AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO Website Down: ಇಪಿಎಫ್​ ಸರ್ವರ್ ಡೌನ್; ಇ-ಪಾಸ್​​ಬುಕ್ ಸೌಲಭ್ಯಕ್ಕೆ ಅಡಚಣೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್​ಒ ವೆಬ್​ಸೈಟ್​​​ ಸರ್ವರ್ ಡೌನ್ ಆಗಿದ್ದು, ಚಂದಾದಾರರು ಇ-ಪಾಸ್​​ಬುಕ್ ಸೇವೆ ಪಡೆಯುವುದಕ್ಕೆ ಗುರುವಾರ ಅಡಚಣೆಯಾಗಿದೆ.

EPFO Website Down: ಇಪಿಎಫ್​ ಸರ್ವರ್ ಡೌನ್; ಇ-ಪಾಸ್​​ಬುಕ್ ಸೌಲಭ್ಯಕ್ಕೆ ಅಡಚಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 12, 2023 | 2:41 PM

Share

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್​ಒ (EPFO) ವೆಬ್​ಸೈಟ್​​​ ಸರ್ವರ್ ಡೌನ್ ಆಗಿದ್ದು, ಚಂದಾದಾರರು ಇ-ಪಾಸ್​​ಬುಕ್ ಸೇವೆ ಪಡೆಯುವುದಕ್ಕೆ ಗುರುವಾರ ಅಡಚಣೆಯಾಗಿದೆ. ಇ-ಪಾಸ್​ಬುಕ್​ಗೆ ಲಾಗಿನ್ ಆಗಲು ಪ್ರಯತ್ನಿಸಿದರೆ, ‘ತಾಂತ್ರಿಕ ನಿರ್ವಹಣೆಯ ಸಮಸ್ಯೆಗಳಿಂದಾಗಿ ಈ ಅಡಚಣೆ ಉಂಟಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ’ ಎಂಬ ಸಂದೇಶ ಕಾಣಿಸುತ್ತಿವೆ. ಇಪಿಎಫ್​ಒ ವೆಬ್​ಸೈಟ್​ನಲ್ಲೇ ಇರುವ ಮಾಹಿತಿ ಪ್ರಕಾರ, ಸಂಜೆ 5 ಗಂಟೆ ವೇಳೆ ಸಮಸ್ಯೆ ಬಗೆಹರಿಯಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಉಪಕ್ರಮದ ಅಡಿ ಆರಂಭಿಸಲಾಗಿರುವ ‘ಉಮಂಗ್’ ಆ್ಯಪ್​​ನಲ್ಲಿಯೂ ಇ-ಪಾಸ್​​ಬುಕ್ ದೊರೆಯುತ್ತಿಲ್ಲ ಎನ್ನಲಾಗಿದೆ. ನಿನ್ನೆಯಿಂದ ಎಪಿಎಫ್​ ಪೋರ್ಟಲ್​ ಲಾಗಿನ್ ಆಗಲು ಯತ್ನಿಸುತ್ತಿದ್ದು, ಸಾಧ್ಯವಾಗುತ್ತಿಲ್ಲ. ಪಾಸ್​ಬುಕ್ ಪೋರ್ಟಲ್ ಕೂಡ ಸಂಪೂರ್ಣವಾಗಿ ಡೌನ್ ಆಗಿದೆ ಎಂದು ಇಪಿಎಫ್​ಒ ಚಂದಾದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಇಪಿಎಫ್​ಒ ಪಾಸ್​ಬುಕ್ ಸೇವೆ ಕಳೆದ ಕೆಲವು ದಿನಗಳಿಂದ ಡೌನ್ ಆಗಿದೆ. ಯಾವಾಗ ಇದು ಸರಿಯಾಗಲಿದೆ?’ ಎಂದು ಚಂದಾದಾರರೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ

ಪ್ರತಿ ತಿಂಗಳು ಎಷ್ಟು ಪಿಎಫ್ ಮೊತ್ತ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಲು ಇಪಿಎಫ್​ಒ ಇ-ಪಾಸ್​​ಬುಕ್ ನೆರವಾಗುತ್ತದೆ. ಚಂದಾದಾರರೇ, ಅನನುಕೂಲತೆಗಾಗಿ ವಿಷಾದಿಸುತ್ತೇವೆ. ದಯವಿಟ್ಟು ಸ್ವಲ್ಪ ಸಮಯ ಕಾಯಿರಿ. ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಇಪಿಎಫ್​ಒ ಟ್ವೀಟ್ ಮಾಡಿದೆ.

ಇದನ್ನೂ ಓದಿ: EPFO New Subscribers: ಅಕ್ಟೋಬರ್​ನಲ್ಲಿ 12.94 ಲಕ್ಷ ಮಂದಿ ಇಪಿಎಫ್​ಒಗೆ ಸೇರ್ಪಡೆ; ಉದ್ಯೋಗ ಹೆಚ್ಚಳವೂ ಕಾರಣ

ಉದ್ಯೋಗಿಗಳ ಭವಿಷ್ಯ ನಿಧಿಗೆ ಸಂಬಂಧಿಸಿದ ಎಲ್ಲ ಆನ್​ಲೈನ್ ವ್ಯವಹಾರಗಳು ಇಪಿಎಫ್​ಒ ವೆಬ್​ಸೈಟ್ ಮೂಲಕ ನಡೆಯುತ್ತವೆ. ಬ್ಯಾಲೆನ್ಸ್ ಪರಿಶೀಲನೆ, ಪಿಎಫ್​ ಮೊತ್ತದ ವರ್ಗಾವಣೆ, ಕ್ಲೇಮ್ ಮತ್ತು ಕ್ಲೇಮ್ ಸಂಬಂಧಿತ ವಿವರಗಳು, ಇತ್ಯಾದಿ ಎಲ್ಲ ಚಟುವಟಿಕೆಗಳಿಗೂ ಇಪಿಎಫ್​ಒ ವೆಬ್​ಸೈಟೇ ಆಧಾರ. ಹೀಗಾಗಿ ವೆಬ್​ಸೈಟ್ ಸರ್ವರ್ ಡೌನ್ ಆಗಿರುವುದರಿಂದ ಲಕ್ಷಾಂತರ ಮಂದಿ ಬಳಕೆದಾರರಿಗೆ ತೊಂದರೆಯಾಗುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Thu, 12 January 23

Follow Us
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ