AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯೂಚುವಲ್ ಫಂಡ್​ನಲ್ಲಿ ಒಟ್ಟಾರೆ ಹೂಡಿಕೆ ಕಡಿಮೆ ಆದರೂ ಎಸ್​ಐಪಿಯಲ್ಲಿ ಶೇ. 10 ಹೆಚ್ಚಳ

Mutual funds SIPs: ಮ್ಯುಚುವಲ್ ಫಂಡ್ ಎಸ್​ಐಪಿ ಯೋಜನೆಗಳು ಜನಪ್ರಿಯವಾಗುತ್ತಿರುವುದಕ್ಕೆ ನಿದರ್ಶನವಾಗಿ ಜುಲೈ ತಿಂಗಳು ಇದೆ. ಕಳೆದ ತಿಂಗಳು ಎಸ್​ಐಪಿ ಮೂಲಕ ಆದ ಹೂಡಿಕೆಯಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಜುಲೈನಲ್ಲಿ ಬಂದ ಹೂಡಿಕೆ ಹರಿವಿನಲ್ಲಿ ಶೇ. 9ರಷ್ಟು ಕಡಿಮೆ ಆಗಿರುವುದು ಗಮನಾರ್ಹ. ಲಿಕ್ವಿಡ್ ಫಂಡ್​ಗಳಿಗೆ ಹೆಚ್ಚಿನ ಒಳಹರಿವು ಸಿಕ್ಕಿದೆ.

ಮ್ಯೂಚುವಲ್ ಫಂಡ್​ನಲ್ಲಿ ಒಟ್ಟಾರೆ ಹೂಡಿಕೆ ಕಡಿಮೆ ಆದರೂ ಎಸ್​ಐಪಿಯಲ್ಲಿ ಶೇ. 10 ಹೆಚ್ಚಳ
ಮ್ಯೂಚುವಲ್ ಫಂಡ್​
TV9 Web
| Edited By: |

Updated on: Aug 09, 2024 | 3:26 PM

Share

ನವದೆಹಲಿ, ಆಗಸ್ಟ್ 9: ಜುಲೈ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಹರಿದು ಬಂದ ಹೂಡಿಕೆಯಲ್ಲಿ ಶೇ. 9ರಷ್ಟು ಕಡಿಮೆ ಆಗಿದೆ. ಆದರೆ, ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಅಥವಾ ಎಸ್​ಐಪಿ ಮೂಲಕ ಆದ ಹೂಡಿಕೆಯಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ. ಎಎಂಎಫ್​ಐನ ಇತ್ತೀಚಿನ ದತ್ತಾಂಶದ ಪ್ರಕಾರ ಮ್ಯೂಚುವಲ್ ಫಂಡ್​ಗಳಲ್ಲಿ ಒಳಹರಿವು ಕಂಡ ಮಾಸಿಕ ಎಸ್​ಐಪಿಗಳ ಪ್ರಮಾಣ ಜುಲೈನಲ್ಲಿ 23,332 ಕೋಟಿ ರೂ ಆಗಿದೆ. ಈಕ್ವಿಟಿ ಮಾರುಕಟ್ಟೆ ಇತಿಹಾಸದಲ್ಲಿ ಎಸ್​ಐಪಿ ಒಂದು ತಿಂಗಳಲ್ಲಿ 23,000 ಕೋಟಿ ರೂ ಗಡಿ ಮುಟ್ಟಿದ್ದು ಇದೇ ಮೊದಲು. 2024ರ ಜೂನ್ ತಿಂಗಳಲ್ಲಿ ಎಸ್​ಐಪಿ ಮೊತ್ತ 21,262 ಕೋಟಿ ರೂ ಆಗಿತ್ತು.

ಮ್ಯೂಚುವಲ್ ಫಂಡ್​ಗಳ ಎಯುಎಂ ಅಥವಾ ನಿರ್ವಹಣೆಯ ಆಸ್ತಿ ಜೂನ್​ನಲ್ಲಿ 60.89 ಲಕ್ಷ ಕೋಟಿ ರೂ ಇದ್ದದ್ದು ಜುಲೈನಲ್ಲಿ 64.69 ಲಕ್ಷ ಕೋಟಿ ರೂಗೆ ಏರಿದೆ. ಅಂದರೆ, ಎಯುಎಂನಲ್ಲಿ ಶೇ. 6ರಷ್ಟು ಹೆಚ್ಚಳ ಆಗಿದೆ. ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಜುಲೈನಲ್ಲಿ ಕಂಡ ಒಳಹರಿವಿನಲ್ಲಿ ಶೇ. 9ರಷ್ಟು ಇಳಿಕೆ ಆಗಿದೆ. ಆದರೆ, ಡೆಟ್ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಹೆಚ್ಚಾಗಿದೆ.

ಲಿಕ್ವಿಡ್ ಫಂಡ್​ಗಳಿಗೆ ಜುಲೈನಲ್ಲಿ ಅತಿಹೆಚ್ಚು ಹೂಡಿಕೆ ಹರಿವು ಬಂದಿದೆ. ವರದಿ ಪ್ರಕಾರ ಕಳೆದ ತಿಂಗಳಲ್ಲಿ 70,060 ಕೋಟಿ ರೂನಷ್ಟು ಹೂಡಿಕೆಗಳು ಲಿಕ್ವಿಡ್ ಫಂಡ್​ಗಳಿಗೆ ಬಂದಿದೆ. ಹಿಂದಿನ ತಿಂಗಳಾದ ಜೂನ್​ನಲ್ಲಿ ಲಿಕ್ವಿಡ್ ಫಂಡ್​ಗಳಿಂದ ಬರೋಬ್ಬರಿ 80,354 ಕೋಟಿ ರೂ ಮೊತ್ತದ ಹೂಡಿಕೆ ಹೊರ ಹೋಗಿತ್ತು. ಹೀಗಾಗಿ, ಜುಲೈನ ಈ ಡಾಟಾ ಗಮನಾರ್ಹ ಎನಿಸಿದೆ.

ಇದನ್ನೂ ಓದಿ: ಹಲ್ದೀರಾಮ್ಸ್, ಭಾರತದ ಅಗ್ರಗಣ್ಯ ಫ್ಯಾಮಿಲಿ ಬುಸಿನೆಸ್

ಇಲ್ಲಿ ಲಿಕ್ವಿಡ್ ಫಂಡ್ ಎಂದರೆ ಬಹಳ ಕಿರು ಅವಧಿಯ ಫಂಡ್​ಗಳಾಗಿರುತ್ತವೆ. ಡೆಟ್, ಬಾಂಡ್ ಮಾರುಕಟ್ಟೆಗಳಲ್ಲಿ ಈ ಫಂಡ್​ಗಳು ಹೂಡಿಕೆ ಮಾಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ