AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MEIL: ಕರ್ನಾಟಕದ ಕೈಗಾದಲ್ಲಿ 2 ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 12,800 ಕೋಟಿ ರೂ ಗುತ್ತಿಗೆ ಪಡೆದ ಎಂಇಐಎಲ್

Contracts for building Kaiga nuclear power units: ಹೈದರಾಬಾದ್ ಮೂಲದ ಎಂಇಐಎಲ್ ಸಂಸ್ಥೆ ಕರ್ನಾಟಕದ ಕೈಗಾದಲ್ಲಿ ಎರಡು ಪರಣಾಮ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 12,800 ಕೋಟಿ ರೂ ಮೊತ್ತದ ಗುತ್ತಿಗೆ ಪಡೆದಿದೆ. ನ್ಯಾಷನಲ್ ಪವರ್ ಕಾರ್ಪೊರೇಶನ್ ಸಂಸ್ಥೆ ಈವರೆಗೆ ನೀಡಿದ ಅತಿದೊಡ್ಡ ಗುತ್ತಿಗೆ ಇದಾಗಿದೆ. ಮುಂಬೈನ ಎನ್​​ಪಿಸಿಐಎಲ್ ಕಚೇರಿಯಲ್ಲಿ ಗುತ್ತಿಗೆಯ ಪರ್ಚೇಸ್ ಆರ್ಡರ್ ಅನ್ನು ಎಂಇಐಎಲ್​​ನ ಅಧಿಕಾರಿಗಳಿಗೆ ನೀಡಲಾಗಿದೆ.

MEIL: ಕರ್ನಾಟಕದ ಕೈಗಾದಲ್ಲಿ 2 ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 12,800 ಕೋಟಿ ರೂ ಗುತ್ತಿಗೆ ಪಡೆದ ಎಂಇಐಎಲ್
ಎಂಇಐಎಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 23, 2025 | 5:14 PM

Share

ಮುಂಬೈ, ಏಪ್ರಿಲ್ 23: ಮೇಘಾ ಎಂಜಿನಿಯರಿಂಗ್ ಅಂಡ್ ಇನ್​​ಫ್ರಾಸ್ಟ್ರಕ್ಚರ್ (ಎಂಇಐಎಲ್) ಸಂಸ್ಥೆ ಕರ್ನಾಟಕದ ಕೈಗಾರದಲ್ಲಿ 700 ಎಂವಿ ಸಾಮರ್ಥ್ಯದ ಎರಡು ಅಣುಸ್ಥಾವರಗಳನ್ನು ನಿರ್ಮಿಸುವ ದೊಡ್ಡ ಗುತ್ತಿಗೆಯನ್ನು ಪಡೆದಿದೆ. ಕೈಗಾದಲ್ಲಿ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳ ಸ್ಥಾಪನೆಗೆ ಎಂಇಐಎಲ್​​ಗಗೆ 12,800 ಕೋಟಿ ರೂ ಇಪಿಸಿ ಗುತ್ತಿಗೆ ಸಿಕ್ಕಿದೆ. ನ್ಯಾಷನಲ್ ಪವರ್ ಕಾರ್ಪೊರೇಶನ್ (ಎನ್​​ಪಿಸಿಐಎಲ್) ಈ ಗುತ್ತಿಗೆಗೆ ಅಧಿಕೃತವಾಗಿ ಎಂಇಐಎಲ್​​ಗೆ ಪರ್ಚೇಸ್ ಆರ್ಡರ್ ನೀಡಿದೆ. ಮುಂಬೈನಲ್ಲಿರುವ ಎನ್​​ಪಿಸಿಐಎಲ್​​ನ ಮುಖ್ಯಕಚೇರಿಯಲ್ಲಿ ಗುತ್ತಿಗೆಯ ಪರ್ಚೇಸ್ ಆರ್ಡರ್ ಅನ್ನು ಎಂಇಐಎಲ್​ನ ಪ್ರಾಜೆಕ್ಟ್ ವಿಭಾಗದ ನಿರ್ದೇಶಕ ಸುಬ್ಬಯ್ಯ ಅವರಿಗೆ ಹಸ್ತಾಂತರಿಸಲಾಯಿತು.

ಎನ್​​ಪಿಸಿಎಲ್ ಸಂಸ್ಥೆ ಈವರೆಗೂ ನೀಡಿರುವ ಅತಿದೊಡ್ಡ ಗುತ್ತಿಗೆ ಇದು ಎಂದು ಹೇಳಲಾಗುತ್ತಿದೆ. ಎಂಜಿನಿಯರಿಂಗ್, ಕನ್ಸ್​​ಟ್ರಕ್ಷನ್, ವಾಹನ ಕ್ಷೇತ್ರದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಮೇಘಾ ಎಂಜಿನಿಯರಿಂಗ್ ಇನ್​​ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಇದು ಪರಮಾಣ ಶಕ್ತಿ ಕ್ಷೇತ್ರದತ್ತ ಮೊದಲ ದೊಡ್ಡ ಹೆಜ್ಜೆಯಾಗಿದೆ. ಭಾರತದ ಇಂಧನ ಭದ್ರತೆ ದೃಷ್ಟಿಯಿಂದ ಈ ಯೋಜನೆಗಳು ಬಹಳ ಮಹತ್ವದ್ದಾಗಿದೆ. ಮಾಲಿನ್ಯರಹಿತವಾಗಿ ವಿದ್ಯುತ್ ಉತ್ಪಾದನೆ ಮಾಡಲು ಸಹಾಯವಾಗುತ್ತದೆ.

ಇದನ್ನೂ ಓದಿ: ಲಕ್ಷುರಿ ವಸ್ತುಗಳಿಗೆ ಟಿಸಿಎಸ್: ಅಧಿಸೂಚನೆ ಪ್ರಕಟ; ಇಲ್ಲಿದೆ ಐಷಾರಾಮಿ ವಸ್ತುಗಳ ಪಟ್ಟಿ

ಬಿಎಚ್​​ಇಎಲ್, ಎಲ್ ಅಂಡ್ ಟಿಯಂತಹ ಬಲಿಷ್ಠ ಸಂಸ್ಥೆಗಳನ್ನು ಸೋಲಿಸಿದ ಮೇಘಾ

ಕೈಗಾದಲ್ಲಿ ಎರಡು ಅಣುಘಟಕಗಳ ಸ್ಥಾಪನೆಯ ಯೋಜನೆಯನ್ನು ನೀಡಲು ಎನ್​​ಪಿಸಿಐಎಲ್ ಈ ಬಾರಿ ಬೇರೆಯೇ ವಿಧಾನ ಅನುಸರಿಸಿದೆ. ಗುಣಮಟ್ಟ ಮತ್ತು ವೆಚ್ಚ ಆಧಾರಿತವಾದ ಆಯ್ಕೆ ವಿಧಾನ (ಕ್ಯುಸಿಬಿಎಸ್) ಇದು. ಬಿಎಚ್​​ಇಎಲ್, ಎಲ್ ಅಂಡ್ ಟಿ ಮುಂತಾದ ದೊಡ್ಡ ಕಂಪನಿಗಳು ಈ ಯೋಜನೆ ಪಡೆಯಲು ಯತ್ನಿಸಿದ್ದವು. ಆದರೆ, ಮೇಘಾ ಇಂಜಿನಿಯರಿಂಗ್ ಇನ್​​ಫ್ರಾಸ್ಟ್ರಕ್ಚರ್ ಸಂಸ್ಥೆ ಈ ಯೋಜನೆಗೆ ಪ್ರಸ್ತಾಪಿಸಿದ ತಾಂತ್ರಿಕ ಅಂಶಗಳು ಹಾಗೂ ಸ್ಪರ್ಧಾತ್ಮಕ ಬೆಲೆಗಳು ಅದಕ್ಕೆ ಗೆಲುವು ತಂದುಕೊಟ್ಟಿವೆ.

ದೇಶದ ಇಂಧನ ಭದ್ರತೆಗೆ ಮಹತ್ವದ ಹೆಜ್ಜೆ ಇದು…

ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್​​ಗೆ ಬೇಡಿಕೆ ತೀವ್ರವಾಗಿ ಹೆಚ್ಚಲಿದೆ. ಅದರಲ್ಲೂ ಮಾಲಿನ್ಯರಹಿತ ವಿದ್ಯುತ್​​ನ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಸ್ವಚ್ಛ ಇಂಧನಗಳಲ್ಲಿ ಪರಮಾಣ ವಿದ್ಯುತ್ ಕೂಡ ಒಂದು. ಹೀಗಾಗಿ, ಕೈಗಾ ಸೇರಿದಂತೆ ದೇಶದ ವಿವಿಧೆಡೆ ಮತ್ತಷ್ಟು ಪರಮಾಣು ವಿದ್ಯುತ್ ಉತ್ಪಾದಕ ಘಟಕಗಳನ್ನು ಸರ್ಕಾರ ನಿರ್ಮಿಸುತ್ತಿದೆ. ಈ ಬಾಗವಾಗಿ ಕೈಗಾದಲ್ಲಿ 5 ಮತ್ತು 6ನೇ ಘಟಕವನ್ನು ನಿರ್ಮಿಸುವ ಗುತ್ತಿಗೆಯು ಮೇಘಾ ಎಂಜಿನಿಯರಿಂಗ್​​ಗೆ ಲಭಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Wed, 23 April 25

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು