Economy: ಮಾರ್ಚ್​ವರೆಗೂ ಆರ್ಥಿಕತೆ ಇದೇ ವೇಗದಲ್ಲಿ ಸಾಗಲಿದೆ: ಆರ್​ಬಿಐನ ಮಾಸಿಕ ವರದಿಯಲ್ಲಿ ಅಂದಾಜು

RBI Monthly Bulletin: 2023-24ರ ಮೊದಲ ಎರಡು ಕ್ವಾರ್ಟರ್​ಗಳಲ್ಲಿ ಉತ್ತಮ ಬೆಳವಣಿಗೆ ಕಂಡಿರುವ ಭಾರತದ ಆರ್ಥಿಕತೆ ಕೊನೆಯ ಎರಡು ಕ್ವಾರ್ಟರ್​ನಲ್ಲೂ ಅದೇ ವೇಗ ಕಾಯ್ದುಕೊಳ್ಳಬಹುದು ಎಂದು ಆರ್​ಬಿಐನ ಮಾಸಿಕ ಬುಲೆಟಿನ್​ನಲ್ಲಿ ಹೇಳಲಾಗಿದೆ. ಇದೇ ಫೆಬ್ರುವರಿ 29ರಂದು ಸಾಂಖ್ಯಿಕ ಸಚಿವಾಲಯವು ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್ ಅವಧಿಯ ಜಿಡಿಪಿ ದರ ಎಷ್ಟೆಂದು ಅಂಕಿ ಅಂಶ ಪ್ರಕಟಿಸಲಿದೆ.

Economy: ಮಾರ್ಚ್​ವರೆಗೂ ಆರ್ಥಿಕತೆ ಇದೇ ವೇಗದಲ್ಲಿ ಸಾಗಲಿದೆ: ಆರ್​ಬಿಐನ ಮಾಸಿಕ ವರದಿಯಲ್ಲಿ ಅಂದಾಜು
ಭಾರತದ ಆರ್ಥಿಕತೆ
Follow us
|

Updated on: Feb 20, 2024 | 5:53 PM

ನವದೆಹಲಿ, ಫೆಬ್ರುವರಿ 20: ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧ ಅನಿರೀಕ್ಷಿತವಾಗಿ ಹೆಚ್ಚು ಬೆಳವಣಿಗೆ ಕಂಡಿರುವ ಭಾರತದ ಆರ್ಥಿಕತೆ, ದ್ವಿತೀಯಾರ್ಧದಲ್ಲೂ ಅದೇ ವೇಗ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಆರ್​ಬಿಐನ ಮಾಸಿಕ ವರದಿಯಲ್ಲಿ (RBI monthly bulletin) ಅಂದಾಜು ಮಾಡಲಾಗಿದೆ. 2023-24ರ ಮೊದಲೆರಡು ಕ್ವಾರ್ಟರ್​ಗಳಲ್ಲಿ ಭಾರತದ ಜಿಡಿಪಿ ಕ್ರಮವಾಗಿ ಶೇ. 7.8 ಮತ್ತು ಶೇ. 7.6ರಷ್ಟು ಬೆಳೆದಿತ್ತು. ಅಂದರೆ 2023ರ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಶೇ. 7.8, ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಶೇ. 7.6ರಷ್ಟು ಬೆಳೆದಿತ್ತು. ಒಟ್ಟಾರೆ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಆರು ತಿಂಗಳ ಅವಧಿಯಲ್ಲಿ ಆಗಿರುವ ಜಿಡಿಪಿ ಬೆಳವಣಿಗೆ ಶೇ. 7.7 ಇದೆ. ಈಗ ಅಕ್ಟೋಬರ್​ನಿಂದ ಮಾರ್ಚ್​ವರೆಗಿನ ಆರು ತಿಂಗಳ ಅವಧಿಯಲ್ಲೂ ಇದೇ ಬೆಳವಣಿಗೆ ಮಟ್ಟ ಕಾಯ್ದುಕೊಳ್ಳಬಹುದು ಎಂದು ಆರ್​ಬಿಐ ನಿರೀಕ್ಷಿಸಿದೆ.

‘ಈಗ ಕಂಡುಬಂದಿರುವ ಆರ್ಥಿಕ ಸೂಚಕಗಳನ್ನು ಗಮನಿಸಿದರೆ, 2023-24ರ ಮೊದಲಾರ್ಧದಲ್ಲಿ ಸಾಧಿಸಲಾದ ಬೆಳವಣಿಗೆ ಮುಂದುವರಿಯಬಹುದು. ಮುಂದಿನ ಭಾಗದ ಬೆಳವಣಿಗೆಗೆ ಕಾರ್ಪೊರೇಟ್ ಸೆಕ್ಟರ್​ನಿಂದ ಆಗಬಹುದಾದ ಹೊಸ ಬಂಡವಾಳ ವೆಚ್ಚ ಸಹಾಯಕವಾಗಬಹುದು,’ ಎಂದು ಇಂದು ಮಂಗಳವಾರ ಬಿಡುಗಡೆ ಮಾಡಿದ ಮಾಸಿಕ ಬುಲೆಟಿನ್​ನಲ್ಲಿ ಆರ್​ಬಿಐ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಪರಮಾಣ ವಿದ್ಯುತ್ ಉತ್ಪಾದನೆ; ಹೂಡಿಕೆ ಮಾಡುವಂತೆ ಅದಾನಿ, ರಿಲಾಯನ್ಸ್, ಟಾಟಾ ಕಂಪನಿಗಳಿಗೆ ಸರ್ಕಾರದ ಮಾತುಕತೆ

ಆದರೆ, ಆರ್​​ಬಿಐ ಪ್ರಕಟಿಸುವ ಈ ಮಾಸಿಕ ವರದಿಯಲ್ಲಿನ ಅಂಶಗಳು ಅದರ ಅಧಿಕೃತ ನಿಲುವಲ್ಲ. ಆರ್​ಬಿಐನ ಎಂಪಿಸಿ ಸದಸ್ಯ ಮೈಕೇಲ್ ಪಾತ್ರ ಮೊದಲಾದ ಕೆಲವರು ಸೇರಿ ಈ ವರದಿ ಸಿದ್ಧಪಡಿಸುತ್ತಾರೆ. ಅದರಲ್ಲಿರುವ ಅಭಿಪ್ರಾಯಗಳು ಬಹುತೇಕ ಅವರ ವೈಯಕ್ತಿಕವಾದವುಗಳಾಗಿರುತ್ತವೆ. ಹೀಗಾಗಿ, ಎಂಪಿಸಿ ಸಭೆಯಲ್ಲಿ ಆರ್​ಬಿಐ ಮಾಡುವ ಅಂದಾಜಿಗಿಂತ ಈ ಮಾಸಿಕ ವರದಿಯಲ್ಲಿನ ಅಂಶಗಳು ಕೆಲವೊಮ್ಮೆ ವ್ಯತ್ಯಯವಾಗಬಹುದು.

ಇದೇ ಫೆಬ್ರುವರಿ 29ರಂದು ಕೇಂದ್ರ ಸಾಂಖ್ಯಿಕ ಇಲಾಖೆಯಿಂದ ಜಿಡಿಪಿ ದರದ ಅಧಿಕೃತ ಮಾಹಿತಿ ಪ್ರಕಟವಾಲಿದೆ. 2023ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನ ಜಿಡಿಪಿ ಬೆಳವಣಿಗೆ ಎಷ್ಟೆಂಬುದು ಈ ತಿಂಗಳ ಅಂತ್ಯದಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಕೆಟ್ಟುಹೋದ ವಸ್ತುಗಳ ದುರಸ್ತಿ ಜವಾಬ್ದಾರಿ ಯಾರದ್ದು? ಈ ಕಾನೂನು ತಿಳಿದಿರಿ

ಆರ್​ಬಿಐ ಈ ಹಿಂದೆ ಮಾಡಿದ ಅಧಿಕೃತ ಅಂದಾಜು ಪ್ರಕಾರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 6.5ರಷ್ಟು ಮಾತ್ರವೇ ಹೆಚ್ಚಾಗಬಹುದು ಎಂದಿದೆ. ಆದರೆ, ಆರ್​ಬಿಐನ ಮಾಸಿಕ ಬುಲೆಟಿನ್​ನಲ್ಲಿ ಮಾಡಲಾಗಿರುವ ಅಂದಾಜು ಹೆಚ್ಚು ಆಶಾದಾಯಕವಾಗಿದೆ.

ಸರ್ಕಾರ ಈ ವರ್ಷ (2023-24) ಒಟ್ಟಾರೆ ಶೇ. 7.3ರಷ್ಟು ಜಿಡಿಪಿ ಬೆಳೆಯಬಹುದು ಎಂದು ನಿರೀಕ್ಷಿಸಿದೆ. ಹೆಚ್ಚಿನ ಆರ್ಥಿಕ ತಜ್ಞರು ಮತ್ತು ಬ್ರೋಕರೇಜ್ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ಶೇ. 7ಕ್ಕೆ ಸೀಮಿತಗೊಳ್ಳಬಹುದು ಎಂದಿವೆ. ಯಾವ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿವೆ ಎಂಬುದು ಫೆಬ್ರುವರಿ 29ರಂದು ಬಿಡುಗಡೆ ಆಗಲಿರುವ ದತ್ತಾಂಶದಿಂದ ಸುಳಿವು ಸಿಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ