AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Lawsuit: ಟ್ರೇಡ್​ಮಾರ್ಕ್ ದುರುಪಯೋಗ: ಗೂಗಲ್ ಎಂಟರ್ಪ್ರೈಸಸ್​ಗೆ 10 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್

Delhi High Court Order: ಗೂಗಲ್ ಸಂಸ್ಥೆಯ ಹೆಸರು ಮತ್ತು ಟ್ರೇಡ್​ಮಾರ್ಕ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಗೂಗಲ್ ಎಂಟರ್​ಪ್ರೈಸಸ್ ಮತ್ತಿತರ ಕೆಲ ಸಂಸ್ಥೆಗಳ ಮೇಲೆ ದೆಹಲಿ ಹೈಕೋರ್ಟ್ 10 ಲಕ್ಷ ರೂ ದಂಡ ವಿಧಿಸಿದೆ.

Google Lawsuit: ಟ್ರೇಡ್​ಮಾರ್ಕ್ ದುರುಪಯೋಗ: ಗೂಗಲ್ ಎಂಟರ್ಪ್ರೈಸಸ್​ಗೆ 10 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್
ಗೂಗಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 05, 2023 | 5:26 PM

Share

ನವದೆಹಲಿ: ವಿಶ್ವದ ಟೆಕ್ನಾಲಜಿ ದೈತ್ಯ ಕಂಪನಿ ಗೂಗಲ್​ನ (Google LLC) ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಗೂಗಲ್ ಎಂಟರ್ಪ್ರೈಸಸ್ ಪ್ರೈ ಲಿ ಎಂಬ ಕನ್ಸಲ್ಟೆನ್ಸಿ ಸಂಸ್ಥೆ ಮತ್ತದರ ಅಂಗ ಸಂಸ್ಥೆಗಳ ಮೇಲೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ. ಗೂಗಲ್ ಎಂಟರ್​ಪ್ರೈಸಸ್ ಸಂಸ್ಥೆಗೂ ಗೂಗಲ್ ಎಲ್​ಎಲ್​ಸಿಗೂ ಯಾವುದೇ ಸಂಬಂಧ ಇಲ್ಲ. ತಾನು ಗೂಗಲ್​ನ ಭಾಗ ಎಂದು ಬಿಂಬಿಸಿಕೊಂಡು, ಅದರ ಟ್ರೇಡ್​ಮಾರ್ಕನ್ನು ಬಳಸಿಕೊಂಡು ಗೂಗಲ್ ಎಂಟರ್ಪ್ರೈಸಸ್ ವಂಚನೆ ಎಸಗುತ್ತಿತ್ತು ಎಂಬುದು ಆರೋಪ. ಈ ಬಗ್ಗೆ ಗೂಗಲ್ ಎಲ್​ಎಲ್​ಸಿ ಕಾನೂನು ಮೊಕದ್ದಮೆ ಹಾಕಿತ್ತು. ದೆಹಲಿ ಹೈಕೊರ್ಟ್​ನಲ್ಲಿ ವಿಚಾರಣೆ ನಡೆದು, ಗೂಗಲ್ ಎಂಟರ್​ಪ್ರೈಸಸ್ ಮೇಲಿನ ಆರೋಪ ನಿಜವೆಂದು ಸಾಬೀತಾಯಿತು. ಟ್ರೇಡ್​ಮಾರ್ಕ್ ದುರುಪಯೋಗದಿಂದ ಗೂಗಲ್ ಎಲ್​ಎಲ್​ಸಿಗೆ ಹಾನಿ ಆಗಿರುವ ಹಿನ್ನೆಲೆಯಲ್ಲಿ 10 ಲಕ್ಷ ರೂ ಪರಿಹಾರ ಕೊಡಬೇಕು ಎಂದು ದೆಹಲಿ ಹೈಕೋರ್ಟ್ ಗೂಗಲ್ ಎಂಟರ್​ಪ್ರೈಸಸ್ ಹಾಗೂ ಅದರ ಅಂಗಸಂಸ್ಥೆಗಳಿಗೆ ಆದೇಶ ಹೊರಡಿಸಿತು.

ಹಾಗೆಯೇ, ಗೂಗಲ್ ಡೊಮೈನ್ ಹೆಸರಲ್ಲಿ ರಚಿಸಲಾಗಿರುವ ಗೂಗಲ್ ಎಂಟರ್ಪ್ರೈಸಸ್ ವೆಬ್​ಸೈಟ್ ಪ್ರಕಟವಾಗದಂತೆ ತಡೆಹಿಡಿಯಬೇಕೆಂದು ಎಲ್ಲಾ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್​ಗಳು (ಐಎಸ್​ಪಿ) ಮತ್ತು ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ಹೊರಡಿಸುವಂತೆ ದೂರಸಂಪರ್ಕ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ.

ಗೂಗಲ್ ಹೆಸರಲ್ಲಿ ಹಣ ವಂಚನೆ ಹೇಗೆ?

ದೆಹಲಿ ಹೈಕೋರ್ಟ್​ನಲ್ಲಿ ಗೂಗಲ್ ಎಲ್​ಎಲ್​ಸಿ ಹಾಕಲಾಗಿದ್ದ ಕಾನೂನು ಮೊಕದ್ದಮೆಯಲ್ಲಿ, ಆರೋಪಿ ಸಂಸ್ಥೆಗಳು ಯಾವ ರೀತಿ ವಂಚನೆ ಎಸಗುತ್ತಿದ್ದವು ಎಂಬ ಕುತೂಹಲಕಾರಿ ಮಾಹಿತಿ ಇದೆ. ಕೋರ್ಟ್ ಕೂಡ ಈ ವಿಚಾರವನ್ನು ಎತ್ತಿ ತೋರಿಸಿದೆ.

ಇದನ್ನೂ ಓದಿToll Rates: ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ತೆರಿಗೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾ? ಇಲ್ಲಿದೆ ಮಾಹಿತಿ

ಮೊದಲ ಆರೋಪಿ ಎನಿಸಿರುವ ಸಂಸ್ಥೆಯಲ್ಲಿ (ಗೂಗಲ್ ಎಂಟರ್​ಪ್ರೈಸಸ್) ಹಣ ಠೇವಣಿ ಇರಿಸಿದರೆ ಅರ್ಜಿದಾರರಿಗೆ (ಗೂಗಲ್ ಎಲ್​ಎಲ್​ಸಿ) ಜೋಡಿತವಾದ ಸಂಸ್ಥೆಯಲ್ಲಿ ಉದ್ಯೋಗ ಹೊಂದಬಹುದು ಎಂದು ಸಾರ್ವಜನಿಕರನ್ನು ನಂಬಿಸುವುದು ಆರೋಪಿ ಸಂಸ್ಥೆಗಳ ಕಾರ್ಯತಂತ್ರವಾಗಿತ್ತು ಎಂದು ದೆಹಲಿ ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ನ್ಯಾ| ಸಂಜೀವ್ ನರುಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ತಿಂಗಳು ಈ ತೀರ್ಪು ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿ ಗೂಗಲ್ ಎಂಟರ್​ಪ್ರೈಸಸ್ ಪ್ರೈ ಲಿ ಸಂಸ್ಥೆ ಆರೋಪಿ ನಂಬರ್ ಒನ್ ಆಗಿತ್ತು. ಇ ಕುಟಿರ್ ಟೆಕ್ನಾಲಜಿ ಮತ್ತು ಎಕ್ಸ್​ಟೆನ್ಷನ್ ಮ್ಯಾನೇಜ್ಮೆಂಟ್ ಲಿ ಮತ್ತರದ ನಿರ್ದೇಶಕ ಚಂದರ್ ಶೇಖರ್ ಅವರು ಎರಡು ಮತ್ತು ಮೂರನೇ ಆರೋಪಿಗಳೆನಿಸಿದ್ದರು. 2011ರಲ್ಲಿ ಡೆಸ್ಕ್ ಜಾಬ್​ಗಳಿಗೆ ಗೂಗಲ್ ಇಂಡಿಯಾ ಮತ್ತು ಈ ಆರೋಪಿ ಸಂಸ್ಥೆಗಳ ಮಧ್ಯೆ ಸಹಕಾರ ಒಪ್ಪಂದ ಆಗಿದೆ ಎನ್ನುವಂತಹ ಸುದ್ದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಗೂಗಲ್ ಎಲ್​ಎಲ್​ಸಿ ಕೋರ್ಟ್ ಮೆಟ್ಟಿಲೇರಿತ್ತು. ಇ ಕುಟಿರ್ ಟೆಕ್ನಾಲಜಿ ಈಗಲೂ ಕೂಡ ತಾನು ಗೂಗಲ್ ಮತ್ತು ಟಾಟಾ ಕಮ್ಯೂನಿಕೇಶನ್ಸ್ ಸಂಸ್ಥೆಗಳಿಗೆ ಚಾನಲ್ ಪಾರ್ಟ್ನರ್ ಎಂದು ತನ್ನ ಟ್ವಿಟ್ಟರ್ ಪ್ರೊಫೈಲ್​ನಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿSBI WECARE: ಎಸ್​ಬಿಐ ವೀ ಕೇರ್ ಸ್ಕೀಮ್; ಕೊನೆಯ ದಿನಾಂಕ ಮತ್ತೆ 3 ತಿಂಗಳು ವಿಸ್ತರಣೆ; ಏನಿದು ಯೋಜನೆ?

ಮೂರು ಆರೋಪಿ ಸಂಸ್ಥೆಗಳು ಗೂಗಲ್​ನ ಟ್ರೇಡ್​ಮಾರ್ಕ್​ಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ನಂಬಿಸುವ ಕೆಲಸ ಮಾಡಿದ್ದವು. ಗೂಗಲ್ ಎಂಟರ್ಪ್ರೈಸಸ್​ನ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಗೂಗಲ್ ಜೊತೆ ಜೋಡಿತವಾದ ಸಂಸ್ಥೆಯಲ್ಲಿ ಉದ್ಯೋಗ ಸಿಗುತ್ತದೆ ಎಂದು ಭರವಸೆ ನೀಡಿದ್ದವು. ಇದನ್ನು ನಂಬಿ ಹಲವು ಸಾರ್ವಜನಿಕರು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಗೂಗಲ್ ಎಂಟರ್ಪ್ರೈಸಸ್ ಮತ್ತಿತರ ಆರೋಪಿ ಸಂಸ್ಥೆಗಳು ಈ ಆರೋಪ ಆಧಾರರಹಿತ ಎಂದು ತಳ್ಳಿಹಾಕಿದರೂ, ಈ ಸಂಸ್ಥೆಗಳ ವೆಬ್​ಸೈಟ್​ಗಳಲ್ಲಿ ಗೂಗಲ್​ನ ಟ್ರೇಡ್​ಮಾರ್ಕ್​ಗಳನ್ನು ಬಳಸಿರುವುದು ನಿಚ್ಚಲವಾಗಿತ್ತು. ಇದೇ ಪ್ರಮುಖ ಸಾಕ್ಷ್ಯಾಧಾರವಾಗಿದ್ದರಿಂದ ದೆಹಲಿ ಹೈಕೋರ್ಟ್ ಈ ಆರೋಪಿ ಸಂಸ್ಥೆಗಳಿಗೆ 10 ಲಕ್ಷ ರೂ ದಂಡ ವಿಧಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್