AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP

GDP

ಜಿಡಿಪಿ ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್. ಅಂದರೆ ಒಂದು ಪ್ರದೇಶದ ಸಮಗ್ರ ಉತ್ಪನ್ನ. ನಿರ್ದಿಷ್ಟ ದೇಶ ಅಥವಾ ಪ್ರದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ತಯಾರಾಗುವ ಎಲ್ಲಾ ಸರಕು ಮತ್ತು ಸೇವೆಗಳ ಮಾರುಕಟ್ಟೆ ಮೌಲ್ಯದ ಗಣನೆಯೇ ಜಿಡಿಪಿ ಆಗಿರುತ್ತದೆ. ಇಲ್ಲಿ ಮಾರುಕಟ್ಟೆ ಮೌಲ್ಯ ಎಂದರೆ ಸರಕು ಅಥವಾ ಸೇವೆ ಯಾವ ಬೆಲೆಗೆ ಅಂತಿಮ ಗ್ರಾಹಕನನ್ನು ಮುಟ್ಟುತ್ತದೆ ಎಂಬುದು. ಒಂದು ದೇಶದ ಆರ್ಥಿಕ ಪರಿಸ್ಥಿತಿಗೆ ಜಿಡಿಪಿ ಕೈಗನ್ನಡಿಯಂತೆ ಇರುತ್ತದೆ. ಇನ್ನು, ನಿರ್ದಿಷ್ಟ ಕಾಲಮಾನದಲ್ಲಿ ಜಿಡಿಪಿ ವ್ಯತ್ಯಯವಾಗುವುದಕ್ಕೆ ಜಿಡಿಪಿ ದರ ಎನ್ನುತ್ತಾರೆ. ಆರ್ಥಿಕ ಬೆಳವಣಿಗೆಯ ದರವೂ ಹೌದು. ಅತಿಹೆಚ್ಚು ಜಿಡಿಪಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ. ಭಾರತದ ಜಿಡಿಪಿ 2023ರಲ್ಲಿ 3 ಟ್ರಿಲಿಯನ್ ಡಾಲರ್ ಮುಟ್ಟಿತು. ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಅಮೆರಿಕದ ಜಿಡಿಪಿ 25 ಟ್ರಿಲಿಯನ್ ಡಾಲರ್​ನಷ್ಟಿದೆ. ಚೀನಾ ಜಿಡಿಪಿ 18 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಇವೆರಡು ದೇಶಗಳ ಜಿಡಿಪಿ ಇತರರಿಗಿಂತ ಬಹಳ ಮುಂದಿದೆ.

ಇನ್ನೂ ಹೆಚ್ಚು ಓದಿ

ಭಾರತದಲ್ಲಿ ಹೊಸ ಕೈಗಾರಿಕಾ ಕ್ರಾಂತಿ; ಆರು ವಲಯಗಳ ಉತ್ಕೃಷ್ಟ ಬೆಳವಣಿಗೆ: ಜೆಫರೀಸ್ ವರದಿ

ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ಮುಕ್ತಗೊಳಿಸಿದ್ದು, ಡೇಟಾ ಸೆಂಟರ್ಸ್​ಗೆ ತೆರಿಗೆ ವಿನಾಯಿತಿ ನೀಡಿದ್ದು ಇತ್ಯಾದಿ ಸುಧಾರಣಾ ಕ್ರಮಗಳಾಗಿವೆ. ಸರ್ಕಾರದ ಈ ಕ್ರಮಗಳು ಆರು ಕ್ಷೇತ್ರಗಳಲ್ಲಿ ಅದ್ವಿತೀಯ ಬೆಳವಣಿಗೆಗೆ ಕಾರಣವಾಗಿವೆ ಎಂದು ಜೆಫರೀಸ್ ವರದಿಯಲ್ಲಿ ಹೇಳಲಾಗಿದೆ. ಈ ಜಾಗತಿಕ ಹೂಡಿಕೆ ಬ್ಯಾಂಕ್​ನ ವರದಿ ಪ್ರಕಾರ, ಭಾರತದಲ್ಲಿ ಹೊಸ ಕೈಗಾರಿಕಾ ಕ್ರಾಂತಿ ಶುರುವಾಗಿದೆ.

ದೇಶದ ಪ್ರಗತಿ ಅಳೆಯಲು ಜಿಡಿಪಿ ಸಾಲದು; ವಿಶ್ವಸಂಸ್ಥೆ ಬೆಂಬಲಿತ ತಜ್ಞರಿಂದ 31 ಸೂಚಕಗಳ ಬಳಕೆಗೆ ಶಿಫಾರಸು

ಆರ್ಥಿಕ ಪ್ರಗತಿಯನ್ನು ಬಿಂಬಿಸುವ ಜಿಡಿಪಿಯನ್ನು ದೇಶದ ಪ್ರಗತಿಗೆ ಮಾನದಂಡವಾಗಿ ಬಳಸಲಾಗುತ್ತದೆ. ಆದರೆ, ದೇಶದ ಪ್ರಗತಿ ಸೂಚಿಸಲು ಜಿಡಿಪಿ ಮಾತ್ರವೇ ಸಾಲದು, ಇನ್ನೂ ಹಲವು ಅಂಶಗಳನ್ನು ಪರಿಗಣಿಸಬೇಕು ಎಂದು ಹೇಳಲಾಗುತ್ತಿದೆ. ವಿಶ್ವಸಂಸ್ಥೆ ನೇಮಿತ ತಜ್ಞರ ತಂಡವೊಂದು ಅಧ್ಯಯನ ಮಾಡಿ 31 ಸೂಚಕಗಳನ್ನು ತಯಾರಿಸಿ ಶಿಫಾರಸು ಮಾಡಿದೆ.

ಜಾಗತಿಕ ಅಸ್ಥಿರತೆಯ ಮಧ್ಯೆಯೂ ಭಾರತದ್ದು ಸುದೃಢ ಸ್ಥಾನ: ಉದ್ಯಮಿ ಅಜಯ್ ಪಿರಮಾಲ್

ಭಾರತದ ಒಟ್ಟಾರೆ ಆರ್ಥಿಕ ವಾತಾವರಣ ಉತ್ತಮವಾಗಿದೆ ಎಂದು ಉದ್ಯಮಿ ಅಜಯ್ ಪಿರಮಾಲ್ ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಅಸ್ಥಿರ ಅಂಶಗಳ ಮಧ್ಯೆ, ಇತರ ಹೆಚ್ಚಿನ ದೇಶಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿ ಸ್ಪರ್ಧಾತ್ಮಕವಾಗಿದೆ ಎಂದು ಪಿರಮಾಲ್ ಗ್ರೂಪ್ ಅಧ್ಯಕ್ಷರಾದ ಅವರು ಅಭಿಪ್ರಾಯಪಟ್ಟಿದ್ದಾರೆ. ಆಂತರಿಕ ಅನುಭೋಗ, ಖಾಸಗಿ ಹೂಡಿಕೆ, ಗಟ್ಟಿಯಾದ ಮಾರುಕಟ್ಟೆ, ಉತ್ತಮಗೊಳ್ಳುತ್ತಿರುವ ಮೂಲಸೌಕರ್ಯ ಇವೆಲ್ಲಾ ಅಂಶಗಳು ಭಾರತಕ್ಕೆ ಅನುಕೂಲ ತಂದಿವೆ ಎಂದಿದ್ದಾರೆ.

ಭಾರತದ ಶೇ 7.8 ಜಿಡಿಪಿ ದರ ಸಮರ್ಥಿಸಿದ ವಿಶ್ವಬ್ಯಾಂಕ್ ಅಧಿಕಾರಿ; ಸಾಕ್ಷ್ಯ ಸೂಚಕಗಳನ್ನು ಉಲ್ಲೇಖಿಸಿದ ನೀಲಕಂಠ ಮಿಶ್ರಾ

2026ರ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಬೆಳೆದಿರುವುದರ ಬಗ್ಗೆ ಹಲವರಿಗೆ ಅನುಮಾನಗಳೆದ್ದಿವೆ. ಬೆಳವಣಿಗೆ ಆಗಿರುವುದು ಶೇ. 7.8 ಅಲ್ಲ, ಶೇ. 2.6 ಮಾತ್ರ ಎಂದು ಕೆಲವರು ವಾದಿಸುತ್ತಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಒಂದು ಪೋಸ್ಟ್ ಹಾಕಿರುವ ವಿಶ್ವಬ್ಯಾಂಕ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ನೀಲಕಂಠ ಮಿಶ್ರಾ ಅವರು ಜಿಡಿಪಿ ದತ್ತಾಂಶವನ್ನು ಸಮರ್ಥಿಸಿದ್ದಾರೆ.

ಭಾರತದ ಆರ್ಥಿಕ ಪ್ರಗತಿ ಕುರಿತು ವಿಪಕ್ಷಗಳಿಂದ ಅಪಪ್ರಚಾರ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಕಿಡಿ

ಮೊದಲ ಕ್ವಾರ್ಟರ್​ನಲ್ಲಿ ದಾಖಲಾದ ಶೇ. 7.8ರ ಜಿಡಿಪಿ ದರದ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಲೇವಡಿ ವಿರುದ್ಧ ಕೇಂದ್ರ ಸಚಿವ ಪಿಯೂಷ್ ಗೋಯಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳು ನಿರುದ್ಯೋಗ ಇತ್ಯಾದಿ ಕ್ಷೇತ್ರದಲ್ಲಿನ ಸುಳ್ಳು ಅಂಕಿ ಅಂಶಗಳನ್ನು ಮುಂದಿಟ್ಟು ಜಿಡಿಪಿ ಬೆಳವಣಿಗೆ ಬಗ್ಗೆ ಅನುಮಾನ ಪಡುತ್ತಿವೆ ಎಂದು ಗೋಯಲ್ ಹೇಳಿದ್ದಾರೆ.

ಜಿಡಿಪಿ ದತ್ತಾಂಶದ ಬಗ್ಗೆ ಎದ್ದ ಗೊಂದಲಗಳಿಗೆ ಕೇಂದ್ರದಿಂದ ಸ್ಪಷ್ಟನೆ; ವಿವಿಧ ಪ್ರಶ್ನೆಗಳಿಗೆ ಸಮಾಧಾನ

ಭಾರತದ ಆರ್ಥಿಕತೆಯು ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ನಿರೀಕ್ಷೆಮೀರಿದ ಶೇ. 7.8ರಷ್ಟು ಬೆಳವಣಿಗೆ ಹೊಂದಿದೆ. ಈ ಜಿಡಿಪಿ ದತ್ತಾಂಶದ ಬಗ್ಗೆ ಎದ್ದಿದ್ದ ಗೊಂದಲಗಳಿಗೆ ಸಮಾಧಾನ ನೀಡಲು ಕೇಂದ್ರ ಸಾಂಖ್ಯಿಕ ಸಚಿವಾಲಯವು ಇಂದು ಸ್ಪಷ್ಟೀಕರಣ ನೀಡಿದೆ. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ನಕಾರಾತ್ಮಕ ಡೀಫ್ಲೇಟರ್, ಜಿಡಿಪಿ ಪರಿಷ್ಕರಣೆ, ಸಿಪಿಐ ಡಬ್ಲ್ಯುಪಿಐ ವ್ಯತ್ಯಾಸಗಳು ಇತ್ಯಾದಿ ವಿಚಾರದ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಟ್ಟಿದೆ.

ಜಾಗತಿಕ ರಂಗದಲ್ಲಿ ಭಾರತದ ಹೊಳಪು: ಶೇ. 7.8 ಜಿಡಿಪಿ ವೃದ್ಧಿಯನ್ನು ಶ್ಲಾಘಿಸಿದ ನಿರ್ಮಲಾ ಸೀತಾರಾಮನ್

Nirmala Sitharaman happy with 7.8pc GDP growth: ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಹೆಚ್ಚಿದ್ದು, ನಿರೀಕ್ಷೆಮೀರಿದ ಬೆಳವಣಿಗೆ ಹೊಂದಿದೆ. ಜಾಗತಿಕವಾಗಿ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಮುಂಚೂಣಿಯಲ್ಲಿ ಮುಂದುವರಿದಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಾಗತಿಕ ರಂಗದಲ್ಲಿ ಭಾರತದ ಹೊಳಪು ಹೆಚ್ಚಿದೆ ಎಂದು ಬಣ್ಣಿಸಿದ್ದಾರೆ.

GDP Growth: ಜಾಗತಿಕ ಯುದ್ಧ, ಪೂರೈಕೆ ಬಿಕ್ಕಟ್ಟಿನ ನಡುವೆಯೂ ಶೇ.7.8ರಷ್ಟು ಜಿಡಿಪಿ ಜಿಗಿತ: ಟೀಕಾಕಾರರಿಗೆ ಪ್ರಧಾನಿ ಮೋದಿ ತಿರುಗೇಟು

PM Narendra Modi on India’s GDP Growth: ಜಾಗತಿಕ ಯುದ್ಧ ಮತ್ತು ಪೂರೈಕೆ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ. ಇದು ಆರ್‌ಬಿಐ ಅಂದಾಜನ್ನೂ ಮೀರಿಸಿದೆ. ಪ್ರಧಾನಿ ಮೋದಿ ಈ ಯಶಸ್ಸನ್ನು ಶ್ಲಾಘಿಸಿ, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಸೇವಾ, ರಿಯಲ್ ಎಸ್ಟೇಟ್ ಕ್ಷೇತ್ರಗಳ ಬಲದಿಂದ ಭಾರತ ಅತಿ ವೇಗದ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?

Reasons why Indian economy grew faster that expected in Q1 of 27fy: 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆದು ಅಚ್ಚರಿ ಸೃಷ್ಟಿಸಿದೆ. ಯುದ್ಧ, ತೈಲ ಬಿಕ್ಕಟ್ಟು, ಜಾಗತಿಕ ಆರ್ಥಿಕ ಮಂದಗತಿ ನಡುವೆ ಭಾರತ ಉತ್ತಮ ಬೆಳವಣಿಗೆ ದಾಖಲಿಸಿದ್ದು ಹೇಗೆ? ಆಂತರಿಕ ಅನುಭೋಗ, ಉತ್ಪಾದನೆ ಹೆಚ್ಚಳ ಮೊದಲಾದ ಕೆಲ ಕಾರಣಗಳಿಂದ ಜಿಡಿಪಿ ವೃದ್ಧಿ ಉತ್ತಮವಾಗಿದೆ.

ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಭರ್ಜರಿ ಶೇ. 7.8 ಏರಿಕೆ; ಅದ್ಭುತ ಸಾಧನೆ ಎಂದ ಪ್ರಧಾನಿ ಮೋದಿ

PM Modi hails India's GDP growth of 7.8pc growth in 2026 April-June quarter: ಭಾರತದ ಆರ್ಥಿಕತೆಯು ಮೊದಲ ತ್ರೈಮಾಸಿಕವಾದ ಏಪ್ರಿಲ್-ಜೂನ್ ಅವಧಿಯಲ್ಲಿ ಶೇ. 7.8ರಷ್ಟು ಅಚ್ಚರಿ ಬೆಳವಣಿಗೆ ಸಾಧಿಸಿದೆ. ಇದು ಆರ್​ಬಿಐ ಒಳಗೊಂಡಂತೆ ಹೆಚ್ಚಿನ ಏಜೆನ್ಸಿಗಳು, ಆರ್ಥಿಕ ತಜ್ಞರು ನಿರೀಕ್ಷಿಸಿದುದಕ್ಕಿಂತಲೂ ಉತ್ತಮ ಬೆಳವಣಿಗೆ ದರವಾಗಿದೆ. ಕಳೆದ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಕಂಡ ಬೆಳವಣಿಗೆಯೇ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ದಾಖಲಾಗಿದೆ.

ಅಮೆರಿಕದ ಭಾರೀ ಸಾಲ; ಬಡ್ಡಿ ಕಟ್ಟಲು ಹೊಸ ಸಾಲ; ಬಾಂಡ್ ಈಲ್ಡ್ ಕುಸಿತ; ಚಿನ್ನದ ಬೆಲೆ ಏರುತ್ತಾ?

US huge debt may lead to crisis in global finance market: ಅಮೆರಿಕ ತನ್ನ ಜಿಡಿಪಿಗೆ ಸಮನಾದಷ್ಟು ಮೊತ್ತದ ಸಾಲಗಳನ್ನು ಮಾಡಿ ಕೂತಿದೆ. ವಿಶ್ವದ ದೊಡ್ಡಣ್ಣನ ಮೈದುಂಬಿರುವ ಸಾಲ ಜಾಗತಿಕ ಹಣಕಾಸು ಮಾರುಕಟ್ಟೆಯನ್ನು ತಲ್ಲಣಗೊಳಿಸುತ್ತಿದೆ. ಅಮೆರಿಕ ತನ್ನ ಸಾಲಕ್ಕೆ ಬಡ್ಡಿ ಕಟ್ಟಲೇ ಹೊಸ ಸಾಲ ಮಾಡಬೇಕಾದ ಅನಿವಾರ್ಯತೆ ಇದೆ. ಬಾಂಡ್​ಗಳ ಮೇಲೆ ಬಾಂಡ್​ಗಳನ್ನು ಅಮೆರಿಕ ವಿತರಿಸುತ್ತಿದೆ. ಇದರಿಂದ ಚಿನ್ನದ ಬೆಲೆ ಗಣನೀಯವಾಗಿ ಏರುತ್ತಾ?

ಅಮೆರಿಕದ ಸುಂಕ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಭಾರತೀಯ ಆರ್ಥಿಕತೆ ಬಲವಾಗಿದೆ: ಆರ್‌ಬಿಐ

RBI bulletin observes resilience in Indian economy: ಹಲವು ಜಾಗತಿಕ ಅಡೆತಡೆಗಳ ನಡುವೆಯೂ ಭಾರತದ ಆರ್ಥಿಕತೆಯು ದೃಢತೆಯನ್ನು ತೋರುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್​ನ ವರದಿಯೊಂದು ಹೇಳಿದೆ. ಆಂತರಿಕ ಬೇಡಿಕೆ ಹೆಚ್ಚಾಗಿರುವುದು, ಉತ್ಪಾದನೆ, ಸೇವಾ ಕ್ಷೇತ್ರಗಳ ಚಟುವಟಿಕೆ ಉತ್ತಮವಾಗಿರುವುದು ಆರ್ಥಿಕತೆಗೆ ಬಲ ಕೊಟ್ಟಿದೆ. ಈ ವರ್ಷ ಉತ್ತಮ ಮುಂಗಾರು ಮಳೆ, ವಿದೇಶೀ ಬಂಡವಾಳ ಒಳಹರಿವು ಸಕಾರಾತ್ಮಕವಾಗಿರುವ ಅಂಶಗಳೆನ್ನಲಾಗಿದೆ.

ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಙಷ್ಟನೆ: ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಙಷ್ಟನೆ: ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ
ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಸಂಭ್ರಮ
ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಸಂಭ್ರಮ
ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಟಿ ನರಸೀಪುರದಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಅಸಮಾಧಾನ ಸ್ಫೋಟ!
ಮೈಸೂರಿನಲ್ಲಿ ಸಿದ್ದರಾಮಯ್ಯ ನೂತನ ಗೃಹಪ್ರವೇಶ: ಹೋಮ-ಹವನ, ಪೂಜೆ
ಮೈಸೂರಿನಲ್ಲಿ ಸಿದ್ದರಾಮಯ್ಯ ನೂತನ ಗೃಹಪ್ರವೇಶ: ಹೋಮ-ಹವನ, ಪೂಜೆ