Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Pay: ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಮನೇಶ್ ಮಹಾತ್ಮೆ ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ ಆಗಿ ನೇಮಕ

ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಅದರ ವಾಟ್ಸಾಪ್ ಪೇ ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ಮನೇಶ್ ಮಹಾತ್ಮೆ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಅವರು ಅಮೆಜಾನ್ ಪೇನಲ್ಲಿ ಇದ್ದರು.

WhatsApp Pay: ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಮನೇಶ್ ಮಹಾತ್ಮೆ ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ ಆಗಿ ನೇಮಕ
ಮಹೇಶ್ ಮಹಾತ್ಮೆ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jun 29, 2021 | 11:24 AM

ಫೇಸ್​ಬುಕ್ ಮಾಲೀಕತ್ವದ ವಾಟ್ಸಾಪ್​ನಿಂದ ಅಮೆಜಾನ್​ ಪೇ ಅಧಿಕಾರಿ ಮನೇಶ್ ಮಹಾತ್ಮೆ ಅವರನ್ನು ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ (ಪಾವತಿ ವಿಭಾಗದ ಮುಖ್ಯಸ್ಥ) ಆಗಿ ನೇಮಿಸಲಾಗಿದೆ. ಬಳಕೆದಾರರಿಗೆ ಪಾವತಿ ಅನುಭವದ ವಿಸ್ತರಣೆಗಾಗಿ ಮಹಾತ್ಮೆ ಗಮನ ಹರಿಸಲಿದ್ದಾರೆ. ಜತೆಗೆ ದೇಶದಲ್ಲಿ ಒದಗಿಸುತ್ತಿರುವ ಸೇವೆಯ ವ್ಯಾಪ್ತಿ ಜಾಸ್ತಿ ಮಾಡುವತ್ತಲೂ ಶ್ರಮಿಸುತ್ತಾರೆ ಎಂದು ಜೂನ್​ 28ರಂದು ಕಂಪೆನಿಯಿಂದ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಮಹಾತ್ಮೆ ಅವರು ಏಳು ವರ್ಷಗಳ ಕಾಲ ಅಮೆಜಾನ್​ ಪೇನಲ್ಲಿ ಕಾರ್ಯ ನಿರ್ವಹಿಸಿದ್ದರು. ಅಮೆಜಾನ್ ಪೇ ಇಂಡಿಯಾ ನಿರ್ದೇಶಕ ಮತ್ತು ಮಂಡಳಿ ಸದಸ್ಯರಾಗಿದ್ದರು. ಹಾಗೂ ಪ್ರಾಡಕ್ಟ್, ಎಂಜಿನಿಯರಿಂಗ್ ಮತ್ತು ಬೆಳವಣಿಗೆ ತಂಡವನ್ನು ಮುನ್ನಡೆಸಿದ್ದರು. ಅಮೆಜಾನ್​ ಇಂಡಿಯಾದ ಮಾರ್ಕೆಟ್​ಪ್ಲೇಸ್ ಉದ್ಯಮದ ಪ್ಲಾಟ್​ಫಾರ್ಮ್ ಮತ್ತು ಪಾವತಿ ಅನುಭವ ರೂಪಿಸುವ ಹಾಗೂ ವಿಸ್ತರಿಸುವಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸಿದವರು.

ಸಿಟಿಬ್ಯಾಂಕ್, ಏರ್​ಟೆಲ್ ಮನಿ ಹಾಗೂ ಅಮೆಜಾನ್​ ಒಳಗೊಂಡಂತೆ ಡಿಜಿಟಲ್​ ಫೈನಾನ್ಷಿಯಲ್ ಸರ್ವೀಸ್ ಮತ್ತು ಪೇಮೆಂಟ್ಸ್​ನಲ್ಲಿ 17 ವರ್ಷದ ಕಾರ್ಯಾನುಭವ ಹೊಂದಿದ್ದಾರೆ ಮಹಾತ್ಮೆ. BITS, ಪಿಳಾನಿ (ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್) ಪದವೀಧರರು ಹಾಗೂ ಮುಂಬೈನ ಎಸ್​ಪಿ ಜೈನ್​ನಲ್ಲಿ ಮ್ಯಾನೇಜ್​ಮೆಂಟ್ ಕೋರ್ಸ್ ಮುಗಿಸಿದ್ದಾರೆ. “ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಗಳ ಬೆಳವಣಿಗೆಯಲ್ಲಿ ಮನೇಶ್ ಅವರು ಪ್ರಮುಖ ಅನ್ವೇಷಕರಲ್ಲಿ ಒಬ್ಬರು. ಅವರ ಅನುಭವದ ಮೂಲಕ ವಾಟ್ಸಾಪ್​ನ ಪಾವತಿಯಲ್ಲಿ ಗರಿಷ್ಠ ಪರಿಣಾಮ ಬೀರಲು ಹಾಗೂ ವ್ಯಾಪ್ತಿ ವಿಸ್ತರಣೆಗೆ ನೆರವಾಗುತ್ತದೆ. ಎಲ್ಲ ಸೆಗ್ಮೆಂಟ್​ಗಳ ಜನರನ್ನು ಡಿಜಿಟಲ್​ ಆಗಿ ಸಶಕ್ತಗೊಳಿಸಲು ವಾಟ್ಸಾಪ್​ಗೆ ಅಪಾರ ಸಾಮರ್ಥ್ಯ ಇದೆ ಮತ್ತು ಸರ್ಕಾರವು ಯುಪಿಐ ಹಾಗೂ ಡಿಜಿಟಲ್​ ಪಾವತಿ ಮೂಲಕ ಎಲ್ಲರನ್ನೂ ಹಣಕಾಸು ಒಳಗೊಳ್ಳುವಿಕೆಗೆ ಶ್ರಮಿಸುತ್ತಿರುವುದಕ್ಕೆ ವೇಗ ದೊರಕಿಸಲು ಸಹಾಯ ಮಾಡುತ್ತದೆ,” ಎಂದು ವಾಟ್ಸಾಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಟ್ಸಾಪ್​ನಲ್ಲಿ ಪಾವತಿಯು ವಿಶಿಷ್ಟ ಸಹಭಾಗಿ ಆಗಲಿದೆ. ದೇಶದ ಬೆಳವಣಿಗೆ ಕಾರ್ಯಸೂಚಿಯನ್ನು ಗಮನದಲ್ಲಿ ಇರಿಸಿಕೊಂಡು ಭಾರತದ ಉದ್ದಗಲಕ್ಕೂ ಜನರಿಗೆ ಡಿಜಿಟಲ್ ಪೇಮೆಂಟ್ಸ್ ದೊರೆಯುವಂತೆ ಮಾಡಲು ಮಹತ್ವದ ಸಹಭಾಗಿ ಆಗಿದೆ. ಈ ಬೆಳವಣಿಗೆ ಗಾಥೆಯಲ್ಲಿ ನಾನೂ ಕೂಡ ಭಾಗಿ ಆಗಿರುವುದು ವಿಪರೀತ ಸಂತೋಷ ತಂದಿದೆ ಎಂದು ಮಹಾತ್ಮೆ ಹೇಳಿದ್ದಾರೆ.

ಇದನ್ನೂ ಓದಿ: How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?

(Manesh Mahatme appointed as Chief to Facebook owned WhatsApp pay India. He was with Amazon pay as executive)

Published On - 11:24 am, Tue, 29 June 21

ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..