AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಲಿಸ್ತಾನ್ ರಗಳೆ: ಆಲೂಟಿಕ್ಕಿ, ಕಾಫಿ ತಯಾರಿಸುವ ಕೆನಡಿಯನ್ ಕಂಪನಿಗಳಿಗೆ ಫಜೀತಿ

Canadian Companies Trolled in India: ಕೆನಡಾದ ಆಹಾರ ಸರಪಳಿ ಬ್ರಾಂಡ್‌ಗಳಾದ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಭಾರತದಲ್ಲಿ ಖಲಿಸ್ತಾನ್‌ ವಿವಾದದಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಭಾರತೀಯರು ಕೆನಡಾ ಕಂಪನಿಗಳ ಉತ್ಪನ್ನಗಳಿಂದ ದೂರ ಉಳಿಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಕಂಪನಿಗಳನ್ನು ಭಾರತೀಯರು ಟ್ರೊಲ್ ಮಾಡುತ್ತಿದ್ದಾರೆ. ಇವುಗಳ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಖಲಿಸ್ತಾನ್ ರಗಳೆ: ಆಲೂಟಿಕ್ಕಿ, ಕಾಫಿ ತಯಾರಿಸುವ ಕೆನಡಿಯನ್ ಕಂಪನಿಗಳಿಗೆ ಫಜೀತಿ
ಟಿಮ್ ಹಾರ್ಟನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 21, 2023 | 3:14 PM

Share

ಖಲಿಸ್ತಾನ್ ವಿಚಾರ ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಬಿರುಕು ಹೆಚ್ಚಿಸುತ್ತಿದೆ. ಭಾರತದ ಆರ್ಥಿಕತೆ ಮತ್ತು ಕೆನಡಾ ಕಂಪನಿಗಳ ಮೇಲೆ ಈ ವಿಚಾರ ಪರಿಣಾಮ ಬೀರುತ್ತಿದೆ. ಕೆನಡಾದ ರಾಪರ್ ಶುಭ್ (Canadian rapper Shubh) ಅವರ ಕಾರ್ಯಕ್ರಮವನ್ನು ಇತ್ತೀಚೆಗೆ ರದ್ದುಗೊಳಿಸಲಾಗಿತ್ತು. ಶುಭ್ ಖಲಿಸ್ತಾನ್ ಬೆಂಬಲಿಗ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಆತನ ಕಾರ್ಯಕ್ರಮದ ಟಿಕೆಟ್ ಬುಕಿಂಗ್ ಅನ್ನು ಬುಕ್ ಮೈ ಶೋ ನಿಲ್ಲಿಸಿತು. ಈ ಬೆಳವಣಿಗೆ ಬಳಿಕ ಭಾರತದಲ್ಲಿ ಕೆನಡಾದ ಫೂಡ್ ಚೈನ್ ಕಂಪನಿಗಳಿಗೆ ತೊಂದರೆ ಹೆಚ್ಚಾಗಿದೆ. ಮೆಕೇನ್ (McCain) ಮತ್ತು ಟಿಮ್ ಹಾರ್ಟನ್ (Tim Hortons) ಕಂಪನಿಗಳು ಸಮಸ್ಯೆಗೆ ಸಿಲುಕಿವೆ. ಏನು ಕಾರಣ?

ಭಾರತದಲ್ಲಿ ಟ್ರೋಲ್ ಆಗುತ್ತಿರುವ ಕೆನಡಿಯನ್ ಕಂಪನಿಗಳು

ಕೆನಡಾದ ಆಹಾರ ಸರಪಳಿ ಬ್ರಾಂಡ್‌ಗಳಾದ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಭಾರತದಲ್ಲಿ ಖಲಿಸ್ತಾನ್‌ ವಿವಾದದಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಭಾರತೀಯರು ಕೆನಡಾ ಕಂಪನಿಗಳ ಉತ್ಪನ್ನಗಳಿಂದ ದೂರ ಉಳಿಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಕಂಪನಿಗಳನ್ನು ಭಾರತೀಯರು ಟ್ರೊಲ್ ಮಾಡುತ್ತಿದ್ದಾರೆ. ಇವುಗಳ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಕಂಪನಿಗಳ ಭಾರತ ವಿಭಾಗದಿಂದ ಪ್ರತಿಕ್ರಿಯೆ ಬಂದಿಲ್ಲ.

ಬುಕ್ ಮೈ ಶೋ ಭಾರತದಲ್ಲಿ ಕೆನಡಾದ ಗಾಯಕನ ಸಂಗೀತ ಕಚೇರಿಯನ್ನು ರದ್ದುಗೊಳಿಸಿದ ನಂತರ, ಮ್ಯೂಸಿಕ್ ಅಪ್ಲಿಕೇಶನ್ ಮೌಜ್ ತನ್ನ ಪ್ಲಾಟ್​ಫಾರ್ಮ್​ನಿಂದ ಗಾಯಕ ಶುಭ್ ಅವರ ಎಲ್ಲಾ ಹಾಡುಗಳನ್ನು ತೆಗೆದುಹಾಕಿದೆ. ತಜ್ಞರ ಪ್ರಕಾರ, ಅಂತಹ ಕಂಪನಿಗಳು ಸವಾಲಿನ ಸಂದರ್ಭಗಳನ್ನು ಎದುರಿಸಬೇಕಾಗಬಹುದು ಮತ್ತು ಅವುಗಳು ಉತ್ತಮ ಹಾದಿಯಲ್ಲಿ ನಡೆಯಬೇಕು. ಅಂತಹ ರಾಜಕೀಯ ಮತ್ತು ರಾಜತಾಂತ್ರಿಕ ವಿರೋಧ.

ಇದನ್ನೂ ಓದಿ: Business Idea: ಕೇವಲ 3 ಲಕ್ಷ ಬಂಡವಾಳದಲ್ಲಿ ತಿಂಗಳಿಗೆ 70 ಸಾವಿರ ರೂ ವರಮಾನ ಕೊಡಬಲ್ಲ ಜೇನುಸಾಕಾಣಿಕೆ

ಮೆಕೇನ್ ಮತ್ತು ಟಿಮ್ ಹಾರ್ಟನ್ ನೆತ್ತಿ ಮೇಲೆ ಕತ್ತಿ

ಕೆನಡಾದ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಕಂಪನಿಗಳು ಭಾರತದಲ್ಲಿ ದೊಡ್ಡ ಮಾರುಕಟ್ಟೆ ಹೊಂದಿವೆ. ವಾಸ್ತವವಾಗಿ, ಭಾರತವು ಕೆನಡಾದ ಮೆಕೇನ್‌ನ ದೊಡ್ಡ ಗ್ರಾಹಕ. ಇದರ ಆಲೂ ಟಿಕ್ಕಿಗೆ ಭಾರತದಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಈಗ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆ ವಿಕೋಪಕ್ಕೆ ಹೋದರೆ ಮೆಕೇನ್ ಉತ್ಪನ್ನಗಳಿಗೆ ಬಹಿಷ್ಕಾರ ಕ್ರಮ ಕಾದಿರಬಹುದು.

ಇದೇ ವೇಳೆ, ಖ್ಯಾತ ಕಾಫಿ ಮತ್ತು ರೆಸ್ಟೋರೆಂಟ್ ಚೈನ್ ಕಂಪನಿ ಟಿಮ್ ಹಾರ್ಟನ್ಸ್ ಭಾರತದಲ್ಲಿ ತನ್ನ ಮೊದಲ ಔಟ್ಲೆಟ್ ಅನ್ನು ತೆರೆದು ಕೇವಲ ಒಂದು ವರ್ಷ ಕಳೆದಿದೆ. ಅಂತಹ ಪರಿಸ್ಥಿತಿಯಲ್ಲಿ, ಎರಡು ದೇಶಗಳ ನಡುವಿನ ಕಹಿಯು ಅದರ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಜಾಹೀರಾತು ಏಜೆನ್ಸಿ ರಿಡಿಫ್ಯೂಷನ್‌ನ ಅಧ್ಯಕ್ಷ ಸಂದೀಪ್ ಗೋಯಲ್ ಅವರ ಪ್ರಕಾರ, ಇಂಥ ಸಂದರ್ಭಗಳಲ್ಲಿ ಬ್ರ್ಯಾಂಡ್​ಗಳು ಲೋ ಪ್ರೊಫೈಲ್​ನಲ್ಲಿ ಕಾರ್ಯನಿರ್ವಹಿಸುವುದು ಉತ್ತಮ ಐಡಿಯಾ.

ಇದನ್ನೂ ಓದಿ: Sukha Duneke: ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್​ಸ್ಟರ್ ಸುಖ ದುನೆಕೆ ಹತ್ಯೆ

ಕೊಹ್ಲಿ, ಭಜ್ಜಿ ಮೊದಲಾದವರೂ ಶುಭ್​ನಿಂದ ದೂರ

ಪಂಜಾಬಿ ಗಾಯಕ ಶುಭನೀತ್ ಸಿಂಗ್ ಅಲಿಯಾಸ್ ಶುಭ್ ಭಾರತದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಈ ಹಿಂದೆಯೂ, ಈಗಲೂ ಶುಭ್ ವಿರುದ್ಧ ‘ಖಲಿಸ್ತಾನ್’ ಬೆಂಬಲಿಗ ಎಂಬ ಆರೋಪಗಳಿದ್ದವು. ಭಾರತ ಮತ್ತು ಕೆನಡಾ ನಡುವೆ ವಿವಾದ ಹೆಚ್ಚಾದಾಗ, ಮತ್ತೊಮ್ಮೆ ಜನರು ಕೆನಡಾ ಮತ್ತು ಅದರ ಜನರ ಬಗ್ಗೆ ಕೋಪಗೊಳ್ಳಲು ಪ್ರಾರಂಭಿಸಿದರು. ಕೆನಡಾದ ಗಾಯಕ ಶುಭ್ ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ವಿರಾಟ್ ಕೊಹ್ಲಿಯಿಂದ ಹಿಡಿದು ಹರ್ಭಜನ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯರವರೆಗೆ ವಿವಿದ ಕ್ರಿಕೆಟಿಗರೂ ಕೂಡ ಶುಭ್ ಅವರನ್ನು ಅನ್​ಫಾಲೋ ಮಾಡಿದ್ದಾರೆ. ಶುಭ್ ಅವರ ಪ್ರದರ್ಶನವನ್ನು ಪ್ರಾಯೋಜಿಸುವ ಬೋಟ್ ಕಂಪನಿಯ ಮಾಲೀಕರು ಸಹ ಆ ಕಾರ್ಯಕ್ರಮದಿಂದ ಹಿಂದೆಸರಿದಿದ್ದೂ ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​