AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Economy: 2022-23ರಲ್ಲಿ ಭಾರತಕ್ಕೆ ಒಳ್ಳೆಯ ಜಿಡಿಪಿ ಸಿಗಲು ಹೂಡಿಕೆಗಳೇ ಕಾರಣ ಎಂತಾರೆ ಆರ್ಥಿಕ ತಜ್ಞರು; ಅದು ಹೇಗೆ ಸಾಧ್ಯ?

Investments Effect On Indian Economy: 2022-23ರ ವರ್ಷದಲ್ಲಿ ಭಾರತದ ಆರ್ಥಿಕ ಓಟಕ್ಕೆ ಗಾಲಿಗಳಾಗಿದ್ದು ಹೂಡಿಕೆಗಳೇ. 2023-24ರ ಹಣಕಾಸು ವರ್ಷದಲ್ಲೂ ಈ ಹೂಡಿಕೆಗಳೇ ಭಾರತದ ಆರ್ಥಿಕತೆಯನ್ನು ಕಾಪಾಡುತ್ತವೆ ಎಂಬುದು ಆರ್ಥಿಕ ತಜ್ಞರಗಳ ಅನಿಸಿಕೆ.

Economy: 2022-23ರಲ್ಲಿ ಭಾರತಕ್ಕೆ ಒಳ್ಳೆಯ ಜಿಡಿಪಿ ಸಿಗಲು ಹೂಡಿಕೆಗಳೇ ಕಾರಣ ಎಂತಾರೆ ಆರ್ಥಿಕ ತಜ್ಞರು; ಅದು ಹೇಗೆ ಸಾಧ್ಯ?
ನಿರ್ಮಾಣ ವಲಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2023 | 6:48 PM

Share

ಬೆಂಗಳೂರು: ಭಾರತದ ಆರ್ಥಿಕತೆ (Indian Economy) 2022-23ರಲ್ಲಿ ಶೇ. 7.2ರಷ್ಟು ಬೆಳೆದು ಜಾಗತಿಕವಾಗಿ ಅಚ್ಚರಿ ಮೂಡಿಸಿದೆ. ಬಹುತೇಕ ಇತರ ಕಡೆ ಆರ್ಥಿಕ ಬೆಳವಣಿಗೆ ಮಂದವಾಗಿ ಸಾಗುತ್ತಿರುವ ಹೊತ್ತಲ್ಲಿ ಭಾರತದಲ್ಲಿ ವೇಗ ಪಡೆದಿರುವುದು ಗಮನಾರ್ಹ ಸಂಗತಿ. ಇಲ್ಲಿ ಅಚ್ಚರಿ ಎಂದರೆ ಆ ಹಣಕಾಸು ವರ್ಷದಲ್ಲಿ ಅನುಭೋಗ (Consumption) ಪ್ರಮಾಣದಲ್ಲಿ ಅಂಥ ಹೆಚ್ಚಳವಾಗಿಲ್ಲ. ಆದರೂ ಕೂಡ ಜಿಡಿಪಿ ಸಖತ್ತಾಗಿ ಹೆಚ್ಚಿದೆ. ಇದಕ್ಕೆ ಕಾರಣವಾಗಿದ್ದು ಹೂಡಿಕೆಗಳಂತೆ. ಹಾಗಂತ ಆರ್ಥಿಕ ತಜ್ಞರುಗಳು ಅಭಿಪ್ರಾಯಪಟ್ಟಿದ್ದಾರೆ. 2022-23ರ ವರ್ಷದಲ್ಲಿ ಭಾರತದ ಆರ್ಥಿಕ ಓಟಕ್ಕೆ ಗಾಲಿಗಳಾಗಿದ್ದು ಹೂಡಿಕೆಗಳೇ. 2023-24ರ ಹಣಕಾಸು ವರ್ಷದಲ್ಲೂ ಈ ಹೂಡಿಕೆಗಳೇ ಭಾರತದ ಆರ್ಥಿಕತೆಯನ್ನು ಕಾಪಾಡುತ್ತವೆ ಎಂಬುದು ಇವರುಗಳ ಅನಿಸಿಕೆ.

ಹೂಡಿಕೆಗಳಿಂದ ಆರ್ಥಿಕತೆಗೆ ಯಾವ ರೀತಿಯಲ್ಲಿ ಪ್ರಯೋಜನ?

ಬಂಡವಾಳ ಹೂಡಿಕೆಗಳು ವಿವಿಧ ವಲಯಗಳಿಗೆ ಪುಷ್ಟಿಕೊಡುತ್ತದೆ. ಉದಾಹರಣೆಗೆ, ನಿರ್ಮಾಣ ವಲಯಕ್ಕೆ ಅಂದರೆ ಕನ್ಸ್​ಟ್ರಕ್ಷನ್ ಸೆಕ್ಟರ್​ಗೆ ಹೆಚ್ಚು ಹೂಡಿಕೆ ಆದಾಗ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಉದ್ಯೋಗಾವಕಾಶ ಕೊಡುತ್ತದೆ. ಇಂಥದ್ದು ಎಲ್ಲಾ ವಲಯಕ್ಕೂ ಆದಾಗ ಉದ್ಯೋಗಸೃಷ್ಟಿ ಹೆಚ್ಚಾಗುತ್ತದೆ. ಅದರ ಪರಿಣಾಮವಾಗಿ ಆರ್ಥಿಕತೆಯ ಆರೋಗ್ಯ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಹೂಡಿಕೆಯ ಸಂಕೇತವಾಗಿರುವ ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಶನ್ 2022-23ರಲ್ಲಿ ಶೇ. 11.4ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ಈ ಹೂಡಿಕೆ ಸುಗ್ಗಿ ಈ ಹಣಕಾಸು ವರ್ಷದಲ್ಲೂ ಮುಂದುವರಿಯಲಿದೆ. ಈ ಹಣಕಾಸು ವರ್ಷದಲ್ಲಿ 10 ಲಕ್ಷ ಕೋಟಿ ರೂ ಹಣ ಹೂಡಿಕೆಗೆ ಯೋಜಿಸಿದೆ.

ಇದನ್ನೂ ಓದಿGDP Data: ಇಗೋ ನೋಡಿ ಭಾರತದ ಆರ್ಥಿಕ ಬೆಳವಣಿಗೆ; ಕೊನೆಯ ಕ್ವಾರ್ಟರ್​ನಲ್ಲಿ ಶೇ. 6.1, ಇಡೀ ವರ್ಷದಲ್ಲಿ ಶೇ. 7.2 ಜಿಡಿಪಿ ವೃದ್ಧಿ

ಅನುಭೋಗ ಪ್ರಮಾಣ ಕಡಿಮೆ; ಕಾರಣ ಏನು?

ಆರ್ಥಿಕತೆ ಚಟುವಟಿಕೆ ಉತ್ತಮದಿಂದರಲು ಅನುಭೋಗವೂ ಒಂದು ಪ್ರಮುಖ ಅಂಶ. ಭಾರತದಲ್ಲಿ ಭಾರತದಲ್ಲಿ ಕಳೆದ ವರ್ಷ ಕನ್ಸಂಪ್ಷನ್ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಿಲ್ಲ. ಕೊನೆಯ ಕ್ವಾರ್ಟರ್, ಅಂದರೆ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಅನುಭೋಗದ ಪ್ರಮಾಣ ಶೇ. 0.5ರಷ್ಟು ಮಾತ್ರ ಏರಿದೆ. 3ನೇ ಕ್ವಾರ್ಟರ್ ಅವಧಿ ಶೇ. 2ಎಷ್ಟು ಅನುಭೋಗ ಇಳಿಕೆಯಾಗಿದ್ದಕ್ಕೆ ಹೋಲಿಸಿದರೆ ಕೊನೆಯ ಕ್ವಾರ್ಟರ್​ನದ್ದು ಉತ್ತಮವೇ ಸರಿ.

ಅನುಭೋಗ ಅಥವಾ ಜನಸಾಮಾನ್ಯರು ಮಾಡುವ ಖರ್ಚು ಕಡಿಮೆ ಆಗಲು ಹಣದುಬ್ಬರ ಕಾರಣ ಇರಬಹುದು ಎಂಬುದು ಆರ್ಥಿಕ ತಜ್ಞರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ