AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEFT service: ಮೇ 23ರಂದು 14 ಗಂಟೆ ಕಾಲ NEFT ಸೇವೆ ಸಿಗಲ್ಲ; ಎಷ್ಟು ಹೊತ್ತಿಂದ ಎಷ್ಟರ ತನಕ ಇಲ್ಲಿದೆ ಮಾಹಿತಿ

NEFT ಸೇವೆಗೆ ಸಂಬಂಧಿಸಿದಂತೆ ಮೇ 23ನೇ ತಾರೀಕಿನಂದು 14 ಗಂಟೆಗಳ ಕಾಲ ಸೇವೆ ದೊರೆಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ತಿಳಿಸಲಾಗಿದೆ.

NEFT service: ಮೇ 23ರಂದು 14 ಗಂಟೆ ಕಾಲ NEFT ಸೇವೆ ಸಿಗಲ್ಲ; ಎಷ್ಟು ಹೊತ್ತಿಂದ ಎಷ್ಟರ ತನಕ ಇಲ್ಲಿದೆ ಮಾಹಿತಿ
ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ (ಸಾಂದರ್ಭಿಕ ಚಿತ್ರ)
Srinivas Mata
|

Updated on: May 18, 2021 | 8:47 PM

Share

NEFT ಸೇವೆಯು ಮೇ 23ನೇ ತಾರೀಕಿನಂದು 14 ಗಂಟೆಗಳ ಕಾಲ ದೊರಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 17ರಂದು ತಿಳಿಸಿದೆ. NEFT ಸಿಸ್ಟಮ್ ಅಪ್​ಗ್ರೇಡ್ ಆಗಬೇಕಿರುವುದರಿಂದ ಈ ಸೇವೆಯು ದೊರೆಯುವುದಿಲ್ಲ. ಮೇ 23, 2021ರ ಭಾನುವಾರ 00:01 (ರಾತ್ರಿ 12 ಗಂಟೆ 1 ನಿಮಿಷದಿಂದ) 14:00 (ಮಧ್ಯಾಹ್ನ 2 ಗಂಟೆ) ತನಕ ಸೇವೆಯು ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.

“NEFTನ ತಾಂತ್ರಿಕ ಅಪ್​ಗ್ರೇಡ್​ ಮೂಲಕ ಕಾರ್ಯಕ್ಷಮತೆ ಉತ್ತಮಗೊಳಿಸಲು ಹಾಗೂ ಬಳಕೆ ಜಾಸ್ತಿ ಮಾಡುವ ಉದ್ದೇಶದಿಂದ ಮೇ 22, 2021ರ ವ್ಯವಹಾರದ ನಂತರ ನಿಗದಿ ಆಗಿದೆ. NEFT ಸೇವೆಗಳು ಮೇ 23, 2021ರ 00:01ರಿಂದ 14:00ರ ತನಕ ದೊರೆಯುವುದಿಲ್ಲ,” ಎಂದು ಆರ್​ಬಿಐ ಹೇಳಿದೆ. ಈ ಮಧ್ಯೆ ಆರ್​ಟಿಜಿಎಸ್​ ಸೇವೆಗಳು ಮೇ 23ನೇ ತಾರೀಕು ಮಾಮೂಲಿನಂತೆ ದೊರೆಯುತ್ತವೆ. ಇದೇ ರೀತಿಯ ತಾಂತ್ರಿಕ ಅಪ್​ಗ್ರೇಡ್ ಆರ್​ಟಿಜಿಎಸ್​ ಅನ್ನು ಏಪ್ರಿಲ್​ 18, 2021ರಲ್ಲಿ ಪೂರ್ತಿ ಆಗಿದೆ ಎಂದು ಆರ್​ಬಿಐ ಹೇಳಿದೆ.

ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಕೇಂದ್ರಬ್ಯಾಂಕ್​ನಿಂದ ಸದಸ್ಯ ಬ್ಯಾಂಕ್​ಗಳಿಗೆ ಸೂಚನೆ ನೀಡಲಾಗಿದೆ. NEFT ನಿರ್ವಹಣೆ ಮಾಡುವ ಅವಧಿಯಲ್ಲಿ ಪಾವತಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೂಡ ಇದೇ ಸಂದರ್ಭದಲ್ಲಿ ತಿಳಿಸಲಾಗಿದೆ. NEFTಗೆ ಸಂಬಂಧಿಸಿದ ಅಪ್​ಡೇಟ್​ಗಳನ್ನು ಅಯಾ ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ

(RBI informed that, due to upgrade and maintenance NEFT service not available for 14 hours to customers on May 23, 2021)

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ