AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಐಟಿ ವಿದ್ಯಾರ್ಥಿಗಳು ವಿನ್ಯಾಸಪಡಿಸಿದ 8 ಚಿಪ್​ಸೆಟ್​ಗಳು ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳಿಗೆ ರವಾನೆ; ಈ ಚಿಪ್​ಸೆಟ್​ಗಳು ಯಾಕೆ ಮುಖ್ಯ?

IIT students designed 8 chipsets sent to fabs: ಭಾರತದ ಐಐಟಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 8 ಚಿಪ್​ಸೆಟ್ ಡಿಸೈನ್​ಗಳನ್ನು ಫ್ಯಾಬ್ ಘಟಕಗಳಿಗೆ ಕಳುಹಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಉಪಕರಣಗಳಿಗೆ ಚಿಪ್​ಸೆಟ್ ಮಿದುಳು ಇದ್ದಂತೆ. ಹೀಗಾಗಿ, ಇದರ ಮಹತ್ವ ದೊಡ್ಡದಿದೆ. ಭಾರತದ ವಿವಿಧ ಐಐಟಿಗಳಲ್ಲಿರುವ ವಿದ್ಯಾರ್ಥಿಗಳು ಇದೂವರೆಗೆ 20 ಚಿಪ್​ಸೆಟ್​​ಗಳನ್ನು ಡಿಸೈನ್ ಮಾಡಿದ್ದಾರೆ.

ಐಐಟಿ ವಿದ್ಯಾರ್ಥಿಗಳು ವಿನ್ಯಾಸಪಡಿಸಿದ 8 ಚಿಪ್​ಸೆಟ್​ಗಳು ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳಿಗೆ ರವಾನೆ; ಈ ಚಿಪ್​ಸೆಟ್​ಗಳು ಯಾಕೆ ಮುಖ್ಯ?
ಸೆಮಿಕಂಡಕ್ಟರ್ ಚಿಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 20, 2025 | 2:09 PM

Share

ನವದೆಹಲಿ, ಜೂನ್ 20: ವಿವಿಧ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇಲ್ಲಿಯವರೆಗೆ 20 ಚಿಪ್​ಸೆಟ್​ಗಳನ್ನು (semiconductor chip) ವಿನ್ಯಾಸಗೊಳಿಸಿದ್ದಾರೆ. ಈ ಪೈಕಿ ಎಂಟನ್ನು ಜಾಗತಿಕ ಫೌಂಡ್ರಿಗಳು (global foundries) ಮತ್ತು ಮೊಹಾಲಿಯಲ್ಲಿರುವ ಸೆಮಿಕಂಡಕ್ಟರ್ ಲ್ಯಾಬ್​​ಗೆ ಕಳುಹಿಸಲಾಗಿದೆ. ಅಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಕಾರ್ಯಕ್ಕೆ ಅವುಗಳನ್ನು ಬಳಸಲಾಗುತ್ತದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಹೈದರಾಬಾದ್ ಕ್ಯಾಂಪಸ್​ನ ಐಐಟಿಯಲ್ಲಿ 14ನೇ ಘಟಿಕೋತ್ಸವ ಸಮಾರಾಂಭದಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವರು, ಭಾರತದ ಮೊದಲ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್​ನ ವಾಣಿಜ್ಯಾತ್ಮಕ ತಯಾರಿಕೆ ಇದೇ ವರ್ಷದಲ್ಲಿ ಆರಂಭವಾಗುತ್ತದೆ ಎಂಬುದನ್ನು ಪುನರುಚ್ಚರಿಸಿದ್ದಾರೆ.

ಸರ್ಕಾರ ಕೂಡ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಎನ್ನುವ ಯೋಜನೆ ಮೂಲಕ ಈ ಉದ್ಯಮದ ಒಟ್ಟಾರೆ ಬೆಳವಣಿಗೆಗೆ ಉತ್ತೇಜಿಸುತ್ತಿದೆ. ಇದೇ ಮಿಷನ್ ಅಡಿಯಲ್ಲಿ ಚಿಪ್​ಸೆಟ್ ಡಿಸೈನ್​ಗೆ ಪರಿಕರಗಳ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ. ಐಐಟಿ ವಿದ್ಯಾರ್ಥಿಗಳು ಈ ಪರಿಕರಗಳನ್ನು ಬಳಸಿ ಚಿಪ್​ಸೆಟ್ ಅಭಿವೃದ್ಧಪಡಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದಿಂದ ಮೊದಲ ಕ್ವಾರ್ಟರ್​ನಲ್ಲಿ 5 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ರಫ್ತು

ಸೆಮಿಕಂಡಕ್ಟರ್ ಉದ್ಯಮಕ್ಕೆ ಚಿಪ್​ಸೆಟ್ ಎಷ್ಟು ಮಹತ್ವದ್ದು ಗೊತ್ತಾ?

ಚಿಪ್​ಸೆಟ್ ಎಂಬುದು ಈಗಿನ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಿದುಳು ಎಂದು ಬಣ್ಣಿಸಬಹುದು. ಸೆಮಿಕಂಡಕ್ಟರ್ ಉದ್ಯಮದಲ್ಲಿ ಅತ್ಯಂತ ಮೌಲಯುತ ಉತ್ಪನ್ನ ಇದು.

ಒಂದು ಸೆಮಿಕಂಡಕ್ಟರ್ ಚಿಪ್ ಎಂದರೆ ಸಿಲಿಕಾನ್ ಇತ್ಯಾದಿ ಸೆಮಿಕಂಡಕ್ಟರ್ ವಸ್ತುವಿನ ಒಂದು ತುಣುಕು. ಇದರಲ್ಲಿ ಎಲೆಕ್ಟ್ರಾನಿಕ್ ಸರ್ಕ್ಯುಟ್ ನಿರ್ಮಿಸಲಾಗಿರುತ್ತದೆ. ಚಿಪ್​ಸೆಟ್ ಎಂದರೆ ವಿವಿಧ ಚಿಪ್​ಗಳನ್ನು ಒಂದಕ್ಕೊಂದು ಜೋಡಿಸಿರಲಾಗಿರುತ್ತದೆ.

ಕಂಪ್ಯೂಟಿಂಗ್ ಸಾಧನದಲ್ಲಿರುವ ಪ್ರೋಸಸರ್, ಮೆಮೊರಿ, ಸ್ಟೋರೇಜ್ ಹಾಗೂ ಇತರ ಭಾಗಗಳ ಮಧ್ಯೆ ದತ್ತಾಂಶದ ರವಾನೆಯನ್ನು ನಿಗದಿತ ಉದ್ದೇಶದ ಪ್ರಕಾರ ನಿರ್ವಹಿಸುವ ಒಂದು ವ್ಯವಸ್ಥೆಯೇ ಚಿಪ್​ಸೆಟ್. ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್, ಟ್ಯಾಬ್ಲೆಟ್, ವಾಹನ ಇತ್ಯಾದಿ ಉತ್ಪನ್ನಗಳಿಗೆ ಚಿಪ್​ಸೆಟ್ ಬೇಕೇ ಬೇಕು. ಇಲ್ಲದಿದ್ದರೆ ಈ ಉತ್ಪನ್ನಗಳಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂವಹನ ಸಾಧ್ಯವೇ ಆಗುವುದಿಲ್ಲ.

ಇದನ್ನೂ ಓದಿ: ಒಂದು ಕಾಲದ ಗ್ಲೋಬಲ್ ಸೂಪರ್ ಬ್ರ್ಯಾಂಡ್ ಕೆಲ್ವಿನೇಟರ್ ಈಗ ರಿಲಾಯನ್ಸ್ ಪಾಲು

ಚಿಪ್​ಸೆಟ್ ವಿನ್ಯಾಸ ಮಾಡುವುದು ಅಷ್ಟು ಸುಲಭವಲ್ಲ. ಚಿಪ್​ಸೆಟ್ ಆರ್ ಅಂಡ್ ಡಿ ಕಾರ್ಯಕ್ಕೆ ಸಾವಿರಾರು ಕೋಟಿ ರೂ ಅನ್ನು ವ್ಯಯಿಸಲಾಗುತ್ತದೆ. ಹಾರ್ಡ್​ವೇರ್ ಸಾಫ್ಟ್​ವೇರ್ ಏಕೀಕರಣ, ವಿದ್ಯುತ್ ಬಳಕೆ ಕ್ಷಮತೆ, ಬಹಳ ಸಂಕೀರ್ಣವಾದ ತರ್ಕ ಇತ್ಯಾದಿ ಕಾರ್ಯಗಳು ಚಿಪ್​ಸೆಟ್ ವಿನ್ಯಾಸದ ಹಿಂದೆ ಇರುತ್ತವೆ.

ಕ್ವಾಲ್​ಕಾಮ್, ಇಂಟೆಲ್, ಎಎಂಡಿ, ಆ್ಯಪಲ್, ಮೀಡಿಯಾಟೆಕ್ ಇತ್ಯಾದಿ ಹಲವು ಕಂಪನಿಗಳು ಚಿಪ್​ಸೆಟ್ ವಿನ್ಯಾಸದಲ್ಲಿ ಪಳಗಿವೆ. ಭಾರತದಲ್ಲಿ ಹಲವು ದಶಕಗಳ ಹಿಂದೆಯೇ ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಗೆ ಪ್ರಯತ್ನವಾಗಿತ್ತಾದರೂ ಇತ್ತೀಚಿನ ಕೆಲ ವರ್ಷಗಳಿಂದ ಮಾತ್ರ ಗಂಭೀರ ಎನಿಸಬಹುದಾದ ಹೆಜ್ಜೆಗಳನ್ನು ಇಡಲಾಗಿದೆ.

ಭಾರತದಲ್ಲಿ ಸದ್ಯ ಆರು ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕಗಳಿಗೆ ಅನುಮೋದನೆ ಸಿಕ್ಕಿದೆ. ಇಲ್ಲಿ ಚಿಪ್​ಸೆಟ್​ ವಿನ್ಯಾಸದ ನೆರವಿನಿಂದ ಚಿಪ್​ಸೆಟ್ ಅನ್ನು ತಯಾರಿಸಲಾಗುತ್ತಿದೆ. ಈ ವರ್ಷಾಂತ್ಯದೊಳಗೆ ವಾಣಿಜ್ಯಾತ್ಮಕವಾಗಿ ಚಿಪ್​ಸೆಟ್​​ಗಳನ್ನು ಹೊರತರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್