Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP

GDP

ಜಿಡಿಪಿ ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್. ಅಂದರೆ ಒಂದು ಪ್ರದೇಶದ ಸಮಗ್ರ ಉತ್ಪನ್ನ. ನಿರ್ದಿಷ್ಟ ದೇಶ ಅಥವಾ ಪ್ರದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ತಯಾರಾಗುವ ಎಲ್ಲಾ ಸರಕು ಮತ್ತು ಸೇವೆಗಳ ಮಾರುಕಟ್ಟೆ ಮೌಲ್ಯದ ಗಣನೆಯೇ ಜಿಡಿಪಿ ಆಗಿರುತ್ತದೆ. ಇಲ್ಲಿ ಮಾರುಕಟ್ಟೆ ಮೌಲ್ಯ ಎಂದರೆ ಸರಕು ಅಥವಾ ಸೇವೆ ಯಾವ ಬೆಲೆಗೆ ಅಂತಿಮ ಗ್ರಾಹಕನನ್ನು ಮುಟ್ಟುತ್ತದೆ ಎಂಬುದು. ಒಂದು ದೇಶದ ಆರ್ಥಿಕ ಪರಿಸ್ಥಿತಿಗೆ ಜಿಡಿಪಿ ಕೈಗನ್ನಡಿಯಂತೆ ಇರುತ್ತದೆ. ಇನ್ನು, ನಿರ್ದಿಷ್ಟ ಕಾಲಮಾನದಲ್ಲಿ ಜಿಡಿಪಿ ವ್ಯತ್ಯಯವಾಗುವುದಕ್ಕೆ ಜಿಡಿಪಿ ದರ ಎನ್ನುತ್ತಾರೆ. ಆರ್ಥಿಕ ಬೆಳವಣಿಗೆಯ ದರವೂ ಹೌದು. ಅತಿಹೆಚ್ಚು ಜಿಡಿಪಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ. ಭಾರತದ ಜಿಡಿಪಿ 2023ರಲ್ಲಿ 3 ಟ್ರಿಲಿಯನ್ ಡಾಲರ್ ಮುಟ್ಟಿತು. ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಅಮೆರಿಕದ ಜಿಡಿಪಿ 25 ಟ್ರಿಲಿಯನ್ ಡಾಲರ್​ನಷ್ಟಿದೆ. ಚೀನಾ ಜಿಡಿಪಿ 18 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಇವೆರಡು ದೇಶಗಳ ಜಿಡಿಪಿ ಇತರರಿಗಿಂತ ಬಹಳ ಮುಂದಿದೆ.

ಇನ್ನೂ ಹೆಚ್ಚು ಓದಿ

ಆರ್​ಬಿಐನಿಂದ 25 ಮೂಲಾಂಕಗಳಷ್ಟು ಬಡ್ಡಿದರ ಕಡಿತದ ನಿರೀಕ್ಷೆ; ಮುಂದಿನ ಕ್ವಾರ್ಟರ್​ನಲ್ಲೂ ಮತ್ತೊಂದು ಸುತ್ತಿನ ಕ್ರಮ ಸಾಧ್ಯತೆ

RBI MPC meeting expectations: ಫೆಬ್ರುವರಿ 5ರಿಂದ 7ರವರೆಗೆ ನಡೆಯುವ ಆರ್​ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರಿಪೋ ದರ ಅಥವಾ ಬಡ್ಡಿದರ ಕಡಿತಗೊಳಿಸಬಹುದು ಎನ್ನಲಾಗಿದೆ. ರಾಯ್ಟರ್ಸ್, ಎಕನಾಮಿಕ್ ಟೈಮ್ಸ್ ಇತ್ಯಾದಿ ಸಂಸ್ಥೆಗಳು ನಡೆಸಿದ ಆರ್ಥಿಕ ತಜ್ಞರ ಪೋಲಿಂಗ್​ನಲ್ಲಿ ಈ ಅನಿಸಿಕೆ ವ್ಯಕ್ತವಾಗಿದೆ. ಆರ್ಥಿಕತೆಗೆ ಪುಷ್ಟಿ ಕೊಡಲು ಆರ್​ಬಿಐ ಬಡ್ಡಿದರ ಕಡಿಮೆ ಮಾಡುವುದು ಅಗತ್ಯ ಎನಿಸಬಹುದು ಎನ್ನುವ ಅಭಿಪ್ರಾಯ ಇದೆ.

ಬಜೆಟ್​ನಿಂದ ಅನುಭೋಗ ಆರ್ಥಿಕತೆಗೆ ಹೇಗೆ ಪುಷ್ಟಿ ಸಿಗುತ್ತೆ? ಇಲ್ಲಿದೆ ಸರಳ ವಿವರಣೆ

Prof. K.V. Subramanian explains consumption multiplier effect on economy: ಬಜೆಟ್​ನಲ್ಲಿ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಲಾಗಿದೆ. 12 ಲಕ್ಷ ರೂ ವಾರ್ಷಿಕ ಆದಾಯ ಇರುವವರು ತೆರಿಗೆಯನ್ನೇ ಕಟ್ಟಬೇಕಿಲ್ಲ. ಈ ಕ್ರಮದಿಂದ ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುತ್ತದೆ. ಇದರಿಂದ ಆರ್ಥಿಕತೆಗೆ ಹೇಗೆ ಲಾಭ ಆಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ ಆರ್ಥಿಕ ತಜ್ಞರಾದ ಪ್ರೊಫೆಸರ್ ಕೃಷ್ಣಮೂರ್ತಿ ವಿ ಸುಬ್ರಮಣಿಯನ್.

ರೇಸ್​ನಲ್ಲಿ ಚೀನಾ ಮುಂದೋಡಿದ್ಹೇಗೆ? ಭಾರತ ಹಿಂದುಳಿದಿದ್ದೇಗೆ? ನಿತಿನ್ ಕಾಮತ್ ನೇರಾನೇರ ವಿಶ್ಲೇಷಣೆ

Nithin Kamath compares India and China's growth story: ಎಐ ಕ್ಷೇತ್ರದಲ್ಲಿ ಚೀನಾ ಸಾಧಿಸಿರುವ ಬೆಳವಣಿಗೆ ಹಲವರನ್ನು ಅಚ್ಚರಿಗೊಳಿಸಿದೆ. ಝೀರೋಧ ಸಂಸ್ಥಾಪಕ ನಿತಿನ್ ಕಾಮತ್ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಚೀನಾದ ಬೆಳವಣಿಗೆಗೆ ಆರ್ ಅಂಡ್ ಡಿ ಕಾರ್ಯಗಳಿಗೆ ಕೊಟ್ಟ ಗಮನ ಎಂಬುದು ಅವರ ಅನಿಸಿಕೆ. ಎಪ್ಪತ್ತು, ಎಂಬತ್ತರ ದಶಕದವರೆಗೂ ಚೀನಾದಷ್ಟೇ ಜಿಡಿಪಿ ತಲಾದಾಯ ಹೊಂದಿದ್ದ ಭಾರತ, ಬಳಿಕ ಹಿಂದುಳಿಯಲು ಕಾರಣ ಬಿಚ್ಚಿಟ್ಟಿದ್ದಾರೆ.

India’s exports: ಜಾಗತಿಕ ವ್ಯಾಪಾರ ಕುಂಠಿತವಾದರೂ ಭಾರತದಿಂದ ದಾಖಲೆಯ ರಫ್ತು

India's exports hit record high: 2024ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಪೆಟ್ರೋಲಿಮೇತರ ಉತ್ಪನ್ನಗಳ ರಫ್ತು ಮಲ್ಯ 34 ಬಿಲಿಯನ್ ಡಾಲರ್ ಇದೆ. ಇದು ಹೊಸ ದಾಖಲೆಯಾಗಿದೆ. ಏಪ್ರಿಲ್​ನಿಂದ ಅಕ್ಟೋಬರ್​ವರೆಗಿನ ಅವಧಿಯಲ್ಲಿ ಈ ಉತ್ಪನ್ನಗಳ ರಫ್ತು ಮೌಲ್ಯ ಹೊಸ ದಾಖಲೆ ಬರೆದಿದೆ. ಜಾಗತಿಕವಾಗಿ ವ್ಯಾಪಾರ ಪ್ರಮಾಣ ಕಡಿಮೆ ಆಗಿರುವ ನಡುವೆಯೂ ಭಾರತದಿಂದ ರಫ್ತು ದಾಖಲೆಯಾಗಿರುವುದು ಗಮನಾರ್ಹ.

ಜನವರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಭರ್ಜರಿ ಎಕ್ಸ್​ಪೋರ್ಟ್ ಆರ್ಡರ್; ಹಣದುಬ್ಬರ ಶೇ. 4.2ಕ್ಕೆ ಇಳಿಯುವ ಸಾಧ್ಯತೆ: ಎಚ್ಎಸ್​ಬಿಸಿ ವರದಿ

Indian manufacturing sector: 2025ರ ಜನವರಿ ತಿಂಗಳಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ವಲದಯ ಕಂಪನಿಗಳಿಗೆ ಉತ್ತಮ ಎಕ್ಸ್​ಪೋರ್ಟ್ ಬಿಸಿನೆಸ್ ಸಿಗುತ್ತಿದೆ. ಜಾಗತಿಕವಾಗಿ ಆಮದು ಸುಂಕಗಳ ಏರಿಕೆ ಸಾಧ್ಯತೆ ಇರುವುದರಿಂದ ಹೆಚ್ಚಿನ ಕಂಪನಿಗಳು ಸರಕುಗಳ ದಾಸ್ತಾನು ಮಾಡುತ್ತಿರಬಹುದು. ಇದರಿಂದ ಭಾರತೀಯ ಕಂಪನಿಗಳಿಗೆ ಉತ್ತಮ ಎಕ್ಸ್​ಪೋರ್ಟ್ ಆರ್ಡರ್​ಗಳು ಸಿಗುತ್ತಿವೆ ಎಂದು ಎಚ್​ಎಸ್​ಬಿಸಿ ಸಂಸ್ಥೆಯ ವರದಿಯೊಂದರಲ್ಲಿ ಹೇಳಲಾಗಿದೆ.

ಹತ್ತು ವರ್ಷಗಳಲ್ಲಿ ಆಗಿರುವ ಸುಧಾರಣೆಗಳು ಭಾರತದ ಬೆಳವಣಿಗೆಗೆ ಶಕ್ತಿಯಾಗಲಿವೆ: ಅಮಿತಾಭ್ ಕಾಂತ್

Amitabh Kant speaks on Indian economy: ಮುಂದಿನ ಮೂರು ದಶಕಗಳಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಒಳಗೊಂಡಂತೆ ಅಭಿವೃದ್ಧಿಶೀಲ ದೇಶಗಳ ಕೊಡುಗೆ ಶೇ. 75 ಇರುತ್ತದೆ ಎಂಬುದು ಐಎಂಎಫ್, ವಿಶ್ವಬ್ಯಾಂಕ್​ನ ಅಂದಾಜು. ಭಾರತ, ಇಂಡೋನೇಷ್ಯಾ ಮೊದಲಾದ ಗ್ಲೋಬಲ್ ಸೌತ್ ದೇಶಗಳಿಗೆ ತಾರುಣ್ಯ ಜನರ ಸಂಖ್ಯೆಯೇ ಪ್ರಮುಖ ಶಕ್ತಿಯಾಗಲಿದೆ. ಭಾರತಕ್ಕೆ ಕಳೆದ ಹತ್ತು ವರ್ಷದಲ್ಲಿ ಆಗಿರುವ ರಚನಾತ್ಮಕ ಸುಧಾರಣೆಗಳು ಆರ್ಥಿಕ ಬೆಳವಣಿಗೆಗೆ ರಹದಾರಿ ಒದಗಿಸಲಿವೆ ಎನ್ನುತ್ತಾರೆ ಅಮಿತಾಭ್ ಕಾಂತ್.

ಕೆಲ ಸುಧಾರಣಾ ಕ್ರಮ ತಂದರೆ ಭಾರತಕ್ಕೆ ಶೇ. 8ರ ದರದಲ್ಲಿ ಬೆಳೆಯಲು ಸಾಧ್ಯ: ಡಬ್ಲ್ಯುಇಎಫ್ ಮುಖ್ಯಸ್ಥರ ಅನಿಸಿಕೆ

WEF president Borge Brende speaks on Indian economic growth: ಭಾರತದ ಆರ್ಥಿಕ ಬೆಳವಣಿಗೆಯ ವೇಗ ಮತ್ತೆ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ತಲುಪಲು ಅವಕಾಶ ಇದೆ ಎಂದು ಡಬ್ಲ್ಯುಇಎಫ್ ಸಿಇಒ ಹೇಳಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂನ ಐದು ದಿನಗಳ ಸಮಾವೇಶದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಭಾರತದ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಲಕ್ಷಕ್ಕೂ ಹೆಚ್ಚು ಇರುವ ಸ್ಟಾರ್ಟಪ್​ಗಳೇ ಅದಕ್ಕೆ ಬಲ ನೀಡಿವೆ ಎಂಬುದು ಬೋರ್ಜೆ ಬ್ರೆಂಡೆ ಹೇಳಿದ್ದಾರೆ.

ಭಾರತದ ಆರ್ಥಿಕತೆ ಮುಂದಿನ ವರ್ಷದೊಳಗೆ 4ನೇ ಸ್ಥಾನಕ್ಕೇರಲಿದೆ: ಪಿಎಚ್​ಡಿಸಿಸಿಐ ನಿರೀಕ್ಷೆ

Indian economy, income tax, repo rates projections by PHDCCI: ಭಾರತದ ಜಿಡಿಪಿ 2026ರೊಳಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಲಿದೆ ಎಂದು ಪಿಎಚ್​ಡಿಸಿಸಿಐ ಅಭಿಪ್ರಾಯಪಟ್ಟಿದೆ. ಭಾರತದಲ್ಲಿ ಪ್ರಸಕ್ತ ಆದಾಯ ತೆರಿಗೆ ಹೊರೆ ಅತಿಯಾಗಿದ್ದು, ಮಧ್ಯಮವರ್ಗದವರಿಗೆ ಅದನ್ನು ಇಳಿಸಬೇಕು ಎಂದು ಅದು ವಾದಿಸಿದೆ. ಮುಂಬರುವ ಆರ್​ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಬಹುದು ಎಂದೂ ಪಿಎಚ್​ಡಿಸಿಸಿಐ ನಿರೀಕ್ಷಿಸಿದೆ.

2025-26ರಲ್ಲಿ ಭಾರತದ ರಿಯಲ್ ಜಿಡಿಪಿ ಶೇ. 6.8, ನಾಮಿನಲ್ ಜಿಡಿಪಿ ಶೇ. 10.5 ಇರುವ ಸಾಧ್ಯತೆ

India real GDP and Nominal GDP: 2025-26ರ ಹಣಕಾಸು ವರ್ಷದಲ್ಲಿ ಭಾರತದ ನೈಜ ಜಿಡಿಪಿ ದರ ಶೇ. 6.8ರಷ್ಟಿರಬಹುದು ಎಂದು ಬ್ಯಾಂಕ್ ಆಫ್ ಬರೋಡಾದ ವರದಿಯೊಂದರಲ್ಲಿ ಅಂದಾಜಿಸಲಾಗಿದೆ. ಇದೇ ವರದಿಯ ಪ್ರಕಾರ ಆ ವರ್ಷದಲ್ಲಿ ನಾಮಿನಲ್ ಜಿಡಿಪಿ ಶೇ. 10.5ರಷ್ಟಿರಬಹುದು. ಬ್ಯುಸಿನೆಸ್ ಸ್ಟ್ಯಾಂಡರ್ಡ್ ನಡೆಸಿದ ಆರ್ಥಿಕ ತಜ್ಞರ ಸಮೀಕ್ಷೆಯಲ್ಲೂ ಆ ವರ್ಷದ ನಾಮಿನಲ್ ಜಿಡಿಪಿ ಬೆಳವಣಿಗೆ ಅಂದಾಜು ಶೇ. 10ರಿಂದ 11ರಷ್ಟಿರಬಹುದು ಎನ್ನಲಾಗಿದೆ.

ಭಾರತಕ್ಕೆ 2024ರ ಸಿಹಿ; ಆರ್ಥಿಕತೆಯಿಂದ ಹಿಡಿದು ಬಾಹ್ಯಾಕಾಶದವರೆಗೆ ಭಾರತ ಇಟ್ಟ ದೈತ್ಯ ಹೆಜ್ಜೆಗಳಿವು…

India at 2024: 2024ರಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಕಂಡಿದೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳ ನಡುವೆ ಭಾರತ ಗಟ್ಟಿ ಹೆಜ್ಜೆಗಳನ್ನಿಟ್ಟಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ. 8.2ರ ಮಟ್ಟದಲ್ಲಿತ್ತು. ಈ ವರ್ಷ ಶೇ. 6.5ರ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. 2024ರಲ್ಲಿ ಷೇರು ಮಾರುಕಟ್ಟೆ ಮಿಂಚಿನ ಬಂಡವಾಳ ಹರಿವು ಕಂಡಿದೆ. ಬಾಹ್ಯಾಕಾಶ ಯೋಜನೆಗಳು ದಟ್ಟವಾಗತೊಡಗಿವೆ.

ಲಂಡನ್‌ನ ಟರ್ಕಿಶ್ ಕಾನ್ಸುಲೇಟ್ ಹೊರಗೆ ಕುರಾನ್ ಸುಟ್ಟ ವ್ಯಕ್ತಿ
ಲಂಡನ್‌ನ ಟರ್ಕಿಶ್ ಕಾನ್ಸುಲೇಟ್ ಹೊರಗೆ ಕುರಾನ್ ಸುಟ್ಟ ವ್ಯಕ್ತಿ
ಮುಂದಿನ ಸಲ ಮಾತಾಡ್ತೀನಿ: ಪ್ರತಿಕ್ರಿಯೆ ನೀಡದೇ ಹೊರಟ ಪವಿತ್ರಾ ಗೌಡ
ಮುಂದಿನ ಸಲ ಮಾತಾಡ್ತೀನಿ: ಪ್ರತಿಕ್ರಿಯೆ ನೀಡದೇ ಹೊರಟ ಪವಿತ್ರಾ ಗೌಡ
ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್‌ ದಾಳಿ
ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್‌ ದಾಳಿ
ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ
ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ
ಯತ್ನಾಳ್​​ಗೆ ನೋಟೀಸ್ ಕೊಟ್ಟಿದ್ದು ನಾನಲ್ಲ, ಶಿಸ್ತು ಸಮಿತಿ: ವಿಜಯೇಂದ್ರ
ಯತ್ನಾಳ್​​ಗೆ ನೋಟೀಸ್ ಕೊಟ್ಟಿದ್ದು ನಾನಲ್ಲ, ಶಿಸ್ತು ಸಮಿತಿ: ವಿಜಯೇಂದ್ರ
ಮುಖ್ಯವಾಹಿನಿಗೆ ಬರುವ ಪ್ರಮಾಣಿಕ ಪ್ರಯತ್ನ ಬಾಗಪ್ಪ ಮಾಡುತ್ತಿದ್ದ: ಮಲಗೊಂಡ
ಮುಖ್ಯವಾಹಿನಿಗೆ ಬರುವ ಪ್ರಮಾಣಿಕ ಪ್ರಯತ್ನ ಬಾಗಪ್ಪ ಮಾಡುತ್ತಿದ್ದ: ಮಲಗೊಂಡ
‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು
‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು
ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್​ ಪಿ
ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್​ ಪಿ
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ