AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರತ್ನದಿಂದ ಮಹಾರತ್ನ ಸ್ಥಾನಮಾನ ಪಡೆಯಲಿರುವ ಬೆಂಗಳೂರಿನ ಎಚ್​ಎಎಲ್

HAL may become Maharatna PSU: ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆ ಈ ಡಿಸೆಂಬರ್​ನೊಳಗೆ ಮಹಾರತ್ನ ಪಿಎಸ್​ಯು ಸ್ಥಾನಮಾನ ಪಡೆಯಬಹುದು ಎಂದು ಸಿಎನ್​ಬಿಎಸ್ ಟಿವಿ18 ವಾಹಿನಿ ವರದಿಯಲ್ಲಿ ಹೇಳಲಾಗಿದೆ. ಸದ್ಯ ಎಚ್​ಎಎಲ್ ಸಂಸ್ಥೆ ದೇಶದ 25 ನವರತ್ನ ಕಂಪನಿಗಳ ಪೈಕಿ ಒಂದಾಗಿದೆ. ಮಹಾರತ್ನ ಸ್ಥಾನ ದೊರೆತರೆ ಎಚ್​ಎಲ್​​ಗೆ ಆಡಳಿತಾತ್ಮಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಸ್ವಾಯತ್ತತೆ ಪ್ರಾಪ್ತವಾಗಲಿದೆ.

ನವರತ್ನದಿಂದ ಮಹಾರತ್ನ ಸ್ಥಾನಮಾನ ಪಡೆಯಲಿರುವ ಬೆಂಗಳೂರಿನ ಎಚ್​ಎಎಲ್
ಎಚ್​ಎಎಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 13, 2024 | 2:40 PM

Share

ಬೆಂಗಳೂರು, ಸೆಪ್ಟೆಂಬರ್ 13: ಭಾರತದ ಸರ್ಕಾರಿ ಸಂಸ್ಥೆಗಳ ಪೈಕಿ ನವರತ್ನಗಳಲ್ಲಿ ಒಂದಾಗಿರುವ ಎಚ್​ಎಎಲ್​ಗೆ ಈ ವರ್ಷಾಂತ್ಯದೊಳಗೆ ಮಹಾರತ್ನ ಸ್ಥಾನಮಾನ ಸಿಗಲಿದೆ. ಇದರೊಂದಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ ಹೆಚ್ಚು ಸ್ವಾಯತ್ತತೆ ಗಳಿಸಲಿದೆ. ಸರ್ಕಾರದ ಅನುಮೋದನೆ ಇಲ್ಲದೇ ಹೆಚ್ಚು ಮೊತ್ತದ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ಸದ್ಯ ಎಚ್​ಎಎಲ್ ಸಂಸ್ಥೆ ದೇಶದ 25 ನವರತ್ನ ಪಿಎಸ್​ಯುಗಳಲ್ಲಿ ಒಂದಾಗಿದೆ. ಮಹಾರತ್ನ ಸ್ಥಾನಮಾನ ಹೊಂದಿರುವ 13 ಕಂಪನಿಗಳ ಪಟ್ಟಿಗೆ ಎಚ್​ಎಎಲ್ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಮಹಾರತ್ನ ಸ್ಥಾನಮಾನ ಪಡೆದರೆ ಎಚ್​ಎಎಲ್ ಆಡಳಿತ ಮಂಡಳಿ ಹೆಚ್ಚು ಸ್ವಾಯತ್ತ ಅಧಿಕಾರ ಹೊಂದಿರುತ್ತದೆ. ಸರ್ಕಾರದ ಅನುಮೋದನೆ ಇಲ್ಲದೇ 5,000 ಕೋಟಿ ರೂವರೆಗಿನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ನವರತ್ನ ವಿಭಾಗದ ಸಂಸ್ಥೆಗಳು ಈ ರೀತಿ 1,000 ಕೋಟಿ ರೂವರೆಗೆ ಮಾತ್ರ ಹೂಡಿಕೆಗೆ ಅವಕಾಶ ಇರುತ್ತದೆ.

ಮಹಾರತ್ನ, ನವರತ್ನ, ಮಿನಿರತ್ನ ಸಂಸ್ಥೆಗಳು

ದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮೂರು ಪ್ರಮುಖ ಶ್ರೇಣಿಗಳಾಗಿ ವರ್ಗೀಕರಿಸಲಾಗಿದೆ. ಮಹಾರತ್ನ, ನವರತ್ನ ಮತ್ತು ಮಿನಿರತ್ನ ಸ್ಥಾನಮಾನ ನೀಡಲಾಗುತ್ತದೆ. ಮಿನಿರತ್ನ ಪಟ್ಟಿಯನ್ನು ಎರಡು ಭಾಗವಾಗಿ ಮಾಡಲಾಗಿದೆ. ಮೊದಲ ಮಿನಿರತ್ನ ಪಟ್ಟಿಯಲ್ಲಿ 51 ಕಂಪನಿಗಳಿವೆ. ಬೆಮೆಲ್, ಬಿಎಸ್​ಎನ್​ಎಲ್, ಮಂಗಳೂರು ರಿಫೈನರಿ ಮೊದಲಾದ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಎರಡನೆ ಮಿನಿರತ್ನ ಪಟ್ಟಿಯಲ್ಲಿ ಎಚ್​ಎಂಟಿ ಸೇರಿದಂತೆ 11 ಸಂಸ್ಥೆಗಳಿವೆ.

ಇದನ್ನೂ ಓದಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹಗಳಿಗೆ 10,000 ರೂ ಸಬ್ಸಿಡಿ; 2025ರ ಮಾರ್ಚ್​ವರೆಗೂ ಮಾತ್ರ ಈ ಕೊಡುಗೆ

25 ನವರತ್ನ ಸಂಸ್ಥೆಗಳು

  1. ಬಿಇಎಲ್
  2. ಕಂಟೇನರ್ ಕಾರ್ಪೊರೇಶನ್
  3. ಎಂಜಿನಿಯರ್ಸ್ ಇಂಡಿಯಾ
  4. ಎಚ್​​ಎಎಲ್
  5. ಎಂಟಿಎನ್​​ಎಲ್
  6. ನ್ಯಾಷನಲ್ ಅಲೂಮಿನಿಯಮ್ ಕಂಪನಿ
  7. ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್​​ಟ್ರಕ್ಷನ್ ಕಾರ್ಪೊರೇಶನ್
  8. ನೇಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್
  9. ಎನ್​ಎಂಡಿಸಿ
  10. ರಾಷ್ಟ್ರೀಯ ಇಸ್​ಪಾಟ್ ನಿಗಮ್
  11. ಶಿಪ್ಪಿಂಗ್ ಕಾರ್ಪೊರೇಶನ್
  12. ರೈಲ್ ವಿಕಾಸ್ ನಿಗಮ್
  13. ಒಎನ್​ಜಿಸಿ ವಿದೇಶ್
  14. ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್
  15. ಇರ್ಕಾನ್
  16. ರೈಟ್ಸ್
  17. ನ್ಯಾಷನಲ್ ಫರ್ಟಿಲೈಸರ್ಸ್
  18. ಸೆಂಟ್ರಲ್ ವೇರ್​ಹೌಸಿಂಗ್ ಕಾರ್ಪೊರೇಶನ್
  19. ಹೌಸಿಂಗ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಕಾರ್ಪೊರೇಶನ್
  20. ಇಂಡಿಯನ್ ರಿನಿವಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿ
  21. ಮಜಗಾನ್ ಡಾಕ್ ಶಿಪ್​ಬಿಲ್ಡರ್ಸ್
  22. ರೈಲ್​ಟೆಲ್ ಕಾರ್ಪೊರೇಶನ್
  23. ಸೋಲಾರ್ ಎನರ್ಜಿ ಕಾರ್ಪೊರೇಶನ್
  24. ಎನ್​ಎಚ್​ಪಿಸಿ
  25. ಎಸ್​ಜೆವಿಎನ್

ಇದನ್ನೂ ಓದಿ: ಬೆಂಗಳೂರಿನ ಹೊಸಕೋಟೆಯಲ್ಲಿ ಬಿಸಿಡಿ ಟೌನ್​ಶಿಪ್; ಮಹಿಳಾ ಫಾಕ್ಸ್​ಕಾನ್ ಉದ್ಯೋಗಿಗಳಿಗೆ 900 ಅಪಾರ್ಟ್ಮೆಂಟ್ಸ್

ಮಹಾರತ್ನ ಪಿಎಸ್​ಯುಗಳು

  1. ಬಿಎಚ್​ಇಎಲ್
  2. ಬಿಪಿಸಿಎಲ್
  3. ಕೋಲ್ ಇಂಡಿಯಾ
  4. ಜಿಎಐಎಲ್ ಇಂಡಿಯಾ
  5. ಎಚ್​ಪಿಸಿಎಲ್
  6. ಐಒಸಿಎಲ್
  7. ಎನ್​ಟಿಪಿಸಿ
  8. ಒಎನ್​ಜಿಸಿ
  9. ಪವರ್ ಫೈನಾನ್ಸ್ ಕಾರ್ಪೊರೇಶನ್
  10. ಪವರ್ ಗ್ರಿಡ್ ಕಾರ್ಪೊರೇಶನ್
  11. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್​ಎಐಎಲ್)
  12. ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಶನ್
  13. ಆಯಿಲ್ ಇಂಡಿಯಾ

ಈ ರೀತಿ ಒಂದೊಂದು ಸ್ಥಾನಮಾನಕ್ಕೂ ನಿರ್ದಿಷ್ಟ ಮಾನದಂಡಗಳನ್ನು ಇಡಲಾಗಿರುತ್ತದೆ. ಬಿಸಿನೆಸ್ ನಿರ್ವಹಣೆ, ಆಡಳಿತ ನಿರ್ವಹಣೆ, ಲಾಭ ಗಳಿಕೆ ಇತ್ಯಾದಿ ಮಾನದಂಡಗಳಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ