AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Price Hike: 14 ವರ್ಷದ ನಂತರ ಬೆಂಕಿಪೊಟ್ಟಣದ ಬೆಲೆಯಲ್ಲಿ ಹೆಚ್ಚಳ; ಡಿಸೆಂಬರ್ 1ರಿಂದ ಆಗಲಿದೆ ದುಪ್ಪಟ್ಟು

ಬೆಂಕಿಪೊಟ್ಟಣದ ಬೆಲೆಯಲ್ಲಿ 14 ವರ್ಷದ ನಂತರ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಡಿಸೆಂಬರ್ 1, 2021ರಿಂದ ಅನ್ವಯ ಆಗುವಂತೆ ಇದು ಜಾರಿಗೆ ಬರಲಿದೆ.

Price Hike: 14 ವರ್ಷದ ನಂತರ ಬೆಂಕಿಪೊಟ್ಟಣದ ಬೆಲೆಯಲ್ಲಿ ಹೆಚ್ಚಳ; ಡಿಸೆಂಬರ್ 1ರಿಂದ ಆಗಲಿದೆ ದುಪ್ಪಟ್ಟು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 23, 2021 | 7:30 PM

Share

14 ವರ್ಷದ ನಂತರ ಡಿಸೆಂಬರ್ 1, 2021ರಿಂದ ಅನ್ವಯ ಆಗುವಂತೆ ಬೆಂಕಿಪೊಟ್ಟಣದ ಬೆಲೆ ರೂ. 1ರಿಂದ ಎರಡು ರೂಪಾಯಿಗೆ ಹೆಚ್ಚಳ ಆಗಲಿದೆ. ಕಚ್ಚಾವಷ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಲಿದೆ. ಐದು ಪ್ರಮುಖ ಬೆಂಕಿಪೊಟ್ಟಣ ಕೈಗಾರಿಕೆ ಕ್ಷೇತ್ರದ ಪ್ರತಿನಿಧಿಗಳು ಶಿವಕಾಶಿಯಲ್ಲಿ ಭೇಟಿ ಆಗಿದ್ದರು. ಮತ್ತು ಆ ನಂತರ ಬೆಂಕಿಪೊಟ್ಟಣದ ಗರಿಷ್ಠ ಮಾರಾಟ ಬೆಲೆ (MRP) ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಿದೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಹದಿನಾಲ್ಕು ವರ್ಷದ ಅಂತರದ ಮೇಲೆ ಬೆಂಕಿಪೊಟ್ಟಣದ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಕಳೆದ ಬಾರಿ 2007ನೇ ಇಸವಿಯಲ್ಲಿ 50 ಪೈಸೆಯಿಂದ 1 ರೂಪಾಯಿಗೆ ಹೆಚ್ಚಳ ಮಾಡಲಾಗಿತ್ತು. ಉತ್ಪಾದಕರು ಹೇಳಿರುವಂತೆ, 14 ಕಚ್ಚಾ ವಸ್ತುಗಳ ಪೈಕಿ ಬಹುತೇಕ ಎಲ್ಲವೂ ಈಗ ಹೆಚ್ಚಳವಾಗಿದೆ.

ಕೆಂಪು ರಂಜಕ 425 ರೂಪಾಯಿಯಿಂದ 810 ರೂಪಾಯಿ ಆಗಿದೆ. ಮೇಣ 58 ರೂಪಾಯಿ ಬದಲಿಗೆ 80 ರೂಪಾಯಿ ಆಗಿದೆ. ಬಾಕ್ಸ್ ಬೋರ್ಡ್​ಗಳು, ಕಾಗದ, ಪೊಟ್ಯಾಷಿಯಂ ಕ್ಲೋರೇಟ್, ಸಲ್ಫರ್ ಹೀಗೆ ಇವುಗಳ ಬೆಲೆ ಕೂಡ ಅಕ್ಟೋಬರ್​ 10ರಿಂದ ಏರಿಕೆ ಆಗಿದೆ. ಈ ಮೇಲ್ಕಂಡದ್ದನ್ನು ಹೊರತುಪಡಿಸಿ ತೈಲ ಬೆಲೆ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚುವಂತಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಬೆಲೆ ಹೆಚ್ಚಳ ಮಾಡಬೇಕಿದೆ. ರಾಷ್ಟ್ರೀಯ ಸಣ್ಣ ಬೆಂಕಿಪೊಟ್ಟಣ ಉತ್ಪಾದಕರ ಒಕ್ಕೂಟದ ಕಾರ್ಯದರ್ಶಿ ವಿ.ಎಸ್. ಸೇತುರಥಿನಂ ಮಾತನಾಡಿ, ನಾವು 600 ಬೆಂಕಿಪೊಟ್ಟಣದ ಬಂಡಲ್ ಅನ್ನು 270ರಿಂದ 300 ರೂಪಾಯಿಗೆ ಮಾರುತ್ತಿದ್ದೇವೆ. “ನಾವು ಮಾರಾಟ ಬೆಲೆಯನ್ನು ಯೂನಿಟ್​ಗೆ ಶೇ 60ರಷ್ಟು ಏರಿಕೆ ಮಾಡಬೇಕು ಎಂದು ನಿರ್ಧರಿಸಿದ್ದು, ಒಂದು ಬಂಡಲ್​ಗೆ 430ರಿಂದ 480 ರೂಪಾಯಿ ಆಗುತ್ತದೆ. ಇದರಿಂದ ಶೇ 12ರಷ್ಟು ಜಿಎಸ್​ಟಿ ಮತ್ತು ಸಾರಿಗೆ ವೆಚ್ಚ ಒಳಗೊಂಡಿಲ್ಲ,” ಎಂದು ತಿಳಿಸಿದ್ದಾರೆ.

ಈ ಕೈಗಾರಿಕೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಮಿಳುನಾಡಿನಲ್ಲಿ 4 ಲಕ್ಷಕ್ಕೂ ಹೆಚ್ಚು ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಇದರಲ್ಲಿ ಕಾರ್ಮಿಕರಲ್ಲಿ ಅಸ್ಥಿರತೆ ಇದೆ. ಇದಕ್ಕೆ ಕಾರಣ ಏನೆಂದರೆ ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಅದಕ್ಕಿಂತ ಉತ್ತಮ ವೇತನ ದೊರೆಯುತ್ತದೆ ಎಂಬ ಕಾರಣಕ್ಕೆ ಅದಕ್ಕೆ ಆದ್ಯತೆ ನೀಡುತ್ತಾರೆ.

ಇದನ್ನೂ ಓದಿ: Tomato Price: ಟೊಮೆಟೊ ದರ 100 ರೂ. ಸಮೀಪ; ಬೆಲೆ ಏರಿಕೆಗೆ ಕಾರಣಗಳು ಏನೆಲ್ಲಾ ಗೊತ್ತಾ?

Published On - 7:24 pm, Sat, 23 October 21

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!