HSBC Bangalore: ಭಾರತದಲ್ಲೇ ಅತಿದೊಡ್ಡ ಎಚ್​ಎಸ್​ಬಿಸಿ ಶಾಖಾ ಕಛೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ

HSBC new branch in Whitefield, Bengaluru: ಜಾಗತಿಕ ಬ್ಯಾಂಕಿಂಗ್ ದಿಗ್ಗಜ ಎಚ್​ಎಸ್​ಬಿಸಿ ಬ್ಯಾಂಕ್ ಜನವರಿ 17ರಂದು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ನೂತನ ಶಾಖಾ ಕಚೇರಿಯನ್ನು ಆರಂಭಿಸಿದೆ. 8,300 ಚದರಡಿ ವಿಸ್ತೀರ್ಣದಲ್ಲಿರುವ ಈ ಕಚೇರಿ ಭಾರತದಲ್ಲಿ ಎಚ್​​ಎಸ್​ಬಿಸಿಯ ಅತಿದೊಡ್ಡ ಶಾಖಾ ಕಛೇರಿ ಎನ್ನಲಾಗಿದೆ. ವೈಟ್​ಫೀಲ್ಡ್ ಬೆಂಗಳೂರಿನ ಟೆಕ್ ಹಬ್ ಆಗಿದೆ, ಸಿರಿವಂತ ಬೆಂಗಳೂರು ದಕ್ಷಿಣ ಪ್ರದೇಶವೂ ಸಮೀಪದಲ್ಲಿದೆ.

HSBC Bangalore: ಭಾರತದಲ್ಲೇ ಅತಿದೊಡ್ಡ ಎಚ್​ಎಸ್​ಬಿಸಿ ಶಾಖಾ ಕಛೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ
ಎಚ್​ಎಸ್​ಬಿಸಿ ಬ್ಯಾಂಕ್
Follow us
|

Updated on: Jan 17, 2024 | 5:23 PM

ಬೆಂಗಳೂರು, ಜನವರಿ 17: ಇಂಗ್ಲೆಂಡ್ ಮೂಲದ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ದೈತ್ಯ ಎಚ್​ಎಸ್​ಬಿಸಿ ಬ್ಯಾಂಕ್ (HSBC India) ಬೆಂಗಳೂರಿನಲ್ಲಿ ಇಂದು ಬುಧವಾರ (ಜ. 17) ಹೊಸ ಶಾಖಾ ಕಚೇರಿಯೊಂದನ್ನು ತೆರೆದಿದೆ. ವೈಟ್​ಫೀಲ್ಡ್​ನಲ್ಲಿರುವ ಈ ಕಚೇರಿ 8,300 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ವರದಿ ಪ್ರಕಾರ ಎಚ್​ಎಸ್​ಬಿಸಿಯ ಭಾರತದ ಶಾಖಾ ಕಚೇರಿಗಳ ಪೈಕಿ ವೈಟ್​ಫೀಲ್ಡ್​ನಲ್ಲಿರುವ ಕಚೇರಿ ಅತಿದೊಡ್ಡದು ಎನ್ನಲಾಗಿದೆ. ವೈಟ್​ಫೀಲ್ಡ್​ನಲ್ಲಿ ಶಾಖಾ ಕಚೇರಿ ತೆರೆಯಲಾಗಿರುವ ಸಂಗತಿಯನ್ನು ಎಚ್​ಎಸ್​ಬಿಸಿ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವದ ಅತಿದೊಡ್ಡ ಹಾಗೂ ಹಳೆಯ ಬ್ಯಾಂಕುಗಳಲ್ಲಿ ಒಂದಾದ ಎಚ್​ಎಸ್​ಬಿಸಿ ಭಾರತಕ್ಕೆ ವ್ಯವಹಾರ ಆರಂಭಿಸಿ 170 ವರ್ಷವೇ ಆಗಿದೆ. 14 ನಗರಗಳಲ್ಲಿ 25ಕ್ಕೂ ಹೆಚ್ಚು ಶಾಖಾ ಕಚೇರಿಗಳನ್ನು ಹೊಂದಿದೆ. ಈಗ ವೈಟ್​ಫೀಲ್ಡ್​ನಲ್ಲಿ ಹೊಸ ಕಚೇರಿ ತೆರೆದಿರುವುದರಿಂದ ಭಾರತದಲ್ಲಿ ಬ್ಯಾಂಕ್​ನ ಉಪಸ್ಥಿತಿ ಇನ್ನೂ ಪ್ರಬಲಗೊಳ್ಳಲಿದೆ ಎಂಬುದು ಎಚ್​ಎಸ್​ಬಿಸಿ ಇಂಡಿಯಾದ ಅನಿಸಿಕೆ.

ಇದನ್ನೂ ಓದಿ: LIC Record: ಎಲ್​ಐಸಿ ಈಗ ಭಾರತದ ನಂ.1 ಸರ್ಕಾರಿ ಲಿಸ್ಟೆಡ್ ಕಂಪನಿ; ಷೇರುಸಂಪತ್ತಿನಲ್ಲಿ ಎಸ್​ಬಿಐಯನ್ನು ಹಿಂದಿಕ್ಕಿದ ವಿಮಾ ಸಂಸ್ಥೆ

ವೈಟ್​ಫೀಲ್ಡ್​ಗೆ ಸುಲಭ ಕನೆಕ್ಟಿವಿಟಿ ಹೊಂದಿರುವ ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ ತಲಾದಾಯ 9.37 ಲಕ್ಷ ರೂ ಇದೆ. ಅತಿಹೆಚ್ಚು ತಲಾದಾಯ ಇರುವ ಪ್ರದೇಶಗಳ ಪೈಕಿ ಬೆಂಗಳೂರು ದಕ್ಷಿಣ ಇದೆ. ಭಾರತದ ಸರಾಸರಿ ತಲಾದಾಯವಾದ 2.16 ಲಕ್ಷ ರೂಗಿಂತ ನಾಲ್ಕು ಪಟ್ಟು ಹೆಚ್ಚಿದೆ ಎಂದು ಎಚ್​ಎಸ್​ಬಿಸಿ ಸಂಸ್ಥೆ ವೈಟ್​ಫೀಲ್ಡ್​ನಲ್ಲಿ ಕಚೇರಿ ಆರಂಭಿಸಿದ್ದರಿಂದ ಆಗುವ ಅನುಕೂಲದ ಬಗ್ಗೆ ವಿವರಣೆ ನೀಡಿದೆ.

ಭಾರತದ ಹೆಚ್ಚಿನ ಐಟಿ ಕಂಪನಿಗಳು ವೈಟ್​ಫೀಲ್ಡ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೇಂದ್ರಿತವಾಗಿವೆ. ಇದು ಟೆಕ್ನಾಲಜಿ ಹಬ್ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಹೊಸ ಶಾಖಾ ಕಚೇರಿ ತೆರೆಯುವುದರಿಂದ ಟೆಕ್ ಸಮುದಾಯಗಳ ಹಣಕಾಸು ಬೇಡಿಕೆಗಳನ್ನು ಪೂರೈಸಲು ಸುಲಭವಾಗಬಹುದು ಎಂದು ಲಂಡನ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Economy: ಭಾರತ ಮುಂದುವರಿದ ದೇಶವಾಗಲು ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಹೂಡಿಕೆ ಹೆಚ್ಚಬೇಕು; ಬಜೆಟ್​ನಲ್ಲಿ ನಿರೀಕ್ಷೆ ಏನು?

ಭಾರತದಲ್ಲಿ ಮೂರನೇ ಅತಿಹೆಚ್ಚು ಟೆಕ್ ಯೂನಿಕಾರ್ನ್ ಕಂಪನಿಗಳಿವೆ. ವಿಶ್ವದ ಅತಿದೊಡ್ಡ 100 ಟೆಕ್ ಯೂನಿಕಾರ್ನ್​ಗಳ ಪೈಕಿ 50ಕ್ಕೆ ನಾವು ಬ್ಯಾಂಕಿಂಗ್ ಸರ್ವಿಸ್ ನೀಡುತ್ತಿದ್ದೇವೆ ಎಂದು ಅದು ಹೇಳಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ