AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಶಕ್ತಿಯಾಗುವತ್ತ ಭಾರತ; ಸೆಮಿಕಂಡಕ್ಟರ್ ಮಿಷನ್​ನ ಮೊದಲ ಹೆಜ್ಜೆ ಯಶಸ್ವಿ, ಎರಡನೇ ಹೆಜ್ಜೆಗೆ ಹೊಸ ಹುಮ್ಮಸ್ಸು

India semiconductor mission: 2021ರ ಡಿಸೆಂಬರ್​ನಲ್ಲಿ ಆರಂಭವಾದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್​ನ ಗುರಿ ಮತ್ತು ಉದ್ದೇಶ ಈಡೇರಿದೆ. ದೇಶದಲ್ಲಿ ಸೆಮಿಕಂಡ್ಟರ್ ಉದ್ಯಮಕ್ಕೆ ಉತ್ತಮ ತಳಹದಿ ನಿರ್ಮಾಣವಾಗಿದೆ. ಮೂರು ವರ್ಷದಲ್ಲಿ ಐದು ಸೆಮಿಕಂಡಕ್ಟರ್ ಯೂನಿಟ್​ಗಳ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಇನ್ನು ಮೂರು ವರ್ಷದೊಳಗೆ ಇವು ಕಾರ್ಯಾರಂಭಿಸುತ್ತವೆ. ಈಗ ಎರಡನೇ ಹಂತದ ಮಿಷನ್ ಆರಂಭಿಸುವ ಸಮಯ ಎಂದು ಉದ್ಯಮ ವಲಯ ಹೇಳುತ್ತಿದೆ.

ಸಿಲಿಕಾನ್ ಶಕ್ತಿಯಾಗುವತ್ತ ಭಾರತ; ಸೆಮಿಕಂಡಕ್ಟರ್ ಮಿಷನ್​ನ ಮೊದಲ ಹೆಜ್ಜೆ ಯಶಸ್ವಿ, ಎರಡನೇ ಹೆಜ್ಜೆಗೆ ಹೊಸ ಹುಮ್ಮಸ್ಸು
ಸೆಮಿಕಂಡಕ್ಟರ್ ಮಿಷನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 21, 2024 | 11:44 AM

Share

ನವದೆಹಲಿ, ಅಕ್ಟೋಬರ್ 21: ಮೂರು ವರ್ಷಗಳ ಹಿಂದೆ ಆರಂಭವಾದ ಇಂಡಿಯಾ ಸೆಮಿಕಂಡಕ್ಟರ್ ಮಿಶನ್​ನ (ಐಎಸ್​ಎಂ) ಗುರಿ ಬಹುತೇಕ ಈಡೇರಿದೆ. ಈ ಮಿಷನ್​ನ ಅಡಿಯಲ್ಲಿ ಬರುವ 76,000 ಕೋಟಿ ರೂ ಪ್ರೋತ್ಸಾಹಕ ನಿಧಿ ತನ್ನ ಕೆಲಸ ಮಾಡಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಇದು ತಳಹದಿ ನಿರ್ಮಿಸಲುವಲ್ಲಿ ಯಶಸ್ವಿಯಾಗಿದೆ. ಮಿಷನ್ ಆರಂಭವಾಗಿ 34 ತಿಂಗಳಲ್ಲಿ ಐದು ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಇವೆಲ್ಲವೂ ಕೂಡ ಇನ್ನು ಮೂರು ವರ್ಷದೊಳಗೆ ಕಾರ್ಯನಿರ್ವಹಣೆಗೆ ತೊಡಗಲಿವೆ.

ನಾಲ್ಕು ಚಿಪ್ ಪ್ಯಾಕೇಜಿಂಗ್ ಘಟಕಗಳು ಮತ್ತು ಒಂದು ಚಿಪ್ ಫ್ಯಾಬ್ ಘಟಕ 2027ರೊಳಗೆ ಚಾಲನೆಗೆ ಬರಲಿವೆ. ಈ ಐದು ಸೆಮಿಕಂಡಕ್ಟರ್ ಘಟಕಗಳು ಸದ್ಯ ನಿರ್ಮಾಣ ಹಂತದಲ್ಲಿವೆ. ಭಾರತಕ್ಕೆ ಹೊಸತಾಗಿರುವ ಈ ಉದ್ಯಮ ಇಷ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತದೆ ಎಂದು ನಿರೀಕ್ಷಿಸಿದವರು ಕಡಿಮೆಯೇ.

ಇದನ್ನೂ ಓದಿ: ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಭಾರತದಿಂದ ವಾಹನಗಳ ರಫ್ತು ಶೇ. 14ರಷ್ಟು ಹೆಚ್ಚಳ; ಜಾಗತಿಕವಾಗಿ ಮಿಂಚುತ್ತಿರುವ ಮೇಡ್ ಇನ್ ಇಂಡಿಯಾ ವಾಹನಗಳು

ಅಮೆರಿಕದ ಮೈಕ್ರಾನ್ ಸಂಸ್ಥೆ ಭಾರತದಲ್ಲಿ 2.75 ಬಿಲಿಯನ್ ಡಾಲರ್ ಹೂಡಿಕೆಯಲ್ಲಿ ಚಿಪ್ ಅಸೆಂಬ್ಲಿಂಗ್, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ ಯೂನಿಟ್ ಅನ್ನು ನಿರ್ಮಿಸುತ್ತಿದೆ. ಭಾರತದ ಟಾಟಾ ಎಲೆಕ್ಟ್ರಾನಿಕ್ಸ್, ಕೇನಸ್ ಟೆಕ್ನಾಲಜಿ, ಸಿಜಿ ಪವರ್, ಮುರುಗಪ್ಪ ಗ್ರೂಪ್ ಮೊದಲಾದ ಕಂಪನಿಗಳು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಅಡಿ ಇಟ್ಟಿವೆ. ದೇಶದ ಸೆಮಿಕಂಡಕ್ಟರ್ ಇಕೋಸಿಸ್ಟಂ ಈಗ ಜಾಗತಿಕವಾಗಿ ವ್ಯವಹಾರಕ್ಕೆ ತೊಡಗಲು ಸಿದ್ಧವಾಗಿರುವ ಸ್ಪಷ್ಟ ಸಂದೇಶ ರವಾನೆಯಾಗಿದೆ.

ಎರಡನೇ ಹಂತದ ಯೋಜನೆಗೆ ಸಜ್ಜಾಗಬೇಕು…

ಭಾರತದ ಸೆಮಿಕಂಡಕ್ಟರ್ ಮಿಷನ್​ನ ಮೊದಲ ಹಂತದ ಯೋಜನೆಯ ಉದ್ದೇಶ ಬಹುತೇಕ ಪೂರ್ಣಗೊಂಡಿದೆ. ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್​ಗೆ ಅಗತ್ಯವಿರುವ ತಳಹದಿಯನ್ನು ನಿರ್ಮಿಸಲಾಗಿದೆ. ಮುಂದಿನ ಸುದೀರ್ಘ ಪ್ರಯಾಣದ ಆರಂಭ ಮಾತ್ರ ಇದು ಎಂದು ಭಾರತೀಯ ಸೆಲೂಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಸಂಘಟನೆಯ ಅಧ್ಯಕ್ಷ ಪಂಕ್ ಮೊಹಿಂದ್ರೂ ಹೇಳುತ್ತಾರೆ.

ಇದನ್ನೂ ಓದಿ: ಭಾರತದಲ್ಲಿ ಸ್ಟಾರ್ಟಪ್​ಗಳಿಗೆ ಮತ್ತೆ ಫಂಡಿಂಗ್ ಸುಗ್ಗಿ; ಒಂದೇ ವಾರದಲ್ಲಿ ಮೂರು ಪಟ್ಟು ಬಂಡವಾಳ ಹೆಚ್ಚಳ

ಎರಡನೇ ಹಂತದ ಮಿಷನ್ ಜಾರಿಗೊಳಿಸಿದರೆ ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳ ಜೊತೆ ಸಹಭಾಗಿತ್ವ ಸಾಧಿಸಲು ಗಮನ ಕೊಡಬಹುದು. ಚಿಪ್ ತಯಾರಿಕೆ ಬೇಕಾದ ರಾಸಾಯನಿಕ, ಅನಿಲ ಇತ್ಯಾದಿ ಕಚ್ಚಾ ವಸ್ತುಗಳ ಇಕೋಸಿಸ್ಟಂ ಅನ್ನು ಬಲಪಡಿಸಬಹುದು. ದೇಶದೊಳಗೆ ಈ ಉದ್ಯಮಕ್ಕೆ ಅಗತ್ಯ ಇರುವ ಕೌಶಲ್ಯವಂತ ಉದ್ಯೋಗಿಗಳನ್ನು ನಿರ್ಮಿಸುವುದು ಇವೇ ಮುಂತಾದ ಗುರಿ ಸಾಧನೆಗೆ ಗಮನ ಹರಿಸುವ ಅಗತ್ಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ