AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Policy: ಎಲ್​ಐಸಿ ಪಾಲಿಸಿ ಜತೆ ಪ್ಯಾನ್ ಕಾರ್ಡ್ ಲಿಂಕ್​ ಮಾಡಲು ಮಾರ್ಚ್ 31 ಕೊನೆಯ ದಿನ

ಎಲ್​ಐಸಿ ಪಾಲಿಸಿ ಜತೆ ಪ್ಯಾನ್ ಕಾರ್ಡ್ ಲಿಂಕ್​ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದೆ. ಆನ್​ಲೈನ್ ಮೂಲಕ ಲಿಂಕ್ ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ.

LIC Policy: ಎಲ್​ಐಸಿ ಪಾಲಿಸಿ ಜತೆ ಪ್ಯಾನ್ ಕಾರ್ಡ್ ಲಿಂಕ್​ ಮಾಡಲು ಮಾರ್ಚ್ 31 ಕೊನೆಯ ದಿನ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 09, 2023 | 2:26 PM

ನವದೆಹಲಿ: ಎಲ್​ಐಸಿ ಪಾಲಿಸಿ ಮತ್ತು ಪ್ಯಾನ್ ಕಾರ್ಡ್(PAN Card) ಜೋಡಣೆಗೆ ಮಾರ್ಚ್ 31 ಕೊನೆಯ ದಿನವಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (LIC) ತಿಳಿಸಿದೆ. ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ಯಾನ್ ಮತ್ತು ಪಾಲಿಸಿಯನ್ನು ಲಿಂಕ್ ಮಾಡುವಂತೆ ಗ್ರಾಹಕರಿಗೆ ಎಲ್​​ಐಸಿ ಸೂಚಿಸಿತ್ತು. ಇದೀಗ ಗಡುವನ್ನು ವಿಸ್ತರಣೆ ಮಾಡಿರುವುದಾಗಿ ತಿಳಿಸಿದೆ. ಎಲ್​ಐಸಿ ಇಂಡಿಯಾ ವೆಬ್​​ಸೈಟ್​​ (linkpan.licindia.in/UIDSeedingWebApp/getPolicyPANStatus) ಮೂಲಕ ಪಾಲಿಸಿ ಮತ್ತು ಪ್ಯಾನ್ ಲಿಂಕ್ ಮಾಡಬಹುದಾಗಿದೆ ಎಂದೂ ಸಂಸ್ಥೆ ತಿಳಿಸಿದೆ. ಮೊದಲಿಗೆ ಮೇಲೆ ಉಲ್ಲೇಖಿಸಿರುವ ಲಿಂಕ್ ಕ್ಲಿಕ್ ಮಾಡಿ. ಪಾಲಿಸಿ ಸಂಖ್ಯೆ, ಪ್ಯಾನ್ ವಿವರ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ. ನಂತರ ಸಬ್​ಮಿಟ್ ಬಟನ್ ಕ್ಲಿಕ್ ಮಾಡಿ. ಅಷ್ಟರಲ್ಲಿ ಎಲ್​ಐಸಿ ಪ್ಯಾನ್​ ಲಿಂಕ್​ ಸ್ಥಿತಿಗತಿ ವಿವರ ಕಾಣಿಸಲಿದೆ. ಒಂದು ವೇಳೆ ಪಾಲಿಸಿ ಜತೆ ಪ್ಯಾನ್ ಲಿಂಕ್ ಆಗಿಲ್ಲವೆಂದಾದರೆ, ‘ಪ್ಯಾನ್ ವಿವರ ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ’ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಮತ್ತೊಂದು ವೆಬ್​ ಪುಟ ತೆರೆದುಕೊಳ್ಳುತ್ತದೆ.

ಎಲ್​ಐಸಿ ಪಾಲಿಸಿ ಜತೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?

  1. ಎಲ್​​ಐಸಿ ಇಂಡಿಯಾದ ಈ (linkpan.licindia.in/UIDSeedingWebApp/home) ಲಿಂಕ್​​​ ಕ್ಲಿಕ್ ಮಾಡಿ.
  2. ಜನ್ಮ ದಿನಾಂಕ, ಲಿಂಗ ಹಾಗೂ ಪ್ಯಾನ್ ಸಂಬಂಧಿತ ವಿವರ ಭರ್ತಿ ಮಾಡಿ.
  3. ಇ-ಮೇಲ್​ ವಿಳಾಸ ಮತ್ತು ಪ್ಯಾನ್ ಕಾರ್ಡ್ ವಿವರ ಭರ್ತಿ ಮಾಡಿ.
  4. ಪ್ಯಾನ್​ ಕಾರ್ಡ್​​ನಲ್ಲಿ ಇರುವಂತೆಯೇ ನಿಮ್ಮ ಹೆಸರನ್ನು ಉಲ್ಲೇಖಿಸಿ. ನಂತರ ಫೋನ್ ನಂಬರ್, ಪಾಲಿಸಿ ಸಂಖ್ಯೆ ಭರ್ತಿ ಮಾಡಿ.
  5. ಕ್ಯಾಪ್ಚಾ ಭರ್ತಿ ಮಾಡಿದ ಬಳಿಕ ‘ಗೆಟ್ ಒಟಿಪಿ’ ಕ್ಲಿಕ್ ಮಾಡಿ. ನಂತರ ಒಟಿಪಿ ಭರ್ತಿ ಮಾಡಿ. ಪಾಲಿಸಿ ಮತ್ತು ಪ್ಯಾನ್ ಲಿಂಕ್​ಗೆ ನಿಮ್ಮ ಮನವಿಯನ್ನು ಸ್ವೀಕರಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬದ್ಧವೈರಿ ಪಾಕ್ ವಿರುದ್ಧ ಭಾರತ ವಾಲಿಬಾಲ್ ತಂಡಕ್ಕೆ ಸುಲಭ ಜಯ
ಬದ್ಧವೈರಿ ಪಾಕ್ ವಿರುದ್ಧ ಭಾರತ ವಾಲಿಬಾಲ್ ತಂಡಕ್ಕೆ ಸುಲಭ ಜಯ
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಪ್ಪಿಕೊಳ್ಳೋದು ನಮ್ಮ ಧರ್ಮ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಪ್ಪಿಕೊಳ್ಳೋದು ನಮ್ಮ ಧರ್ಮ: ಸಾ.ರಾ. ಗೋವಿಂದು
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹವಣಿಕೆಯಲ್ಲಿದೆ: ಅಶೋಕ
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹವಣಿಕೆಯಲ್ಲಿದೆ: ಅಶೋಕ
ಲಿಸ್ಟ್​ನಲ್ಲಿ ಹೆಸರಿಲ್ಲ, ಒಳಗೆ ಬಿಡಲ್ಲ ಅಂತ ಪೊಲೀಸ್ ಹೇಳಿದ್ದಕ್ಕೆ ಸಿಟ್ಟು
ಲಿಸ್ಟ್​ನಲ್ಲಿ ಹೆಸರಿಲ್ಲ, ಒಳಗೆ ಬಿಡಲ್ಲ ಅಂತ ಪೊಲೀಸ್ ಹೇಳಿದ್ದಕ್ಕೆ ಸಿಟ್ಟು
ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಕೇರಳ ಮಾದರಿ ಹತ್ಯೆ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿವೆ: ಸಿಂಹ
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್