AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಲೆ ಜಿ ಬದಲಾಯಿತು ಬುನ್​ಶಾ ಜಿ… ಹೊಸ ಲುಕ್..! ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಒಎಂಜಿ

Parle-G New Look: ಪಾರ್ಲೆ ಜಿ ಹೆಸರು ಮತ್ತು ಅದರಲ್ಲಿರುವ ಹುಡುಗಿಯ ಫೋಟೋ ಬದಲಾಯಿಸಿ, ಬುನ್​ಶಾ ಜಿ ಎಂದಿರುವ ಪ್ಯಾಕೆಟ್​ನ ಪೋಸ್ಟ್ ವೈರಲ್ ಆಗಿದೆ. ಝೆರ್ವಾನ್ ಎನ್ ಬುನ್​ಶಾ ಎಂಬ ಕಾಮಿಡಿಯನ್ ಮತ್ತು ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಅವರ ಇತ್ತೀಚಿನ ಒಂದು ವೈರಲ್ ಪೋಸ್ಟ್ ಸೃಷ್ಟಿಸಿದ ಪರಿಣಾಮ ಇದು. ಪಾರ್ಲೆ ಜಿ ಮಾಲೀಕರು ಸಿಕ್ಕರೆ ಅವರನ್ನು ಏನಂದು ಕರೆಯುತ್ತೀರಿ? ಪಾರ್ಲೆ ಸರ್ ಎಂತಲೋ, ಮಿಸ್ಟರ್ ಪಾರ್ಲೆ ಅಂತಲೋ ಅಥವಾ ಪಾರ್ಲೆ ಜಿ ಅಂತಲೋ? ಎಂದು ಪೋಸ್ಟ್​ನಲ್ಲಿ ಕೇಳಲಾಗಿತ್ತು.

ಪಾರ್ಲೆ ಜಿ ಬದಲಾಯಿತು ಬುನ್​ಶಾ ಜಿ... ಹೊಸ ಲುಕ್..! ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಒಎಂಜಿ
ಪಾರ್ಲೆ ಜಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 29, 2023 | 12:03 PM

Share

ವಿಶ್ವದ ನಂಬರ್ ಒನ್ ಬಿಸ್ಕತ್ ಬ್ರ್ಯಾಂಡ್ ಪಾರ್ಲೆ ಜಿ ಹಾಗೂ ಅದರ ಪ್ಯಾಕೆಟ್ ಮೇಲಿರುವ ಬಾಲಕಿ ಯಾರು ತಾನೆ ಮರೆಯಲು ಸಾಧ್ಯ. ಆದರೆ, ಮೊನ್ನೆ ಮೊನ್ನೆ ಪಾರ್ಲೆ ಜಿ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ವೊಂದರಲ್ಲಿ ಬಿಸ್ಕತ್ ಪ್ಯಾಕೆಟ್​ನಲ್ಲಿ ಪಾರ್ಲೆ ಜಿ ಹೆಸರು ಮತ್ತು ಹುಡುಗಿಯ ಫೋಟೋ ಬದಲಿಸಿ ಅಚ್ಚರಿ ಮೂಡಿಸಿತ್ತು. ಕಾಮಿಡಿಯನ್ ಝೆರ್ವಾನ್ ಎನ್ ಬುನ್​ಶಾ (Zervaan N Bunshah) ಅವರ ಹೆಸರಿರುವ ಬಿಸ್ಕತ್ ಪ್ಯಾಕೆಟ್​ನ ಫೋಟೋವನ್ನು ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿತು. ಪಾರ್ಲೆ ಬುನ್​ಶಾ ಜಿ (Bunshah- G) ಬಿಸ್ಕತ್ ಪ್ಯಾಕೆಟ್​ನ ಫೋಟೋ ಅದಾಗಿತ್ತು.

ಈ ಪೋಸ್ಟ್ ಸಾಕಷ್ಟು ಮೀಮ್ಸ್​ಗೆ ಕಾರಣವಾಗಿದೆ. ಆದರೆ, ಇದರ ಹಿಂದೆ ಇನ್ನೊಂದು ಇನ್ಸ್​ಟಾಗ್ರಾಂ ವೈರಲ್ ಪೋಸ್ಟ್ ಇದೆ. ಅದು ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸ್ ಆಗಿರುವ ಝೆರ್ವಾನ್ ಎನ್ ಬುನ್​ಶಾ ಅವರ ಒಂದು ಪೋಸ್ಟ್. ಹಾಸ್ಯ ಚಟಾಕಿ ಮತ್ತು ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ಬುನ್​ಶಾ ನಾಲ್ಕು ದಿನಗಳ ಹಿಂದೆ ಇನ್ಸ್​ಟಾಗ್ರಾಮ್​ನಲ್ಲಿ ಒಂದು ಕಾಮಿಡಿ ಪೋಸ್ಟ್ ಹಾಕಿದ್ದರು. ಅನಿಲ್ ಕಪೂರ್ ಅವರ ‘ಏ ಜಿ, ಓ ಜೀ..’ ಅನ್ನೂ ಹಾಡಿನ ಹಿನ್ನೆಲೆಯ ಸಂಗೀತದಲ್ಲಿ ಬುನ್​ಶಾ ಅವರ ವಿಡಿಯೋ ಅದು. ಅದರಲ್ಲಿ ಬುನ್​ಶಾ ಅವರ ಹಾವಭಾವವೆಲ್ಲವೂ ಬಹಳ ಸೂಕ್ಷ್ಮ ಕಣ್ಚಲನೆಯಲ್ಲೇ. ಆದರೆ, ವಿಡಿಯೋದಲ್ಲಿ ಹಾಕಲಾಗಿದ್ದ ಟೆಕ್ಸ್ಟ್ ಹೀಗಿತ್ತು… ‘ನೀವು ಪಾರ್ಲೆ ಮಾಲೀಕರನ್ನು ಭೇಟಿ ಮಾಡಿದಾಗ ಏನಂತ ಕರೆಯುತ್ತೀರಿ? ಪಾರ್ಲೆ ಸರ್ ಎಂತಲೋ, ಮಿಸ್ಟರ್ ಪಾರ್ಲೆ ಅಂತಲೋ ಅಥವಾ ಪಾರ್ಲೆ ಜಿ ಅಂತಲೋ?’ ಎಂದಿತ್ತು.

ಇದನ್ನೂ ಓದಿ: Viewership record: ಅತಿಹೆಚ್ಚು ವೀಕ್ಷಣೆ; 2023ರ ಒಡಿಐ ವಿಶ್ವಕಪ್ ಹೊಸ ಮೈಲಿಗಲ್ಲು; ಹಳೆಯ ದಾಖಲೆಗಳೆಲ್ಲಾ ಪುಡಿಪುಡಿ; ಐಸಿಸಿ ಮಾಹಿತಿ

ಇದು ಸಾಕಷ್ಟು ನೆಟ್ಟಿಗರ ಗಮನ ಸೆಳೆದಿತ್ತು. ಸ್ವತಃ ಪಾರ್ಲೆ ಜಿ ಸಂಸ್ಥೆ ಕೂಡ ಈ ಪೋಸ್ಟ್​ಗೆ ಉತ್ತರಿಸಿ, ತಮ್ಮನ್ನು ಒಜಿ ಎಂದು ಕರೆಯಬಹುದು ಎಂದಿತ್ತು. ಒಜಿ ಎಂದರೆ ಒರಿಜಿನೇಟರ್. ಆದರೆ, ಮೂಲ ತಯಾರಕರು.

View this post on Instagram

A post shared by Zervaan J Bunshah (@bunshah)

ಅಷ್ಟಕ್ಕೆ ಸುಮ್ಮನಾಗದ ಪಾರ್ಲೆ, ನಿನ್ನೆ (ಡಿ. 28) ಬುನ್​ಶಾ ಜಿ ಎಂದು ಬರೆದಿರುವ ಬಿಸ್ಕತ್ ಪ್ಯಾಕೆಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತು. ‘ಪಾರ್ಲೆ ಜಿ ಮಾಲೀಕರನ್ನು ಏನೆಂದು ಕರೆಯಬೇಕೆಂದು ಯೋಚಿಸುತ್ತಿರುವಾಗ, ಒಂದು ಕಪ್ ಚಾಯ್ ಜೊತೆ ಆನಂದಿಸುವ ನೆಚ್ಚಿನ ಬಿಸ್ಕತ್ ಎಂದು ನೀವು ಕರೆಯಬಹುದು,’ ಎಂದು ಡಿಸ್ಕ್ರಿಪ್ಷನ್​ನಲ್ಲಿ ಬರೆದಿದೆ.

ಇದನ್ನೂ ಓದಿ: ವಾಹನದ ಹಿಂದೆ ಅಂಟಿಕೊಂಡಿದ್ದ ಧೂಳಿನಲ್ಲಿ ಮೂಡಿದ ಅದ್ಭುತ ಚಿತ್ರಕಲೆ! ಕಲಾವಿದನ ಕೈ ಚಳಕಕ್ಕೆ ತಲೆ ಬಾಗಲೇಬೇಕು

View this post on Instagram

A post shared by Parle-G (@officialparleg)

ಈ ಪೋಸ್ಟ್ ಕೂಡ ವೈರಲ್ ಆಗಿದ್ದು ಬುನ್​ಶಾ ಕೂಡ ಪ್ರತಿಕ್ರಿಯಿಸಿದ್ದಾರೆ. ಚಿಕ್ಕಂದಿನಲ್ಲಿ ಪಾರ್ಲೆಜಿ ಫೇವರಿಟ್ ಬಿಸ್ಕತ್ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯಂತೂ ಈ ಪೋಸ್ಟ್​ಗೆ ಒಎಂಜಿ (ಓಹ್ ಮೈ ಗಾಡ್) ಎಂದು ಉದ್ಗರಿಸಿ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Fri, 29 December 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?