AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakesh Jhunjhunwala: ‘ಬಿಗ್​​ ಬುಲ್’​ ರಾಕೇಶ್ ಜುಂಜುನ್​ವಾಲಾ ಬಗ್ಗೆ ನೀವು ತಿಳಿಯಬೇಕಾದ 5 ಅಪರೂಪದ ಸಂಗತಿಗಳಿವು

ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್​ವಾಲಾರ ಕುರಿತಾದ ಕೆಲ ಸಂಗತಿಗಳು ಹೀಗಿವೆ.  

Rakesh Jhunjhunwala: ‘ಬಿಗ್​​ ಬುಲ್’​ ರಾಕೇಶ್ ಜುಂಜುನ್​ವಾಲಾ ಬಗ್ಗೆ ನೀವು ತಿಳಿಯಬೇಕಾದ 5 ಅಪರೂಪದ ಸಂಗತಿಗಳಿವು
ಉದ್ಯಮಿ ರಾಕೇಶ್​ ಜುಂಜುನ್​ವಾಲಾ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 14, 2022 | 1:53 PM

ಷೇರು ಮಾರುಕಟ್ಟೆಯ ‘ಬಿಗ್​ ಬುಲ್’​ ಎಂದೇ ಖ್ಯಾತಿಯನ್ನು ಹೊಂದಿದ್ದ ರಾಕೇಶ್ ಜುಂಜುನ್​ವಾಲಾ (Rakesh Jhunjhunwala) ತಮ್ಮ 62ನೇ ವಯಸ್ಸಿನಲ್ಲಿ  ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ರಾಕೇಶ್ ಜುಂಜುನ್​ವಾಲಾ ಇಂದು ಬೆಳಗ್ಗೆ ಮುಂಬೈನ ಬ್ರೀಚ್​​ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆವಲ 5 ಸಾವಿರ ರೂಪಾಯಿಂದ ಷೇರು ವಹಿವಾಟನ್ನು ಆರಂಭಿಸಿದ್ದ ರಾಕೇಶ್ ಜುಂಜುನ್​ವಾಲಾ ತಮ್ಮ ಕೊನೆ ಗಳಿಗೆಯಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿ ಮೊತ್ತದ ನಿವ್ವಳ ಆಸ್ತಿ ಹೊಂದಿದ್ದರು. ಇದು ಅವರನ್ನು ಭಾರತದ 36ನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿತು. ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್​ವಾಲಾರ ಕುರಿತಾದ ಕೆಲ ಸಂಗತಿಗಳು ಹೀಗಿವೆ.

ಇದನ್ನೂ ಓದಿ: Rakesh Jhunjhunwala: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್​ವಾಲಾ ನಿಧನ

ಐದು ಸಂಗತಿಗಳು ಹೀಗಿವೆ

  1. ರಾಕೇಶ್ ಜುಂಜುನ್​ವಾಲಾ ಜುಲೈ 5, 1960 ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಆದರೆ ಅವರು ಬೆಳೆದಿದ್ದು ಮಾತ್ರ ಮುಂಬೈನಲ್ಲಿ. ರಾಕೇಶ್ ಜುಂಜುನ್​ವಾಲಾ ಅವರನ್ನು ಭಾರತದ ವಾರನ್ ಬಫೆಟ್ ಎಂದು ಕರೆಯಲಾಗುತ್ತದೆ.
  2. ಸಿಡೆನ್‌ಹ್ಯಾಮ್ ಕಾಲೇಜಿನಿಂದ ಪದವಿ ಪಡೆದ ರಾಕೇಶ್ ಜುಂಜುನ್​ವಾಲಾ, ನಂತರ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾಕ್ಕೆ ಸೇರಿಕೊಂಡರು. ಸ್ಟಾಕ್ ಮಾರುಕಟ್ಟೆ ಹೂಡಿಕೆದಾರರಾದ ರೇಖಾ ಜುಂಜುನ್‌ವಾಲಾ ಅವರನ್ನು ವಿವಾಹವಾದರು.
  3. ಜುನ್‌ಜುನ್‌ವಾಲಾ ಅವರು ಭಾರತದ ಷೇರು ಮಾರುಕಟ್ಟೆಯ ಬೆಳವಣಿಗೆಯ ಕನಸ್ಸನ್ನು ಹೊಂದಿದ್ದರು. ಮತ್ತು ಅವರು ಖರೀದಿಸಿದ ಯಾವುದೇ ಷೇರುಗಳು ಬಹುಪಾಲು ದುಪ್ಪಟ್ಟಾಗಿ ಮಾರ್ಪಟ್ಟಿವೆ.
  4. ರಾಕೇಶ್ ಜುಂಜುನ್​ವಾಲಾ ಅವರ ತಮ್ಮದೇ ಆದ ಖಾಸಗಿ ಓಡೆತನದ ಸ್ಟಾಕ್​ ಟ್ರೇಡಿಂಗ್ ಫರ್ಮ್​​​ ರೇರ್​​ ಎಂಟರ್​ಪ್ರೈಸಸ್​ನ್ನು ಹೊಂದಿದ್ದರು. ಮತ್ತು ಇತ್ತಿಚೇಗಷ್ಟೇ ಭಾರತದ ಹೊಸ ವಿಮಾನ ಸಂಸ್ಥೆ ಆಕಾಶ ಏರ್​ಲೈನ್ಸ್​ನ್ನು ಆರಂಭಿಸಿದ್ದರು.
  5. ವಿಮಾನಯಾನ ಕ್ಷೇತ್ರ ಉತ್ತಮವಾಗಿ ಕಾರ್ಯನಿರ್ವಹಿಸದ ಈ ಸಂದರ್ಭದಲ್ಲಿ ನೀವು ಯಾಕೆ ಏರ್​ಲೈನ್ಸ್​ನ್ನು ಆರಂಭಿಸಿದಿರಿ ಎಂಬ ಮಾತಿಗೆ ನಾನು ವೈಫಲ್ಯವನ್ನು ಅಥವಾ ಸೋಲನ್ನು ಅನುಭವಿಸಲು ಸಿದ್ಧನಾಗಿದ್ದೇನೆ ಎಂದು ಅವರು ಹೇಳಿದ್ದರು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:46 am, Sun, 14 August 22

ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ