AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEFT service: ಮೇ 23ರಂದು 14 ಗಂಟೆ ಕಾಲ NEFT ಸೇವೆ ಸಿಗಲ್ಲ; ಎಷ್ಟು ಹೊತ್ತಿಂದ ಎಷ್ಟರ ತನಕ ಇಲ್ಲಿದೆ ಮಾಹಿತಿ

NEFT ಸೇವೆಗೆ ಸಂಬಂಧಿಸಿದಂತೆ ಮೇ 23ನೇ ತಾರೀಕಿನಂದು 14 ಗಂಟೆಗಳ ಕಾಲ ಸೇವೆ ದೊರೆಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ತಿಳಿಸಲಾಗಿದೆ.

NEFT service: ಮೇ 23ರಂದು 14 ಗಂಟೆ ಕಾಲ NEFT ಸೇವೆ ಸಿಗಲ್ಲ; ಎಷ್ಟು ಹೊತ್ತಿಂದ ಎಷ್ಟರ ತನಕ ಇಲ್ಲಿದೆ ಮಾಹಿತಿ
ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ (ಸಾಂದರ್ಭಿಕ ಚಿತ್ರ)
Srinivas Mata
|

Updated on: May 18, 2021 | 8:47 PM

Share

NEFT ಸೇವೆಯು ಮೇ 23ನೇ ತಾರೀಕಿನಂದು 14 ಗಂಟೆಗಳ ಕಾಲ ದೊರಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 17ರಂದು ತಿಳಿಸಿದೆ. NEFT ಸಿಸ್ಟಮ್ ಅಪ್​ಗ್ರೇಡ್ ಆಗಬೇಕಿರುವುದರಿಂದ ಈ ಸೇವೆಯು ದೊರೆಯುವುದಿಲ್ಲ. ಮೇ 23, 2021ರ ಭಾನುವಾರ 00:01 (ರಾತ್ರಿ 12 ಗಂಟೆ 1 ನಿಮಿಷದಿಂದ) 14:00 (ಮಧ್ಯಾಹ್ನ 2 ಗಂಟೆ) ತನಕ ಸೇವೆಯು ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.

“NEFTನ ತಾಂತ್ರಿಕ ಅಪ್​ಗ್ರೇಡ್​ ಮೂಲಕ ಕಾರ್ಯಕ್ಷಮತೆ ಉತ್ತಮಗೊಳಿಸಲು ಹಾಗೂ ಬಳಕೆ ಜಾಸ್ತಿ ಮಾಡುವ ಉದ್ದೇಶದಿಂದ ಮೇ 22, 2021ರ ವ್ಯವಹಾರದ ನಂತರ ನಿಗದಿ ಆಗಿದೆ. NEFT ಸೇವೆಗಳು ಮೇ 23, 2021ರ 00:01ರಿಂದ 14:00ರ ತನಕ ದೊರೆಯುವುದಿಲ್ಲ,” ಎಂದು ಆರ್​ಬಿಐ ಹೇಳಿದೆ. ಈ ಮಧ್ಯೆ ಆರ್​ಟಿಜಿಎಸ್​ ಸೇವೆಗಳು ಮೇ 23ನೇ ತಾರೀಕು ಮಾಮೂಲಿನಂತೆ ದೊರೆಯುತ್ತವೆ. ಇದೇ ರೀತಿಯ ತಾಂತ್ರಿಕ ಅಪ್​ಗ್ರೇಡ್ ಆರ್​ಟಿಜಿಎಸ್​ ಅನ್ನು ಏಪ್ರಿಲ್​ 18, 2021ರಲ್ಲಿ ಪೂರ್ತಿ ಆಗಿದೆ ಎಂದು ಆರ್​ಬಿಐ ಹೇಳಿದೆ.

ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಕೇಂದ್ರಬ್ಯಾಂಕ್​ನಿಂದ ಸದಸ್ಯ ಬ್ಯಾಂಕ್​ಗಳಿಗೆ ಸೂಚನೆ ನೀಡಲಾಗಿದೆ. NEFT ನಿರ್ವಹಣೆ ಮಾಡುವ ಅವಧಿಯಲ್ಲಿ ಪಾವತಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೂಡ ಇದೇ ಸಂದರ್ಭದಲ್ಲಿ ತಿಳಿಸಲಾಗಿದೆ. NEFTಗೆ ಸಂಬಂಧಿಸಿದ ಅಪ್​ಡೇಟ್​ಗಳನ್ನು ಅಯಾ ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ

(RBI informed that, due to upgrade and maintenance NEFT service not available for 14 hours to customers on May 23, 2021)

ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ