AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HSBC Bangalore: ಭಾರತದಲ್ಲೇ ಅತಿದೊಡ್ಡ ಎಚ್​ಎಸ್​ಬಿಸಿ ಶಾಖಾ ಕಛೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ

HSBC new branch in Whitefield, Bengaluru: ಜಾಗತಿಕ ಬ್ಯಾಂಕಿಂಗ್ ದಿಗ್ಗಜ ಎಚ್​ಎಸ್​ಬಿಸಿ ಬ್ಯಾಂಕ್ ಜನವರಿ 17ರಂದು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ನೂತನ ಶಾಖಾ ಕಚೇರಿಯನ್ನು ಆರಂಭಿಸಿದೆ. 8,300 ಚದರಡಿ ವಿಸ್ತೀರ್ಣದಲ್ಲಿರುವ ಈ ಕಚೇರಿ ಭಾರತದಲ್ಲಿ ಎಚ್​​ಎಸ್​ಬಿಸಿಯ ಅತಿದೊಡ್ಡ ಶಾಖಾ ಕಛೇರಿ ಎನ್ನಲಾಗಿದೆ. ವೈಟ್​ಫೀಲ್ಡ್ ಬೆಂಗಳೂರಿನ ಟೆಕ್ ಹಬ್ ಆಗಿದೆ, ಸಿರಿವಂತ ಬೆಂಗಳೂರು ದಕ್ಷಿಣ ಪ್ರದೇಶವೂ ಸಮೀಪದಲ್ಲಿದೆ.

HSBC Bangalore: ಭಾರತದಲ್ಲೇ ಅತಿದೊಡ್ಡ ಎಚ್​ಎಸ್​ಬಿಸಿ ಶಾಖಾ ಕಛೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ
ಎಚ್​ಎಸ್​ಬಿಸಿ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 17, 2024 | 5:23 PM

Share

ಬೆಂಗಳೂರು, ಜನವರಿ 17: ಇಂಗ್ಲೆಂಡ್ ಮೂಲದ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ದೈತ್ಯ ಎಚ್​ಎಸ್​ಬಿಸಿ ಬ್ಯಾಂಕ್ (HSBC India) ಬೆಂಗಳೂರಿನಲ್ಲಿ ಇಂದು ಬುಧವಾರ (ಜ. 17) ಹೊಸ ಶಾಖಾ ಕಚೇರಿಯೊಂದನ್ನು ತೆರೆದಿದೆ. ವೈಟ್​ಫೀಲ್ಡ್​ನಲ್ಲಿರುವ ಈ ಕಚೇರಿ 8,300 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ವರದಿ ಪ್ರಕಾರ ಎಚ್​ಎಸ್​ಬಿಸಿಯ ಭಾರತದ ಶಾಖಾ ಕಚೇರಿಗಳ ಪೈಕಿ ವೈಟ್​ಫೀಲ್ಡ್​ನಲ್ಲಿರುವ ಕಚೇರಿ ಅತಿದೊಡ್ಡದು ಎನ್ನಲಾಗಿದೆ. ವೈಟ್​ಫೀಲ್ಡ್​ನಲ್ಲಿ ಶಾಖಾ ಕಚೇರಿ ತೆರೆಯಲಾಗಿರುವ ಸಂಗತಿಯನ್ನು ಎಚ್​ಎಸ್​ಬಿಸಿ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವದ ಅತಿದೊಡ್ಡ ಹಾಗೂ ಹಳೆಯ ಬ್ಯಾಂಕುಗಳಲ್ಲಿ ಒಂದಾದ ಎಚ್​ಎಸ್​ಬಿಸಿ ಭಾರತಕ್ಕೆ ವ್ಯವಹಾರ ಆರಂಭಿಸಿ 170 ವರ್ಷವೇ ಆಗಿದೆ. 14 ನಗರಗಳಲ್ಲಿ 25ಕ್ಕೂ ಹೆಚ್ಚು ಶಾಖಾ ಕಚೇರಿಗಳನ್ನು ಹೊಂದಿದೆ. ಈಗ ವೈಟ್​ಫೀಲ್ಡ್​ನಲ್ಲಿ ಹೊಸ ಕಚೇರಿ ತೆರೆದಿರುವುದರಿಂದ ಭಾರತದಲ್ಲಿ ಬ್ಯಾಂಕ್​ನ ಉಪಸ್ಥಿತಿ ಇನ್ನೂ ಪ್ರಬಲಗೊಳ್ಳಲಿದೆ ಎಂಬುದು ಎಚ್​ಎಸ್​ಬಿಸಿ ಇಂಡಿಯಾದ ಅನಿಸಿಕೆ.

ಇದನ್ನೂ ಓದಿ: LIC Record: ಎಲ್​ಐಸಿ ಈಗ ಭಾರತದ ನಂ.1 ಸರ್ಕಾರಿ ಲಿಸ್ಟೆಡ್ ಕಂಪನಿ; ಷೇರುಸಂಪತ್ತಿನಲ್ಲಿ ಎಸ್​ಬಿಐಯನ್ನು ಹಿಂದಿಕ್ಕಿದ ವಿಮಾ ಸಂಸ್ಥೆ

ವೈಟ್​ಫೀಲ್ಡ್​ಗೆ ಸುಲಭ ಕನೆಕ್ಟಿವಿಟಿ ಹೊಂದಿರುವ ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ ತಲಾದಾಯ 9.37 ಲಕ್ಷ ರೂ ಇದೆ. ಅತಿಹೆಚ್ಚು ತಲಾದಾಯ ಇರುವ ಪ್ರದೇಶಗಳ ಪೈಕಿ ಬೆಂಗಳೂರು ದಕ್ಷಿಣ ಇದೆ. ಭಾರತದ ಸರಾಸರಿ ತಲಾದಾಯವಾದ 2.16 ಲಕ್ಷ ರೂಗಿಂತ ನಾಲ್ಕು ಪಟ್ಟು ಹೆಚ್ಚಿದೆ ಎಂದು ಎಚ್​ಎಸ್​ಬಿಸಿ ಸಂಸ್ಥೆ ವೈಟ್​ಫೀಲ್ಡ್​ನಲ್ಲಿ ಕಚೇರಿ ಆರಂಭಿಸಿದ್ದರಿಂದ ಆಗುವ ಅನುಕೂಲದ ಬಗ್ಗೆ ವಿವರಣೆ ನೀಡಿದೆ.

ಭಾರತದ ಹೆಚ್ಚಿನ ಐಟಿ ಕಂಪನಿಗಳು ವೈಟ್​ಫೀಲ್ಡ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೇಂದ್ರಿತವಾಗಿವೆ. ಇದು ಟೆಕ್ನಾಲಜಿ ಹಬ್ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಹೊಸ ಶಾಖಾ ಕಚೇರಿ ತೆರೆಯುವುದರಿಂದ ಟೆಕ್ ಸಮುದಾಯಗಳ ಹಣಕಾಸು ಬೇಡಿಕೆಗಳನ್ನು ಪೂರೈಸಲು ಸುಲಭವಾಗಬಹುದು ಎಂದು ಲಂಡನ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Economy: ಭಾರತ ಮುಂದುವರಿದ ದೇಶವಾಗಲು ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಹೂಡಿಕೆ ಹೆಚ್ಚಬೇಕು; ಬಜೆಟ್​ನಲ್ಲಿ ನಿರೀಕ್ಷೆ ಏನು?

ಭಾರತದಲ್ಲಿ ಮೂರನೇ ಅತಿಹೆಚ್ಚು ಟೆಕ್ ಯೂನಿಕಾರ್ನ್ ಕಂಪನಿಗಳಿವೆ. ವಿಶ್ವದ ಅತಿದೊಡ್ಡ 100 ಟೆಕ್ ಯೂನಿಕಾರ್ನ್​ಗಳ ಪೈಕಿ 50ಕ್ಕೆ ನಾವು ಬ್ಯಾಂಕಿಂಗ್ ಸರ್ವಿಸ್ ನೀಡುತ್ತಿದ್ದೇವೆ ಎಂದು ಅದು ಹೇಳಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ