AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ ರೆಡ್ಡೀಸ್​ನಿಂದ ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ V ಲಸಿಕೆ

ಡಾ ರೆಡ್ಡೀಸ್​ನಿಂದ ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ ಲಸಿಕೆ ಹಾಕುವ ಯೋಜನೆ ಇರಿಸಿಕೊಂಡಿದೆ.

ಡಾ ರೆಡ್ಡೀಸ್​ನಿಂದ ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ V ಲಸಿಕೆ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: May 14, 2021 | 10:05 PM

Share

ಔಷಧ ತಯಾರಕ ಕಂಪೆನಿಯಾದ ಡಾ. ರೆಡ್ಡೀಸ್ ಶುಕ್ರವಾರದಂದು ಹೇಳಿರುವ ಪ್ರಕಾರ, ಮುಂದಿನ 8ರಿಂದ 12 ತಿಂಗಳಲ್ಲಿ 12.5 ಕೋಟಿ ಜನರಿಗೆ ಸ್ಪುಟ್ನಿಕ್ ಲಸಿಕೆ ಹಾಕುವ ಯೋಜನೆ ಇರಿಸಿಕೊಂಡಿದೆ. ಕನಿಷ್ಠ ಎರಡು ರಾಜ್ಯಗಳೊಂದಿಗೆ ಕಂಪೆನಿಯು ಮಾತುಕತೆ ನಡೆಸುತ್ತಿದೆ. ಶೇ 15ರಿಂದ 20ರಷ್ಟು ಆರಂಭದ ಪೂರೈಕೆಯು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುವುದು. “ಮುಂದಿನ ಎರಡು ತಿಂಗಳಲ್ಲಿ ನಮಗೆ ಆರ್​ಡಿಐಎಫ್​ನಿಂದ 3.6 ಕೋಟಿ ಡೋಸ್​ನ ಪೂರೈಕೆಯ ಭರವಸೆ ಇದೆ,​” ಎಂದು ಡಾ. ರೆಡ್ಡೀಸ್​ನಲ್ಲಿ ಬ್ರ್ಯಾಂಡೆಡ್ ಫಾರ್ಮ್ಯುಲೇಷನ್ಸ್ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆಗಿರುವ ಎಂ.ವಿ.ರಮಣ ಹೇಳಿದ್ದಾರೆ.

ವಾಣಿಜ್ಯ ರವಾನೆಯು ಜೂನ್​ ಮಧ್ಯದಿಂದ ಶುರುವಾಗುವ ನಿರೀಕ್ಷೆ ಇದೆ ಎಂದು ಕಂಪೆನಿಯಿಂದ ಹೇಳಲಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಹೇಳಿರುವ ಪ್ರಕಾರ, ರಷ್ಯಾದ ಸ್ಪುಟ್ನಿಕ್ V ಕೋವಿಡ್- 19 ಲಸಿಕೆಯನ್ನು ರೂ. 948+ ಶೇ 5ರಷ್ಟು ಜಿಎಸ್​ಟಿ ಸೇರಿ ಒಂದು ಡೋಸ್​ಗೆ ರೂ. 995.40 ಆಗುತ್ತದೆ. ಈ ಮೊತ್ತವು ಸರ್ಕಾರ ಹಾಗೂ ಖಾಸಗಿ ಚಾನೆಲ್​ಗಳಿಗೆ ಒಂದೇ ಬೆಲೆ ಇರುತ್ತದೆ.

(ಮೈನಸ್) -18 ಸೆಂಟಿಗ್ರೇಡ್​ನಲ್ಲಿ ಲಸಿಕೆ ನಿರ್ವಹಣೆ ಮಾಡಬಹುದಾದ ಮೆಟ್ರೋ ನಗರಗಳ ಆಸ್ಪತ್ರೆಗಳ ಜತೆಗೆ ಕೆಲಸ ಮಾಡುತ್ತಿದ್ದೇವೆ. ಕಂಪೆನಿಯು 35 ನಗರಗಳಲ್ಲಿ ಕೆಲಸ ನಿರ್ವಹಿಸಲು ಸಿದ್ಧತೆ ನಡೆಸುತ್ತಿದೆ. ಡಾ. ರೆಡ್ಡೀಸ್ ಲೈಸೆನ್ಸಿಂಗ್ ಒಪ್ಪಂದದ ಪ್ರಕಾರ, 25 ಕೋಟಿ ಡೋಸ್ ಸ್ಪುಟ್ನಿಕ್ V ಲಸಿಕೆ ತನಕ ಉತ್ಪಾದನೆ ಮಾಡಬಹುದಾಗಿದೆ. ಪರಸ್ಪರ ಒಪ್ಪಂದದ ಮೇಲೆ ಈ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಕೂಡ ಇದೆ. ಡಾ ರೆಡ್ಡೀಸ್ ಇನ್ನೂ ಮುಂದುವರಿದು ಹೇಳಿದಂತೆ, ಒಂದು ಡೋಸ್​ನ ಸ್ಪುಟ್ನಿಕ್ ಲೈಟ್ ಲಸಿಕೆ ಭಾರತಕ್ಕೆ ಶೀಘ್ರದಲ್ಲೇ ಬರಲಿದೆ.

ಇದನ್ನೂ ಓದಿ: Sputnik V: ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಭಾರತದಲ್ಲಿ ಬಳಸಲು ತಜ್ಞರ ಒಪ್ಪಿಗೆ

(Drug maker company Dr Reddy’s plan to vaccinate more than 12 crore people in India over next 8 to 12 months)

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ