GDP
ಜಿಡಿಪಿ ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್. ಅಂದರೆ ಒಂದು ಪ್ರದೇಶದ ಸಮಗ್ರ ಉತ್ಪನ್ನ. ನಿರ್ದಿಷ್ಟ ದೇಶ ಅಥವಾ ಪ್ರದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ತಯಾರಾಗುವ ಎಲ್ಲಾ ಸರಕು ಮತ್ತು ಸೇವೆಗಳ ಮಾರುಕಟ್ಟೆ ಮೌಲ್ಯದ ಗಣನೆಯೇ ಜಿಡಿಪಿ ಆಗಿರುತ್ತದೆ. ಇಲ್ಲಿ ಮಾರುಕಟ್ಟೆ ಮೌಲ್ಯ ಎಂದರೆ ಸರಕು ಅಥವಾ ಸೇವೆ ಯಾವ ಬೆಲೆಗೆ ಅಂತಿಮ ಗ್ರಾಹಕನನ್ನು ಮುಟ್ಟುತ್ತದೆ ಎಂಬುದು. ಒಂದು ದೇಶದ ಆರ್ಥಿಕ ಪರಿಸ್ಥಿತಿಗೆ ಜಿಡಿಪಿ ಕೈಗನ್ನಡಿಯಂತೆ ಇರುತ್ತದೆ. ಇನ್ನು, ನಿರ್ದಿಷ್ಟ ಕಾಲಮಾನದಲ್ಲಿ ಜಿಡಿಪಿ ವ್ಯತ್ಯಯವಾಗುವುದಕ್ಕೆ ಜಿಡಿಪಿ ದರ ಎನ್ನುತ್ತಾರೆ. ಆರ್ಥಿಕ ಬೆಳವಣಿಗೆಯ ದರವೂ ಹೌದು. ಅತಿಹೆಚ್ಚು ಜಿಡಿಪಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ. ಭಾರತದ ಜಿಡಿಪಿ 2023ರಲ್ಲಿ 3 ಟ್ರಿಲಿಯನ್ ಡಾಲರ್ ಮುಟ್ಟಿತು. ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಅಮೆರಿಕದ ಜಿಡಿಪಿ 25 ಟ್ರಿಲಿಯನ್ ಡಾಲರ್ನಷ್ಟಿದೆ. ಚೀನಾ ಜಿಡಿಪಿ 18 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಇವೆರಡು ದೇಶಗಳ ಜಿಡಿಪಿ ಇತರರಿಗಿಂತ ಬಹಳ ಮುಂದಿದೆ.
ಇನ್ನೂ ಹೆಚ್ಚು ಓದಿಹೊಸ ಮೈಲಿಗಲ್ಲು ಮುಟ್ಟಿದ ಅಮೆರಿಕದ ಸಾಲ; ಹತ್ತು ವರ್ಷದಲ್ಲಿ ಸಾಲದ ಹೊರೆ ಎರಡು ಪಟ್ಟು ಏರಿಕೆ
US is the country with highest debt: ವಿಶ್ವದ ದೊಡ್ಡಣ್ಣ ಅಮೆರಿಕ ವಿಪರೀತ ಸಾಲ ಮಾಡುತ್ತಿದೆ. ಕಳೆದ 10 ವರ್ಷದಲ್ಲಿ ಅದರ ಸಾಲ ಎರಡು ಪಟ್ಟು ಹೆಚ್ಚಿದೆ. ಈಗ ಬಿಡುಗಡೆಯಾಗಿರುವ ವರದಿ ಪ್ರಕಾರ, ಅಮೆರಿಕದ ಒಟ್ಟು ರಾಷ್ಟ್ರೀಯ ಸಾಲ 40.047 ಟ್ರಿಲಿಯನ್ ಡಾಲರ್ ಆಗಿದೆ. ಈ ಮೈಲಿಗಲ್ಲು ಮುಟ್ಟಿದ ಮೊದಲ ದೇಶ ಅಮೆರಿಕ ಆಗಿದೆ.
- Vijaya Sarathy SN
- Updated on: Aug 20, 2026
- 2:10 pm
ಕರ್ನಾಟಕಕ್ಕೆ 2047ಕ್ಕೆ 3 ಟ್ರಿಲಿಯನ್ ಆರ್ಥಿಕತೆ ಗುರಿ; ಉದ್ಯೋಗ ಸಂಕಲ್ಪ, ಉದ್ಯೋಗ ನಿಧಿ, ಶಿಕ್ಷಣದಲ್ಲಿ ಎಐ ಇತ್ಯಾದಿ ಯೋಜನೆ ಪ್ರಕಟ
On India's 80th independence day, Karnataka CM DK Shivakumar announces various programmes for development: 2047ಕ್ಕೆ ಕರ್ನಾಟಕವನ್ನು ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿ ಮಾಡುವ ಮಹತ್ವಾಕಾಂಕ್ಷಿ ಗುರಿಯನ್ನು ಸಿಎಂ ಪ್ರಕಟಿಸಿದ್ದಾರೆ. ಉದ್ಯೋಗ ಸಂಕಲ್ಪ, ಉದ್ಯೋಗ ನಿಧಿ ಯೋಜನೆಗಳನ್ನು ಘೋಷಿಸಿರುವ ಡಿಕೆ ಶಿವಕುಮಾರ್, ಇವುಗಳಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಇಟ್ಟಿದ್ದಾರೆ. ಶಿಕ್ಷಣದಲ್ಲಿ ಎಐ ಸೇರಿದಂತೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ರಾಜ್ಯದ ಕೊಡುಗೆ ಹೆಚ್ಚಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
- Vijaya Sarathy SN
- Updated on: Aug 16, 2026
- 4:18 pm
ಸ್ವಾತಂತ್ರ್ಯೋತ್ತರ ಎಂಟು ದಶಕದಲ್ಲಿ ಭಾರತದ ಪ್ರಮುಖ ಸಾಧನೆಗಳೇನು? ಒಂದು ನೋಟ
1947-2026, What India achieved in eight decades after getting Independence: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 79 ವರ್ಷ ಆಗಿದೆ. ಬ್ರಿಟಿಷರಿಂದ ಬಳುವಳಿಯಾಗಿ ಬಂದಿದ್ದ ಆರ್ಥಿಕತೆಯನ್ನು ತಳದಿಂದ ರೂಪಿಸುವುದು ಅನಿವಾರ್ಯವಾಗಿತ್ತು. ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ಭಾರತ ಎಂಟು ದಶಕದಲ್ಲಿ ಸಾಧಿಸಿದ ಬೆಳವಣಿಗೆ ಮಹತ್ತರವಾದುದು. ಬಲಿಷ್ಠ ಸಾರ್ವಜನಿಕ ಉದ್ದಿಮೆಗಳು, ಶಿಕ್ಷಣ ಸಂಸ್ಥೆಗಳು, ವಿಜ್ಞಾನ ಸಂಸ್ಥೆಗಳು ಮೊದಲಾದವು ಭಾರತದ ಪ್ರಗತಿಗೆ ಪುಷ್ಟಿ ಕೊಟ್ಟಿವೆ.
- Vijaya Sarathy SN
- Updated on: Aug 14, 2026
- 5:12 pm
ಆರ್ಬಿಐ ಅಂದಾಜಿಗಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ: ಅರವಿಂದ್ ಪನಗರಿಯಾ
Indian economy to grow by atleast 7pc, says Arvind Panagariya: ಭಾರತದ ಆರ್ಥಿಕತೆಯು ಪ್ರಸಕ್ತ ಸಾಲಿನಲ್ಲಿ ಆರ್ಬಿಐನ ಅಂದಾಜನ್ನೂ ಮೀರಿಸಿ ಬೆಳೆಯಲಿದೆ ಎಂದು ಆರ್ಥಿಕಜ್ಞ ಅರವಿಂದ್ ಪನಗರಿಯಾ ಹೇಳಿದ್ದಾರೆ. ಕಳೆದ ವಾರದ ಎಂಪಿಸಿ ಸಭೆಯಲ್ಲಿ 2026-27ರ ವರ್ಷದಲ್ಲಿ ಜಿಡಿಪಿ ಶೇ. 6.7ರಷ್ಟು ಹೆಚ್ಚಬಹುದು ಎಂದು ಆರ್ಬಿಐ ಅಂದಾಜು ಮಾಡಿತ್ತು. ಅರವಿಂದ್ ಪನಗರಿಯಾ ಪ್ರಕಾರ ಆರ್ಥಿಕತೆಯು ಶೇ. 7ರ ದರದಲ್ಲಿ ಹೆಚ್ಚಬಹುದು.
- Vijaya Sarathy SN
- Updated on: Aug 10, 2026
- 9:19 pm
2050ರಲ್ಲಿ ಭಾರತ ಶ್ರೀಮಂತಿಕೆ ಸಾಧಿಸುವ ಮುನ್ನವೇ ಮುಪ್ಪಾಗಲಿದೆ: ಅಧ್ಯಯನ ವರದಿ
TRI white paper says India aging before becoming rich: ಭಾರತದಲ್ಲಿ 2050ರ ವೇಳೆ ಶೇ. 20ರಷ್ಟು ಜನಸಂಖ್ಯೆಯು ವೃದ್ಧಾಪ್ಯಕ್ಕೆ ಜಾರಿರುತ್ತದೆ ಎಂದು ವರದಿಯೊಂದು ಹೇಳಿದೆ. ಟ್ರಾನ್ಸ್ಫಾರ್ಮ್ ರೂರಲ್ ಇಂಡಿಯಾ ಎನ್ನುವ ಸಂಸ್ಥೆಯ ಅಧ್ಯಯನದ ಪ್ರಕಾರ 2050ರಲ್ಲಿ ಶೇ. 70ರಷ್ಟು ವೃದ್ಧರು ಹಳ್ಳಿಗಳಲ್ಲಿ ಇರುತ್ತಾರಂತೆ. ಭಾರತ ಮುಂದಿನ ಎರಡು ದಶಕದಲ್ಲಿ ಶ್ರೀಮಂತಿಕೆ ಸಾಧಿಸುವ ಮುನ್ನವೇ ಮುಪ್ಪಾಗುತ್ತಿರುವುದು ವೇದ್ಯವಾಗಿದೆ.
- Vijaya Sarathy SN
- Updated on: Aug 7, 2026
- 7:13 pm
ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು
RBI MPC meeting updates: ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿ ತನ್ನ ದರಗಳನ್ನು ಪ್ರಕಟಿಸಿದ್ದು, ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಿದೆ. ಇತರ ದರಗಳೂ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಜಿಡಿಪಿ ಈ ಹಣಕಾಸು ವರ್ಷ ಶೇ. 6.7ರಷ್ಟು ಉತ್ತಮ ಬೆಳವಣಿಗೆ ಕಾಣಬಹುದು ಎಂದು ಎಂಪಿಸಿ ಅಂದಾಜಿಸಿದೆ. ಹಣದುಬ್ಬರ ಶೇ. 5ಕ್ಕೆ ಸೀಮಿತವಾಗಬಹುದು ಎಂದು ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದೆ.
- Vijaya Sarathy SN
- Updated on: Aug 5, 2026
- 10:45 am
ಜಾಗತಿಕ ಅನಿಶ್ಚಿತತೆಯ ಸ್ಥಿತಿ ಮುಂದುವರಿಕೆಯಲ್ಲಿ ಆರ್ಬಿಐ ಎಂಪಿಸಿ ಸಭೆ ಬಡ್ಡಿ ದರ ಪರಿಷ್ಕರಿಸುತ್ತಾ?
RBI MPC meeting, policy decision announcement: ಆರ್ಬಿಐ ಮಾನಿಟರಿ ಪಾಲಿಸಿ ಕಮಿಟಿಯ ಮೂರು ದಿನಗಳ ಸಭೆ ಆಗಸ್ಟ್ 3ರಂದು ಆರಂಭವಾಗಿದೆ. ಆಗಸ್ಟ್ 5, ಬುಧವಾರದಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸಮಿತಿ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ರೆಪೋ ದರ, ಜಿಡಿಪಿ, ಹಣದುಬ್ಬರದ ಅಂದಾಜು ಬಗ್ಗೆ ಎಂಪಿಸಿ ಅಭಿಪ್ರಾಯವೇನು ಎನ್ನುವ ಕುತೂಹಲ ಇದೆ.
- Vijaya Sarathy SN
- Updated on: Aug 4, 2026
- 8:25 pm
ಮ್ಯಾನುಫ್ಯಾಕ್ಚರಿಂಗ್ಗೆ ಇದೆ ಸೂಚ್ಯಂಕ; ಈಗ ಸೇವಾ ವಲಯದ ಉತ್ಪಾದನೆಗೂ ಸರ್ಕಾರ ತಂದಿದೆ ಹೊಸ ಸೂಚ್ಯಂಕ
Know why India's new service sector production index is important: ಕೇಂದ್ರ ಸರ್ಕಾರ ಸೇವಾ ಕ್ಷೇತ್ರದಲ್ಲಿ ನಡೆಯುವ ಉತ್ಪಾದನೆಯನ್ನು ದಾಖಲಿಸಲು ಹೊಸ ಸೂಚ್ಯಂಕ ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಐಎಸ್ಪಿ ಸೂಚ್ಯಂಕ ಭರ್ಜರಿ ಬೆಳವಣಿಗೆ ದಾಖಲಿಸಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ಸೂಚ್ಯಂಕವು ಅಧಿಕೃತ ಸೇವಾ ಕ್ಷೇತ್ರವನ್ನು ಟ್ರ್ಯಾಕ್ ಮಾಡುತ್ತದೆ. ಮುಂದಿನ ದಿನಗಳಲ್ಲಿ ಸಮಗ್ರವಾಗಿ ಟ್ರ್ಯಾಕ್ ಮಾಡಲಿದೆ.
- Vijaya Sarathy SN
- Updated on: Jul 14, 2026
- 7:08 pm
ವಿಶ್ವ ಬ್ಯಾಂಕ್ನ ಮೇಲ್ಮಧ್ಯಮ ಆದಾಯ ಮಟ್ಟ ದಾಟಿದ ಕರ್ನಾಟಕ; ತಮಿಳುನಾಡನ್ನೂ ಮೀರಿಸಿದ ಕರುನಾಡು; ಟಾಪ್-5ನಲ್ಲಿ ದಕ್ಷಿಣ ರಾಜ್ಯಗಳೇ ಹೆಚ್ಚು
Karnataka among 5 states at rose to upper middle income level by World Bank report: ವಿಶ್ವಬ್ಯಾಂಕ್ನಿಂದ ವಿಶ್ವದ ವಿವಿಧ ದೇಶಗಳ ಆದಾಯ ವರ್ಗೀಕರಣದ ದತ್ತಾಂಶ ಬಿಡುಗಡೆಯಾಗಿದೆ. ಭಾರತ ಕೆಳ ಮಧ್ಯಮ ಆದಾಯ ಗುಂಪಿನಲ್ಲೇ ಮುಂದುವರಿದಿದೆ. ಆದರೆ, ಕರ್ನಾಟಕ ಸೇರಿ ಐದು ಭಾರತೀಯ ರಾಜ್ಯಗಳು ಮೇಲ್ಮಧ್ಯಮ ಆದಾಯ ಗುಂಪಿಗೆ ಏರಿವೆ. ಇನ್ನೂ ಮೂರು ರಾಜ್ಯಗಳು ಸ್ವಲ್ಪದರಲ್ಲಿ ಈ ಉನ್ನತ ಮಟ್ಟದಿಂದ ವಂಚಿತಗೊಂಡಿವೆ.
- Vijaya Sarathy SN
- Updated on: Jul 8, 2026
- 12:20 pm
ಬಲಿಷ್ಠ ಆರ್ಥಿಕ ಸೂಚಕಗಳು: ಭಾರತದ ಬೆಳವಣಿಗೆಯ ಹಾದಿ ಇನ್ನಷ್ಟು ಸುದೃಢ
Strong Economic Indicators Reinforce India's Growth Story: ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತದ ಆರ್ಥಿಕತೆ ವಿಚಲಿತಗೊಳ್ಳದೆ ಸ್ಥಿರ ಬೆಳವಣಿಗೆ ಕಾಣುತ್ತಿದೆ. ಇದು ಬಲಿಷ್ಠ ಆರ್ಥಿಕ ಬುನಾದಿ ಹಾಗೂ ವ್ಯವಸ್ಥೆಯ ದ್ಯೋತಕವಾಗಿದೆ. ಜಿಎಸ್ಟಿ ಸಂಗ್ರಹದಲ್ಲಿ ಸತತ ಹೆಚ್ಚಳ, ಉತ್ಪಾದನೆ ಸೂಚ್ಯಂಕ ಏರಿಕೆ, ಸರ್ಕಾರದ ಬಂಡವಾಳ ಹೆಚ್ಚಳ ಇತ್ಯಾದಿ ಸೂಚಕಗಳು ಉತ್ತಮವಾಗಿವೆ.
- Vijaya Sarathy SN
- Updated on: Jul 2, 2026
- 8:30 pm
ಈಗಲೂ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ವಿಶ್ವಬ್ಯಾಂಕ್ ವರದಿ
World Bank Report Highlights India's Strong GDP Growth: ವಿಶ್ವಬ್ಯಾಂಕ್ ವರದಿ ಪ್ರಕಾರ, ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ಅತಿ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಮುಂದುವರಿಯಲಿದೆ. ಬಲವಾದ ದೇಶೀಯ ಬೇಡಿಕೆ, ಸರ್ಕಾರದ ನೀತಿಗಳು ಮತ್ತು ರಫ್ತು ವಲಯದ ಸುಧಾರಣೆಯಿಂದ FY28 ರ ವೇಳೆಗೆ GDP ಬೆಳವಣಿಗೆ 7.2% ಕ್ಕೆ ತಲುಪಲಿದೆ. ಇದು ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಿದೆ.
- Vijaya Sarathy SN
- Updated on: Jun 12, 2026
- 1:43 pm
ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?
El Nino & India's Economy: ಮುಂಬರುವ 'ಎಲ್ ನಿನೊ' ಹವಾಮಾನ ವೈಪರೀತ್ಯದಿಂದ ಭಾರತಕ್ಕೆ $1 ಟ್ರಿಲಿಯನ್ ಆರ್ಥಿಕ ನಷ್ಟದ ಭೀತಿ ಎದುರಾಗಿದೆ. ದುರ್ಬಲ ಮುಂಗಾರು, ಕೃಷಿ ಉತ್ಪಾದನೆಯಲ್ಲಿ ಕುಸಿತ, ಆಹಾರ ಹಣದುಬ್ಬರ ಏರಿಕೆ, ನೀರಿನ ಕೊರತೆ ಮತ್ತು ವಿದ್ಯುತ್ ಅಭಾವ ಇದಕ್ಕೆ ಕಾರಣವಾಗಬಹುದು. ಇದು ದೇಶದ ಸಮಗ್ರ ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
- Vijaya Sarathy SN
- Updated on: Jun 5, 2026
- 6:48 pm