AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance industries bonus | ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಎಲ್ಲ ಸಿಬ್ಬಂದಿಗೆ ಬೋನಸ್

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ನಿಂದ 2020- 21ನೇ ಸಾಲಿಗೆ ಎಲ್ಲ ಸಿಬ್ಬಂದಿಗೆ ಪೂರ್ಣವಾಗಿ ಬೋನಸ್ ನೀಡಲು ನಿರ್ಧರಿಸಲಾಗಿದೆ.

Reliance industries bonus | ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಎಲ್ಲ ಸಿಬ್ಬಂದಿಗೆ ಬೋನಸ್
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)
Srinivas Mata
|

Updated on: May 03, 2021 | 11:42 PM

Share

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಎಲ್ಲ ಸಿಬ್ಬಂದಿಗೆ 2020- 21ನೇ ಸಾಲಿನಲ್ಲಿ ಸಂಪೂರ್ಣವಾಗಿ ಬೋನಸ್ ನೀಡುವುದಕ್ಕೆ ನಿರ್ಧಾರ ಮಾಡಿದೆ. ಸವಾಲಿನ ವರ್ಷದಲ್ಲಿ ಕಂಪೆನಿಗೆ ಬದ್ಧತೆ ತೋರಿದ ಸಿಬ್ಬಂದಿಗೆ ಇದನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ. “ಈ ಹಿಂದೆಂದೂ ಕಂಡರಿಯದಂಥ ಸವಾಲಿನ ಅನುಭವವನ್ನು ಕೋವಿಡ್- 19 ಕಾರಣಕ್ಕೆ ಭಾರತದಾದ್ಯಂತ ಎದುರಿಸುತ್ತಿದ್ದೇವೆ. ಈ ಮಧ್ಯೆ ನಿಮ್ಮ ಮತ್ತು ನಿಮ್ಮ ಕುಟುಂಬದ ಸೌಖ್ಯವು ನಮ್ಮ ಅತಿ ಮುಖ್ಯ ಆದ್ಯತೆ. ಇದರ ಕಡೆಗೆ ನಮ್ಮ ಶ್ರಮವನ್ನು ಪ್ರಮುಖವಾಗಿ ವಿಸ್ತರಿಸಿದ್ದೇವೆ ಮತ್ತು ನಮ್ಮ ಎಲ್ಲ ಸಾಮರ್ಥ್ಯವನ್ನು ಒಗ್ಗೂಡಿಸಿ ನಿಮ್ಮ ಎಲ್ಲರಿಗೂ ಸಮಯಕ್ಕೆ ದೊರೆಯುವುದಕ್ಕೆ ಪ್ರಯತ್ನಿಸುತ್ತಿದ್ದೇವೆ,” ಎಂದು ರಿಲಯನ್ಸ್ ಆಡಳಿತ ಮಂಡಳಿಯಿಂದ ನೀಡಿದ ಪತ್ರದಲ್ಲಿ ಸಿಬ್ಬಂದಿಗೆ ತಿಳಿಸಿದೆ.

2020- 21ನೇ ಸಾಲಿನ ವೇರಿಯಬಲ್ ಪೇ ಅನ್ನು ಸೋಮವಾರ ವಿತರಣೆ ಮಾಡಿರುವುದಾಗಿ ಹೇಳಲಾಗಿದೆ. ಇದು ಸತತ ಎರಡನೇ ವರ್ಷ ಕಂಪೆನಿಯಿಂದ ಶೇ 100ರಷ್ಟು ವೇರಿಯಬಲ್ ಪೇ ಪಾವತಿಸಲಿದೆ. ಕೊರೊನಾ ಕಾರಣಕ್ಕೆ ಕಳೆದ ವರ್ಷದ ಏಪ್ರಿಲ್​ನಲ್ಲಿ ಕಂಪೆನಿಯು ಘೋಷಣೆ ಮಾಡಿದ ಪ್ರಕಾರ, ವೇತನ ಕಡಿತ ಹಾಗೂ ಬೋನಸ್ ಮುಂದೂಡಿಕೆ ಬಗ್ಗೆ ತಿಳಿಸಿತ್ತು. ಆ ನಂತರ ಅಕ್ಟೋಬರ್​ನಲ್ಲಿ ವೇತನ ಕಡಿತವನ್ನು ವಾಪಸ್ ಪಡೆದು, ಎಲ್ಲ ಸಿಬ್ಬಂದಿಗೆ ಬೋನಸ್ ನೀಡಲಾಗಿತ್ತು.

ಇಂಥ ಸವಾಲಿನ ಸಂದರ್ಭದಲ್ಲಿ ನಿಮ್ಮ ನಿರಂತರ ಕೊಡುಗೆಗೆ ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇವೆ. ನಿಮ್ಮ ಬದ್ಧತೆ ಹಾಗೂ ಸಮರ್ಪಣೆಯು ವಿಶಿಷ್ಟವಾದದ್ದು ಎಂದು ಸಮೂಹ ಸಂಸ್ಥೆಯು ಪತ್ರದಲ್ಲಿ ತಿಳಿಸಿದೆ. ಅಂದಹಾಗೆ ಕಂಪೆನಿಯಿಂದ ಎಲ್ಲ ಸಿಬ್ಬಂದಿಗೆ ಮತ್ತು ಅವರ ಕುಟುಂಬದವರಿಗೆ ಲಸಿಕೆ ಹಾಕುವ ಕಾರ್ಯವನ್ನು ಶುಕ್ರವಾರದಿಂದ ಶುರು ಮಾಡಲಾಗಿದೆ. ಯಾರು ಈಗಾಗಲೇ ಲಸಿಕೆ ಹಾಕಿಸಿಕೊಂಡಿರುತ್ತಾರೋ ಅವರಿಗೆ ರೀಎಂಬರ್ಸ್​ಮೆಂಟ್ ಮಾಡಲಾಗುತ್ತದೆ.

ನಮ್ಮ ಅತಿ ದೊಡ್ಡ ಆದ್ಯತೆ ಅಂದರೆ ಅದು ನಮ್ಮ ಜನರು ಮತ್ತು ಅವರ ಹಾಗೂ ಕುಟುಂಬದವರ ರಕ್ಷಣೆಗೆ ಏನೆಲ್ಲ ಮಾಡಬೇಕೋ ಅದನ್ನು ಮಾಡಲು ಬಯಸುತ್ತೇವೆ. ನೀವು ಹಾಗೂ ನಿಮ್ಮ ಕುಟುಂಬದವರು ಈ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ತುರ್ತಾಗಿ ಪಾಲ್ಗೊಂಡಲ್ಲಿ ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ ಎಂದು ರಿಲಯನ್ಸ್ ಹೇಳಿದೆ.

ಇದನ್ನೂ ಓದಿ: ಸೌದಿ ಅರಾಮ್ಕೋಗೆ ರಿಲಯನ್ಸ್ ಆಯಿಲ್-ಟು-ಕೆಮಿಕಲ್ಸ್ ಷೇರಿನ ಪಾಲು ಮಾರಾಟ ಮಾತುಕತೆಗೆ ಮತ್ತೆ ಚಾಲನೆ

(Mukesh Ambani led Reliance Industries announced bonus for 2020- 21 to all employees on Monday)

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್