AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ

ಕೇಂದ್ರ ನೇರ ತೆರಿಗೆ ಮಂಡಳಿಯಿಂದ ತೆರಿಗೆ ರಿಟರ್ನ್ ಫೈಲಿಂಗ್ ಗಡುವನ್ನು ವಿಸ್ತರಣೆ ಮಾಡಲಾಗಿದೆ. 2020-21ರ ಹಣಕಾಸು ವರ್ಷ ಹಾಗೂ 2021- 22ರ ಅಸೆಸ್​ಮೆಂಟ್​ ವರ್ಷಕ್ಕೆ ಸಂಬಂಧಿಸಿದಂತೆ ಪ್ರಮುಖ ಪರಿಷ್ಕೃತ ದಿನಾಂಕಗಳು ಇಲ್ಲಿವೆ.

Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ
ಸಾಂದರ್ಭಿಕ ಚಿತ್ರ
Srinivas Mata
|

Updated on: May 21, 2021 | 12:53 PM

Share

ಕೇಂದ್ರ ನೇರ ತೆರಿಗೆ ಮಂಡಳಿ (CBDT)ಯಿಂದ ಗುರುವಾರ ತೆರಿಗೆ ಪಾವತಿದಾರರಿಗೆ ನಿರಾಳ ಸಿಕ್ಕಿದೆ. 2020- 21ನೇ ಹಣಕಾಸು ವರ್ಷ (ಅಸೆಸ್​ಮೆಂಟ್ ವರ್ಷ 2021- 22) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್​) ಫೈಲಿಂಗ್​ಗೆ ಸೆಪ್ಟೆಂಬರ್ 30ರ ತನಕ ಗಡುವು ವಿಸ್ತರಣೆ ಮಾಡಲಾಗಿದೆ. ಕೇಂದ್ರ ನೇರ ತೆರಿಗೆ ಮಂಡಳಿಯು ಆದಾಯ ತೆರಿಗೆ ಕಾಯ್ದೆ, 1961, ಸೆಕ್ಷನ್ 119ರ ಅಡಿಯಲ್ಲಿ ಅಧಿಕಾರವನ್ನು ಬಳಸಿಕೊಂಡು ವಿನಾಯಿತಿ ನೀಡಿದೆ…ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಎರಡನೇ ಕೊರೊನಾ ಎರಡನೇ ಅಲೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆಯ ಹಲವು ತೆರಿಗೆ ನಿಯಮಾವಳಿಗಳ ಈ ಹಿಂದಿನ ಗಡುವನ್ನು ವಿಸ್ತರಿಸಲಾಗಿದೆ. ಉದ್ಯೋಗದಾತರಿಗೂ ತೆರಿಗೆಯ ವಿವಿಧ ನಿಯಮಾವಳಿಗಳನ್ನು ಪೂರ್ತಿ ಮಾಡುವ ಅವಧಿ ವಿಸ್ತರಿಸಲಾಗಿದೆ. ಕೋವಿಡ್- 19 ಸದ್ಯದ ಪರಿಸ್ಥಿತಿಯಲ್ಲಿ ಗಡುವು ಜಾಸ್ತಿ ನೀಡುವುದು ತೆರಿಗೆದಾರರಿಗೆ ಬಹಳ ಮುಖ್ಯ. ಭಾರತದ ಹಲವು ರಾಜ್ಯಗಳಲ್ಲಿ ಕೋವಿಡ್ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವವಾದದ್ದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಹಣಕಾಸು ವರ್ಷ 2020- 21 (ಅಸೆಸ್​ಮೆಂಟ್ ವರ್ಷ 2021- 22) ತೆರಿಗೆ ಫೈಲಿಂಗ್​ಗೆ ಹೊಸ ಗಡುವು ಇಂತಿದೆ: 1) ಮಾಮೂಲಿ ತೆರಿಗೆದಾರರಿಗೆ 2021- 22ನೇ ಅಸೆಸ್​ಮೆಂಟ್ ವರ್ಷದ ಆದಾಯ ತೆರಿಗೆ ರಿಟರ್ನ್​ ಸಲ್ಲಿಸುವುದಕ್ಕೆ ಈ ಹಿಂದೆ ಇದ್ದ ಜುಲೈ 31, 2021ರ ಗಡುವನ್ನು ಸೆಪ್ಟೆಂಬರ್ 30, 2021ಕ್ಕೆ ವಿಸ್ತರಿಸಲಾಗಿದೆ. 2) ಆಡಿಟ್ ಅಸ್ಸೆಸ್ಸಿಗಳಿಗೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದಕ್ಕೆ ನವೆಂಬರ್​ 30ರ ತನಕ ಅವಕಾಶ ಇದೆ. ಈ ಹಿಂದೆ ಅಕ್ಟೋಬರ್ 31ರ ವರೆಗೆ ಇತ್ತು. 3) ತೆರಿಗೆ ಆಡಿಟ್ ವರದಿಯನ್ನು ಸಲ್ಲಿಸುವುದಕ್ಕೆ ಈ ಹಿಂದೆ ಇದ್ದ ಸೆಪ್ಟೆಂಬರ್ 30ರ ಗಡುವನ್ನು ಅಕ್ಟೋಬರ್ 31ಕ್ಕೆ ವಿಸ್ತರಣೆ ಮಾಡಲಾಗಿದೆ. 4) ತಡವಾದ/ಪರಿಷ್ಕೃತವಾದ ಆದಾಯ ರಿಟರ್ನ್ ಸಲ್ಲಿಸುವುದಕ್ಕೆ ಈ ಹಿಂದೆ ಇದ್ದ ಡಿಸೆಂಬರ್ 31, 2021ರ ಗಡುವನ್ನು ಜನವರಿ 31, 2022ಕ್ಕೆ ಮುಂದೂಡಲಾಗಿದೆ. 5) ದರ ಅಧ್ಯಯನ ವರದಿಯನ್ನು ವರ್ಗಾವಣೆ ಮಾಡುವ ಅವಧಿಯನ್ನು ನವೆಂಬರ್ 30ಕ್ಕೆ ಮುಂದೂಡಲಾಗಿದೆ. 6) SFT ಪಾವತಿ ದಿನಾಂಕವನ್ನು ಮೇ 31, 2021ರಿಂದ ಜೂನ್ 30, 2021ಕ್ಕೆ ವಿಸ್ತರಿಸಲಾಗಿದೆ. 7) ವರದಿ ಮಾಡಬೇಕಾದ ಖಾತೆಯ ಸ್ಟೇಟ್​ಮೆಂಟ್​ ಮೇ 31ರಿಂದ ಜೂನ್ 30ಕ್ಕೆ ಹೋಗಿದೆ. 8) ಹಣಕಾಸು ವರ್ಷ 2020-21ರ ನಾಲ್ಕನೇ ತ್ರೈಮಾಸಿಕದ ಟಿಡಿಎಸ್​ ಸ್ಟೇಟ್​ಮೆಂಟ್ ಜೂನ್ 30ಕ್ಕೆ ವಿಸ್ತರಣೆ ಆಗಿದೆ. ಈ ಹಿಂದೆ ಮೇ 31ನೇ ತಾರೀಕು ಇತ್ತು. 9) ಫಾರ್ಮ್ 16 ವಿತರಿಸುವುದಕ್ಕೆ ಕೊನೆ ದಿನವಾಗಿ ಜೂನ್ 15 ಇದ್ದದ್ದು ಈಗ ಒಂದು ತಿಂಗಳು ಮುಂದಕ್ಕೆ ಹೋಗಿ ಜುಲೈ 15 ಆಗಿದೆ.

ಆದಾಯ ತೆರಿಗೆ ಇಲಾಖೆಯು ತಿಳಿಸಿರುವ ಪ್ರಕಾರ ಹೊಸದಾದ ಇ-ಫೈಲಿಂಗ್ ಪೋರ್ಟಲ್ http://incometax.gov.in ಅನ್ನು ಜೂನ್ 7ನೇ ತಾರೀಕಿನಿಂದ ಆರಂಭಿಸಲಿದೆ. ಈಗಿರುವ ಪೋರ್ಟಲ್ ಆರು ದಿನಗಳ ಕಾಲ, ಅಂದರೆ ಜೂನ್ 1ರಿಂದ 6ರ ತನಕ ಲಭ್ಯ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್​ಗಳಿಗೆ ಸುತ್ತೋಲೆ

(Due to coronavirus second wave in India various dedalines of income tax return filing extended by Central Board Of Direct Tax (CBDT))

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು