AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market: ಭಾರತದ ಷೇರುಮಾರುಕಟ್ಟೆಗೆ ಟಿ+1 ಟ್ರೇಡಿಂಗ್ ಸೈಕಲ್; ಇದು ವಿಶ್ವದಲ್ಲೇ ಪ್ರಥಮ

T+1 Trading Cycle: ಷೇರು ಖರೀದಿಸಿ ಎರಡು ದಿನದ ಬಳಿಕ ಡಿಮ್ಯಾಟ್ ಖಾತೆಗೆ ಷೇರು ಜಮೆಯಾಗುತ್ತದೆ. ಇದೀಗ ಅದರ ಅವಧಿಯನ್ನು ಒಂದು ದಿನಕ್ಕೆ ಇಳಿಸಲಾಗುತ್ತಿದೆ ಎಂದು ಸೆಬಿ ಹೇಳಿದೆ. ಜನವರಿ 27ರಿಂದ ಟಿ+1 ಟ್ರೇಡಿಂಗ್ ಸೈಕಲ್​ನ ವ್ಯವಸ್ಥೆ ಬರಲಿದೆಯಂತೆ.

Share Market: ಭಾರತದ ಷೇರುಮಾರುಕಟ್ಟೆಗೆ ಟಿ+1 ಟ್ರೇಡಿಂಗ್ ಸೈಕಲ್; ಇದು ವಿಶ್ವದಲ್ಲೇ ಪ್ರಥಮ
ಸೆಬಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2023 | 6:42 PM

Share

ನವದೆಹಲಿ, ಜುಲೈ 24: ಭಾರತದ ಷೇರು ಮಾರುಕಟ್ಟೆಯಲ್ಲಿ (Indian Stock Markets) ನಾವೀನ್ಯತೆಯ ಸ್ಪರ್ಶ ತರಲಾಗಿದೆ. ಷೇರುಪೇಟೆಗಳ ಟ್ರೇಡಿಂಗ್ ಚಕ್ರದ ಅವಧಿ ಕಡಿಮೆ ಮಾಡಲಾಗಿದೆ. ಜನವರಿ 27ರಿಂದ ಟಿ+1 ಟ್ರೇಡಿಂಗ್ ಸೈಕಲ್ (Trading Cycle) ಬರಲಿದೆ. ಈಗಿರುವ ಷೇರುಪೇಟೆ ವ್ಯವಸ್ಥೆಯಲ್ಲಿ ಟಿ+2 ವೃತ್ತದ ಸೂತ್ರವನ್ನು ಅನುಸರಿಸಲಾಗುತ್ತಿದೆ. ಇದು ಷೇರು ವಹಿವಾಟಿಗೆ ಅನ್ವಯ ಆಗುವ ಸೂತ್ರ. ಉದಾಹರಣೆಗೆ, ಟಿ+2 ಟ್ರೇಡಿಂಗ್ ಸೈಕಲ್ ಎಂದರೆ ನೀವು ಷೇರು ಖರೀದಿ ಮಾಡಿದ 2 ಎರಡು ದಿನದ ಬಳಿಕ ಅದು ನಿಮ್ಮ ಡಿಮ್ಯಾಟ್ ಅಕೌಂಟ್​ಗೆ ವರ್ಗಾವಣೆ ಆಗುತ್ತದೆ. ಅದೇ ಟಿ+1 ಸೈಕಲ್ ಜಾರಿಗೆ ಬಂದರೆ ಒಂದೇ ದಿನದಲ್ಲಿ ಷೇರು ಡೀಮ್ಯಾಟ್ ಖಾತೆಗೆ ಜಮೆ ಆಗುತ್ತದೆ. ನೀವು ಷೇರು ಖರೀದಿಸಿದ ಒಂದು ದಿನದ ಬಳಿಕ ಅದನ್ನು ಮಾರಬಹುದು.

ಒಂದೇ ದಿನದ ಟ್ರೇಡಿಂಗ್ ಸೈಕಲ್ ಅಳವಡಿಸಿರುವ ಮೊದಲ ಪ್ರಮುಖ ದೇಶ ಎಂದರೆ ಭಾರತವೇ. ಅಮೆರಿಕ ಇತ್ಯಾವುದೇ ಮುಖ್ಯ ದೇಶಗಳ ಷೇರುಪೇಟೆಗಳಲ್ಲಿ ಈ ಕ್ಷಿಪ್ರ ಸೆಟಲ್ಮೆಂಟ್ ಸಿಸ್ಟಂ ಇಲ್ಲ.

ಸೆಬಿ ಛೇರ್ಮನ್ ಮಾಧಬಿ ಪುರಿ ಬುಚ್ ಅವರು ಜುಲೈ 24ರಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಭಾರತದ ಷೇರುಮಾರುಕಟ್ಟೆಯಲ್ಲಿ ಟಿ+1 ಟ್ರೇಡಿಂಗ್ ಸೆಟಲ್ಮೆಂಟ್ ವ್ಯವಸ್ಥೆ ಜಾರಿಗೆ ತರುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

ರಿಯಲ್​ಟೈಮ್ ಸೆಟಲ್ಮೆಂಟ್ ವ್ಯವಸ್ಥೆ ಬರಲಿದೆಯಾ?

ಷೇರು ವಹಿವಾಟುಗಳ ಕ್ಷಿಪ್ರ ಸೆಟಲ್ಮೆಂಟ್ ಜಾರಿಗೆ ತರಲು ಯತ್ನಿಸುತ್ತಿದ್ದೇವೆ. ಆ ದಿನ ದೂರ ಇಲ್ಲ ಎಂದೂ ಸೆಬಿ ಮುಖ್ಯಸ್ಥೆ ಹೇಳಿದ್ದಾರೆ. ಷೇರು ವಹಿವಾಟುಗಳ ಸೆಟಲ್ಮೆಂಟ್ ರಿಯಲ್ ಟೈಮ್​ನಲ್ಲಿ ಆಗುವ ಸಾಧ್ಯತೆ ಬಗ್ಗೆ ಮಾಧಬಿ ಪುರಿ ಪ್ರಸ್ತಾಪಿಸಿರುವ ಸಾಧ್ಯತೆ ಇದೆ. ಅಂದರೆ ಷೇರು ಖರೀದಿಸಿದ ತತ್​ಕ್ಷಣವೇ ಅದು ಡೀಮ್ಯಾಟ್ ಅಕೌಂಟ್​ಗೆ ಜಮೆ ಆಗುವ ವ್ಯವಸ್ಥೆ ಶೀಘ್ರದಲ್ಲಿ ಬರಬಹುದು ಎಂದು ನಿರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!