AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indus: ಆಂಡ್ರಾಯ್ಡ್ ಮಾರುಕಟ್ಟೆಗೆ ಭಾರತದ್ದೇ ಇಂಡಸ್ ಆ್ಯಪ್​ಸ್ಟೋರ್ ಲಗ್ಗೆ; ದೇಶೀಯ ಮೊಬೈಲ್ ಬ್ರ್ಯಾಂಡ್ ಅಭಿವೃದ್ಧಿಗೆ ಸರ್ಕಾರ ಆಸಕ್ತಿ

PhonePe Releases Indus Appstore: ಗೂಗಲ್​ನ ಪ್ಲೇಸ್ಟೋರ್​ಗೆ ಸ್ಪರ್ಧೆ ಒಡ್ಡಬಲ್ಲಂತಹ ಮತ್ತು ದೇಶೀಯವಾಗಿ ನಿರ್ಮಿತವಾದ ಇಂಡಸ್ ಆ್ಯಪ್​ಸ್ಟೋರ್ ಅನ್ನು ಫೋನ್​ಪೆ ಅನಾವರಣಗೊಳಿಸಿದೆ. 2025ರ ಏಪ್ರಿಲ್ 1ರವರೆಗೂ ಈ ಪ್ಲೇಸ್ಟೋರ್​ನಲ್ಲಿ ಆ್ಯಪ್ ಲಿಸ್ಟಿಂಗ್​ಗೆ ಯಾವುದೇ ಶುಲ್ಕ ನೀಡುವಂತಿಲ್ಲ. ಸ್ಯಾಮ್ಸುಂಗ್, ಆ್ಯಪಲ್ ಇತ್ಯಾದಿಯಂತೆ ಭಾರತದ್ದೇ ಒಂದು ಮೊಬೈಲ್ ಫೋನ್ ಬ್ರ್ಯಾಂಡ್ ಅನ್ನು ಸ್ಥಾಪಿಸಲು ಸರ್ಕಾರ ಆಸಕ್ತಿ ತೋರಿದೆ.

Indus: ಆಂಡ್ರಾಯ್ಡ್ ಮಾರುಕಟ್ಟೆಗೆ ಭಾರತದ್ದೇ ಇಂಡಸ್ ಆ್ಯಪ್​ಸ್ಟೋರ್ ಲಗ್ಗೆ; ದೇಶೀಯ ಮೊಬೈಲ್ ಬ್ರ್ಯಾಂಡ್ ಅಭಿವೃದ್ಧಿಗೆ ಸರ್ಕಾರ ಆಸಕ್ತಿ
ಅಶ್ವಿನಿ ವೈಷ್ಣವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 22, 2024 | 6:14 PM

Share

ನವದೆಹಲಿ, ಫೆಬ್ರುವರಿ 22: ಗೂಗಲ್​ನ ಪ್ಲೇ ಸ್ಟೋರ್ ಮತ್ತು ಆ್ಯಪಲ್​ನ ಆಪ್​ಸ್ಟೋರ್ ಪ್ರಾಬಲ್ಯ ಇರುವ ಮೊಬೈಲ್ ಆ್ಯಪ್​ಗಳ ಮಾರುಕಟ್ಟೆಸ್ಥಳಕ್ಕೆ ಈಗ ಇಂಡಸ್ ಆ್ಯಪ್​ಸ್ಟೋರ್ (Indus Appstore) ಲಗ್ಗೆ ಇಟ್ಟಿದೆ. ಭಾರತದ ನಂಬರ್ ಒನ್ ಯುಪಿಐ ಆ್ಯಪ್ ಎನಿಸಿರುವ ಫೋನ್​ಪೇ (PhonePe) ಇದೀಗ ಇಂಡಸ್ ಆ್ಯಪ್​ಸ್ಟೋರ್ ಅನ್ನು ಅನಾವರಣಗೊಳಿಸಿದೆ. ಆಂಡ್ರಾಯ್ಡ್ ಆ್ಯಪ್​ಗಳಿಗೆ ಪ್ಲಾಟ್​ಫಾರ್ಮ್ ಆಗಿರುವ ಇಂಡಸ್ ಆ್ಯಪ್​ಸ್ಟೋರ್ ಅನ್ನು ಸಂಪೂರ್ಣ ದೇಶೀಯವಾಗಿಯೇ ನಿರ್ಮಿಸಲಾಗಿದೆ. ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿರುವ ಈ ಆ್ಯಪ್ ಸ್ಟೋರ್​ನಲ್ಲಿ 12 ಭಾರತೀಯ ಭಾಷೆಗಳಲ್ಲಿ 2,00,000ಕ್ಕೂ ಹೆಚ್ಚು ಆ್ಯಪ್ ಮತ್ತು ಗೇಮ್​ಗಳಿವೆ.

ಈ ಮಾರುಕಟ್ಟೆಯಲ್ಲಿ ಆರಂಭಿಕ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಲಾಗಿದೆ. ಆ್ಯಪ್ ಡೆವಲಪರುಗಳು ಈ ಸ್ಟೋರ್​ನಲ್ಲಿ ತಮ್ಮ ಆ್ಯಪ್​ಗಳನ್ನು ಲಿಸ್ಟ್ ಮಾಡಲು ಯಾವುದೇ ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ. ಈ ವಿನಾಯಿತಿ ಒಂದು ವರ್ಷ ಇರುತ್ತದೆ. 2025ರ ಏಪ್ರಿಲ್ 1ರವರೆಗೂ ಲಿಸ್ಟಿಂಗ್ ಉಚಿತವಾಗಿರುತ್ತದೆ. ಹಾಗೆಯೇ, ಥರ್ಡ್ ಪಾರ್ಟಿ ಪಾವತಿ ಅವಕಾಶ ಕೊಡಲಾಗುತ್ತದೆ.

ಇದನ್ನೂ ಓದಿ: ನಲವತ್ತಕ್ಕೂ ಹೆಚ್ಚು ಕಂಪನಿಗಳ ಒಡೆಯರಾಗಿದ್ದಾರೆ ಫ್ಲಿಪ್​ಕಾರ್ಟ್​ನ ಮಾಜಿ ಉದ್ಯೋಗಿಗಳು

ಭಾರತದ್ದೇ ಸ್ವಂತ ಮೊಬೈಲ್ ಫೋನ್ ಬ್ರ್ಯಾಂಡ್​ಗೆ ಸರ್ಕಾರದ ಚಿಂತನೆ

ಭಾರತದಲ್ಲಿ ಈಗ ಸಾಕಷ್ಟು ಮೊಬೈಲ್ ಫೋನ್​ಗಳ ಉತ್ಪಾದನೆ ಕಾರ್ಯ ನಡೆಯುತ್ತಿದೆ. ಬಹಳಷ್ಟು ಬಿಡಿಭಾಗಗಳೂ ಕೂಡ ಭಾರತದಲ್ಲಿ ಈಗ ತಯಾರಾಗುತ್ತಿವೆ. ಈ ಯಶಸ್ಸಿನ ಉಮೇದಿನಲ್ಲಿ ಭಾರತದ್ದೇ ಮೊಬೈಲ್ ಫೋನ್ ಬ್ರ್ಯಾಂಡ್ ಅಭಿವೃದ್ಧಿಪಡಿಸಲು ಸರ್ಕಾರ ಆಸಕ್ತಿ ತೋರಿದೆ. ಫೋನ್​ಪೇ ವತಿಯಿಂದ ಇಂಡಸ್ ಆ್ಯಪ್​ಸ್ಟೋರ್​ನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶೀಯ ಮೊಬೈಲ್ ಬ್ರ್ಯಾಂಡ್ ತಯಾರಿಸುವ ಸುಳಿವು ನೀಡಿದ್ದಾರೆ.

‘ಭಾರತೀಯ ಮೊಬೈಲ್ ಫೋನ್ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ದೇಶದಲ್ಲಿ ಸಮಗ್ರ ಮೊಬೈಲ್ ಇಕೋಸಿಸ್ಟಂ ನಿರ್ಮಿಸುವುದು ನಮ್ಮ ಗುರಿ. ದೊಡ್ಡ ಮಟ್ಟದಲ್ಲಿ ಮೊಬೈಲ್ ತಯಾರಿಕೆಯಲ್ಲಿ ನಮಗೆ ಸಿಕ್ಕಿರುವ ಆರಂಭಿಕ ಯಶಸ್ಸಿನಿಂದಾಗಿ ಉದ್ಯಮದ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಮೊಬೈಲ್ ಉತ್ಪಾದನೆಯ ವ್ಯವಸ್ಥೆಯಲ್ಲಿರುವ ಪಾಲುದಾರರು ಭಾರತಕ್ಕೆ ಬರಲು ಬಯಸಿದ್ದಾರೆ. ಮುಂದಿನ ಐದು ವರ್ಷದಲ್ಲಿ ಈ ಪ್ರಯಾಣ ಪೂರ್ಣಗೊಳ್ಳುತ್ತದೆ,’ ಎಂದು ಸಚಿವ ಎ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಬೈಜುಸ್ ಸಿಇಒಗೆ ಲುಕ್ ಔಟ್ ಸರ್ಕುಲಾರ್ ನೋಟೀಸ್ ಹೊರಡಿಸಲು ಇಡಿ ಯತ್ನ

ಇದೇ ವೇಳೆ, ಬಹಳ ಶೀಘ್ರದಲ್ಲೇ ಎರಡರಿಂದ ಮೂರು ಸೆಮಿಕಂಡಕ್ಟರ್ ಚಿಪ್ ಘಟಕಗಳಿಗೆ ಸರ್ಕಾರ ಅನುಮೋದನೆ ಕೊಡಲಿದೆ. ಮುಂದಿನ ಐದು ವರ್ಷದಲ್ಲಿ ಮೂರ್ನಾಲ್ಕು ಉಚ್ಚ ಗುಣಮಟ್ಟದ ಬೃಹತ್ ಫ್ಯಾಬ್ರಿಕೇಶನ್ ಯೂನಿಟ್​ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಒಂದಾದರೂ ಉತ್ಪನ್ನ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬರಲು ಬಯಸಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವರು ವಿವರಿಸಿದ್ಧಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು