AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯ ಆರ್ಥಿಕ ಸಲಹೆಗಾರರಾಗಿ ಮುಂದುವರಿಯಲಿರುವ ಅನಂತನಾಗೇಶ್ವರನ್; ಎರಡು ವರ್ಷ ಅವರ ಅಧಿಕಾರಾವಧಿ ವಿಸ್ತರಣೆ

V Anantha Nageswaran to be CEA for 2 more years: ವಿ ಅನಂತ ನಾಗೇಶ್ವರನ್ ಅವರು ಇನ್ನೂ ಎರಡು ವರ್ಷ ಮುಖ್ಯ ಆರ್ಥಿಕ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. 2022ರ ಜನವರಿಯಲ್ಲಿ ಸಿಇಎ ಆಗಿ ನೇಮಕವಾಗಿದ್ದ ಅವರ ಅಧಿಕಾರಾವಧಿ ಈ ವರ್ಷ ಅಂತ್ಯವಾಗುತ್ತಿದೆ. ಪ್ರಧಾನಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಅನಂತನಾಗೇಶ್ವರನ್ ಅವರನ್ನು ಸಿಇಎ ಆಗಿ ಮುಂದುವರಿಸುವ ನಿರ್ಧಾರ ಮಾಡಿತು. 2027ರ ಮಾರ್ಚ್ 31ರವರೆಗೂ ಅವರು ಸಿಇಎ ಆಗಿರಲಿದ್ದಾರೆ.

ಮುಖ್ಯ ಆರ್ಥಿಕ ಸಲಹೆಗಾರರಾಗಿ ಮುಂದುವರಿಯಲಿರುವ ಅನಂತನಾಗೇಶ್ವರನ್; ಎರಡು ವರ್ಷ ಅವರ ಅಧಿಕಾರಾವಧಿ ವಿಸ್ತರಣೆ
ವಿ ಅನಂತನಾಗೇಶ್ವರನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2025 | 5:27 PM

Share

ನವದೆಹಲಿ, ಫೆಬ್ರುವರಿ 20: ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ಅವರ ಅಧಿಕಾರಾವಧಿ ಇನ್ನೂ ಎರಡು ವರ್ಷ ವಿಸ್ತರಣೆ ಆಗಿದೆ. 2027ರ ಮಾರ್ಚ್ 31ರವರೆಗೂ ಅವರು ಭಾರತದ ಸಿಇಎ ಆಗಿ ಮುಂದುವರಿಯಲಿದ್ದಾರೆ. 2022ರಲ್ಲಿ ಅವರನ್ನು ಸರ್ಕಾರ ತನ್ನ ಮುಖ್ಯ ಆರ್ಥಿಕ ಸಲಹೆಗಾರರನ್ನಲಾಗಿ ಮೂರು ವರ್ಷಗಳಿಗೆ ನೇಮಕ ಮಾಡಿತ್ತು. 2022ರ ಜನವರಿ 28ರಂದು ಅವರು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ವರ್ಷ ಮಾರ್ಚ್ 31ರವರೆಗೆ ಅವರ ಅಧಿಕಾರಾವಧಿ ಇತ್ತು. ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ವಿ ಅನಂತನಾಗೇಶ್ವನ್ ಅವರನ್ನು ಇನ್ನೂ ಎರಡು ವರ್ಷ ಸಿಇಎ ಆಗಿ ಮುಂದುವರಿಸುವ ನಿರ್ಧಾರ ಮಾಡಿದೆ.

ಸಿಇಎ ಜವಾಬ್ದಾರಿಗಳು ಏನೇನು?

ಭಾರತದ ಮುಖ್ಯ ಆರ್ಥಿಕ ಸಲಹೆಗಾರರು, ಆ ಹುದ್ದೆಯ ಹೆಸರೇ ಸೂಚಿಸುವಂತೆ ಅವರು ಸರ್ಕಾರಕ್ಕೆ ಆರ್ಥಿಕ ವಿಚಾರದಲ್ಲಿ ಸಲಹೆಗಳನ್ನು ನೀಡುತ್ತಾರೆ. ಸರ್ಕಾರದ ಆರ್ಥಿಕ ನೀತಿ ರೂಪಿಸುವ ಕಾರ್ಯದಲ್ಲಿ ಸಿಇಎ ಪಾತ್ರ ಪ್ರಮುಖವಾಗಿರುತ್ತದೆ. ಹಾಗೆಯೇ, ಬಜೆಟ್ ಸಂದರ್ಭದಲ್ಲಿ ನಡೆಸಲಾಗುವ ಆರ್ಥಿಕ ಸಮೀಕ್ಷೆಯೂ ಕೂಡ ಸಿಇಎ ಮಾರ್ಗದರ್ಶನದ ಅಡಿಯಲ್ಲೇ ನಡೆಯುತ್ತದೆ. ದೇಶದ ಪ್ರಸಕ್ತ ಆರ್ಥಿಕ ಸ್ಥಿತಿ ಹೇಗಿದೆ, ಸಕಾರಾತ್ಮಕ ಮತ್ತು ನಕಾರಾತ್ಮಕ ಎನಿಸುವ ಅಂಶಗಳೇನಿವೆ, ಭವಿಷ್ಯದಲ್ಲಿ ಆರ್ಥಿಕತೆಯ ಗತಿ ಹೇಗಿರಬಹುದು, ಯಾವೆಲ್ಲಾ ಶಕ್ತಿ ಬಳಸಿ ಆರ್ಥಿಕತೆಗೆ ಪುಷ್ಟಿ ನೀಡಬಹುದು ಎನ್ನುವುದನ್ನು ಎಕನಾಮಿಕ್ ಸರ್ವೆಯಲ್ಲಿ ತಿಳಿಸಲಾಗುತ್ತದೆ.

ಇದನ್ನೂ ಓದಿ: ಧೂಮಪಾನಿಗಳಿಗೆ ಮತ್ತಷ್ಟು ಬಿಸಿ..! ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಮತ್ತಷ್ಟು ತೆರಿಗೆ ಹಾಕಲು ಸರ್ಕಾರ ಯೋಜನೆ

ಅನಂತ ನಾಗೇಶ್ವರನ್ ಹಿನ್ನೆಲೆ ಏನು?

ತಮಿಳುನಾಡಿನವರಾದ 62 ವರ್ಷದ ವೆಂಕಟರಮಣನ್ ಅನಂತನಾಗೇಶ್ವರನ್ ಅವರು ಮದುರೈನಲ್ಲಿ ಶಾಲೆ ಮತ್ತು ಕಾಲೇಜು ಶಿಕ್ಷಣ ಪಡೆದು ಬಳಿಕ ಅಹ್ಮದಾಬಾದ್ ಐಐಎಂ ಹಾಗು ಅಮೆರಿಕದ ಮಸಾಚುಸೆಟ್ಸ್ ಅಮ್ಹರ್ಸ್ಟ್​ನ ಐಸನ್​ಬರ್ಕ್ ಮ್ಯಾನೇಜ್ಮೆಂಟ್ ಸ್ಕೂಲ್​ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.

ಸ್ವಿಸ್ ಯೂನಿಯನ್ ಬ್ಯಾಂಕ್, ಕ್ರೆಡಿಟ್ ಸ್ವೀಸ್ ಸೇರಿದಂತೆ 17 ವರ್ಷ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದ್ದರು. ವಿವಿಧ ಭಾರತೀಯ ಕಂಪನಿಗಳ ಮಂಡಳಿಗಳಲ್ಲಿ ಸದಸ್ಯರಾಗಿದ್ದರು. ಆವಿಸ್ಕಾರ್ ಇಂಡಿಯಾ ಮೈಕ್ರೋ ವೆಂಚರ್ ಕ್ಯಾಪಿಟಲ್ ಫಂಡ್​ನ ಸಹ-ಸಂಸ್ಥಾಪಕರಾಗಿದ್ದರು. ಸಾರ್ವಜನಿಕ ನೀತಿ ವಿಚಾರದಲ್ಲಿ ಚಿಂತನ ವೇದಿಕೆಯಾದ ತಕ್ಷಶಿಲಾ ಇನ್ಸ್​​ಟಿಟ್ಯೂಟ್​ನ ಸ್ಥಾಪಕರೂ ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ