AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

October New Rules: ಆನ್​ಲೈನ್ ಗೇಮಿಂಗ್​ಗೆ ಶೇ. 20 ಟಿಸಿಎಸ್ ತೆರಿಗೆ ಸೇರಿದಂತೆ 5 ನಿಯಮಗಳು

ಜನನ ಮತ್ತು ಮರಣ ನೊಂದಣಿ ತಿದ್ದುಪಡಿ ಕಾಯ್ದೆ, ವಿದೇಶ ವೆಚ್ಚಕ್ಕೆ ಟಿಸಿಎಸ್ ತೆರಿಗೆ, ಆನ್ಲೈನ್ ಗೇಮಿಂಗ್​ಗೆ ಶೇ. 28ರಷ್ಟು ತೆರಿಗೆ, ತಂಬಾಕು ಉತ್ಪನ್ನಗಳ ರಫ್ತುದಾರರಿಗೆ ಐಜಿಎಸ್​ಟಿ ವೆಚ್ಚದ ರೀಫಂಡ್ ಇತ್ಯಾದಿ ಕೆಲವಾರು ಪ್ರಮುಖ ಬದಲಾವಣೆಗಳು 2023ರ ಅಕ್ಟೋಬರ್ 1ರಿಂದ ಜಾರಿಯಾಗುತ್ತದೆ. ಈ ಬಗ್ಗೆ ಮಾಹಿತಿ...

October New Rules: ಆನ್​ಲೈನ್ ಗೇಮಿಂಗ್​ಗೆ ಶೇ. 20 ಟಿಸಿಎಸ್ ತೆರಿಗೆ ಸೇರಿದಂತೆ 5 ನಿಯಮಗಳು
ಹೊಸ ನಿಯಮ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2023 | 3:54 PM

Share

ಸರ್ಕಾರ ಆಗಾಗ್ಗೆ ಕೆಲ ನಿಯಮಗಳನ್ನು ಬದಲಿಸುವುದೋ ಅಥವಾ ಹೊಸ ನಿಯಮಗಳನ್ನು (New Rules) ತರುವುದೋ ಮಾಡುತ್ತಿರುತ್ತದೆ. ಎಲ್ಲಾ ನಿಯಮಗಳು ಎಲ್ಲರಿಗೂ ಮುಖ್ಯ ಆಗುವುದಿಲ್ಲವಾದರೂ ಒಂದಿಲ್ಲೊಂದು ಸಂದರ್ಭದಲ್ಲಿ ಇವು ಅಗತ್ಯ ಬೀಳುತ್ತವೆ. ಹೀಗಾಗಿ ನಿಯಮಗಳಲ್ಲಿ ಆಗುವ ಬದಲಾವಣೆಗಳನ್ನು ತಿಳಿದುಕೊಂಡಿರುವುದು ಒಳಿತು. ಸೆಪ್ಟೆಂಬರ್ ತಿಂಗಳು ಕಳೆದು ಅಕ್ಟೋಬರ್ ತಿಂಗಳು ಶುರುವಾಗಲು ಕೆಲವೇ ದಿನಗಳಿವೆ. ಜನನ ಪ್ರಮಾಣಪತ್ರದಿಂದ ಹಿಡಿದು ವಾಹನ ಅಪಘಾತ ಪರೀಕ್ಷೆಯವರೆಗೆ ಪ್ರಮುಖ ಐದು ಸಂಗತಿಗಳನ್ನು ಅಕ್ಟೋಬರ್​ನಲ್ಲಿ ನೋಡಬಹುದು. ಅಕ್ಟೋಬರ್ 1ರಿಂದ ಯಾವೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ವಿವರ ಇಲ್ಲಿದೆ…

ಜನನ ಮತ್ತು ಮರಣ ನೊಂದಣಿ ತಿದ್ದುಪಡಿ ಕಾಯ್ದೆ

ಶಾಲೆ ಸೇರ್ಪಡೆ, ಡ್ರೈವಿಂಗ್ ಲೈಸೆನ್ಸ್, ವೋಟರ್ ಲಿಸ್ಟ್, ಆಧಾರ್ ನಂಬರ್, ವಿವಾಹ ನೊಂದಣಿ, ಸರ್ಕಾರಿ ನೌಕರಿ ನೇಮಕಾತಿ ಇತ್ಯಾದಿ ಬಹುಕಾರ್ಯಗಳಿಗೆ ಜನನ ಪ್ರಮಾಣಪತ್ರವನ್ನು (ಬರ್ತ್ ಸರ್ಟಿಫಿಕೇಟ್) ಏಕೈಕ ದಾಖಲೆಯಾಗಿ ಬಳಸಲು ಅನುಮತಿಸುವಂತಹ ಕಾನೂನು ಅಕ್ಟೋಬರ್ 1ರಿಂದ ಜಾರಿಗೆ ಬರುತ್ತದೆ. ಜನ್ಮ ದಿನಾಂಕ ಮತ್ತು ಜನ್ಮಸ್ಥಳಕ್ಕೆ ವಿವಿಧ ದಾಖಲೆಗಳನ್ನು ಒದಗಿಸುವ ಪ್ರಮೇಯ ತಪ್ಪಲಿದೆ.

ಶೇ. 20ರಷ್ಟು ಟಿಸಿಎಸ್ ತೆರಿಗೆ

ವಿದೇಶಗಳಲ್ಲಿ ನಮ್ಮ ಪ್ರಯಾಣ, ವಿದೇಶೀ ಷೇರುಗಳು, ಮ್ಯೂಚುವಲ್ ಫಂಡ್​ಗಳು, ಕ್ರಿಪ್ಟೋಕರೆನ್ಸಿಗಳು ಮತ್ತು ಉನ್ನತ ಶಿಕ್ಷಣ ಇತ್ಯಾದಿಗೆ ಶೇ. 20ರಷ್ಟು ಟಿಸಿಎಸ್ ಇರಲಿದೆ. ಒಂದು ಹಣಕಾಸು ವರ್ಷದಲ್ಲಿ ಈ ಎಲ್ಲಾ ವೆಚ್ಚಗಳು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿದ್ದರೆ ಆಗ ಟಿಸಿಎಸ್ ಅನ್ವಯ ಆಗುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಕಟ್ಟದೇ ಲ್ಯಾಪ್ಸ್ ಆಗಿದೆಯಾ? ಮರುಚಾಲನೆಗೆ ಡಂಡಕಟ್ಟಬೇಕಾ? ಈ ವಿವರ ಓದಿ

ಆರ್​ಬಿಐನ ಹಿಂದಿನ ಎಲ್​ಆರ್​ಎಸ್ ಸ್ಕೀಮ್ ಅಡಿಯಲ್ಲಿ ಒಬ್ಬ ವ್ಯಕ್ತಿ ವಿದೇಶಕ್ಕೆ ಒಂದು ವರ್ಷದಲ್ಲಿ 2.50 ಲಕ್ಷ ಡಾಲರ್​ವರೆಗೂ (ಸುಮಾರು 2 ಕೋಟಿ ರೂಗಿಂತ ತುಸು ಹೆಚ್ಚು) ಹಣವನ್ನು ಕಳುಹಿಸಬಹುದು. ಅಕ್ಟೋಬರ್ 1ರಿಂದ ಇದರಲ್ಲಿ ಬದಲಾವಣೆ ಆಗಲಿದ್ದು, ಒಂದು ವರ್ಷದಲ್ಲಿ ಏಳು ಲಕ್ಷ ರೂಗಿಂತ ಹೆಚ್ಚು ಹಣವನ್ನು ವಿದೇಶಕ್ಕೆ ಕಳುಹಿಸಿಸಿದರೆ ಶೇ. 20ರಷ್ಟು ಟಿಸಿಎಸ್ ಕಡಿತವಾಗುತ್ತದೆ.

ಆನ್ಲೈನ್ ಗೇಮಿಂಗ್​ಗೆ ಶೇ. 28ರಷ್ಟು ತೆರಿಗೆ

ಆನ್​ಲೈನ್ ಗೇಮ್, ಕ್ಯಾಸಿನೋ ಇತ್ಯಾದಿ ಜೂಜಾಟಗಳಿಗೆ ತೆರಿಗೆ ನಿಯಮ ಬದಲಿಸಲಾಗಿದೆ. ಬೆಟ್ಟಿಂಗ್​ನ ಗೆಲುವಿನ ಮೊತ್ತ ಹೊರತುಪಡಿಸಿ ಆಡಲು ಆಟಗಾರ ಕಟ್ಟುವ ಶುಲ್ಕಕ್ಕೆ ಶೇ. 28ರಷ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಇದು ಅಕ್ಟೋಬರ್ 1ರಿಂದ ಜಾರಿಗೆ ಬರುತ್ತದೆ.

ಪಾನ್ ಮಸಾಲ, ತಂಬಾಕು ಮೇಲಿನ ತೆರಿಗೆ ರೀಫಂಡ್​ಗೆ ನಿರ್ಬಂಧ

ಪಾನ್ ಮಸಾಲ, ತಂಬಾಕು ಹಾಗೂ ಅಂಥ ವಸ್ತುಗಳ ರಫ್ತು ಮಾಡುವಾಗ ಕಟ್ಟಲಾದ ಐಜಿಎಸ್​ಟಿ ಮೊತ್ತವನ್ನು ಸ್ವಯಂಚಾಲಿತವಾಗಿ ರೀಫಂಡ್ ಮಾಡಲಾಗುತ್ತಿತ್ತು. ಈಗ ಅಕ್ಟೋಬರ್ 1ರಿಂದ ಈ ರೀತಿಯ ರೀಫಂಡ್ ವ್ಯವಸ್ಥೆಯಲ್ಲಿ ನಿರ್ಬಂಧ ಹಾಕಲಾಗಿದೆ. ತೆರಿಗೆ ವಂಚನೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಹೊಸ ಮನೆ ಖರೀದಿಸುವ ಮುನ್ನ ಈ ಏಳು ಅಂಶಗಳನ್ನು ಪರಿಗಣಿಸಿ; ಇದು ಜೀವಮಾನದ ಸಾಧನೆ ಎಂಬುದು ನೆನಪಿರಲಿ

ಪಾನ್ ಮಸಾಲ, ತಂಬಾಕು, ಗುಟ್ಕಾ, ಹುಕ್ಕಾ, ಸಿಗರೇಟ್, ಮೆಂತಾ ಎಣ್ಣೆ ಇತ್ಯಾದಿಗಳಿಗೆ ಶೇ. 28ರಷ್ಟು ಐಜಿಎಸ್​​ಟಿ ಮತ್ತು ಸೆಸ್ ಹಾಕಲಾಗುತ್ತದೆ. ಈ ವಸ್ತುಗಳನ್ನು ರಫ್ತು ಮಾಡುವವರು ನಿಗದಿತ ತೆರಿಗೆ ಅಧಿಕಾರಿಗಳ ಬಳಿ ಹೋಗಿ ರೀಫಂಡ್​ಗೆ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ.

ವಾಹನ ಅಪಘಾತ ಪರೀಕ್ಷೆ

ಅಕ್ಟೋಬರ್ 1ರಿಂದ ಭಾರತದ್ದೇ ಆದ ಕಾರ್ ಕ್ರ್ಯಾಶ್ ಟೆಸ್ಟಿಂಗ್ ಪ್ರೋಗ್ರಾಮ್ ಜಾರಿಗೆ ಬರುತ್ತದೆ. ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್ (ಬಿಎಸ್​ಸಿಎಪಿ) ಎಂಬುದು ಭಾರತದ ಮೊದಲ ವಾಹನ ಅಪಘಾತ ಪರೀಕ್ಷಾ ವ್ಯವಸ್ಥೆಯಾಗಿದೆ. ಇದರ ಅಡಿಯಲ್ಲಿ ಕಾರು ತಯಾರಕರು ತಮ್ಮ ಹೊಸ ಕಾರ್ ಮಾಡೆಲ್ ಅನ್ನು ಅಪಘಾತ ಪರೀಕ್ಷೆಗೆ ಒಳಪಡಿಸಬಹುದು. ಪರೀಕ್ಷೆಯ ಫಲಿತಾಂಶಕ್ಕೆ ಅನುಗುಣವಾಗಿ ವಾಹನಕ್ಕೆ ರೇಟಿಂಗ್ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು