AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬುಧವಾರದಂದು ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಎನ್​ಇಎಫ್​ಟಿ, ಆರ್​ಟಿಜಿಎಸ್ ವಿಸ್ತರಣೆ ಮಾಡಿ, ಘೋಷಣೆ ಮಾಡಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಘೋಷಣೆ ಮಾಡಿದರು.

RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ
ಸಾಂದರ್ಭಿಕ ಚಿತ್ರ
Srinivas Mata
|

Updated on: Apr 07, 2021 | 4:19 PM

Share

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಬುಧವಾರದಂದು ಮಹತ್ವದ ಘೋಷಣೆ ಮಾಡಿದೆ. ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್ (ಎನ್​ಇಎಫ್​ಟಿ) ಹಾಗೂ ರಿಯಲ್-ಟೈಮ್ ಗ್ರಾಸ್ ಸೆಟ್ಲ್​ಮೆಂಟ್ (ಆರ್​ಟಿಜಿಎಸ್) ಸವಲತ್ತನ್ನು ನಾನ್ ಬ್ಯಾಂಕ್ ಪಾವತಿ ವ್ಯವಸ್ಥೆ ಆಪರೇಟರ್​ಗಳಿಗೂ ವಿಸ್ತರಣೆ ಮಾಡಿದೆ. ಈ ತನಕ ಬ್ಯಾಂಕ್​ಗಳು ಮಾತ್ರ ಆರ್​ಟಿಜಿಎಸ್ ಹಾಗೂ ಎನ್​ಇಎಫ್​ಟಿ ಪಾವತಿ ಅನುಕೂಲ ಬಳಕೆ ಮಾಡುತ್ತಿವೆ. ಇದೀಗ ಪ್ರೀಪೇಯ್ಡ್ ಪೇಮೆಂಟ್ ಇನ್​ಸ್ಟ್ರುಮೆಂಟ್ (ಪಿಪಿಐ) ವಿತರಕರು, ಕಾರ್ಡ್ ನೆಟ್​ವರ್ಕ್​ಗಳು, ವೈಟ್ ಲೇಬಲ್ ಎಟಿಎಂ ಆಪರೇಟರ್​ಗಳು ಮತ್ತು ಟ್ರೇಡ್ ರಿಸೀವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ (TreDS) ಪ್ಲಾಟ್​ಫಾರ್ಮ್​ಗಳು ಕೂಡ ಆರ್​ಟಿಜಿಎಸ್ ಹಾಗೂ ಎನ್​ಇಎಫ್​ಟಿ ಬಳಸಬಹುದು.

ಕೆಲವನ್ನು ಹೊರತುಪಡಿಸಿ, ಆರ್​ಬಿಐನಿಂದ ಕಾರ್ಯ ನಿರ್ವಹಿಸುವ ಕೇಂದ್ರೀಕೃತ ಪಾವತಿ ವ್ಯವಸ್ಥೆಗಳಾದ (CPS) RTGS ಮತ್ತು NEFT ಅನ್ನು ಸದ್ಯಕ್ಕೆ ಬ್ಯಾಂಕ್​ಗಳು ಮಾತ್ರ ಬಳಸಬಹುದು. ಇದೀಗ ಪ್ರಸ್ತಾವ ಮಾಡಿರುವ ಪ್ರಕಾರ, ಪ್ರೀಪೇಯ್ಡ್ ಪೇಮೆಂಟ್ ಇನ್​ಸ್ಟ್ರುಮೆಂಟ್ (PPI) ವಿತರಕರು, ಕಾರ್ಡ್ ನೆಟ್​ವರ್ಕ್​ಗಳು, ವೈಟ್​ಲೇಬಲ್ ಎಟಿಎಂ ಆಪರೇಟರ್​ಗಳು ಮತ್ತು ಆರ್​ಬಿಐ ನಿಯಂತ್ರಣಕ್ಕೆ ಒಳಪಟ್ಟಿರುವ ಟ್ರೇಡ್ ರಿಸೀವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ (TreDS) ಬ್ಯಾಂಕಿಂಗೇತರ ಪಾವತಿ ಆಪರೇಟರ್​ಗಳಿಗೂ ಈ ಸೌಲಭ್ಯ ಒದಗಿಸಲಾಗುತ್ತದೆ. ಈ ವ್ಯವಸ್ಥೆಯಿಂದ ಹಣಕಾಸು ವ್ಯವಸ್ಥೆಯಲ್ಲಿನ ತೀರುವಳಿಯಲ್ಲಿ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲ ಬಳಕೆದಾರ ಸೆಗ್ಮೆಂಟ್​ಗೆ ಡಿಜಿಟಲ್ ಹಣಕಾಸು ವ್ಯವಸ್ಥೆ ತಲುಪಲು ನೆರವಾಗುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆ ಹಾಗೂ ಜಿಡಿಪಿ ಮೇಲೆ ದೊಡ್ಡ ಪರಿಣಾಮ ಪಾವತಿ ವ್ಯವಸ್ಥೆಯಲ್ಲಿ ಬ್ಯಾಂಕೇತರ ಭಾಗವಹಿಸುವಿಕೆ ಉತ್ತೇಜಿಸಬೇಕು ಎಂಬುದು ಗುರಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. “ಆರ್​ಬಿಐನಿಂದ ಸಕಾರಾತ್ಮಕವಾದ ಬೆಳವಣಿಗೆ ಇದು. ಇದರಿಂದಾಗಿ ಆನ್​ಲೈನ್ ಪಾವತಿಗೆ ಹಾಗೂ ಭಾರತೀಯ ಆರ್ಥಿಕತೆಯ ಡಿಜಿಟೈಸೇಷನ್​ಗೆ ಉತ್ತೇಜನ ಸಿಗುತ್ತದೆ. 24X7 ಎನ್​ಇಎಫ್​ಟಿ, ಆರ್​ಟಿಜಿಎಸ್ ಮುಂತಾದವು ವಾಣಿಜ್ಯ ವ್ಯವಹಾರಗಳಿಗೆ ಸಹಕಾರಿ ಆಗಲಿದೆ. ಆರ್ಥಿಕ ಬೆಳವಣಿಗೆ ಹಾಗೂ ಜಿಡಿಪಿ ಮೇಲೆ ದೊಡ್ಡ ಪರಿಣಾಮ ಉಂಟಾಗಲಿದೆ,” ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಆರ್​ಬಿಐ ಇದೇ ವೇಳೆ, ದಿನದ ಕೊನೆಗೆ ಪೇಮೆಂಟ್ ಬ್ಯಾಂಕ್ಸ್ ಬಾಕಿ ಮಿತಿಯನ್ನು ದಿನದ ಕೊನೆಗೆ 2 ಲಕ್ಷ ರೂಪಾಯಿಗೆ ಏರಿಸಿದೆ. ಈ ಹಿಂದೆ ಇದು 1 ಲಕ್ಷ ರೂಪಾಯಿ ಇತ್ತು. ಬಹಳ ಕಾಲದಿಂದ ಠೇವಣಿ ಮಿತಿ ಹೆಚ್ಚಳಕ್ಕಾಗಿ ಪೇಮೆಂಟ್ಸ್ ಬ್ಯಾಂಕ್​ಗಳು ಬೇಡಿಕೆ ಇಡುತ್ತಾ ಬಂದಿದ್ದವು.

ಏನಿದು ಎನ್​ಇಎಫ್​ಟಿ ಹಾಗೂ ಆರ್​ಟಿಜಿಎಸ್? ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್​ಫರ್ (ಎನ್​ಇಎಫ್​ಟಿ) ಅಂದರೆ ಇದು ಕೂಡ ಪಾವತಿ ವ್ಯವಸ್ಥೆ. ಒಬ್ಬರಿಂದ ಮತ್ತೊಬ್ಬರಿಗೆ ಹಣ ವರ್ಗಾವಣೆಗೆ ಇದು ಅನುಕೂಲ ಮಾಡಿಕೊಡುತ್ತದೆ. ಎನ್​ಇಎಫ್​ಟಿ ಬಳಸಿ, ಯಾವುದೇ ಬ್ಯಾಂಕ್ ಶಾಖೆಯಿಂದ ಜನರು ಎಲೆಕ್ಟ್ರಾನಿಕಲಿ ಹಣ ಬೇರೆ ಯಾವುದೇ ಬ್ಯಾಂಕ್ ಹಾಗೂ ಶಾಖೆಯ ಖಾತೆದಾರರಿಗೆ ಹಣ ವರ್ಗಾವಣೆ ಮಾಡಬಹುದು. ಆದರೆ ಹಣ ವರ್ಗಾವಣೆ ರಿಯಲ್ ಟೈಮ್​​ನಲ್ಲಿ ಆಗುವುದಿಲ್ಲ. ಹಣ ವರ್ಗಾವಣೆಯ ತೀರುವಳಿಯು ಅರ್ಧ ಗಂಟೆಯ ಹನ್ನೆರಡು ಬ್ಯಾಚ್​ನಲ್ಲಿ ಆಗುತ್ತದೆ.

ರಿಯಲ್-ಟೈಮ್ ಗ್ರಾಸ್ ಸೆಟ್ಲ್​ಮೆಂಟ್ (ಆರ್​ಟಿಜಿಎಸ್) ಕೂಡ ಮತ್ತೊಂದು ಬಗೆಯ ಪಾವತಿ ವ್ಯವಸ್ಥೆ. ಫಲಾನುಭವಿಯ ಖಾತೆಗೆ ರಿಯಲ್ ಟೈಮ್​ನಲ್ಲಿ ಸಗಟು ಆಧಾರದಲ್ಲಿ ಆಗುತ್ತದೆ. ಆರ್​ಟಿಜಿಎಸ್ ವ್ಯವಸ್ಥೆ ಪ್ರಾಥಮಿಕವಾಗಿ ದೊಡ್ಡ ಮಟ್ಟದ ವಹಿವಾಟಿಗೆ ಮೀಸಲಾಗಿರುವಂಥದ್ದು. ಮತ್ತು ತಕ್ಷಣವೇ ತೀರುವಳಿ ಆಗುತ್ತದೆ.

ಇದನ್ನೂ ಓದಿ: Payments Bank: ಪೇಮೆಂಟ್ಸ್ ಬ್ಯಾಂಕ್​ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ

(RBI governor Shaktikanta Das announced extension of RTGS and NEFT facilities to payments bank on Wednesday.)

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್