್ಲಿನ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

ಭಾರತದ ವೇದಾಂತ ಸಂಸ್ಥೆಗೆ ಸೌದಿಯಲ್ಲಿ ಕಾಪರ್ ಫ್ಯಾಕ್ಟರಿ ಸ್ಥಾಪಿಸುವ ಯೋಜನೆ; 16,000 ಕೋಟಿ ರೂ ಹೂಡಿಕೆ ಸಾಧ್ಯತೆ
ವೇದಾಂತ ಸಂಸ್ಥೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 26, 2024 | 7:21 PM

Share

ನವದೆಹಲಿ, ನವೆಂಬರ್ 26: ಸೌದಿ ಅರೇಬಿಯಾ ರಾಜಧಾನಿ ರಿಯಾಧ್​ನಲ್ಲಿ ನಡೆಯುತ್ತಿರುವ ವಿಶ್ವ ಹೂಡಿಕೆ ಸಮಾವೇಶದಲ್ಲಿ ಅಲ್ಲಿನ ಸರ್ಕಾರ ಲೋಹ ಹಾಗೂ ಮೈನಿಂಗ್ ಕ್ಷೇತ್ರದಲ್ಲಿ 35 ಬಿಲಿಯನ್ ರಿಯಾಲ್ (ಸುಮಾರು 85,000 ಕೋಟಿ ರೂ) ಮೌಲ್ಯದ ಒಂಬತ್ತು ಒಪ್ಪಂದಗಳಿಗೆ ಸಮ್ಮತಿ ನೀಡಿದೆ. ಭಾರತದ ವೇದಾಂತ ಸಂಸ್ಥೆಯೂ ಒಳಗೊಂಡಂತೆ ವಿಶ್ವದ ಬೇರೆ ಬೇರೆ ಕಂಪನಿಗಳು ಈ ಯೋಜನೆಗಳನ್ನು ಪಡೆದಿವೆ.

ಸೌದಿ ಅರೇಬಿಯಾ ಸರ್ಕಾರವು ಆರ್ಥಿಕತೆಯನ್ನು ವಿಸ್ತರಿಸಲು ಮತ್ತು ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಶನ್ 2030 ಯೋಜನೆ ಹಾಕಿದೆ. ಅದರ ಭಾಗವಾಗಿ ಗಣಿಗಾರಿಕೆ ಉದ್ಯಮಕ್ಕೆ ಅದು ಪುಷ್ಟಿ ಕೊಡುತ್ತಿದೆ. 2030ರೊಳಗೆ ಮೈನಿಂಗ್ ಉದ್ಯಮಕ್ಕೆ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ವಿದೇಶೀ ಹೂಡಿಕೆ ಹರಿದುಬರುವ ಆಶಯ ಇಟ್ಟುಕೊಂಡು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿ: ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ತಯಾರಿಕೆ; 10 ಬಿಲಿಯನ್ ಡಾಲರ್​ಗೂ ಅಧಿಕ ಸ್ಮಾರ್ಟ್​ಫೋನ್ ರಫ್ತು

ಭಾರತದ ವೇದಾಂತ ಸಂಸ್ಥೆಯು ಸೌದಿಯ ರಾಸ್ ಅಲ್ ಖೇರ್ ಎಂಬಲ್ಲಿ 7.5 ಬಿಲಿಯನ್ ರಿಯಾಲ್ ಬಂಡವಾಳದಲ್ಲಿ ಕಾಪರ್ ರಿಫೈನರಿ ಸೇರಿದಂತೆ ವಿವಿಧ ತಾಮ್ರ ಘಟಕಗಳನ್ನು ನಿರ್ಮಿಸಲಿದೆ. ವಾರ್ಷಿಕವಾಗಿ ನಾಲ್ಕು ಲಕ್ಷ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯವು ಈ ಘಟಕಗಳಲ್ಲಿ ಇರಲಿದೆ. ಹಾಗೆಯೇ, ವಾರ್ಷಿಕ ಮೂರು ಲಕ್ಷ ಟನ್ ಕಾಪರ್ ರಾಡ್ ಉತ್ಪಾದನಾ ಘಟಕವನ್ನೂ ಅದು ನಿರ್ಮಿಸಲಿದೆ.

ತಾಮ್ರ ಉತ್ಪಾದನೆಯಲ್ಲಿ ಸೌದಿ ಸ್ವಾಲಂಬನೆ ಸಾಧಿಸಲು ವೇದಾಂತದೊಂದಿಗೆ ಮಾಡಿಕೊಳ್ಳಲಾಗಿರುವ ಈ ಒಪ್ಪಂದ ಸಹಕಾರಿಯಾಗಲಿದೆ. ಆ ದೇಶದ ಆರ್ಥಿಕತೆಯ ಬೆಳವಣಿಗೆಗೆ ಅಂದಾಜು 70 ಬಿಲಿಯನ್ ರಿಯಾಲ್​​ಗಳಷ್ಟು ಕೊಡುಗೆ ಸಿಗುವ ನಿರೀಕ್ಷೆಯೂ ಇದೆ.

ಇದನ್ನೂ ಓದಿ: ಮಾರುತಿ ಸುಜುಕಿಯ 30 ಲಕ್ಷ ಕಾರುಗಳ ರಫ್ತು, ಹೊಸ ಮೈಲಿಗಲ್ಲು; ಕಿಯಾದ 1 ಲಕ್ಷ ಸಿಕೆಡಿ ಯೂನಿಟ್ಸ್ ರಫ್ತು

ಚೀನಾದ ಝಿಜಿನ್ ಸಂಸ್ಥೆಯು ಸೌದಿಯಲ್ಲಿ ಜಿಂಕ್ ಉತ್ಪಾದನೆಗೆ ಗುತ್ತಿಗೆಗಳನ್ನು ಪಡೆದಿದೆ. ಆಸ್ಟ್ರೇಲಿಯಾದ ಹೇಸ್ಟಿಂಗ್ಸ್ ಟೆಕ್ನಾಲಜಿ ಮೆಟಲ್ಸ್ ಸಂಸ್ಥೆಯು ಅಪರೂಪದ ಭೂ ಖನಿಜಗಳ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ