AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Record: ಎಲ್​ಐಸಿ ಈಗ ಭಾರತದ ನಂ.1 ಸರ್ಕಾರಿ ಲಿಸ್ಟೆಡ್ ಕಂಪನಿ; ಷೇರುಸಂಪತ್ತಿನಲ್ಲಿ ಎಸ್​ಬಿಐಯನ್ನು ಹಿಂದಿಕ್ಕಿದ ವಿಮಾ ಸಂಸ್ಥೆ

Public Sector Companies with largest Market Cap: ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪೈಕಿ ಅತಿಹೆಚ್ಚು ಷೇರುಸಂಪತ್ತು ಎಲ್​ಐಸಿಯದ್ದಾಗಿದೆ. ಈ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಎಲ್​ಐಸಿ ಹಿಂದಿಕ್ಕಿದೆ. ಎಲ್​ಐಸಿಯ ಷೇರುಸಂಪತ್ತು 5.8 ಲಕ್ಷ ಕೋಟಿಯಾದರೆ, ಎಸ್​ಬಿಐನ ಷೇರುಸಂಪತ್ತು 5.62 ಲಕ್ಷ ಕೋಟಿ ರೂ ಆಗಿದೆ.

LIC Record: ಎಲ್​ಐಸಿ ಈಗ ಭಾರತದ ನಂ.1 ಸರ್ಕಾರಿ ಲಿಸ್ಟೆಡ್ ಕಂಪನಿ; ಷೇರುಸಂಪತ್ತಿನಲ್ಲಿ ಎಸ್​ಬಿಐಯನ್ನು ಹಿಂದಿಕ್ಕಿದ ವಿಮಾ ಸಂಸ್ಥೆ
ಎಲ್​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 17, 2024 | 2:39 PM

Share

ನವದೆಹಲಿ, ಜನವರಿ 17: ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪೈಕಿ ಎಲ್​ಐಸಿ ನಂಬರ್ ಒನ್ ಎನಿಸಿದೆ. ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಅಥವಾ ಮಾರ್ಕೆಟ್ ಕ್ಯಾಪಿಟಲ್ (market capital) ಇರುವ ಸರ್ಕಾರಿ ಸಂಸ್ಥೆಗಳ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಎಲ್​ಐಸಿ ಹಿಂದಿಕ್ಕಿ ನಂ. 1 ಎನಿಸಿದೆ. ಇಂದು ಬುಧವಾರ ಬೆಳಗಿನ ವಹಿವಾಟಿನಲ್ಲಿ ಎಲ್​ಐಸಿ ಷೇರುಮೌಲ್ಯ 919.45 ರೂಗೆ ಏರಿತು. ಇದರ ಪರಿಣಾಮವಾಗಿ ಅದರ ಮಾರ್ಕೆಟ್ ಕ್ಯಾಪ್ ಮೊತ್ತ 5.8 ಲಕ್ಷ ಕೋಟಿ ರೂ ಆಯಿತು. ಅದೇ ವೇಳೆ ಎಸ್​ಬಿಐನ ಷೇರುಬೆಲೆ ಇಂದು ಶೇ. 1ರಷ್ಟು ಕಡಿಮೆ ಆದ ಪರಿಣಾಮ ಅದರ ಷೇರು ಸಂಪತ್ತು 5.62 ಲಕ್ಷ ಕೋಟಿ ರೂಗೆ ಇಳಿದಿತ್ತು. ಹೀಗಾಗಿ, ಎಲ್​ಐಸಿ ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ಸರ್ಕಾರಿ ಸಂಸ್ಥೆ ಎಂಬ ದಾಖಲೆ ಬರೆಯಿತು.

ಜ. 17ರ ಮಧ್ಯಾಹ್ನದ ವೇಳೆಗೆ ಎಲ್​ಐಸಿ ಷೇರು ಬೆಲೆ 919 ರೂನಿಂದ 896 ರುಪಾಯಿಗೆ ಇಳಿದಿದೆ. ಅದರ ಷೇರುಸಂಪತ್ತು 5.67 ಲಕ್ಷ ಕೋಟಿ ರೂಗೆ ಇಳಿಯಿತು. ಆದರೆ ಎಸ್​ಬಿಐನ 5.61 ಲಕ್ಷ ಕೋಟಿ ರೂ ಷೇರುಸಂಪತ್ತಿಗಿಂತ ಎಲ್​ಐಸಿಯದ್ದು ಹೆಚ್ಚೇ ಇದೆ.

ಇದನ್ನೂ ಓದಿ: Economy: ಭಾರತ ಮುಂದುವರಿದ ದೇಶವಾಗಲು ಖಾಸಗಿ ವಲಯದಿಂದ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಹೂಡಿಕೆ ಹೆಚ್ಚಬೇಕು; ಬಜೆಟ್​ನಲ್ಲಿ ನಿರೀಕ್ಷೆ ಏನು?

ಮೊದಲ ಬಾರಿಗೆ ಐಪಿಒ ಬೆಲೆ ದಾಟಿದ ಎಲ್​ಐಸಿ ಷೇರು

ಭಾರತದಲ್ಲಿ ಅತಿ ನಿರೀಕ್ಷೆ ಮೂಡಿಸಿ ನಿರಾಸೆ ತಂದಿತ್ತ ಷೇರುಗಳಲ್ಲಿ ಎಲ್​ಐಸಿಯದ್ದೂ ಒಂದು. 2022ರ ಮೇ 4ರಂದು ಎಲ್​ಐಸಿ ಐಪಿಒ ಆರಂಭವಾಗಿತ್ತು. 902 ರೂನಂತೆ ಷೇರುಗಳು ಬಿಕರಿಯಾದವು. ರೀಟೇಲ್ ಐಪಿಒ ದರ 904 ರೂ ಆಗಿತ್ತು. ಅದಾದ ಬಳಿಕ ಎಲ್​ಐಸಿ ಷೇರು ಮೌಲ್ಯ ಸತತವಾಗಿ ಕಡಿಮೆ ಆಗುತ್ತಾ ಹೋಗಿದೆ. ಒಂದು ಹಂತದಲ್ಲಿ ಅದರ ಷೇರುಬೆಲೆ 534 ರುಪಾಯಿಗೆ ಕುಸಿದುಹೋಗಿತ್ತು.

2023ರ ಮಾರ್ಚ್ ತಿಂಗಳ ಬಳಿಕ ಎಲ್​ಐಸಿಗೆ ಶುಕ್ರದೆಸೆ ಬಂದಿದೆ. ಅದರಲ್ಲೂ ನವೆಂಬರ್ ಮೂರನೇ ವಾರದಿಂದ ಎಲ್​ಐಸಿ ಷೇರುಬೆಲೆ ನಾಗಾಲೋಟ ನಡೆಸಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆದ ಬಳಿಕ ಮೊದಲ ಬಾರಿಗೆ 904 ರುಗಳ ಐಪಿಒ ಬೆಲೆಯನ್ನು ಇಂದು (ಜ. 17) ಮೊದಲ ಬಾರಿಗೆ ದಾಟಿತು.

ಇದನ್ನೂ ಓದಿ: MS Dhoni: ಕ್ರಿಕೆಟಿಗ ಎಂಎಸ್ ಧೋನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಮಾಜಿ ಬಿಸಿನೆಸ್ ಪಾರ್ಟ್ನರ್ಸ್; ಏನಿದು ಕೇಸ್?

ಎಲ್​ಐಸಿ ಲಾಭದಲ್ಲಿ ಹೆಚ್ಚಳ

ದೇಶದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆಯಾದ ಎಲ್​ಐಸಿಯ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ. 2023-24ರ ಹಣಕಾಸು ವರ್ಷದ ಮೊದಲ ಆರು ತಿಂಗಳು (ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ) 17,469 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಹೊಸ ವೈಯಕ್ತಿಕ ಪಾಲಿಸಿ ಪ್ರೀಮಿಯಮ್ ಮೊತ್ತವೇ ಅವಧಿಯಲ್ಲಿ ಶೇ. 2.65ರಷ್ಟು ಹೆಚ್ಚಾಗಿ 25,184 ಕೋಟಿ ರೂ ಆಗಿದೆ. ಹೊಸ ವೈಯಕ್ತಿಕ ಪಾಲಿಸಿ ಪ್ರೀಮಿಯಮ್ ಎಂದರೆ ಪಾಲಿಸಿ ಪಡೆದ ವ್ಯಕ್ತಿಗಳು ಪಾವತಿಸುವ ಮೊದಲ ಪ್ರೀಮಿಯಮ್ ಆಗಿದೆ. ಅಂದರೆ, ಹೊಸ ಪಾಲಿಸಿಗಳು ಸೇಲ್ ಆಗಿರುವುದರ ಸೂಚಕ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ