AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Byju’s: ಬೈಜುಸ್​ಗೆ ನಿಲ್ಲದ ಸಂಕಷ್ಟ; ಕಂಪನಿಯ ಲೆಕ್ಕಪತ್ರ ಪರಿಶೀಲನೆಗೆ ಕೇಂದ್ರದಿಂದ ಆದೇಶ

Centre Order To Inspect Byju's Account Books: ಎರಡು ಹಣಕಾಸು ವರ್ಷದ ಬೈಜೂಸ್ ವರದಿಗಳನ್ನು ಪರಿಶೀಲಿಸಿದ ಬೆನ್ನಲ್ಲೇ ಈಗ ಅದರ ಅಕೌಂಟ್ ಬುಕ್ ಇನ್ಸ್​ಪೆಕ್ಷನ್​ಗೆ ಕೇಂದ್ರ ಕಾರ್ಪೊರೇಟ್ ಸಚಿವಾಲಯ ಆದೇಶಿಸಿದೆ.

Byju's: ಬೈಜುಸ್​ಗೆ ನಿಲ್ಲದ ಸಂಕಷ್ಟ; ಕಂಪನಿಯ ಲೆಕ್ಕಪತ್ರ ಪರಿಶೀಲನೆಗೆ ಕೇಂದ್ರದಿಂದ ಆದೇಶ
ಬೈಜುಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 11, 2023 | 6:17 PM

ನವದೆಹಲಿ: ಶಿಕ್ಷಣ ಕ್ಷೇತ್ರದ ಸ್ಟಾರ್ಟಪ್ ಬೈಜುಸ್ ಸಂಸ್ಥೆಯ ಅಕೌಂಟ್ ಬುಕ್​ಗಳ (Books of Account) ಪರಿಶೀಲನೆಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿರುವುದು ತಿಳಿದುಬಂದಿದೆ. ಬ್ಲೂಮ್​ಬರ್ಗ್ ನ್ಯೂಸ್​ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ 6 ವಾರದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಬೈಜುಸ್​ನ ಆಡಿಟರ್ ಹಾಗು ಮೂವರು ಬೋರ್ಡ್ ಸದಸ್ಯರು ಕಳೆದ ತಿಂಗಳು ನಿರ್ಗಮಿಸಿದ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಅಕೌಂಟ್ ಬುಕ್​ಗಳ ಪರಿಶೀಲನೆಗೆ ಆದೇಶಿಸುವ ಮುನ್ನ ಬೈಜೂಸ್​ನ ಹಣಕಾಸು ವರದಿಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಸಿಎ ಇನ್ಸ್​ಟಿಟ್ಯೂಟ್​ನ ಎಫ್​ಆರ್​ಆರ್​ಬಿ (FRRB- Financial Reporting Review Board) ವಿಭಾಗದ ಅಧಿಕಾರಿಗಳು 2019-20 ಹಾಗೂ 2020-21ರ ಹಣಕಾಸು ವರ್ಷಗಳಲ್ಲಿನ ಬೈಜೂಸ್ ವರದಿಗಳನ್ನು ಪರಿಶೀಲನೆ ನಡೆಸಿದ್ದರು. ಅದರಲ್ಲಿ ಸಂಶಯ ಬರುವಂತಹ ಸಂಗತಿಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಕೌಂಟ್ ಬುಕ್​ಗಳನ್ನು ಪರಿಶೀಲಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಆದೇಶಿಸಿದೆ ಎಂದು ಹೇಳಲಾಗಿದೆ.

ಜುಲೈ 8ರಂದು ದಿ ಹಿಂದೂ ಬ್ಯುಸಿನೆಸ್​ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (Corporate Affairs Ministry) ಅಡಿಗೆ ಬರುವ ಎಸ್​ಎಫ್​ಐಒ (SFIO- Serious Fraud Investigating Office) ಬೈಜೂಸ್ ವಿರುದ್ಧ ತನಿಖೆ ಆರಂಭಿಸಿದೆ ಎಂದಿತ್ತು.

ಇದನ್ನೂ ಓದಿStrict Action: ಔಷಧ ಗುಣಮಟ್ಟದಲ್ಲಿ ರಾಜಿ ಇಲ್ಲ; ಕಳಪೆ ಔಷಧ ತಯಾರಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಎಸ್​ಎಫ್​ಐಒ ಎಂಬುದು ಗಂಭೀರ ವಂಚನೆ ಪ್ರಕರಣಗಳ ತನಿಖೆ ನಡೆಸುವ ಸಂಸ್ಥೆಯಾಗಿದೆ. ಆದರೆ, ಎಸ್​ಎಫ್​ಐಒದಿಂದ ತನಿಖೆ ನಡೆಯುತ್ತಿರುವ ವಿಚಾರವನ್ನು ಬೈಜೂಸ್ ತಳ್ಳಿಹಾಕಿದೆ. ತನಗೆ ಎಸ್​ಎಫ್​ಐಒದಿಂದ ಇಲ್ಲಿಯವರೆಗೆ ಯಾವ ಸಂವಹನವೂ ಬಂದಿಲ್ಲ ಎಂದು ಬೈಜೂಸ್ ಹೇಳಿದ್ದಾಗಿ ಲೈವ್ ಮಿಂಟ್ ವರದಿ ಮಾಡಿದೆ. ಬ್ಲೂಮ್​ಬರ್ಗ್ ವರದಿ ಪ್ರಕಾರ ಬೈಜೂಸ್​ನ ಅಕೌಂಟ್ ಬುಕ್ ಪರಿಶೀಲನೆ ವೇಳೆ ಗಂಭೀರ ಸಂಗತಿ ಕಂಡುಬಂದರೆ ಎಸ್​ಎಫ್​ಐಒಗೆ ತನಿಖೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದೆ ಬೈಜೂಸ್ ಮಂಡಳಿಯಿಂದ ಮೂವರು ನಿರ್ದೇಶಕರಾದ ಜಿವಿ ರವಿಶಂಕರ್, ರಸೆಲ್ ಡ್ರೇಸೆನ್​ಸ್ಟಾಕ್, ವಿವಿಯನ್ ವು ಅವರು ಹೊರಹೋಗಿದ್ದಾರೆ. ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಜೊತೆ ಭಿನ್ನಾಭಿಪ್ರಾಯದ ಕಾರಣಕ್ಕೆ ಅವರು ನಿರ್ಗಮಿಸಿದರೆನ್ನಲಾಗಿದೆ. ಕುತೂಹಲ ಎಂದರೆ ಅದೇ ದಿನ ಬೈಜೂಸ್​ನ ಆಡಿಟರ್ ಕೂಡ ಹೊರಬಿದ್ದಿದ್ದರು.

ಇದನ್ನೂ ಓದಿKarnataka vs Centre: ದುಡ್ಡು ಕೊಟ್ಟು ಖರೀದಿಸುತ್ತೇವೆಂದರೂ ಕರ್ನಾಟಕಕ್ಕೆ ಇಲ್ಲ ಹೆಚ್ಚುವರಿ ಅಕ್ಕಿ; ಕೇಂದ್ರ ಆಹಾರ ಕಾರ್ಯದರ್ಶಿ ಹೇಳುವುದಿದು

ಇವೆಲ್ಲ ಬೆಳವಣಿಗೆಯಿಂದ ಕಾರ್ಪೊರೇಟ್ ಆಡಳಿತದ ಕಾನೂನು ತೊಡಕು ಉಂಟಾಗುವುದನ್ನು ತಪ್ಪಿಸಲು ಬೈಜೂಸ್ ಸಂಸ್ಥೆ ಬೋರ್ಡ್ ಅಡ್ವೈಸರಿ ಕಮಿಟಿ (ಬಿಎಸಿ) ಸ್ಥಾಪಿಸಲು ನಿರ್ಧರಿಸಿದೆ. ಬೈಜೂಸ್​ನ ಮಂಡಳಿ ಮತ್ತು ಆಡಳಿತದ ರಚನೆ ಹೇಗಿರಬೇಕು ಎಂಬ ಬಗ್ಗೆ ಬಿಎಸಿಯಿಂದ ರವೀಂದ್ರನ್​ಗೆ ಸಲಹೆ ನೀಡಲಾಗುವ ನಿರೀಕ್ಷೆ ಇದೆ.

ಇದೆಲ್ಲದರ ಮಧ್ಯೆ ಬೈಜುಸ್ ಸಂಸ್ಥೆ ಅಮೆರಿಕದಲ್ಲಿ ಎರಡು ಕೋರ್ಟ್​ಗಳಲ್ಲಿ ಪ್ರಕರಣ ಎದುರಿಸುತ್ತಿದೆ. ಕಳೆದ ವರ್ಷ ಬೈಜೂಸ್​ಗೆ ಸೇರಿದ ವಿವಿಧ ಸ್ಥಳಗಳಲ್ಲಿ ಇಡಿ ರೇಡ್​ಗಳು ನಡೆದಿದ್ದವು. 2020-21ರ ಹಣಕಾಸು ವರ್ಷದಲ್ಲಿ ಬೈಜುಸ್ ಹಣಕಾಸು ಲೆಕ್ಕ ಪ್ರಕಟಿಸಿಲ್ಲ. ಅದರ ಅಕೌಂಟನ್ನು ಆಡಿಟ್ ಮಾಡಲಾಗಿಲ್ಲ ಎಂಬುದು ಇಡಿ ಆರೋಪ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್