AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮೀಣ ಭಾಗದ ಬಡತನ 12 ವರ್ಷದಲ್ಲಿ ಶೇ. 24.8ರಿಂದ ಶೇ. 8.6ಕ್ಕೆ ಇಳಿಕೆ: ಸಮೀಕ್ಷೆ ವರದಿ

India's poverty rate estimates: 2011-12ರಲ್ಲಿ ಭಾರತದಲ್ಲಿ ಶೇ. 21ರಷ್ಟಿದ್ದ ಬಡತನ ಇದೀಗ ಶೇ. 8.5ಕ್ಕೆ ಇಳಿದಿರಬಹುದು ಎಂದು ಎನ್​ಸಿಎಇಆರ್​ನ ಸಮೀಕ್ಷಾ ವರದಿ ಹೇಳಿದೆ. ಶೇ. 24.8ರಷ್ಟಿದ್ದ ಗ್ರಾಮೀಣ ಭಾಗದ ಬಡತನ ಶೇ. 8.7ಕ್ಕೆ ಇಳಿಕೆ ಆಗಿರುವ ಸಾಧ್ಯತೆ ಇದೆ. ನಗರ ಭಾಗದಲ್ಲಿ ಬಡತನ ಶೇ. 13.4ರಿಂದ ಶೇ. 8.4ಕ್ಕೆ ಇಳಿದಿರಬಹುದು ಎಂದು ಸಮೀಕ್ಷೆಯು ಹೇಳುತ್ತಿದೆ.

ಗ್ರಾಮೀಣ ಭಾಗದ ಬಡತನ 12 ವರ್ಷದಲ್ಲಿ ಶೇ. 24.8ರಿಂದ ಶೇ. 8.6ಕ್ಕೆ ಇಳಿಕೆ: ಸಮೀಕ್ಷೆ ವರದಿ
ಬಡತನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2024 | 1:47 PM

Share

ನವದೆಹಲಿ, ಜುಲೈ 3: ಭಾರತದಲ್ಲಿ ಬಡತನ ನಿವಾರಣೆ ಕಾರ್ಯ ವೇಗವಾಗಿ ಸಾಗುತ್ತಿದೆ ಎನ್ನುವ ವಾದಕ್ಕೆ ಇಂಬುಕೊಡುವಂತೆ ಹೊಸ ಸಮೀಕ್ಷೆಯ ಪ್ರಕಾರ ಕಳೆದ 12 ವರ್ಷದಲ್ಲಿ ಗಣನೀಯವಾಗಿ ಇಳಿಕೆ ಆಗಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ರಿಸರ್ಚ್ (NCAER) ಸಂಸ್ಥೆಯ ಆರ್ಥಿಕ ತಜ್ಞರ ತಂಡವೊಂದು ಈ ಸಮೀಕ್ಷೆ ನಡೆಸಿದ್ದು ಅವರ ಪ್ರಕಾರ 2011-12ರಲ್ಲಿ ಬಡತನ ದರ ಶೇ. 21ರಷ್ಟಿತ್ತು. ಇದೀಗ ಅದು ಶೇ. 8.5ಕ್ಕೆ ಇಳಿದಿದೆ ಎನ್ನಲಾಗಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವ ಈ ಸಮೀಕ್ಷಾ ವರದಿ ಪ್ರಕಾರ ಗ್ರಾಮೀಣ ಭಾಗದಲ್ಲಿ ಬಡತನ ಹೆಚ್ಚು ಪ್ರಮಾಣದಲ್ಲಿ ತಗ್ಗಿದೆ. ಈ ವಿಚಾರದಲ್ಲಿ ನಗರವಾಸಿಗಳ ಸಮಕ್ಕೆ ಗ್ರಾಮೀಣ ಭಾಗದವರು ಇದ್ದಾರೆ.

2011-12ರಲ್ಲಿ ಗ್ರಾಮೀಣ ಭಾಗದಲ್ಲಿ ಬಡತನ ದರ ಬರೋಬ್ಬರಿ ಶೇ. 24.8ರಷ್ಟಿತ್ತು. ಈಗ ಅದು ಶೇ. 8.6ಕ್ಕೆ ಇಳಿದಿದೆ. ಇನ್ನು, ನಗರಭಾಗದಲ್ಲಿ ಬಡತನ ಪ್ರಮಾಣ ಆಗ ಶೇ. 13.4ರಷ್ಟಿತ್ತು. ಈಗ ಅದು ಶೇ. 8.4ಕ್ಕೆ ಇಳಿದಿದೆ ಎಂದು ಎನ್​ಸಿಎಇಆರ್​ನ ಈ ಸಮೀಕ್ಷೆಯು ಪತ್ತೆ ಮಾಡಿದೆ.

ಇದನ್ನೂ ಓದಿ: ವಿಯೆಟ್ನಾಂ, ಚೀನಾ ರೀತಿ ಆಮದು ಸುಂಕ ಇಳಿಯಲಿ: ಬಜೆಟ್​ನಿಂದ ಎಲೆಕ್ಟ್ರಾನಿಕ್ ಉದ್ಯಮದ ನಿರೀಕ್ಷೆಗಳಿವು…

ಬಡತನ ಈಗ ಎಷ್ಟಿದೆ ಎಂದು ಸರ್ಕಾರ ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಬೇರೆ ಬೇರೆ ಸ್ತರಗಳಲ್ಲಿ ಕೆಲವರು ಬಡತನ ಇಳಿಕೆಯ ಅಂದಾಜು ಮಾಡಿರುವುದುಂಟು. ಎಸ್​ಬಿಐ ರಿಸರ್ಚ್ ಸಂಸ್ಥೆಯ ಆರ್ಥಿಕ ತಜ್ಞರು ಮಾಡಿದ ಅಂದಾಜು ಪ್ರಕಾರ ಗ್ರಾಮೀಣ ಭಾಗದಲ್ಲಿ ಬಡತನ ಶೇ. 7.2ರಷ್ಟಿರಬಹುದು. ನಗರದಲ್ಲಿ ಇದು ಶೇ. 4.6ರಷ್ಟಿರಬಹುದು. ಆದರೆ, ಎನ್​ಸಿಎಇಆರ್ ಸಮೀಕ್ಷೆಯು ನಗರ ಪ್ರದೇಶಗಳಲ್ಲಿ ಬಡತನ ಹೆಚ್ಚಿನ ಮಟ್ಟದಲ್ಲಿ ಇಳಿಕೆ ಆಗಿಲ್ಲದೇ ಇರುವುದನ್ನು ಸೂಚಿಸುತ್ತಿದೆ.

ಆರ್​ಬಿಐನ ಮಾಜಿ ಗವರ್ನರ್ ಸಿ ರಂಗರಾಜನ್ ಮತ್ತು ಆರ್ಥಿಕ ತಜ್ಞ ಎಸ್ ಮಹೇಂದ್ರ ದೇವ್ ಅವರು ಭಾರತದಲ್ಲಿ ಒಟ್ಟಾರೆ ಬಡತನ ದರ ಶೇ. 10.8ರಷ್ಟಿರಬಹುದು. ಈ ಅಂದಾಜಿಗಿಂತ ಎನ್​ಸಿಎಇಆರ್ ಅಂದಾಜು ಹೆಚ್ಚು ಉದಾರವಾಗಿದೆ.

ಇದನ್ನೂ ಓದಿ: ಜಾಮ್​ನಗರದ ಚಿತ್ರಣವನ್ನೇ ಬದಲಾಯಿಸಿಬಿಟ್ಟ ಅಂಬಾನಿ ಮಗನ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳು

2022ರ ಆಗಸ್ಟ್​ನಿಂದ 2023ರ ಜುಲೈವರೆಗಿನ ಅವಧಿಯಲ್ಲಿ ನಡೆಸಲಾದ ಗೃಹ ಬಳಕೆ ವೆಚ್ಚ ಸಮೀಕ್ಷೆಯ ಅಂಶಗಳನ್ನು ಆಧರಿಸಿ ಬಡತನ ಪ್ರಮಾಣವನ್ನು ಅಂದಾಜು ಮಾಡಲಾಗಿದೆ. ಇದೇ ಸಮೀಕ್ಷೆಯ ಅಂಶಗಳನ್ನು ಆಧರಿಸಿಕೊಂಡೇ ಸರ್ಕಾರವೂ ಬಡತನ ನಿರ್ಮೂಲನೆಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸುವ ಕೆಲಸ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ