AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka Financial Crisis: ಶ್ರೀಲಂಕಾದಲ್ಲಿ ಈಗ ತೈಲಕ್ಕೂ ಪಡಿತರ ವ್ಯವಸ್ಥೆ; ದಿನದಿನಕ್ಕೂ ದ್ವೀಪರಾಷ್ಟ್ರದ ಸಮಸ್ಯೆ ಉಲ್ಬಣ

ಆರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಏಪ್ರಿಲ್ 15ನೇ ತಾರೀಕಿನ ಶುಕ್ರವಾರದಿಂದ ತೈಲ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Sri Lanka Financial Crisis: ಶ್ರೀಲಂಕಾದಲ್ಲಿ ಈಗ ತೈಲಕ್ಕೂ ಪಡಿತರ ವ್ಯವಸ್ಥೆ; ದಿನದಿನಕ್ಕೂ ದ್ವೀಪರಾಷ್ಟ್ರದ ಸಮಸ್ಯೆ ಉಲ್ಬಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 15, 2022 | 6:58 PM

Share

ಶ್ರೀಲಂಕಾದಲ್ಲಿ (Sri Lanka) ಶುಕ್ರವಾರದಿಂದ ಅನ್ವಯ ಆಗುವಂತೆ ಅಲ್ಲಿನ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಾರ್ಪೊರೇಷನ್ ದೇಶದಲ್ಲಿ ವಾಹನಗಳಿಗೆ ತೈಲ ಪಡಿತರ ವ್ಯವಸ್ಥೆ ಆರಂಭಿಸಿದೆ. ದೇಶದಲ್ಲಿ ಈಗ ಐತಿಹಾಸಿಕ ಆರ್ಥಿಕ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ನೀಡಿರುವ ಹೇಳಿಕೆ ಪ್ರಕಾರ, ಒಮ್ಮೆ ಪೆಟ್ರೋಲ್​ ಪಂಪ್​ಗೆ ಭೇಟಿ ನೀಡಿದರೆ ಮೋಟಾರ್​ ಸೈಕಲ್​ಗಳು ಮತ್ತು ಇತರ ದ್ವಿಚಕ್ರ ವಾಹನಗಳು 1000 ರೂಪಾಯಿ (ಶ್ರೀಲಂಕಾ ರೂಪಾಯಿ) ಮೌಲ್ಯದ ತನಕ ತೈಲ ಖರೀದಿ ಮಾಡಬಹುದು. ಅದೇ ರೀತಿ ತ್ರಿಚಕ್ರ ವಾಹನಗಳು 1500 ರೂಪಾಯಿ ಮೌಲ್ಯದ ತೈಲ, ಕಾರು, ಜೀಪ್ ಮತ್ತು ವ್ಯಾನ್​ಗಳು 5000 ರೂಪಾಯಿ ಮೌಲ್ಯದಷ್ಟನ್ನು ಭರ್ತಿ ಮಾಡಿಕೊಳ್ಳಬಹುದು. ಬಸ್​ಗಳು, ಲಾರಿಗಳು ಮತ್ತು ವಾಣಿಜ್ಯ ವಾಹನಗಳಿಗೆ ಈ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದೆ.

ಪೆಟ್ರೋಲ್- ಡೀಸೆಲ್ ಭರ್ತಿ ಮಾಡಿಸುವ ಸ್ಟೇಷನ್​ಗಳಲ್ಲಿ ಭಾರೀ ಉದ್ದದ ಸಾಲುಗಳಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಮನೆಗಳಲ್ಲಿ 12 ಗಂಟೆ ತನಕ ವಿದ್ಯುತ್ ಕಡಿತ ಅನುಭವಿಸುತ್ತಿದ್ದಾರೆ. ಶ್ರೀಲಂಕಾದ ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಅಗತ್ಯ ವಸ್ತುಗಳಿಗೆ ಭಾರೀ ಕೊರತೆ ಕಂಡುಬಂದಿದೆ. ಈ ತನಕ ಕಂಡರಿಯದ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ಸಿಲುಕಿಕೊಂಡಿದೆ. ಈ ದ್ವೀಪ ರಾಷ್ಟ್ರ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಮೊದಲ ಬಾರಿಗೆ ವಿದೇಶೀ ಸಾಲವನ್ನು ಪಾವತಿಸಲು ಸಾಧ್ಯವಾಗಿಲ್ಲ. ಗಾಲೆಯಲ್ಲಿ ಪ್ರತಿಭಟನೆಗಳಾಗುತ್ತಿವೆ. ರಾಜಧಾನಿಯಲ್ಲಿ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ದಿನದಿನಕ್ಕೂ ಯುವಜನರು ಭಾಗವಹಿಸುವುದು ಹೆಚ್ಚಾಗಿದೆ. ಇಂಥ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ನಿರ್ವಹಿಸಲು ಸಾಧ್ಯವಾಗದ ಕಾರಣಕ್ಕೆ ಅಧ್ಯಕ್ಷರಾದ ಗೊಟಬಯ ತಮ್ಮ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ,

ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿವೆ. ಇಡೀ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸಿಪಿಸಿ ಅಧ್ಯಕ್ಷ ಸುಮಿತ್ ವಿಜೆ ಸಿಂಘೆ ಕಳೆದ ವಾರ ಮಾತನಾಡಿ, ಶ್ರೀಲಂಕಾದ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿಯ ಹೆಚ್ಚಿನ ಬೆಲೆಯಿಂದಾಗಿ ನಿಗಮಕ್ಕೆ ಒಂದು ದಿನಕ್ಕೆ 80 ಕೋಟಿಯಿಂದ 100 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಸಿಪಿಸಿಗೆ ಒಂದು ಲೀಟರ್​ ಡೀಸೆಲ್​ಗೆ 110 ರೂಪಾಯಿ ಮತ್ತು ಪೆಟ್ರೋಲ್​ ಒಂದು ಲೀಟರ್​ಗೆ 52 ರೂಪಾಯಿ ನಷ್ಟ ಆಗುತ್ತಿದೆ ಎಂದು ವಿಜೆಸಿಂಘೆ ಹೇಳಿದ್ದಾರೆ, ಇನ್ನೂ ಮುಂದುವರಿದು, ಮತ್ತೊಂದು ತೈಲ ಸಾಲದ ಲೈನ್​ಗಾಗಿ ನಾವು ಭಾರತವನ್ನು 500 ಮಿಲಿಯನ್ ಡಾಲರ್​ಗಾಗಿ ಚರ್ಚಿಸಿದ್ದೇವೆ. ಶ್ರೀಲಂಕಾ ತೈಲ ಖರೀದಿಸಲಿ ಎಂಬ ಕಾರಣಕ್ಕರ ಕಳೆದ ತಿಂಗಳು ಭಾರತ 500 ಮಿಲಿಯನ್ ಯುಎಸ್​ಡಿ ನೀಡಿತ್ತು.

ಇದನ್ನೂ ಓದಿ: ನೀವು ಪ್ರತಿಭಟಿಸುತ್ತಿದ್ದಂತೆ ನಾವು ಡಾಲರ್‌ಗಳನ್ನು ಕಳೆದುಕೊಳ್ಳುತ್ತಿರುತ್ತೇವೆ: ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ ಶ್ರೀಲಂಕಾ ಪ್ರಧಾನಿ

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?