ಜಾಮ್​ನಗರದ ಚಿತ್ರಣವನ್ನೇ ಬದಲಾಯಿಸಿಬಿಟ್ಟ ಅಂಬಾನಿ ಮಗನ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳು

Jamnagar economy and Anant Ambani pre-wedding celebrations: ಮುಕೇಶ್ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿ ಮದುವೆ ಮುಂಬೈನಲ್ಲಿ ಜುಲೈ 12ರಂದು ನಡೆಯಲಿದೆ. ಅದಕ್ಕೆ ಮುನ್ನ ದೇಶ ವಿದೇಶಗಳಲ್ಲಿ ಹಲವು ಪ್ರೀವೆಡ್ಡಿಂಗ್ ಕಾರ್ಯಕ್ರಮ ನಡೆದಿವೆ. ಅದರಲ್ಲಿ ಜಾಮ್​ನಗರ್​ನಲ್ಲಿ ನಡೆದ ಪ್ರೀವೆಡ್ಡಿಂಗ್ ಕಾರ್ಯಕ್ರಮ ಗಮನ ಸೆಳೆದಿತ್ತು. ಬಹಳ ಸಾಂಪ್ರದಾಯಿಕವಾಗಿ ಮತ್ತು ವೈಭವೋಪೇತವಾಗಿ ಕಾರ್ಯಕ್ರಮಗಳು ನಡೆದಿದ್ದವು. ಜಾಮ್​ನಗರ್ ಎಂಬ ಪುಟ್ಟ ಪಟ್ಟಣದ ನೋಟವೇ ಈ ಕಾರ್ಯಕ್ರಮದಿಂದ ಬದಲಾಗಿ ಹೋಗಿದೆ.

ಜಾಮ್​ನಗರದ ಚಿತ್ರಣವನ್ನೇ ಬದಲಾಯಿಸಿಬಿಟ್ಟ ಅಂಬಾನಿ ಮಗನ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳು
ಅನಂತ್ ಅಂಬಾನಿ ಪ್ರೀವೆಡ್ಡಿಂಗ್ ಕಾರ್ಯಕ್ರಮ
Follow us
|

Updated on: Jul 02, 2024 | 7:11 PM

ಜಾಮ್​ನಗರ್ ಗುಜರಾತ್​ನ ಕಚ್ಛ್ ಕೊಲ್ಲಿ ಪ್ರದೇಶದ ಬಳಿ ಇರುವ ಮತ್ತು ಏಳು ಲಕ್ಷ ಮಾತ್ರವೇ ಜನಸಂಖ್ಯೆ ಇರುವ ಒಂದು ಪುಟ್ಟ ನಗರ. ಅಪ್ಪಟ ಮರಳುಗಾಡಾಗಿದ್ದ ಈ ನಗರ ಇಂದು ಮುದ್ದು ಮುದ್ದಾಗಿ ಕಾಣುತ್ತಿದೆ. ಈ ರೂಪಾಂತರಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಂಬಾನಿ ಕುಟುಂಬ ಕಾರಣ. ನಿಮಗೆ ನೆನಪಿರಬಹುದು, ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆಗೆ ಮುಂಚಿನ ಕಾರ್ಯಕ್ರಮಗಳು ಇತರ ಸಿರಿವಂತರ ವಿವಾಹ ಸಮಾರಂಭಗಳನ್ನೇ ಮೀರಿಸುವಷ್ಟು ಅದ್ಧೂರಿಯಾಗಿದ್ದವು. ಅಷ್ಟೇ ಅಲ್ಲ, ಸಂಪ್ರದಾಯವನ್ನೂ ಬಿಡದೆ ಆಧುನಿಕ ಮೆರಗು ಮತ್ತು ವೈಭವವನ್ನೂ ಬಿಡದೆ ನಡೆದಂತಿತ್ತು ಈ ಕಾರ್ಯಕ್ರಮಗಳು.

ಜಾಮ್​ನಗರವನ್ನು ಆಯ್ದುಕೊಳ್ಳಲು ಏನು ಕಾರಣ?

ಧೀರೂಭಾಯ್ ಅಂಬಾನಿ ಗುಜರಾತಿಗರಾದರೂ ಜಾಮ್​ನಗರ್​ನಲ್ಲಿ ಹುಟ್ಟಿದವರಲ್ಲ. ಮುಕೇಶ್ ಅಂಬಾನಿ ಯೆಮನ್ ದೇಶದಲ್ಲಿ ಜನಿಸಿದವರು. ಆದರೆ, ಜಾಮ್​ನಗರ್ ಅನ್ನು ಅನಂತ್ ಅಂಬಾನಿ ಪ್ರೀವೆಡ್ಡಿಂಗ್ ಸಮಾರಂಭಕ್ಕೆ ಆಯ್ದುಕೊಳ್ಳಲು ಕಾರಣ ಆ ನಗರದಲ್ಲಿ ರಿಲಾಯನ್ಸ್​ನ ಇಂಡಸ್ಟ್ರೀಸ್​ನ ಬಿಸಿನೆಸ್ ಅಡಿಪಾಯ ಇರುವುದು. ಅನಂತ್ ಅಂಬಾನಿ ಇದೇ ಜಾಮ್​ನಗರ್​ನಲ್ಲಿ ಬಾಲ್ಯವನ್ನು ಕಳೆದಿದ್ದರು. ಈ ಕಾರಣಕ್ಕೆ ಈ ಪುಟ್ಟ ಪಟ್ಟಣವನ್ನು ಅದ್ಧೂರಿ ಪ್ರೀವೆಡ್ಡಿಂಗ್ ಕಾರ್ಯಕ್ರಮದ ಸ್ಥಳವಾಗಿ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೇಲೆ ಯಾರೂ ಮಾರ್ಕ್ಸ್ ಕೇಳಲ್ಲ ಕಣ್ರೀ… ಎಸ್​ಬಿಐ ನೂತನ ಮುಖ್ಯಸ್ಥರ ಕಿವಿಮಾತು ಕೇಳ್ರೀ

ಜಾಮ್​ನಗರ್​ನ ಆರ್ಥಿಕ ರೂಪುರೇಖೆಯೇ ಬದಲು…

ಅನಂತ್ ಅಂಬಾನಿಯ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳು ಬಹಳ ಆರ್ಥಿಕ ಚಟುವಟಿಕೆಗಳಿಗೆ ಕಾರಣವಾಗಿವೆ. ಆರು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೆಲಸಗಳ ಸೃಷ್ಟಿಯಾಗಿವೆ. ಕಲಾಕಾರರು, ಡೆಕೋರೇಟರ್​ಗಳು, ಡ್ರೈವರ್​ಗಳು, ಬಾಣಸಿಗರು ಇತ್ಯಾದಿ ಹಲವು ವೃತ್ತಿಗಳವರಿಗೆ ಸಾಕಷ್ಟು ಕೆಲಸ ಸಿಕ್ಕಿತು. ಇದರಿಂದ ಸ್ಥಳೀಯ ಆರ್ಥಿಕತೆಗೆ ಪುಷ್ಟಿ ಕೂಡ ಸಿಕ್ಕಿದೆ.

ಜಾಮ್​ನಗರ್, ರಾಜಕೋಟ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮೂರು ತಿಂಗಳ ಕಾಲ ಎಲ್ಲಾ ಹೋಟೆಲ್​ಗಳು ಭರ್ತಿಯಾಗಿ ಹೋಗಿದ್ದು ನಿಜಕ್ಕೂ ಗಮನಾರ್ಹ. ಅಷ್ಟೇ ಅಲ್ಲ, ಈ ನಗರದ ಇನ್​ಫ್ರಾಸ್ಟ್ರಕ್ಚರ್ ಕೂಡ ಸುಧಾರಣೆ ಕಂಡಿತು. ಕಾರ್ಯಕ್ರಮಕ್ಕೆ ದೊಡ್ಡದೊಡ್ಡ ಗಣ್ಯರು ಬರುವುದರಿಂದ ಇಡೀ ನಗರದ ರಸ್ತೆಗಳನ್ನು ದುರಸ್ತಿಗೊಳಿಸಲಾಯಿತು. ನಗರದ ಬಹಳ ಕಡೆ ಗಿಡಮರಗಳನ್ನು, ಹೂವಿನ ಗಿಡಗಳನ್ನು ಬೆಳೆಸಿ ಇಡೀ ನಗರ ಸುಂದರವಾಗಿ ಕಾಣುವಂತೆ ಮಾಡಲಾಯಿತು.

ವಿಶ್ವದ ಅತಿದೊಡ್ಡ ಝೂ ನಿರ್ಮಾಣವಾಗುತ್ತಿದೆ….

ಜಾಮ್​ನಗರ್​​ನಲ್ಲಿ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ವತಿಯಿಂದ ವಿಶ್ವದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯವನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇವೆಲ್ಲವೂ ಕೂಡ ಜಾಮ್​ನಗರ್ ಪಟ್ಟಣವನ್ನು ಪ್ರವಾಸೋದ್ಯಮ ಆಕರ್ಷಣೆಯ ಸ್ಥಳವನ್ನಾಗಿ ಮಾಡಿವೆ.

ಇದನ್ನೂ ಓದಿ: ಅಮೆರಿಕದ ಬ್ಲೂ ಒರಿಜಿನ್​ನ ಗಗನನೌಕೆಯಲ್ಲಿ ಪ್ರಯಾಣಿಸಬೇಕೆ? ಅರ್ಜಿ ಸಲ್ಲಿಕೆಗೆ ಕೇವಲ 200 ರೂ

ಸಾಮೂಹಿಕ ವಿವಾಹ; ಎಲ್ಲಾ ವಧುಗಳಿಗೆ ಒಂದು ಲಕ್ಷ ರೂ ಗಿಫ್ಟ್

ಇನ್ನು, ಅನಂತ್ ಅಂಬಾನಿ ವಿವಾಹಪೂರ್ವ ಹಲವು ಸಮಾರಂಭಗಳ ಭಾಗವಾಗಿ ಮುಂಬೈ ಸಮೀಪ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಸಲಾಗಿದೆ. ಪಾಲ್ಘಾರ್ ಎಂಬಲ್ಲಿ 50ಕ್ಕೂ ಹೆಚ್ಚು ಜೋಡಿಗಳ ಮದುವೆ ಆಯಿತು. ರಿಲಾಯನ್ಸ್ ಕಾರ್ಪೊರೇಟ್ ಪಾರ್ಕ್​ನಲ್ಲಿ ನಡೆದ ಈ ಮದುವೆಗೆ ಅಂಬಾನಿ ಕುಟುಂಬ ಸೇರಿದಂತೆ 800 ಜನರು ಸಾಕ್ಷಿಗಳಾದರು. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಈ ವಧೂವರರಿಗೆ ಅಂಬಾನಿ ಕುಟುಂಬದಿಂದ ಭರ್ಜರಿ ಗಿಫ್ಟ್ ಸಿಕ್ಕಿತು. ಪ್ರತಿಯೊಬ್ಬ ವಧುವಿಗೂ 1.1 ಲಕ್ಷ ರೂ (ಒಂದು ಲಕ್ಷದ ಒಂದು ಸಾವಿರ) ಹಣವನ್ನು ಉಡುಗೊರೆಯಾಗಿ ನೀಡಲಾಯಿತು.

ಇದೇ ಜುಲೈ 12ರಂದು ಅನಂತ್ ಅಂಬಾನಿ ಅವರು ರಾಧಿಕಾ ಮರ್ಚಂಟ್ ಅವರನ್ನು ವರಿಸಲಿದ್ದಾರೆ. ಮುಂಬೈನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ