AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO Website Down: ಇಪಿಎಫ್​ ಸರ್ವರ್ ಡೌನ್; ಇ-ಪಾಸ್​​ಬುಕ್ ಸೌಲಭ್ಯಕ್ಕೆ ಅಡಚಣೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್​ಒ ವೆಬ್​ಸೈಟ್​​​ ಸರ್ವರ್ ಡೌನ್ ಆಗಿದ್ದು, ಚಂದಾದಾರರು ಇ-ಪಾಸ್​​ಬುಕ್ ಸೇವೆ ಪಡೆಯುವುದಕ್ಕೆ ಗುರುವಾರ ಅಡಚಣೆಯಾಗಿದೆ.

EPFO Website Down: ಇಪಿಎಫ್​ ಸರ್ವರ್ ಡೌನ್; ಇ-ಪಾಸ್​​ಬುಕ್ ಸೌಲಭ್ಯಕ್ಕೆ ಅಡಚಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 12, 2023 | 2:41 PM

Share

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಇಪಿಎಫ್​ಒ (EPFO) ವೆಬ್​ಸೈಟ್​​​ ಸರ್ವರ್ ಡೌನ್ ಆಗಿದ್ದು, ಚಂದಾದಾರರು ಇ-ಪಾಸ್​​ಬುಕ್ ಸೇವೆ ಪಡೆಯುವುದಕ್ಕೆ ಗುರುವಾರ ಅಡಚಣೆಯಾಗಿದೆ. ಇ-ಪಾಸ್​ಬುಕ್​ಗೆ ಲಾಗಿನ್ ಆಗಲು ಪ್ರಯತ್ನಿಸಿದರೆ, ‘ತಾಂತ್ರಿಕ ನಿರ್ವಹಣೆಯ ಸಮಸ್ಯೆಗಳಿಂದಾಗಿ ಈ ಅಡಚಣೆ ಉಂಟಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ’ ಎಂಬ ಸಂದೇಶ ಕಾಣಿಸುತ್ತಿವೆ. ಇಪಿಎಫ್​ಒ ವೆಬ್​ಸೈಟ್​ನಲ್ಲೇ ಇರುವ ಮಾಹಿತಿ ಪ್ರಕಾರ, ಸಂಜೆ 5 ಗಂಟೆ ವೇಳೆ ಸಮಸ್ಯೆ ಬಗೆಹರಿಯಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಉಪಕ್ರಮದ ಅಡಿ ಆರಂಭಿಸಲಾಗಿರುವ ‘ಉಮಂಗ್’ ಆ್ಯಪ್​​ನಲ್ಲಿಯೂ ಇ-ಪಾಸ್​​ಬುಕ್ ದೊರೆಯುತ್ತಿಲ್ಲ ಎನ್ನಲಾಗಿದೆ. ನಿನ್ನೆಯಿಂದ ಎಪಿಎಫ್​ ಪೋರ್ಟಲ್​ ಲಾಗಿನ್ ಆಗಲು ಯತ್ನಿಸುತ್ತಿದ್ದು, ಸಾಧ್ಯವಾಗುತ್ತಿಲ್ಲ. ಪಾಸ್​ಬುಕ್ ಪೋರ್ಟಲ್ ಕೂಡ ಸಂಪೂರ್ಣವಾಗಿ ಡೌನ್ ಆಗಿದೆ ಎಂದು ಇಪಿಎಫ್​ಒ ಚಂದಾದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಇಪಿಎಫ್​ಒ ಪಾಸ್​ಬುಕ್ ಸೇವೆ ಕಳೆದ ಕೆಲವು ದಿನಗಳಿಂದ ಡೌನ್ ಆಗಿದೆ. ಯಾವಾಗ ಇದು ಸರಿಯಾಗಲಿದೆ?’ ಎಂದು ಚಂದಾದಾರರೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ

ಪ್ರತಿ ತಿಂಗಳು ಎಷ್ಟು ಪಿಎಫ್ ಮೊತ್ತ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಲು ಇಪಿಎಫ್​ಒ ಇ-ಪಾಸ್​​ಬುಕ್ ನೆರವಾಗುತ್ತದೆ. ಚಂದಾದಾರರೇ, ಅನನುಕೂಲತೆಗಾಗಿ ವಿಷಾದಿಸುತ್ತೇವೆ. ದಯವಿಟ್ಟು ಸ್ವಲ್ಪ ಸಮಯ ಕಾಯಿರಿ. ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಇಪಿಎಫ್​ಒ ಟ್ವೀಟ್ ಮಾಡಿದೆ.

ಇದನ್ನೂ ಓದಿ: EPFO New Subscribers: ಅಕ್ಟೋಬರ್​ನಲ್ಲಿ 12.94 ಲಕ್ಷ ಮಂದಿ ಇಪಿಎಫ್​ಒಗೆ ಸೇರ್ಪಡೆ; ಉದ್ಯೋಗ ಹೆಚ್ಚಳವೂ ಕಾರಣ

ಉದ್ಯೋಗಿಗಳ ಭವಿಷ್ಯ ನಿಧಿಗೆ ಸಂಬಂಧಿಸಿದ ಎಲ್ಲ ಆನ್​ಲೈನ್ ವ್ಯವಹಾರಗಳು ಇಪಿಎಫ್​ಒ ವೆಬ್​ಸೈಟ್ ಮೂಲಕ ನಡೆಯುತ್ತವೆ. ಬ್ಯಾಲೆನ್ಸ್ ಪರಿಶೀಲನೆ, ಪಿಎಫ್​ ಮೊತ್ತದ ವರ್ಗಾವಣೆ, ಕ್ಲೇಮ್ ಮತ್ತು ಕ್ಲೇಮ್ ಸಂಬಂಧಿತ ವಿವರಗಳು, ಇತ್ಯಾದಿ ಎಲ್ಲ ಚಟುವಟಿಕೆಗಳಿಗೂ ಇಪಿಎಫ್​ಒ ವೆಬ್​ಸೈಟೇ ಆಧಾರ. ಹೀಗಾಗಿ ವೆಬ್​ಸೈಟ್ ಸರ್ವರ್ ಡೌನ್ ಆಗಿರುವುದರಿಂದ ಲಕ್ಷಾಂತರ ಮಂದಿ ಬಳಕೆದಾರರಿಗೆ ತೊಂದರೆಯಾಗುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Thu, 12 January 23

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ