
ನವದೆಹಲಿ, ಜುಲೈ 8: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ (anti worker policy) ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಟ್ರೇಡ್ ಯೂನಿಯನ್ಗಳು ಜುಲೈ 9, ಬುಧವಾರದಂದು ಭಾರತ್ ಬಂದ್ಗೆ (Bharat Bandh) ಕರೆ ಕೊಟ್ಟಿವೆ. ಹತ್ತು ಟ್ರೇಡ್ ಯೂನಿಯನ್ಗಳು ಒಟ್ಟು ಸೇರಿ ನಡೆಸುತ್ತಿರುವ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನೆಯಲ್ಲಿ (nationwide protest) 25 ಕೋಟಿಗೂ ಅಧಿಕ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ. ಬ್ಯಾಂಕಿಂಗ್, ಕೈಗಾರಿಕೆ, ಕೃಷಿ, ಸಾರಿಗೆ, ಪೋಸ್ಟಲ್ ಹೀಗೆ ನಾನಾ ಸೆಕ್ಟರ್ಗಳ ಕಾರ್ಮಿಕರು ಭಾರತ್ ಬಂದ್ಗೆ ಬೆಂಬಲಿಸುವ ನಿರೀಕ್ಷೆ ಇದೆ.
ಬ್ಯಾಂಕಿಂಗ್ ವಲಯದ ಹಲವು ಕೆಲಸಗಾರರು ಜುಲೈ 9ರ ಭಾರತ್ ಬಂದ್ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ, ಬ್ಯಾಂಕುಗಳು ಬುಧವಾರ ಕಾರ್ಯನಿರ್ವಹಿಸುತ್ತವಾ ಇಲ್ಲವಾ ಅನ್ನುವ ಅನುಮಾನ ಹಲವರಲ್ಲಿ ಇದೆ. ಆದರೆ, ಬ್ಯಾಂಕುಗಳು ಜುಲೈ 9ಕ್ಕೆ ಅಧಿಕೃತವಾಗಿ ರಜೆ ಘೋಷಿಸಿಲ್ಲ. ನಾಳೆ ಬ್ಯಾಂಕುಗಳು ಬಹುತೇಕ ಬಾಗಿಲು ತೆರಿದಿರುವ ಸಾಧ್ಯತೆ ಇದೆಯಾದರೂ ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ತೊಡಗುವುದರಿಂದ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಬಹುದು.
ಇದನ್ನೂ ಓದಿ: Bharat Bandh: ನಾಳೆ ಭಾರತ್ ಬಂದ್ ಘೋಷಿಸಲು ಕಾರಣವೇನು? ಏನೆಲ್ಲ ಓಪನ್, ಯಾವುದು ಬಂದ್?
ಇನ್ನು, ಷೇರು ಮಾರುಕಟ್ಟೆ ಕೂಡ ಎಂದಿನಿಂತೆ ತೆರೆದಿರಬಹುದು. ಷೇರು ವಿನಿಮಯ ಕೇಂದ್ರಗಳಾದ ಬಿಎಸ್ಇ ಮತ್ತು ಎನ್ಎಸ್ಇ ರಜೆ ಘೋಷಿಸಿಲ್ಲ.
ಕೇಂದ್ರ ಸರ್ಕಾರವು ಕಾರ್ಪೊರೇಟ್ ಪರವಾದ ಮತ್ತು ಕಾರ್ಮಿಕ ವಿರೋಧಿಯಾದ ನೀತಿಯನ್ನು ಅನುಸರಿಸುತ್ತಿದೆ. ಕಾರ್ಪೊರೇಟ್ ಕಂಪನಿಗಳಿಗೋಸ್ಕರ ಕಾರ್ಮಿಕರ ಹಿತ ಬಲಿಕೊಡುತ್ತಿದೆ ಎನ್ನುವುದು ಕಾರ್ಮಿಕ ಸಂಘಟನೆಗಳ ಆರೋಪ.
ಇದನ್ನೂ ಓದಿ: ತಡಬಡಾಯಿಸುತ್ತಿರುವ ಬಾಂಗ್ಲಾದೇಶ; ಟ್ರಂಪ್ ಟ್ಯಾರಿಫ್ನಿಂದ ಬಾಂಗ್ಲಾಗೆ ಭಾರೀ ಹೊಡೆತ; ಭಾರತಕ್ಕೆ ಎಷ್ಟು ಲಾಭ?
ಕೇಂದ್ರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ನಿಲ್ಲಿಸಬೇಕು; ಮುಷ್ಕರ ನಡೆಸುವ ಕಾರ್ಮಿಕರ ಹಕ್ಕು ಪುನಃಸ್ಥಾಪಿಸಿ; ಮನ್ರೆಗಾ ಸ್ಕೀಮ್ ಅನ್ನು ನಗರಗಳಿಗೂ ವಿಸ್ತರಿಸಿ, ವೇತನವನ್ನೂ ಹೆಚ್ಚಿಸಿ ಎಂಬಿತ್ಯಾದಿ ಪ್ರಮುಖ 17 ಬೇಡಿಕೆಗಳನ್ನು ಟ್ರೇಡ್ ಯೂನಿಯನ್ಗಳು ಸರ್ಕಾರದ ಮುಂದಿಟ್ಟಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ