AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐನಿಂದ ಕೋಡಿಂಗ್ ಕೆಲಸಕ್ಕೆ ಕತ್ತರಿ; ಭಾರತದ ಐಟಿ ಸೆಕ್ಟರ್ ಕಥೆ ಹೇಗೆ? ಸಾಫ್ಟ್​ವೇರ್ ಕಂಪನಿಗಳ ಮುಂದಿನ ದಾರಿ ಏನು?

Artificial Intelligence effect on Indian IT industry: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸಾಕಷ್ಟು ವೇಗದಲ್ಲಿ ಬೆಳೆಯುತ್ತಿದ್ದು, ವಿಶ್ವದ ಹೆಚ್ಚಿನ ಉದ್ಯಮಗಳ ಮೇಲೆ ಇದರ ಪರಿಣಾಮ ಬೀರುತ್ತದೆ. ಆದರೆ, ಸಾಫ್ಟ್​ವೇರ್ ಸೇವೆಗಳಿಗೆ ಹೆಚ್ಚಿನ ಹೊಡೆತ ಕೊಡಲಿದೆ. ಭಾರತದ ಐಟಿ ಸೆಕ್ಟರ್ ಬುನಾದಿಯೇ ಇಂಥ ಸಾಫ್ಟ್​ವೇರ್ ಸರ್ವಿಸ್​ಗಳೇ. ಬಿಟ್ಸ್ ಪಿಲಾನಿ ಗ್ರೂಪ್ ವೈಸ್ ಚಾನ್ಸಲರ್ ರಾಮಗೋಪಾಲ್ ರಾವ್ ಪ್ರಕಾರ ಸಾಂಪ್ರದಾಯಿಕ ಐಟಿ ಸರ್ವಿಸ್ ಕೆಲಸಗಳೆಲ್ಲವನ್ನೂ ಎಐ ಏಜೆಂಟ್​ಗಳೇ ನಿಭಾಯಿಸುತ್ತವೆ. ಭಾರತೀಯ ಐಟಿ ಕಂಪನಿಗಳು ಈ ಸೆಕ್ಟರ್​ನ ವ್ಯಾಲ್ಯೂ ಚೈನ್​ನಲ್ಲಿ ಮೇಲೇರುವುದು ಅನಿವಾರ್ಯ.

ಎಐನಿಂದ ಕೋಡಿಂಗ್ ಕೆಲಸಕ್ಕೆ ಕತ್ತರಿ; ಭಾರತದ ಐಟಿ ಸೆಕ್ಟರ್ ಕಥೆ ಹೇಗೆ? ಸಾಫ್ಟ್​ವೇರ್ ಕಂಪನಿಗಳ ಮುಂದಿನ ದಾರಿ ಏನು?
ಎಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 16, 2025 | 4:24 PM

Share

ನವದೆಹಲಿ, ಫೆಬ್ರುವರಿ 16: ಗೂಗಲ್​ನ ಕ್ಲಿಷ್ಟಕರ ತಂತ್ರಾಂಶದಲ್ಲಿ ಕಾಲುಭಾಗದಷ್ಟನ್ನು ಎಐ ನೆರವಿನಿಂದಲೇ ಮಾಡಲಾಗುತ್ತದೆ ಎಂದು ಇತ್ತೀಚೆಗೆ ಆ ಕಂಪನಿಯ ಸಿಇಒ ಸುಂದರ್ ಪಿಚೈ ಹೇಳಿದ್ದರು. ಹಾಗೆಯೇ, ಸಾಫ್ಟ್​ವೇರ್ ಡೆವಲಪರ್​ಗಳ ಕೆಲಸವನ್ನು ತಮ್ಮ ಎಐ ಏಜೆಂಟ್​ಗಳು ಮಾಡಬಲ್ಲುವು ಎಂದು ಓಪನ್​ಎಐ ಸಂಸ್ಥೆಯ ಸಿಇಒ ಕೂಡ ಹೇಳಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಉದ್ಯಮದವರೆಲ್ಲರೂ ಬಹುತೇಕ ಇದೇ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ಬಿಟ್ಸ್ ಪಿಲಾನಿ ಶಿಕ್ಷಣ ಸಂಸ್ಥೆಯ ಗ್ರೂಪ್ ವೈಸ್-ಚಾನ್ಸಲರ್ ಡಾ| ರಾಮಗೋಪಾಲ್ ರಾವ್ ಪ್ರಕಾರ ಪ್ರಮುಖ ಎಐ ಕಂಪನಿಗಳು ಶೇ. 25ರಿಂದ 30ರಷ್ಟು ಕೋಡಿಂಗ್ ಮಾಡುತ್ತಿವೆಯಂತೆ. ತಾನು ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಖುದ್ದಾಗಿ ತಿಳಿದುಕೊಂಡ ವಿಷಯ ಎಂದು ಹೇಳಿದ್ದಾರೆ ರಾವ್.

ಗಂಭೀರವಾದ ಸಂಗತಿ ಎಂದರೆ, ಈಗ ಸಾಫ್ಟ್​ವೇರ್ ಸರ್ವಿಸ್ ಕೆಲಸಗಳಿಗೆ ಈಗ ಕುತ್ತು ಬರುತ್ತಿದೆ. ಮುಂದಿನ ದಿನಗಳಲ್ಲಿ ಎಐನಿಂದ ಮಾಡಲು ಸಾಧ್ಯವಿಲ್ಲದ ಸ್ಥಾನಗಳಿಗೆ ಮಾತ್ರ ನೇಮಕಾತಿ ಆಗಬೇಕಾಗುತ್ತದೆ. ಸಾಫ್ಟ್​ವೇರ್ ಡೆವಲಪ್ಮೆಂಟ್​ನ ನಿಯಮಗಳನ್ನು ಎಐ ಮರುಸೃಷ್ಟಿಸುತ್ತಿದೆಯಂತೆ. ಹಾಗಂತ ರಾಮಗೋಪಾಲ್ ರಾವ್ ತಮ್ಮ ಎಕ್ಸ್​ನಲ್ಲಿ ಹಾಕಿರುವ ಪೋಸ್ಟ್​ವೊಂದರಲ್ಲಿ ತಿಳಿಸಿದ್ದಾರೆ.

ಅಮೆರಿಕದ ಕಂಪನಿಗಳು ತಮ್ಮ ಐಟಿ ವೆಚ್ಚ ಉಳಿಸಲು ಸಾಫ್ಟ್​ವೇರ್ ಸರ್ವಿಸ್​ಗಳಿಗಾಗಿ ಭಾರತೀಯ ಐಟಿ ಕಂಪನಿಗಳಿಗೆ ಹೊರಗುತ್ತಿಗೆ ನೀಡುತ್ತವೆ. ಆದರೆ, ಈಗ ಎಐ ಚಾಲಿತ ಆಟೊಮೇಶನ್​ನಿಂದಾಗಿ ಭಾರತೀಯರಿಗೆ ಇರುವ ಒಂದು ಅವಕಾಶ ಕೈತಪ್ಪಬಹುದು. ಭಾರತೀಯ ಕಂಪನಿಗಳು ವ್ಯಾಲ್ಯೂ ಚೈನ್​ನಲ್ಲಿ ಮೇಲೆ ಹೋಗಬೇಕು. ಎಐ ಕನ್ಸಲ್ಟಿಂಗ್, ಆಟೊಮೇಶನ್ ಸಲ್ಯೂಶನ್ಸ್ ಇತ್ಯಾದಿ ಸೇವೆಗಳನ್ನು ಒದಗಿಸುವ ಕೆಲಸ ಮಾಡಬೇಕು ಎಂಬುದು ಬಿಟ್ಸ್ ಪಿಲಾನ್ ವೈಸ್ ಚಾನ್ಸಲರ್ ಹೇಳಿದ್ದಾರೆ.

ಇದನ್ನೂ ಓದಿ: BSNL: 17 ವರ್ಷಗಳ ಬಳಿಕ ನಷ್ಟದಿಂದ ಮೇಲೆದ್ದ ಬಿಎಸ್​ಎನ್​ಎಲ್; ಈ ಬಾರಿ 262 ಕೋಟಿ ರೂ. ಲಾಭ

ಎಐನಿಂದಾಗಿ ವಿಶ್ವಾದ್ಯಂತ ಸಾಕಷ್ಟು ಉದ್ಯೋಗನಷ್ಟ ಆಗುತ್ತದೆ ಎನ್ನುವುದಕ್ಕೆ ಈಗಾಗಲೇ ಬಲವಾದ ಪುರಾವೆಗಳು ಸಿಕ್ಕಿವೆ. ಗೂಗಲ್, ಓಪನ್​ಎಐ, ಮೈಕ್ರೋಸಾಫ್ಟ್ ಇತ್ಯಾದಿ ಸಂಸ್ಥೆಗಳು ಉದ್ಯೋಗಿಗಳಿಗೆ ಕತ್ತರಿ ಹಾಕುತ್ತಿವೆ. ಕಳೆದ ವರ್ಷ ಗೂಗಲ್ ಸಂಸ್ಥೆ ಎಐ ಮರುರಚನೆ ಹೆಸರಲ್ಲಿ ಒಂದು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟಿತ್ತು. ಓಪನ್ ಎಐನಂತೆ ಮೆಟಾ ಕೂಡ ಎಐ ಏಜೆಂಟ್​ಗಳನ್ನು ನಿರ್ಮಿಸುತ್ತಿದ್ದು, ಈ ಯಂತ್ರಗಳು ಸಂಕೀರ್ಣ ಸಾಫ್ಟ್​ವೇರ್ ಮತ್ತು ಕೋಡಿಂಗ್ ಮಾಡಬಲ್ಲುವಂತೆ. ಹೀಗಾಗಿ, ಭಾರತೀಯ ಐಟಿ ಕಂಪನಿಗಳು ತಮ್ಮ ಕೆಲಸದ ರೂಪುರೇಖೆ ಬದಲಿಸಿಕೊಳ್ಳುವುದು ಅನಿವಾರ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Sun, 16 February 25

Follow Us
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?