AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market: ಭಾರತದ ಷೇರುಮಾರುಕಟ್ಟೆಗೆ ಟಿ+1 ಟ್ರೇಡಿಂಗ್ ಸೈಕಲ್; ಇದು ವಿಶ್ವದಲ್ಲೇ ಪ್ರಥಮ

T+1 Trading Cycle: ಷೇರು ಖರೀದಿಸಿ ಎರಡು ದಿನದ ಬಳಿಕ ಡಿಮ್ಯಾಟ್ ಖಾತೆಗೆ ಷೇರು ಜಮೆಯಾಗುತ್ತದೆ. ಇದೀಗ ಅದರ ಅವಧಿಯನ್ನು ಒಂದು ದಿನಕ್ಕೆ ಇಳಿಸಲಾಗುತ್ತಿದೆ ಎಂದು ಸೆಬಿ ಹೇಳಿದೆ. ಜನವರಿ 27ರಿಂದ ಟಿ+1 ಟ್ರೇಡಿಂಗ್ ಸೈಕಲ್​ನ ವ್ಯವಸ್ಥೆ ಬರಲಿದೆಯಂತೆ.

Share Market: ಭಾರತದ ಷೇರುಮಾರುಕಟ್ಟೆಗೆ ಟಿ+1 ಟ್ರೇಡಿಂಗ್ ಸೈಕಲ್; ಇದು ವಿಶ್ವದಲ್ಲೇ ಪ್ರಥಮ
ಸೆಬಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2023 | 6:42 PM

ನವದೆಹಲಿ, ಜುಲೈ 24: ಭಾರತದ ಷೇರು ಮಾರುಕಟ್ಟೆಯಲ್ಲಿ (Indian Stock Markets) ನಾವೀನ್ಯತೆಯ ಸ್ಪರ್ಶ ತರಲಾಗಿದೆ. ಷೇರುಪೇಟೆಗಳ ಟ್ರೇಡಿಂಗ್ ಚಕ್ರದ ಅವಧಿ ಕಡಿಮೆ ಮಾಡಲಾಗಿದೆ. ಜನವರಿ 27ರಿಂದ ಟಿ+1 ಟ್ರೇಡಿಂಗ್ ಸೈಕಲ್ (Trading Cycle) ಬರಲಿದೆ. ಈಗಿರುವ ಷೇರುಪೇಟೆ ವ್ಯವಸ್ಥೆಯಲ್ಲಿ ಟಿ+2 ವೃತ್ತದ ಸೂತ್ರವನ್ನು ಅನುಸರಿಸಲಾಗುತ್ತಿದೆ. ಇದು ಷೇರು ವಹಿವಾಟಿಗೆ ಅನ್ವಯ ಆಗುವ ಸೂತ್ರ. ಉದಾಹರಣೆಗೆ, ಟಿ+2 ಟ್ರೇಡಿಂಗ್ ಸೈಕಲ್ ಎಂದರೆ ನೀವು ಷೇರು ಖರೀದಿ ಮಾಡಿದ 2 ಎರಡು ದಿನದ ಬಳಿಕ ಅದು ನಿಮ್ಮ ಡಿಮ್ಯಾಟ್ ಅಕೌಂಟ್​ಗೆ ವರ್ಗಾವಣೆ ಆಗುತ್ತದೆ. ಅದೇ ಟಿ+1 ಸೈಕಲ್ ಜಾರಿಗೆ ಬಂದರೆ ಒಂದೇ ದಿನದಲ್ಲಿ ಷೇರು ಡೀಮ್ಯಾಟ್ ಖಾತೆಗೆ ಜಮೆ ಆಗುತ್ತದೆ. ನೀವು ಷೇರು ಖರೀದಿಸಿದ ಒಂದು ದಿನದ ಬಳಿಕ ಅದನ್ನು ಮಾರಬಹುದು.

ಒಂದೇ ದಿನದ ಟ್ರೇಡಿಂಗ್ ಸೈಕಲ್ ಅಳವಡಿಸಿರುವ ಮೊದಲ ಪ್ರಮುಖ ದೇಶ ಎಂದರೆ ಭಾರತವೇ. ಅಮೆರಿಕ ಇತ್ಯಾವುದೇ ಮುಖ್ಯ ದೇಶಗಳ ಷೇರುಪೇಟೆಗಳಲ್ಲಿ ಈ ಕ್ಷಿಪ್ರ ಸೆಟಲ್ಮೆಂಟ್ ಸಿಸ್ಟಂ ಇಲ್ಲ.

ಸೆಬಿ ಛೇರ್ಮನ್ ಮಾಧಬಿ ಪುರಿ ಬುಚ್ ಅವರು ಜುಲೈ 24ರಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಭಾರತದ ಷೇರುಮಾರುಕಟ್ಟೆಯಲ್ಲಿ ಟಿ+1 ಟ್ರೇಡಿಂಗ್ ಸೆಟಲ್ಮೆಂಟ್ ವ್ಯವಸ್ಥೆ ಜಾರಿಗೆ ತರುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

ರಿಯಲ್​ಟೈಮ್ ಸೆಟಲ್ಮೆಂಟ್ ವ್ಯವಸ್ಥೆ ಬರಲಿದೆಯಾ?

ಷೇರು ವಹಿವಾಟುಗಳ ಕ್ಷಿಪ್ರ ಸೆಟಲ್ಮೆಂಟ್ ಜಾರಿಗೆ ತರಲು ಯತ್ನಿಸುತ್ತಿದ್ದೇವೆ. ಆ ದಿನ ದೂರ ಇಲ್ಲ ಎಂದೂ ಸೆಬಿ ಮುಖ್ಯಸ್ಥೆ ಹೇಳಿದ್ದಾರೆ. ಷೇರು ವಹಿವಾಟುಗಳ ಸೆಟಲ್ಮೆಂಟ್ ರಿಯಲ್ ಟೈಮ್​ನಲ್ಲಿ ಆಗುವ ಸಾಧ್ಯತೆ ಬಗ್ಗೆ ಮಾಧಬಿ ಪುರಿ ಪ್ರಸ್ತಾಪಿಸಿರುವ ಸಾಧ್ಯತೆ ಇದೆ. ಅಂದರೆ ಷೇರು ಖರೀದಿಸಿದ ತತ್​ಕ್ಷಣವೇ ಅದು ಡೀಮ್ಯಾಟ್ ಅಕೌಂಟ್​ಗೆ ಜಮೆ ಆಗುವ ವ್ಯವಸ್ಥೆ ಶೀಘ್ರದಲ್ಲಿ ಬರಬಹುದು ಎಂದು ನಿರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ