AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepfake: ‘ಕ್ವಾಂಟಮ್ ಎಐಗೆ ಬನ್ನಿ, ಮೊದಲ ದಿನವೇ 2.5 ಲಕ್ಷ ರೂ ಗಳಿಸಿ’- ಇನ್ಫೋಸಿಸ್ ನಾರಾಯಣಮೂರ್ತಿ ಓಪನ್ ಆಫರ್ ಕೊಟ್ಟಿದ್ದು ನಿಜವಾ?

NR Narayana Murthy Fake Video: ನನ್ನ ತಂಡ ಹಾಗೂ ಇಲಾನ್ ಮಸ್ಕ್ ತಂಡ ಸೇರಿ ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿದ್ದೇವೆ ಎಂದು ಎನ್ ಆರ್ ನಾರಾಯಣಮೂರ್ತಿ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ. ನಮ್ಮ ಕ್ವಾಂಟಮ್ ಎಐ ಸಂಸ್ಥೆಗೆ ಬಂದರೆ ಮೊದಲ ದಿನವೇ 3,000 ಡಾಲರ್​ವರೆಗೂ (2.5 ಲಕ್ಷ ರೂ) ಹಣ ಸಂಪಾದನೆ ಮಾಡಬಹುದು ಎಂದು ವಿಡಿಯೋದಲ್ಲಿ ಮೂರ್ತಿಗಳು ಆಫರ್ ಮಾಡಿದ್ದಾರೆ. ಆದರೆ, ಮೂರ್ತಿ ಅವರು ಮಾತನಾಡಿರುವ ವಿಡಿಯೋ ಡೀಪ್​ಫೇಕ್ ತಂತ್ರಜ್ಞಾನದಿಂದ ಮಾಡಲಾದ ನಕಲಿ ವಿಡಿಯೋವೆಂಬುದು ಸಾಬೀತಾಗಿದೆ.

Deepfake: ‘ಕ್ವಾಂಟಮ್ ಎಐಗೆ ಬನ್ನಿ, ಮೊದಲ ದಿನವೇ 2.5 ಲಕ್ಷ ರೂ ಗಳಿಸಿ’- ಇನ್ಫೋಸಿಸ್ ನಾರಾಯಣಮೂರ್ತಿ ಓಪನ್ ಆಫರ್ ಕೊಟ್ಟಿದ್ದು ನಿಜವಾ?
ಎನ್ ಆರ್ ನಾರಾಯಣಮೂರ್ತಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 13, 2023 | 1:47 PM

Share

ಬೆಂಗಳೂರು, ಡಿಸೆಂಬರ್ 13: ತಮ್ಮ ಹಾಗು ಇಲಾನ್ ಮಸ್ಕ್ ಅವರ ತಂಡಗಳು ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್​ವೇರ್ (Quantum computing software) ಅಭಿವೃದ್ಧಿಪಡಿಸಿವೆ. ಕ್ವಾಂಟಮ್ ಎಐನಲ್ಲಿ (Quantum AI) ನೀವು ಮೊದಲ ದಿನವೇ 3,000 ಡಾಲರ್​ವರೆಗೆ (ಸುಮಾರು 2.5 ಲಕ್ಷ ರೂ) ಹಣ ಸಂಪಾದನೆ ಮಾಡಬಹುದು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹೇಳಿರುವ ವಿವಿಧ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ, ಇವು ನಕಲಿ ವಿಡಿಯೋ (deepfake video) ಎಂದು ತಿಳಿದುಬಂದಿದೆ. ಸೆಲಬ್ರಿಟಿಗಳನ್ನು ಗುರಿ ಮಾಡಲಾಗಿದ್ದ ಡೀಪ್​ಫೇಕ್ ತಂತ್ರಜ್ಞಾನ ದುರ್ಬಳಕೆಯು ಈಗ ತಂತ್ರಜ್ಞಾನ ಮುಖಂಡರನ್ನೇ ಟಾರ್ಗೆಟ್ ಮಾಡುತ್ತಿದೆ. ನಾರಾಯಣಮೂರ್ತಿ ಇರುವ ಈ ಡೀಪ್​ಫೇಕ್ ವಿಡಿಯೋಗಳನ್ನು ಫೇಸ್​ಬುಕ್​ನಿಂದ ಅಳಿಸಲಾಗಿದೆ. ಆದರೆ, ಈ ಘಟನೆಯು ಡೀಪ್​ಫೇಕ್ ತಂತ್ರಜ್ಞಾನ ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಒಂದು ನಿದರ್ಶನವಾಗಿದೆ.

‘ಇಲಾನ್ ಮಸ್ಕ್ ಜೊತೆ ಸೇರಿ ನಮ್ಮ ಹೊಸ ಪ್ರಾಜೆಕ್ಟ್ ಅನ್ನು ಇವತ್ತು ನಾವು ಪ್ರಸ್ತುಪಡಿಸಲು ಬಯಸುತ್ತೇನೆ. ನನ್ನ ತಂಡ ಹಾಗೂ ಇಲಾನ್ ಮಸ್ಕ್ ಅವರ ತಂಡ ಸೇರಿ ಕ್ವಾಂಟಮ್ ಎಐ ಅಭಿವೃದ್ಧಿಪಡಿಸಲಾಗಿದೆ. ಇದು ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್​ವೇರ್ ಆಗಿದ್ದು ಶೇ. 94ರಷ್ಟು ಸಕ್ಸಸ್ ರೇಟ್ ಹೊಂದಿದೆ…’ ಎಂದು ನಕಲಿ ವಿಡಿಯೋವೊಂದರಲ್ಲಿ ನಾರಾಯಣಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ: Argentina Crisis: ಅರ್ಧದಷ್ಟು ಕರೆನ್ಸಿ ಮೌಲ್ಯ ಇಳಿಸಿದ ಅರ್ಜೆಂಟೀನಾ; ಈಗ ಒಂದು ಡಾಲರ್​ಗೆ 800 ಪೆಸೋ

ಹಾಗೆಯೇ, ಕ್ವಾಂಟಮ್ ಎಐಗೆ ಕೆಲಸಕ್ಕೆ ಬಂದು ಸೇರಬೇಕೆಂದು ಕರೆನೀಡಿರುವ ಇನ್ಫೋಸಿಸ್ ಮಾಜಿ ಛೇರ್ಮನ್ ಅವರು, ‘ಇಲ್ಲಿ ಮೊದಲ ದಿನವೇ 3,000 ರೂವರೆಗೆ ಸಂಪಾದನೆ ಮಾಡಬಹುದು,’ ಎಂದೂ ತಿಳಿಸಿದ್ದಾರೆ.

ಆದರೆ, ಈ ವಿವಿಧ ವಿಡಿಯೋಗಳು ಡೀಪ್​ಫೇಕ್ ತಂತ್ರಜ್ಞಾನದಿಂದ ಸೃಷ್ಟಿಸಿದ ನಕಲಿ ವಿಡಿಯೋಗಳಾಗಿವೆ. ಮನಿಕಂಟ್ರೋಲ್, ಬಿಸಿನೆಸ್ ಟುಡೇ ತಾಣಗಳೊಂದಿಗೆ ನಾರಾಯಣಮೂರ್ತಿ ನಡೆಸಿದ ಸಂದರ್ಶನದ ವಿಡಿಯೋಗಳನ್ನು ಇಟ್ಟುಕೊಂಡು ಡೀಪ್​ಫೇಕ್ ವಿಡಿಯೋ ರೂಪಿಸಲಾಗಿದೆ.

ಈ ವಿಡಿಯೋಗಳಲ್ಲಿ ಕೆಲವೊಂದೆಡೆ ನಾರಾಯಣಮೂರ್ತಿ ಅವರ ಧ್ವನಿಗೂ ಅವರ ಮೌಖಿಕ ಉಚ್ಚಾರಣೆಗೂ ತಾಳೆ ಆಗುತ್ತಿಲ್ಲದಿರುವುದು ಸ್ಪಷ್ಟವಾಗಿದೆ. ಹಾಗೆಯೇ, ಇಲಾನ್ ಮಸ್ಕ್ ಜೊತೆ ಸಹಭಾಗಿತ್ವದಲ್ಲಿ ಎಐ ಸಾಫ್ಟ್​ವೇರ್ ತಯಾರಿಸುತ್ತಿರುವುದಾಗಲೀ, ಕ್ವಾಂಟಮ್ ಎಐ ಬಗ್ಗೆಯಾಗಲೀ ಎನ್ ಆರ್ ನಾರಾಯಣಮೂರ್ತಿ ಅವರು ಹಿಂದೆಂದೂ ಹೇಳಿದ್ದಿಲ್ಲ. ಈ ಕಾರಣಕ್ಕೆ ಸಾಕಷ್ಟು ಜನರು ಫೇಸ್ಬುಕ್​ನಲ್ಲಿ ಹರಿದಾಡುತ್ತಿದ್ದ ಈ ಡೀಪ್​ಫೇಕ್ ವಿಡಿಯೋಗಳನ್ನು ಗುರುತಿಸಿ ಫ್ಲ್ಯಾಗ್ ಮಾಡಿದ್ದಾರೆ. ಅದಾದ ಬಳಿಕ ಅವುಗಳು ಅಲ್ಲಿಂದ ಡಿಲೀಟ್ ಆಗಿವೆ.

ಇದನ್ನೂ ಓದಿ: ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು; ಸಬ್ಸಿಡಿ ಪಡೆಯುವವರಿಗೂ ಹೊಣೆಗಾರಿಕೆ ಬೇಕು: ನಾರಾಯಣಮೂರ್ತಿ

ಡೀಪ್​ಫೇಕ್ ವಿಡಿಯೋ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ನಾರಾಯಣಮೂರ್ತಿ

ಇನ್ಫೋಸಿಸ್ ನಾರಾಯಣಮೂರ್ತಿ ಅವರು ಈ ಹಿಂದೆ ಡೀಪ್​ಫೇಕ್ ತಂತ್ರಜ್ಞಾನದಿಂದ ಎದುರಾಗುವ ಅಪಾಯದ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಿದೆ. ಆದರೆ ಅದರ ಬಗ್ಗೆ ಅಷ್ಟು ನಕಾರಾತ್ಮಕವಾಗಿ ತಾನು ಯೋಚಿಸುವುದಿಲ್ಲ ಎಂದೂ ಮೂರ್ತಿಗಳು ಹೇಳಿದ್ದರು.

ವಿಪರ್ಯಾಸ ಎಂದರೆ, ಡೀಪ್​ಫೇಕ್ ಟೆಕ್ನಾಲಜಿ ಬಗ್ಗೆ ತೀರಾ ನೆಗಟಿವ್ ಆಗುವುದು ಬೇಡ ಎಂದ ನಾರಾಯಣಮೂರ್ತಿಯವರನ್ನೇ ಡೀಪ್​ಫೇಕ್ ಟೆಕ್ನಾಲಿಜಿ ಮೂಲಕ ಟಾರ್ಗೆಟ್ ಮಾಡಲಾಗಿದೆ. ಅವರ ಆ ಹೇಳಿಕೆಗೆ ತಿರುಗೇಟು ನೀಡಲೆಂದೇ ದುಷ್ಕರ್ಮಿಗಳು ಈ ಡೀಪ್​ಫೇಕ್ ಮಾಡಿರಬಹುದಾದ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ