Share Market: ಅಂತಾರಾಷ್ಟ್ರೀಯ ಯೋಗ ದಿನ: ಬಿಎಸ್​ಇ, ಎನ್​ಎಸ್​ಇ ಷೇರುಮಾರುಕಟ್ಟೆಗಳಿಗೆ ರಜೆಯಾ? ಇಲ್ಲಿದೆ ಈ ವರ್ಷದ ಉಳಿದ ದಿನಗಳ ರಜಾ ಪಟ್ಟಿ

International Yoga Day, Share Market- ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21ರಂದು ಬಿಎಸ್​ಇ ಅಥವಾ ಎನ್​​ಎಸ್​ಇ ಷೇರು ಮಾರುಕಟ್ಟೆಗಳಲ್ಲಿ ರಜೆ ಇರುವುದಿಲ್ಲ. ಈ ತಿಂಗಳ 28ಕ್ಕೆ ಬಕ್ರೀದ್ ನಿಮಿತ್ತ ರಜೆ ಇದೆ.

Share Market: ಅಂತಾರಾಷ್ಟ್ರೀಯ ಯೋಗ ದಿನ: ಬಿಎಸ್​ಇ, ಎನ್​ಎಸ್​ಇ ಷೇರುಮಾರುಕಟ್ಟೆಗಳಿಗೆ ರಜೆಯಾ? ಇಲ್ಲಿದೆ ಈ ವರ್ಷದ ಉಳಿದ ದಿನಗಳ ರಜಾ ಪಟ್ಟಿ
ಷೇರುಪೇಟೆ
Follow us
|

Updated on: Jun 20, 2023 | 7:20 PM

ನವದೆಹಲಿ: ಜೂನ್ 21, ಅಂತಾರಾಷ್ಟ್ರೀಯ ಯೋಗ ದಿನ. ಅಮೆರಿಕದಲ್ಲಿ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಜಾಗತಿಕವಾಗಿ ಈ ದಿನಕ್ಕೆ ಮಾನ್ಯತೆ ಮತ್ತು ಜನಪ್ರಿಯತೆ ಹೆಚ್ಚುತ್ತಿದೆ. ಈ ದಿನದಂದು (International Yoga Day) ಭಾರತದಲ್ಲಿ ಷೇರುಪೇಟೆಗಳು ಬಂದ್ ಆಗಿರುತ್ತವಾ? 2023 ಜೂನ್ 21ರಂದು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಹಾಗೂ ಇತರ ಷೇರುಮಾರುಕಟ್ಟೆಗಳಿಗೆ ರಜೆ ಇರುವುದಿಲ್ಲ. ಯಥಾಪ್ರಕಾರ ಕಾರ್ಯನಿರ್ವಹಿಸುತ್ತವೆ. ಈ ಎರಡು ಸ್ಟಾಕ್ ಎಕ್ಸ್​ಚೇಂಜ್​ಗಳ ವೆಬ್​​ಸೈಟ್​ನಲ್ಲಿ ಪ್ರಕಟಿಸಲಾಗಿರುವ ರಜಾ ದಿನಗಳ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ಸೇರಿಲ್ಲ.

2023ರ ಜೂನ್​ನಿಂದ ಡಿಸೆಂಬರ್​ವರೆಗೆ ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ

  • ಜೂನ್ 18: ಬಕ್ರೀದ್
  • ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
  • ಸೆಪ್ಟಂಬರ್ 19: ಗಣೇಶ ಚತುರ್ಥಿ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 24: ದಸರಾ
  • ನವೆಂಬರ್ 12: ದೀಪಾವಳಿ
  • ನವೆಂಬರ್ 14: ಬಲಿಪಾಡ್ಯಮಿ
  • ನವೆಂಬರ್ 27: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಇದನ್ನೂ ಓದಿCredit Card: ಕ್ರೆಡಿಟ್ ಕಾರ್ಡ್​ನಲ್ಲಿ ನಾವು ನೀವು ಹೆಚ್ಚು ಗಮನಿಸದ ಶುಲ್ಕಗಳು ಹಲವಿವೆ; ಮುಂದಿನ ಬಾರಿ ಬಿಲ್ ನೋಡುವಾಗ ಜೋಪಾನ

ಇವು ಬಿಎಸ್​ಇ ಮತ್ತು ಎನ್​ಎಸ್​ಇ ಎರಡರಲ್ಲೂ ಇರುವ ರಜಾ ದಿನಗಳು. ಈ ವರ್ಷ ಈ ಮೇಲಿನವೂ ಸೇರಿದಂತೆ ಷೇರುಪೇಟೆಗಳಿಗೆ 15 ರಜಾ ದಿನಗಳಿವೆ. ಕರೆನ್ಸಿ ಡಿರೈವೇಟಿವ್ ಸೆಗ್ಮೆಂಟ್, ಎನ್​ಡಿಎಸ್ ಆರ್​ಎಸ್​ಟಿಗಳಿಗೆ 4 ಹೆಚ್ಚುವರಿ ರಜಾ ದಿನಗಳಿವೆ.

ನವೆಂಬರ್ ತಿಂಗಳಲ್ಲಿ 3 ದಿನಗಳು ಷೇರುಪೇಟೆಗೆ ರಜೆ ಇದೆ. ಜುಲೈ ತಿಂಗಳಲ್ಲಿ ಒಂದು ದಿನವೂ ರಜೆ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ